ದೇಶದ ಆರ್ಥಿಕ ಬೆಳವಣಿಗೆ ಸಂಪೂರ್ಣವಾಗಿ ಕುಸಿತವಾಗಿದೆ. ಇದನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದನ್ನು ಹೇಳುತ್ತಿರುವುದು ಯಾವುದೇ ಚಳವಳಿಗಾರರಲ್ಲ ಬದಲಿಗೆ ದೇಶದ ಪ್ರಮುಖ ಕಂಪನಿಗಳ/ಬ್ಯಾಂಕುಗಳ ಅಧ್ಯಕ್ಷರುಗಳು. ಬನ್ನಿ ಅವರೇನು ಹೇಳುತ್ತಾರೆ ಎಂಬುದನ್ನು ನೋಡೋಣ.
ಹೂಡಿಕೆ ಇಲ್ಲ, ಬೇಡಿಕೆಯಿಲ್ಲ, ಬೆಳವಣಿಗೆ ಸ್ವರ್ಗದಿಂದ ಇಳಿಯುತ್ತದೆಯೇ?
– ಬಜಾಜ್ ಅಧ್ಯಕ್ಷರು
ಖಾಸಗಿ ವಲಯವು ಸವಾಲಿನ ಕಾಲದಲ್ಲಿ ಸಾಗುತ್ತಿದೆ
– ಎಲ್ ಅಂಡ್ ಟಿ ಅಧ್ಯಕ್ಷರು
ಆಟೋ ಉದ್ಯಮದಲ್ಲಿ ಆರ್ಥಿಕ ಕುಸಿತವು ಉಕ್ಕಿನ ಉದ್ಯಮದ ಮೇಲೆ ಪರಿಣಾಮ ಬೀರಿದೆ
– ಟಾಟಾ ಸ್ಟೀಲ್ ಸಿಇಒ
ಆರ್ಥಿಕತೆ ಮಂದಗತಿಯಲ್ಲಿರುವುದಕ್ಕೆ ಪುರಾವೆಗಳಿವೆ
– ಎಚ್ಡಿಎಫ್ಸಿ ಅಧ್ಯಕ್ಷರು
ಆರ್ಥಿಕ ಬೆಳವಣಿಗೆಯ ನಿಧಾನಗತಿಯು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯುತ್ತಿರುವುದು ನನ್ನ ಚಿಂತೆಯಾಗಿದೆ.
– ಆಕ್ಸಿಸ್ ಬ್ಯಾಂಕ್ ಸಿಇಒ
ಭಾರತವು ರಚನಾತ್ಮಕ ಮಂದಗತಿಯ ಮಧ್ಯದಲ್ಲಿರಬಹುದು
– ಕೊಟಕ್ನ ವ್ಯವಸ್ಥಾಪಕ ನಿರ್ದೇಶಕ
ಈ ಮೋದಿ ಸರ್ಕಾರವು ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಮ್ಮಲ್ಲಿ ಹಲವರು ಮೊದಲೇ ಎಚ್ಚರಿಸಿದ್ದರು. ಆದರೆ ಯಾರೂ ಆಲಿಸಲಿಲ್ಲ. ಈಗ ನಾವು ಫಲಿತಾಂಶಗಳನ್ನು ನೋಡುತ್ತಿದ್ದೇವೆ ಎಂದು ಹಲವರು ಕಿಡಿಕಾರಿದ್ದಾರೆ.