Homeದಲಿತ್ ಫೈಲ್ಸ್'ಕೇವಲ ಕುರ್ಚಿಯ ವಿಷಯವಲ್ಲ': ಆಂಧ್ರದ ಪಶುವೈದ್ಯಕೀಯ ವಿವಿಯಲ್ಲಿ ದಲಿತ ಪ್ರಾಧ್ಯಾಪಕನಿಗೆ 20 ವರ್ಷಗಳಿಂದ ಜಾತಿ ದೌರ್ಜನ್ಯ!

‘ಕೇವಲ ಕುರ್ಚಿಯ ವಿಷಯವಲ್ಲ’: ಆಂಧ್ರದ ಪಶುವೈದ್ಯಕೀಯ ವಿವಿಯಲ್ಲಿ ದಲಿತ ಪ್ರಾಧ್ಯಾಪಕನಿಗೆ 20 ವರ್ಷಗಳಿಂದ ಜಾತಿ ದೌರ್ಜನ್ಯ!

- Advertisement -
- Advertisement -

ಆಂಧ್ರ ಪ್ರದೇಶದ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದ (ಎಸ್‌ವಿವಿಯು) ಡೈರಿ ತಂತ್ರಜ್ಞಾನ ಕಾಲೇಜಿನಲ್ಲಿ ದಲಿತ ಪ್ರಾಧ್ಯಾಪಕನಿಂದ ಕುರ್ಚಿ ಕಿತ್ತುಕೊಂಡು ನೆಲದಲ್ಲಿ ಕೂರಿಸಲಾಗಿದೆ ಎಂದು ಕಳೆದ ಜೂನ್ 20ರಂದು ಫೋಟೋ ಒಂದು ವೈರಲ್ ಆಗಿತ್ತು.

ದಲಿತ ಸಮುದಾಯದ ಸಹಾಯಕ ಪ್ರಾಧ್ಯಾಪಕ ಡಾ. ರವಿ ವರ್ಮಾ ಅವರ ಕುರ್ಚಿಯನ್ನು ಕಿತ್ತುಕೊಂಡ ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಅವರು ಜಾತಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಆದರೆ, ಡಾ. ರವಿ ಮೇಲಿನ ಜಾತಿ ತಾರಮ್ಯ ಕೇವಲ ಕುರ್ಚಿ ತೆಗೆಸಿದ್ದಕ್ಕೆ ಸೀಮಿತವಾಗಿಲ್ಲ. ಅವರ ಮೇಲೆ ಕಳೆದ 20 ವರ್ಷಗಳಿಂದ ಜಾತಿ ಆಧಾರಿತ ದೌರ್ಜನ್ಯ ನಡೆಯುತ್ತಿದೆ ಎಂದು themooknayak.com ವರದಿ ಮಾಡಿದೆ.

ಗುತ್ತಿಗೆ ಪ್ರಾಧ್ಯಾಪಕಾರ ಡಾ. ರವಿ ಅವರ ಕುರ್ಚಿ ಕಿತ್ತುಕೊಂಡಿದ್ದು ಇತ್ತೀಚಿನ ದೌರ್ಜನ್ಯವಾದರೆ, ನ್ಯಾಯಾಲಯದ ಆದೇಶಗಳು, ಯುಜಿಸಿ ನಿಯಮಗಳು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಹೊರತಾಗಿಯೂ, ಅವರ ಹಕ್ಕುಗಳನ್ನು ಪದೇ ಪದೇ ನಿರಾಕರಿಸಲಾಗುತ್ತಿದೆ. ಘನತೆ, ಸಮಾನ ವೇತನ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವಂತೆ ರವಿ ಅವರು ಕಳೆದ 20 ವರ್ಷಗಳಿಂದ ಹೋರಾಡುತ್ತಿದ್ದಾರೆ.

ಡಾ. ರವಿ ಮೇಲಿನ ಜಾತಿ ದೌರ್ಜನ್ಯ 2005ರಲ್ಲಿ ಅವರು ಮೊದಲ ಬಾರಿಗೆ ಡೈರಿ ತಂತ್ರಜ್ಞಾನ ವಿಭಾಗದಲ್ಲಿ ಗುತ್ತಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಪ್ರಾರಂಭಗೊಂಡಿತು. ಅವರು ಖಾಯಂ ಉದ್ಯೋಗಿಗಳಂತೆ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ಸಂಬಳದ ಒಂದು ಭಾಗವನ್ನು ಮಾತ್ರ ನೀಡಲಾಗುತ್ತಿತ್ತು. ಅಲ್ಲದೆ, ಗುತ್ತಿಗೆ ಒಪ್ಪಂದವನ್ನು ಪ್ರತಿ ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿನಗಳ ವಿರಾಮದೊಂದಿಗೆ ನವೀಕರಿಸಲಾಗುತ್ತಿತ್ತು. ಇದು ಸಾಮಾನ್ಯವಾಗಿ ಗುತ್ತಿಗೆ ಕಾರ್ಮಿಕರ ಕೆಲಸದ ಭದ್ರತೆಯನ್ನು ನಿರಾಕರಿಸಲು ಬಳಸುವ ತಂತ್ರವಾಗಿದೆ.

2010ರಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗುತ್ತಿಗೆ ಪ್ರಾಧ್ಯಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆದೇಶಿಸಿತ್ತು. ಎಸ್‌ವಿವಿಯು ಇದನ್ನು ನಿರ್ಲಕ್ಷಿಸಿದಾಗ, ಡಾ. ರವಿ ಆಂಧ್ರ ಪ್ರದೇಶ ಹೈಕೋರ್ಟ್‌ ಮೊರೆ ಹೋಗಿದ್ದರು. 2014ರಲ್ಲಿ, ನ್ಯಾಯಾಲಯವು ರವಿ ಪರ ತೀರ್ಪು ನೀಡಿತ್ತು. ವಿಶ್ವವಿದ್ಯಾನಿಲಯವು ಅವರಿಗೆ ಶಾಶ್ವತ ಸಹಾಯಕ ಪ್ರಾಧ್ಯಾಪಕರಂತೆ ಸಮಾನವಾದ ವೇತನವನ್ನು ನೀಡಬೇಕೆಂದು ಆದೇಶಿಸಿತ್ತು. ಆದರೆ, ವಿವಿಯು ನ್ಯಾಯಾಲಯದ ಆದೇಶವನ್ನು ಪಾಲಿಸಿರಲಿಲ್ಲ. ರವಿ ಅವರಿಗೆ ನೆಟ್ (NET) ಅರ್ಹತೆ ಇಲ್ಲ ಎಂದು ಸುಳ್ಳು ಹೇಳಿತ್ತು. ಆದರೆ, ಇದು AICTE ಆಡಳಿತದ ಇಂಜಿನಿಯರಿಂಗ್ ವಿಭಾಗಕ್ಕೂ ಅನ್ವಯಿಸದ ಅವಶ್ಯಕತೆಯಾಗಿದೆ.

ಆಂಧ್ರ ಪ್ರದೇಶ ಹೈಕೋರ್ಟ್‌ನ ನಿರ್ದೇಶನಗಳಿಗೆ ಪ್ರತಿಕ್ರಿಯೆ ನೀಡಿದ್ದ ವಿವಿ, ರವಿ ಅವರ ನೇಮಕವು ಆಯ್ಕೆ ಸಮಿತಿಯ ಮೂಲಕ ನಡೆಯದ ಕಾರಣ ಮತ್ತು ಯುಜಿಸಿ ಸೂಚಿಸಿದಂತೆ ಅವರು ನೆಟ್ ಅರ್ಹತೆಯನ್ನು ಹೊಂದಿಲ್ಲದ ಕಾರಣ ಯುಜಿಸಿ ಸೂಚಿಸಿದ ವೇತನಗಳಿಗೆ ಅರ್ಹರಲ್ಲ ಎಂದು ಹೇಳಿತ್ತು.

ಆದರೆ, ಈ ಹೇಳಿಕೆಯು 2012 ಮತ್ತು 2013 ರಲ್ಲಿ ವಿಶ್ವವಿದ್ಯಾನಿಲಯವು ಮಾಡಿದ ನೇಮಕಾತಿಗಳಿಗೆ ವಿರುದ್ಧವಾಗಿತ್ತು. ಏಕೆಂದರೆ, ಆಗ ಹಲವರಿಗೆ ನೆಟ್ ಅರ್ಹತೆಯನ್ನು ನಿರ್ಲಕ್ಷಿಸಿ ಆಯ್ಕೆ ಸಡಿಲಗೊಳಿಸಲಾಗಿತ್ತು ಮತ್ತು ಯುಜಿಸಿ ಸೂಚಿಸಿದ ವೇತನ ನೀಡಲಾಗಿತ್ತು. ಇಂದಿಗೂ ಸಹ ವಿವಿಯ ಐವರು ಸಹಾಯಕ ಪ್ರಾಧ್ಯಾಪಕರು ನೆಟ್‌ ಅರ್ಹತೆಯನ್ನು ಹೊಂದಿಲ್ಲ. ಆದರೆ, ಅವರು ವೇತನದ ಜೊತೆಗೆ ಎಲ್ಲಾ ಭತ್ಯೆಗಳನ್ನು ಪಡೆಯುತ್ತಿದ್ದಾರೆ.

2012–2013ರ ನಡುವೆ ವಿವಿಯು 150ಕ್ಕೂ ಹೆಚ್ಚು ಅಧ್ಯಾಪಕರನ್ನು ನೆಟ್ ಅರ್ಹತೆಗಳಿಲ್ಲದೆ ನೇಮಿಸಿಕೊಂಡಿದೆ ಎಂಬುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗೊಂಡಿದೆ. ಅವರೆಲ್ಲರೂ ಪೂರ್ಣ ಸಂಬಳ ಮತ್ತು ಬಡ್ತಿಗಳನ್ನು ಪಡೆದಿದ್ದಾರೆ. ‘ಸಮಾನ ಕೆಲಸಕ್ಕೆ ಸಮಾನ ವೇತನ’ವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ಆಂಧ್ರ ಪ್ರದೇಶ ಎಸ್‌ಸಿ/ಎಸ್‌ಟಿ ಆಯೋಗದ ಪುನರಾವರ್ತಿತ ಆದೇಶಗಳ ಹೊರತಾಗಿಯೂ, ಡಾ. ರವಿ ಅವರಿಗೆ ಸಮಾನ ವೇತನ ದೊರೆತಿಲ್ಲ ಎಂದು themooknayak.com ಹೇಳಿದೆ.

ಅಕ್ಟೋಬರ್ 2024ರಲ್ಲಿ, ಡಾ. ರವಿ ಅವರು ತಿರುಪತಿಯ ಎಸ್‌ವಿಯು ಉಪಕುಲಪತಿಗಳನ್ನು ಸಂಪರ್ಕಿಸಿ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮೇಲ್ವಿಚಾರಣೆ ಮಾಡುವುದಾಗಿ ಕುಲಪತಿ ಭರವಸೆ ನೀಡಿದ್ದರು. ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.

ಇತ್ತೀಚೆಗೆ ಡಾ. ರವಿ ‘ಪ್ರತಿಭಟನೆ ವ್ಯಕ್ತಪಡಿಸಿ’ದ ನೆಲದ ಮೇಲೆ ಕುಳಿತ ಘಟನೆಯು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತಿ ಆಧಾರಿತ ತಾರತಮ್ಯಕ್ಕೆ ಉದಾಹರಣೆಯಾಗಿದೆ. ರವಿ ದಲಿತ ಸಮುದಾಯದವರು ಎಂಬ ಕಾರಣಕ್ಕೆ ಅವರಿಗೆ ವೇತನ ಸೇರಿದಂತೆ ಎಲ್ಲದರಲ್ಲೂ ತಾರತಮ್ಯ ಎಸಗಿಕೊಂಡು ಬರಲಾಗಿದೆ.

ವಿಶ್ವವಿದ್ಯಾನಿಲಯದ ಮೂಲಗಳ ಪ್ರಕಾರ, ವಿಭಾಗೀಯ ವೈದ್ಯಾಧಿಕಾರಿ ಹೊಸ ಕುರ್ಚಿಗಳನ್ನು ಪಡೆದುಕೊಂಡು ಡಾ. ರವಿ ಅವರಿಗೆ ಒಂದನ್ನು ನೀಡಿದ್ದರು. ಆದರೆ, ಜೂನ್ 19 ರಂದು ಅವರು ಒಂದು ದಿನದ ರಜೆ ತೆಗೆದುಕೊಂಡಾಗ, ಅಸೋಸಿಯೇಟ್ ಡೀನ್ ಡಾ. ರೆಡ್ಡಿ ರವಿ ಅವರ ಕುರ್ಚಿಯನ್ನು ಬೇರೆ ವಿಭಾಗಕ್ಕೆ ಮೀಸಲಿಟ್ಟಿರುವುದಾಗಿ ಹೇಳಿ ಅದನ್ನು ತೆಗೆದು ಹಾಕಿದ್ದರು. ಮರುದಿನ, ರವಿ ಅವರು ಕುರ್ಚಿ ಕಾಣೆಯಾರುವುದಾಗಿ ಹೇಳಿದ್ದರು. ಆಗ ವಿಭಾಗೀಯ ವೈದ್ಯಾಧಿಕಾರಿ ತಾತ್ಕಾಲಿಕವಾಗಿ ತಮ್ಮ ಕಚೇರಿಯ ಸಂದರ್ಶಕರ ಕುರ್ಚಿಯನ್ನು ರವಿ ಅವರಿಗೆ ನೀಡಿದ್ದರು. ಆದರೆ, ತನ್ನ ಶಾಶ್ವತ ಕುರ್ಚಿಯನ್ನು ಕಿತ್ತುಕೊಂಡಿದ್ದಕ್ಕೆ ರವಿ ಅವರು ನೆಲದ ಮೇಲೆ ಕುಳಿತು ಕೆಲಸ ಮಾಡುವ ಮೂಲಕ ತಾರತಮ್ಯವನ್ನು ಪ್ರತಿಭಟಿಸಿದ್ದಾರೆ.

ನಂತರ, ವಿವಿಯ ಉಪಕುಲಪತಿ ಮತ್ತು ಪ್ರಾಂಶುಪಾಲರು ಮಧ್ಯಪ್ರವೇಶಿಸಿ ಡಾ.ರವಿ ಮತ್ತು ಅಸೋಸಿಯೇಟ್ ಡೀನ್ ರೆಡ್ಡಿ ನಡುವೆ ಮಧ್ಯಸ್ಥಿಕೆ ಮಾಡಿದ್ದರು. ನಂತರ ಡಾ. ರೆಡ್ಡಿ ರವಿ ಅವರಿಗೆ ಕ್ಷಮೆಯಾಚಿಸಿದ್ದಾರೆ ಎಂದು themooknayak.com ಹೇಳಿದೆ. ಈ ಮಾಹಿತಿ ಖಚಿತಪಡಿಸಿಲ್ಲ ಎಂದಿದೆ.

ಡಾ. ರವಿ ಅವರ ಕುರ್ಚಿಯು ಬೇರೆ ವಿಭಾಗಕ್ಕೆ ಸೇರಿರುವುದರಿಂದ ಅದನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಹೇಳಿಕೊಂಡಿದ್ದಾರೆ. ಆದರೆ, ಇದು ಕ್ಷುಲ್ಲಕ ನೆಪ, ಬೇರೆ ಯಾವುದೇ ಪ್ರಾಧ್ಯಾಪಕರು ಇಂತಹ ಕಿರುಕುಳವನ್ನು ಎದುರಿಸಿಲ್ಲ ಎಂದು ರವಿ ತಿಳಿಸಿದ್ದಾರೆ.

ವೇತನ ಸಮಾನತೆಗಾಗಿ ಡಾ. ರವಿ ಅವರ 20 ವರ್ಷಗಳ ಹೋರಾಟ ಮತ್ತು ನ್ಯಾಯಾಂಗದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ ವಿರುದ್ಧ ಬಾಕಿ ಇರುವ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಗಮನಿಸಿದರೆ, ಡಾ. ರವಿ ಅವರ ಕುರ್ಚಿಯನ್ನು ಮಾತ್ರ ತೆಗೆದು ಹಾಕಿರುವುದು ಉದ್ದೇಶಪೂರ್ವಕ ಎನ್ನುವುದು ಕೆಲವು ಪ್ರಾಧ್ಯಾಪಕರ ಅಭಿಪ್ರಾಯ ಎಂದು ವರದಿ ತಿಳಿಸಿದೆ.

ಈ ವಿಚಾರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೌನವನ್ನು ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಟೀಕಿಸಿದೆ. “ನಿಮ್ಮ ಆಡಳಿತದಲ್ಲಿ ದಲಿತ ಪ್ರಾಧ್ಯಾಪಕರನ್ನು ಏಕೆ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದೆ. ಆದರೆ, ಡಾ. ರವಿ ಮೇಲೆ ಜಾತಿ ದೌರ್ಜನ್ಯ ವೈಎಸ್‌ಆರ್ ಕಾಂಗ್ರೆಸ್ ಆಡಳಿತದಲ್ಲೂ ನಡೆಯುತ್ತಿತ್ತು ಎನ್ನುವುದು ಸತ್ಯ.

ಸಾಂಸ್ಥಿಕ ನಿರಾಸಕ್ತಿಯಿಂದ ಬೇಸತ್ತ ಡಾ. ರವಿ, ಮೇ 23, 2025ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು, ತಮ್ಮ ಎರಡು ದಶಕಗಳ ನೋವನ್ನು ವಿವರಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, 2014 ರಿಂದ ಬಾಕಿ ವೇತನವನ್ನು ಪಾವತಿಸಲು ವಿಶ್ವವಿದ್ಯಾಲಯದ ನಿಯಂತ್ರಣಾಧಿಕಾರಿ 2020ರಲ್ಲಿ ಹೇಗೆ ಶಿಫಾರಸು ಮಾಡಿದ್ದರು ಎಂಬುದನ್ನು ಅವರು ತಿಳಿಸಿದ್ದಾರೆ ಮತ್ತು ಈ ವಿಚಾರದಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

2024ರ ಸಭೆಯಲ್ಲಿ ಉಪಕುಲಪತಿಗಳು ನ್ಯಾಯದ ಭರವಸೆ ನೀಡಿದ್ದರು. ಆದರೆ, ಏನೂ ಮಾಡಿಲ್ಲ. ನನ್ನ ಅರ್ಹತೆಗಳು ಮತ್ತು 20 ವರ್ಷಗಳ ಸೇವೆಯ ಹೊರತಾಗಿಯೂ, ಹೊಸದಾಗಿ ನೇಮಕಗೊಂಡ ಖಾಯಂ ಅಧ್ಯಾಪಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದೇನೆ ಎಂದು ರವಿ ಹೇಳಿಕೊಂಡಿದ್ದಾರೆ.

“ನಾನು ಹೋರಾಟ ಮುಂದುವರಿಸುವಷ್ಟು ಆರ್ಥಿಕವಾಗಿ ಸದೃಢನಲ್ಲ” ಎಂದು ರವಿ ಹೇಳಿದ್ದಾರೆ. ಈ ವ್ಯವಸ್ಥೆಯು ತಳ ವರ್ಗದ ಜನರನ್ನು ಸಂಪನ್ಮೂಲಗಳು ಖಾಲಿಯಾಗುವವರೆಗೆ ಹೇಗೆ ಕಾನೂನು ಹೋರಾಟಗಳಿಗೆ ಎಳೆಯುವ ಮೂಲಕ ಶೋಷಿಸುತ್ತದೆ ಎಂಬುದನ್ನು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಅವರು ವಿವರಿಸಿದ್ದಾರೆ.

Courtesy : themooknayak.com

ಆಂಧ್ರ: ದಲಿತ ಪ್ರಾಧ್ಯಾಪಕನ ಕುರ್ಚಿ ತೆಗೆದು ನೆಲದ ಮೇಲೆ ಕೂರಿಸಿದ ಪ್ರಿನ್ಸಿಪಾಲ್; ವ್ಯಾಪಕ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...