Homeಮುಖಪುಟ2019-20ರಲ್ಲಿ ತಿರಸ್ಕರಿಸಿದ ಬೆಳೆ ವಿಮೆ ಹಕ್ಕುಗಳ ಸಂಖ್ಯೆ 9.28 ಲಕ್ಷ!

2019-20ರಲ್ಲಿ ತಿರಸ್ಕರಿಸಿದ ಬೆಳೆ ವಿಮೆ ಹಕ್ಕುಗಳ ಸಂಖ್ಯೆ 9.28 ಲಕ್ಷ!

ವಿಮಾ ಕಂಪೆನಿಗಳು ತಿರಸ್ಕರಿಸಿದ ರೈತರ ಬೆಳೆ ವಿಮೆ ಹಕ್ಕುಗಳ ಸಂಖ್ಯೆ ಕೇವಲ ಎರಡು ವರ್ಷಗಳಲ್ಲಿ 10 ಪಟ್ಟು ಹೆಚ್ಚಾಗಿದೆ

- Advertisement -
- Advertisement -

ಕೇಂದ್ರದ ಪ್ರಮುಖ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ವಿಮಾ ಕಂಪೆನಿಗಳು ತಿರಸ್ಕರಿಸಿದ ರೈತರ ಬೆಳೆ ವಿಮೆ ಹಕ್ಕುಗಳ ಸಂಖ್ಯೆ ಕೇವಲ ಎರಡು ವರ್ಷಗಳಲ್ಲಿ 10 ಪಟ್ಟು ಹೆಚ್ಚಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನೀಡಿದ ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದ್ದಾರೆ.

2017-18ರಲ್ಲಿ, ತಿರಸ್ಕರಿಸಿದ ಹಕ್ಕುಗಳ ಸಂಖ್ಯೆ 92,869 ಆಗಿತ್ತು. ಮುಂದಿನ ವರ್ಷ, 2018-19ರಲ್ಲಿ ಈ ಸಂಖ್ಯೆ 2.04 ಲಕ್ಷಕ್ಕೆ ದ್ವಿಗುಣಗೊಂಡಿದೆ. 2019-20ರ ವೇಳೆಗೆ ಅದು 9.28 ಲಕ್ಷ ಆಗಿದ್ದು, ಇದು 900% ಹೆಚ್ಚಾಗಿದೆ.

ವಿಮೆ ಕಂಪೆನಿಗಳು ಬೆಳೆ ವಿಮೆ ಹಕ್ಕುಗಳನ್ನು ರೈತರಿಗೆ ನಿರಾಕರಿಸಿವೆಯೇ?

ಆ ನಿರ್ದಿಷ್ಟ ವರ್ಷಗಳಲ್ಲಿ ವಿವಿಧ ರಾಜ್ಯಗಳಿಂದ ವರದಿಯಾದ ಪ್ರಕರಣಗಳ ವಿವರಗಳು ಮತ್ತು ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಮನಸ್ ರಂಜನ್ ಭುನಿಯಾ ಪ್ರಶ್ನೆ ಎತ್ತಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಕೃಷಿ ಸಚಿವ ತೋಮರ್ ಅವರು, ಪಿಎಂಎಫ್‌ಬಿವೈ ಅಡಿಯಲ್ಲಿ, ಬರ ಅಥವಾ ಪ್ರವಾಹದಂತಹ ವ್ಯಾಪಕವಾದ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಬೆಳೆ ನಷ್ಟದ ಹಕ್ಕುಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಗಮನಸೆಳೆದರು, ಏಕೆಂದರೆ ಇಡೀ ಘಟಕದ ಇಳುವರಿಯಲ್ಲಿನ ಕೊರತೆಯ ಆಧಾರದ ಮೇಲೆ ಹಕ್ಕುಗಳನ್ನು ಲೆಕ್ಕ ಹಾಕಲಾಗುತ್ತದೆ. ಋತುವಿನ (ಹಂಗಾಮಿನ) ಕೊನೆಯಲ್ಲಿ, ಮಾಡಲಾಗದ ಬಿತ್ತನೆ ಮತ್ತು ಮಧ್ಯಕಾಲೀನ ಪ್ರತಿಕೂಲ ಹಕ್ಕುಗಳನ್ನು ಪ್ರದೇಶದ ವಿಧಾನದ ಆಧಾರದ ಮೇಲೆ ಇತ್ಯರ್ಥಪಡಿಸಲಾಗಿದೆ. ಇದನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಒದಗಿಸಿದ ಇಳುವರಿ ಡೇಟಾ ಮತ್ತು ಬೆಳೆ ಹಾನಿ ವರದಿಗಳನ್ನು ಪರಿಗಣಿಸಿ ನಿರ್ಣಯಿಸಲಾಗಿದೆ ಎಂದು ತೋಮರ್ ತಿಳಿಸಿದ್ದಾರೆ.

ಹೇಗಾದರೂ, ಆಲಿಕಲ್ಲು ಮಳೆ, ಭೂಕುಸಿತಗಳು, ಪ್ರವಾಹ, ಮೋಡದ ಸಿಡಿತ ಅಥವಾ ನೈಸರ್ಗಿಕ ಬೆಂಕಿಯ ಸ್ಥಳೀಯ ಅಪಾಯಗಳಿಂದಾಗಿ ಸಣ್ಣ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಅಪಾಯಗಳು ಬಂದಾಗ ವಿಭಿನ್ನ ಪ್ರಕ್ರಿಯೆ ಅನುಸರಿಸಲಾಗಿದೆ. ಅಂತಹ ನಷ್ಟಗಳನ್ನು ವೈಯಕ್ತಿಕ ವಿಮೆ ಮಾಡಿದ ಜಮೀನು ಪರಿಗಣಿಸಿ, ಬೆಳೆ ನಷ್ಟದ ಮೌಲ್ಯಮಾಪನದ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ. ರೈತರು ಅಂತಹ ಬೆಳೆ ನಷ್ಟವನ್ನು ಸಂಬಂಧಪಟ್ಟ ವಿಮಾ ಕಂಪನಿ, ರಾಜ್ಯ ಸರ್ಕಾರ ಅಥವಾ ಹಣಕಾಸು ಸಂಸ್ಥೆಗಳಿಗೆ ತಿಳಿಸಿದ್ದಾರೆ ಮತ್ತು ಅವರ ಹಕ್ಕುಗಳನ್ನು (ಕ್ಲೈಮ್) ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಯ ಪ್ರತಿನಿಧಿಗಳ ಜಂಟಿ ಸಮಿತಿಯು ನಿರ್ಣಯಿಸಿದೆ ಎಂದು ವಿವರಿಸಿದ್ದಾರೆ.

“ಆದ್ದರಿಂದ, ಈ ಕೆಲವು ಹಕ್ಕುಗಳನ್ನು ರೈತರು ತಡವಾಗಿ ತಿಳಿಸುವುದು, ವಿಮೆ ಮಾಡದ ರೈತರಿಗೆ ಅಥವಾ ವಿಮೆ ಮಾಡದ ಬೆಳೆಗಳಿಗೆ ಮತ್ತು ಅಪಾಯ ಸಂಭವಿಸದಿರುವುದು ಮುಂತಾದ ವಿವಿಧ ಕಾರಣಗಳಿಗಾಗಿ ವಿಮಾ ಕಂಪನಿಗಳು ಹಕ್ಕುಗಳನ್ನು ತಿರಸ್ಕರಿಸಬಹುದು” ಎಂದು ತೋಮರ್ ಹೇಳಿದರು. ನಂತರ ಅವರು ಹಕ್ಕುಗಳ ನಿರಾಕರಣೆಯ ಡೇಟಾವನ್ನು ನೀಡಿದರು, ಇದು ಎರಡು ವರ್ಷಗಳ ಅವಧಿಯಲ್ಲಿ 900% ಹೆಚ್ಚಳವನ್ನು ತೋರಿಸಿದೆ.


ಇದನ್ನೂ ಓದಿ: ರಾಜ್ಯಾದ್ಯಂತ ಯಶಸ್ವಿಯಾಗಿ ಜರುಗಿದ ಸಂಚಾರ ಸ್ಥಗಿತ ಹೋರಾಟ: ಹೆದ್ದಾರಿ ಬಂದ್ ಚಿತ್ರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...