Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

- Advertisement -
- Advertisement -

19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಮೊದಲ ಭಾಗ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಸಂಗೀತ ಮತ್ತು ರಂಗಭೂಮಿಯ ಲೋಕದಲ್ಲಿ ಅನೇಕ ಪ್ರಖ್ಯಾತರು ಆಗಿಹೋದರು. ಭೂಗಂಧರ್ವ ರೆಹಮತ್ ಖಾನ್, ಅಬ್ದುಲ್ ಕರೀಂಖಾನ್, ಉಸ್ತಾದ್ ಅಲ್ಲಾದಿಯಾ ಖಾನ್, ಭಾತಖಂಡೆ, ಹೀರಾಬಾಯಿ ಬಡೋದೆಕರ್, ಭಾಸ್ಕರರಾವ್ ಬಖಲೆ, ವಿಷ್ಣುಪಂಥ ಛತ್ರೆ, ಸವಾಯಿ ಗಂಧರ್ವ, ಬಾಲಗಂಧರ್ವ, ನತ್ಥನ್ ಖಾನ್, ಬರ್ಕತ್‌ಉಲ್ಲಾ ಖಾನ್- ಹೀಗೆ ಹಲವಾರು ಪ್ರಭೃತಿಗಳು ತಮ್ಮ ಪ್ರತಿಭೆ-ಪ್ರಯೋಗಗಳನ್ನು ಕಾಣಿಸಿದರು. ಇವರಲ್ಲಿ ಗಾಯಕರೂ ನಟರೂ ಮುಖ್ಯವಾಗಿ ಹಾರ್ಮೊನಿಯಂ ವಾದಕರೂ ಆಗಿದ್ದ ಗೋವಿಂದರಾವ್ ಟೇಂಬೆಯವರದೂ ಒಬ್ಬರು. ಅವರ ಆತ್ಮಕಥೆಯಿದು- ‘ಮಾಝಾ ಸಂಗೀತ ವ್ಯಾಸಂಗ್’.

ನಟ, ಗಾಯಕ, ನಾಟಕಕಾರ, ಲೇಖಕ, ಹಾರ್ಮೊನಿಯಂ ವಾದಕ ಆಗಿದ್ದ ಗೋವಿಂದರಾವ್ ಟೇಂಬೆ (1881-1955), ಕೊಲ್ಹಾಪುರದವರು. ಶಾಹು ಮಹಾರಾಜರ ಆಸ್ಥಾನದಲ್ಲಿದ್ದ ಅಲ್ಲಾದಿಯಾಖಾನ್ ಹಾಗೂ ಅವರ ಶಿಷ್ಯ ಭಾಸ್ಕರರಾವ್ ಬಖಲೆ ಅವರಿಂದ ಸಂಗೀತ ಕಲಿತವರು. ಮರಾಠಿಯ ಮೊದಲ ಟಾಕಿ ‘ಅಯೋಧ್ಯಾಚ ರಾಜಾ’ದಲ್ಲಿ ನಟಿಸಿದವರು. ‘ಶಿವಾಜಿ ನಾಟಕ ಮಂಡಳಿ’ ಎಂಬ ಕಂಪನಿಯನ್ನೂ ಅವರು ಕಟ್ಟಿ ನಡೆಸಿದವರು. ಟೇಂಬೆಯವರಿಗೂ ಕರ್ನಾಟಕಕ್ಕೂ ಬಹಳ ಲಗತ್ತಿತ್ತು. ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಕಂಠೀರವ ನರಸರಾಜ ಒಡೆಯರ ಆಪ್ತ ಒಡನಾಡಿ. ಇಬ್ಬರೂ ಸೇರಿ ಸಂಗೀತದ ರಂಗಭೂಮಿಯ ಪ್ರದರ್ಶನ ನೋಡಲು ಒಟ್ಟಿಗೆ ಹೋಗುತ್ತಿದ್ದವರು. ವಿದೇಶ ಪ್ರವಾಸ ಮಾಡುತ್ತಿದ್ದರು. ಕನ್ನಡಿಗರ ನಾಟಕ ಕಂಪನಿಗಳಲ್ಲೂ ಟೇಂಬೆಯವರು ಗವಾಯಿಯಾಗಿ ಕೆಲಸ ಮಾಡಿದರು.

ಗೋವಿಂದರಾವ್ ಟೇಂಬೆ

ಟೇಂಬೆಯವರ ಆತ್ಮಕಥೆಯ ವಿಶೇಷವೆಂದರೆ, ಇದು ಅವರ ತಂದೆ ತಾಯಿ, ಮಡದಿ ಮಕ್ಕಳು, ಗೆಳೆಯರು ಬಂಧುಗಳನ್ನು ಕುರಿತು ಹೇಳುವುದಿಲ್ಲ. ಬದಲಿಗೆ ಅವರ ಜೀವಿತ ಕಾಲದಲ್ಲಿ ಸಂಗೀತ ಲೋಕದಲ್ಲಿ ನಡೆದ ವಿದ್ಯಮಾನಗಳನ್ನು ಕಟ್ಟಿಕೊಡುತ್ತದೆ. ಈ ಕೃತಿಯಲ್ಲಿ, ಹಿಂದೂಸ್ತಾನಿ ಸಂಗೀತ ಮತ್ತು ಮರಾಠಿ ರಂಗಭೂಮಿ, ಮುಂಬೈ ಚಲನಚಿತ್ರ ರಂಗಗಳನ್ನು ಹೇಗೆ ಎಲ್ಲ ಧರ್ಮದ ಪ್ರತಿಭಾವಂತರು ಸೇರಿ ಬೆಳೆಸಿದರು ಎಂಬುದರ ಅಪೂರ್ವ ಚರಿತ್ರೆ ಸಿಗುತ್ತದೆ. ಅದರಲ್ಲೂ ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ನತ್ಥನ್‌ಖಾನ್ ಮೊದಲಾದವರ ಅದ್ಭುತವಾದ ವ್ಯಕ್ತಿಚಿತ್ರಗಳು ಸಿಗುತ್ತವೆ. ಸಂಗೀತ ಲೋಕದಲ್ಲಿದ್ದ ಸ್ಪರ್ಧೆ ಅಸೂಯೆ ಸಣ್ಣತನಗಳ ಚಿತ್ರಗಳೂ, ಉದಾರತೆ ಪ್ರೀತಿ ಬೆಳೆಸುವಿಕೆಯ ಚಿತ್ರಗಳೂ ಇಲ್ಲಿವೆ. ಶ್ರವ್ಯಾನುಭವಕ್ಕೆ ಸಂಬಂಧಿಸಿದ ಸಂಗೀತದ ಸೊಗಸನ್ನು ಬಣ್ಣಿಸಲು ಟೇಂಬೆಯವರು ಬಳಸಿರುವ ರೂಪಕಗಳು ವಿಶೇಷವಾಗಿವೆ. ಒಂದು ರೂಪಕ ನನಗೆ ಬಹಳ ಸೆಳೆಯಿತು. ಅದು ಪಶ್ಚಿಮದ ವಾದ್ಯವಾದ ಹಾರ್ಮೊನಿಯಂಅನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಳಗಿಸುವಾಗ ಟೇಂಬೆಯವರು ಪಟ್ಟ ಕಷ್ಟವನ್ನು ಕುರಿತದ್ದು. ಅದನ್ನವರು “ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎರಕ ಹೊಯ್ದ ನರ್ತಕಿಗೆ ಭಾರತೀಯ ಕುಲವಧುವಿನ ಆಭರಣಗಳನ್ನು ತೊಡಿಸಿದಷ್ಟು ಕಠಿಣವಾದ ಕಾರ್ಯ” ಎನ್ನುತ್ತಾರೆ. ಇದು, ಬಿಎಂಶ್ರೀಯವರು ‘ಇಂಗ್ಲಿಷ್ ಗೀತಗಳು’ ಅನುವಾದವನ್ನು ಮಾಡುವಾಗ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದೆ. ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ’ ಎಂದು ಬಣ್ಣಿಸಿದ ರೂಪಕವನ್ನು ನೆನಪಿಸುತ್ತದೆ. ಹೀಗಾಗಿ ಈ ಕೃತಿ ಪಶ್ಚಿಮದ ಸಂಸ್ಕೃತಿ ನಾಗರಿಕತೆಗಳ ಜತೆ, ಭಾರತೀಯ ಸಮಾಜವು ಅನುಸಂಧಾನ ಮಾಡುತ್ತಿದ್ದ ಚರಿತ್ರೆಯ ಕೃತಿಯೂ ಆಗಿದೆ. ಇದು ವಿಶೇಷ ತಜ್ಞತೆಯಿರುವ ಕ್ಷೇತ್ರದ ಅನುಭವವಿರುವ ಕೃತಿಯಾದರೂ ಸಾಮಾನ್ಯರೂ ಕಾದಂಬರಿಯಂತೆ ಓದಬಹುದು.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

ಭಾರತದಲ್ಲಿ ಚರಿತ್ರೆ ಎಂದರೆ ಹಿಂದಿನ ರಾಜರು ಚಕ್ರವರ್ತಿಗಳು ಆಳಿದ, ಯುದ್ಧಮಾಡಿದ, ಮಡಿದ ಕಥನಗಳು ಎಂಬಂತಾಗಿದೆ. ಇವು ವರ್ತಮಾನದಲ್ಲಿ ಸಮುದಾಯಗಳ ನಡುವೆ ವೈಮನಸ್ಸನ್ನು ಹರಡಲು ಹತ್ಯಾರಗಳಾಗಿವೆ. ಇಂತಹ ಚರಿತ್ರೆಯನ್ನು ಬ್ರಿಟಿಷರು ಆರಂಭಿಸಿದರು. ಮತೀಯವಾದವು ಇದನ್ನು ಮುಂದುವರಿಸಿತು. ಅದೀಗ ನಮ್ಮ ಪಠ್ಯಪುಸ್ತಕಗಳನ್ನು ಆಳವಾಗಿ ಹೊಕ್ಕಿದೆ. ಆದರೆ ಚರಿತ್ರೆಯಲ್ಲಿ ಸಾಹಿತ್ಯದ ಸಂಗೀತದ ನೃತ್ಯದ ಸಿನಿಮಾದ ಭಾಷೆಗಳ ರಂಗಭೂಮಿಯ ಅಧ್ಯಾಯಗಳೂ ಇವೆ. ಜಾತಿಮತಗಳ ಹಂಗಿಲ್ಲದ ಆದಿಮಾನವರ ಚರಿತ್ರೆಯೂ ಇದೆ. ಇವನ್ನು ನಮ್ಮ ಗತಕಾಲದ ಮತ್ತು ವರ್ತಮಾನದ ತಿಳಿವಳಿಕೆ ರೂಪಿಸಲು ಬಳಸುವುದು ಕಡಿಮೆ. ಈ ಚರ್ಚೆಯ ಹಿನ್ನೆಲೆಯಲ್ಲಿ ಟೇಂಬೆಯವರ ಕೃತಿಯು ಇಂತಹ ಪರ್ಯಾಯ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಗುಬ್ಬಿವೀರಣ್ಣನವರ ‘ಗುಬ್ಬಿಕಂಪನಿ’, ಬಿ.ವಿ ಕಾರಂತರ ‘ಇಲ್ಲಿರಲಾರೆ’ ಮೊದಲಾದ ಕಲಾಲೋಕದ ಆತ್ಮಚರಿತ್ರೆಯನ್ನಾಗಲಿ, ಸಿನಿಮಾ ಸಂಗೀತ ರಂಗಭೂಮಿ ಚಿತ್ರಕಲೆ ವಾಸ್ತುಶಿಲ್ಪ ಕುರಿತ ಕೃತಿಗಳನ್ನಾಗಲಿ ಇಲ್ಲಿ ಸ್ಮರಿಸಬೇಕು.

ಇಂತಹ ಅಮೂಲ್ಯವೂ ಚಾರಿತ್ರಿಕ ಮಹತ್ವವೂ ಇರುವ ಕೃತಿಯನ್ನು ಮರಾಠಿಯಿಂದ ಬೆಳಗಾವಿಯ ಸಂಗೀತ ಚರಿತ್ರೆಕಾರ ಶಿರೀಷ್ ಜೋಶಿ ಕನ್ನಡಕ್ಕೆ ತಂದಿದ್ದಾರೆ. ಅವರ ಅನುವಾದ ಬಹಳ ಆಪ್ತವಾಗಿದೆ. ಅವರು ಸ್ವತಃ ಸಂಗೀತದವರು. ಕುಮಾರ ಗಂಧರ್ವ, ಬಸವರಾಜ ರಾಜಗುರು ಜೀವನ ಚರಿತ್ರೆಗಳನ್ನು ಬರೆದವರು. ಗಡಿಜಗಳ, ನದಿಜಗಳಗಳಲ್ಲಿ ಎರಡು ಭಾಷಿಕ ಸಮುದಾಯಗಳ ನಡುವೆ ಸದಾ ಕಿಡಿ ಹಾರುವ ಸಮಯದಲ್ಲಿ, ಇಂತಹ ಪುಸ್ತಕಗಳು ಎರಡು ಭಾಷಿಕರ ನಡುವೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕಾಣಿಸುತ್ತವೆ. ಶಂಬಾ ಜೋಶಿ, ದ.ರಾ. ಬೇಂದ್ರೆ, ರಾ.ಚಿಂ. ಢೇರೆಯವರು ಕರ್ನಾಟಕ-ಮಹಾರಾಷ್ಟ್ರಗಳ ಚಾರಿತ್ರಿಕ ಸಾಂಸ್ಕೃತಿಕ ಸಾಹಿತ್ಯಕ ಸಂಬಂಧಗಳನ್ನು ಶೋಧಿಸಿದವರು. ಚಂದ್ರಕಾಂತ ಪೋಕಳೆ, ಡಿ.ಎಸ್.ಚೌಗಲೆ, ಸರಜೂ ಕಾಟ್ಕರ್, ಶಿರೀಷ ಜೋಶಿ ಮೊದಲಾದವರು ಮರಾಠಿಯಿಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ತಿಳಿವನ್ನು ಉಣಿಸುತ್ತಿರುವವರು. ಇವರಿಗೆ ಕೃತಜ್ಞತೆ ಸಲ್ಲಬೇಕು.

ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)
ಪಂಡಿತ ಗೋವಿಂದರಾವ್ ಟೇಂಬೆ,
ಅನು: ಶಿರೀಷ ಜೋಶಿ, ಕನ್ನಡ ಜಾಗೃತ್ತಿ ಪುಸ್ತಕ ಮಾಲೆ, ಅಲ್ಲಮ ಪ್ರಭು ಜನಕಲ್ಯಾಣ ಸಂಸ್ಥೆ,
ಚಿಂಚಣಿ

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...