Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

- Advertisement -
- Advertisement -

ಕೆಲವು ಊರುಗಳಿಗೆ ಅವುಗಳದ್ದೇ ಆದ ವಿಶಿಷ್ಟ ಸಾಂಸ್ಕೃತಿಕ ಚರಿತ್ರೆಯಿರುತ್ತದೆ. ಆದರೆ ಅದು ಯಾವುದೊ ಒಂದು ಘಟನೆಯಿಂದ ಮಸಿಬಿದ್ದ ಚಿತ್ರದಂತಾಗುವುದು. ಭಟ್ಕಳ, ಮಂಗಳೂರು, ಶಿವಮೊಗ್ಗ, ಸೊಂಡೂರು, ಬಳ್ಳಾರಿ ಇಂತಹ ನತದೃಷ್ಟ ಊರುಗಳು. ಕನ್ನಡದ ಮೊದಲ ಪತ್ರಿಕೆ ಶುರುವಾದ, ಸಂಗನಕಲ್ ಎಂಬ ಪ್ರಾಗೈತಿಹಾಸಿಕ ಸ್ಥಳವಿರುವ, ಪ್ರಾಚೀನ ದೇವತೆ ದುರ್ಗಮ್ಮನಿರುವ, ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ರಂಜಾನ್ ಸಾಬ್ ಅವರ ಬಳ್ಳಾರಿ ಜಿಲ್ಲೆಯ ಚರಿತ್ರೆಯು ಅಕ್ರಮ ಗಣಿಗಾರಿಕೆ ಮತ್ತು ದುಂಡಾವರ್ತಿ ರಾಜಕಾರಣದಿಂದ ಬದಿಗೆ ಸರಿಯಿತು. ಬಯಲುಸೀಮೆಯ ಅದ್ಭುತ ಅರಣ್ಯವಿರುವ, ಅನೇಕ ಭೂಹೋರಾಟಗಳು ನಡೆದಿರುವ, ಪ್ರಾಚೀನ ಸ್ಕಂದಪಂಥದ ಕುಮಾರಸ್ವಾಮಿ ಗುಡಿಯಿರುವ, ಭೂಪತಿಯಂತಹ ಆದರ್ಶವಾದಿ ರಾಜಕಾರಣಿಯಿದ್ದ ಸೊಂಡೂರಿಗೂ ಹೀಗೇ ಆಗಿದೆ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಕಂಡು ಗಾಂಧೀಜಿ, ದಕ್ಷಿಣದ ಕಾಶ್ಮೀರ ಎಂದು ಕರೆದಿದ್ದರು. ರಾಜರು ಆಳ್ವಿಕೆ ಮಾಡುತ್ತಿದ್ದ ಮತ್ತು ರಾಜಮನೆತನದವರು ಶಾಸಕರಾಗಿದ್ದ ಸೊಂಡೂರಿಗೆ ’ಕೆಳಜಾತಿ’ಗೆ ಸೇರಿದ ಕಮ್ಯುನಿಸ್ಟ್ ಚಳವಳಿಯಲ್ಲಿ ಬೆಳೆದ ತರುಣನೊಬ್ಬರು ಶಾಸಕರಾಗಿದ್ದರು. ಅವರೇ ಭೂಪತಿ. ದುರದೃಷ್ಟವಶಾತ್ ಭೂಪತಿಯವರು ಎಳೆಯವಯಸ್ಸಿನಲ್ಲೇ ತೀರಿಕೊಂಡರು. ಹೀಗೆ ತೀರಿಕೊಂಡ ಮತ್ತೊಬ್ಬ ತರುಣ ರಾಜಕಾರಣಿ ಚಿಕ್ಕಮಗಳೂರಿನ ಸುಂದರೇಶ್.

ಈ ಪುಸ್ತಕವು ಭೂಪತಿಯವರು 1984-90ರವರೆಗೆ ಐದು ವರ್ಷಕಾಲ ಸಿಪಿಐ ಪಕ್ಷದಿಂದ ಶಾಸಕರಾಗಿದ್ದ ಕಾಲದಲ್ಲಿ ಸದನದಲ್ಲಿ ಮಾಡಿದ ಚರ್ಚೆ, ಎತ್ತಿದ ಪ್ರಶ್ನೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹೊಸ ಶಾಸಕರು ಸದನದಲ್ಲಿ ಹೆಚ್ಚು ಮಾತಾಡುವುದಿಲ್ಲ. ಅವರಿಗೆ ಮಾತಾಡುವ ಅವಕಾಶಗಳೂ ಸಿಗುವುದಿಲ್ಲ. ಆದರೆ ತಮ್ಮ ಒಂದು ಅವಧಿಯಲ್ಲಿ ಭೂಪತಿಯವರು ಮಾಡಿರುವ ಚರ್ಚೆಗಳನ್ನು ಕಂಡರೆ ಸೋಜಿಗವಾಗುತ್ತದೆ. ಗ್ರಾಮೀಣ ವಿದ್ಯುದೀಕರಣ, ಕುಡಿವ ನೀರು, ನೀರಾವರಿ, ಗುತ್ತಿಗೆ ಕಾರ್ಮಿಕರು, ಕರಡಿ ಹಾವಳಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ದರೋಡೆಕೋರರ ಸಮಸ್ಯೆ, ಜನತಾಮನೆ, ಆಸ್ಪತ್ರೆ-ಹಾಸ್ಟೆಲು ಸಮಸ್ಯೆ, ರಸ್ತೆ, ಗುತ್ತಿಗೆ ನೌಕರರು, ಬರಗಾಲದ ಕಾಮಗಾರಿ, ಪಠ್ಯಪುಸ್ತಕ, ಸ್ಮಶಾನದ ಭೂಮಿ, ಕಾಡಿನ ಒತ್ತುವರಿ, ವರದಕ್ಷಿಣೆ ಕೊಲೆ, ಪೋಲೀಸು ದೌರ್ಜನ್ಯ-ಹೀಗೆ ಹಲವಾರು ವಿಷಯಗಳನ್ನು ಕುರಿತು ಆ ಚರ್ಚೆಗಳಿವೆ. ಈ ಪ್ರಶ್ನೆ ಮತ್ತು ಚರ್ಚೆಗಳಲ್ಲಿ ಮೂರು ಆಯಾಮಗಳಿವೆ. 1. ಕ್ಷೇತ್ರದ ಕುಂದುಕೊರತೆಗಳಿಗೆ ಸಂಬಂಧಿಸಿ. 2. ಇಡೀ ಕರ್ನಾಟಕದ ಶಿಕ್ಷಣ ನೀರಾವರಿ ಮತ್ತು ಅಸ್ಪೃಶ್ಯತೆ ಸಮಸ್ಯೆ ಕುರಿತು. 3. ದೇಶದ ಸಮಸ್ಯೆಗಳನ್ನು ಕುರಿತು. ಈ ಮೂರೂ ಸ್ತರಗಳಲ್ಲಿ ಭೂಪತಿಯವರ ವಾದ ಮತ್ತು ಕಾಳಜಿ ಅಸಹಾಯಕರ ಮತ್ತು ತಬ್ಬಲಿಗಳ ಪರವಾಗಿದೆ. ಗಂಗಾವತಿಯಲ್ಲಿ ಪೋಲೀಸ್ ಠಾಣೆಯಲ್ಲಿ ಪೆಟ್ಟು ತಿಂದು ಮಡಿದ ಒಬ್ಬ ವ್ಯಕ್ತಿಯ ಕುಟುಂಬದ ಬಗ್ಗೆ ಅವರು ಹೃದಯ ಕರಗುವಂತೆ ಮಾತಾಡಿದ್ದಾರೆ. ಬಂಡಾಯ ಚಳವಳಿಗೆ ಬಳಕೆಯಾದ ಘೋಷವಾಕ್ಯವನ್ನು ತುಸು ಬದಲಿಸಿ ಹೇಳುವುದಾದರೆ, ಭೂಪತಿ ಜನತೆಯ ನೋವಿಗೆ ಮಿಡಿವ ಪ್ರಾಣಮಿತ್ರನ ಹಾಗೆ ಸದನದಲ್ಲಿ ಮಾತುಕತೆ ಮಾಡಿದ್ದಾರೆ. ಇಲ್ಲಿ ತಾಯ್ತನದ ಕಾಳಜಿಯಿದೆ. ಅಧ್ಯಯನವಿದೆ. ತಾತ್ವಿಕ ಸ್ಪಷ್ಟತೆಯಿದೆ. ನಿಷ್ಠುರತೆಯಿದೆ. ಅವರ ಎದುರು ಮಂತ್ರಿಗಳಾಗಿದ್ದವರು ರಾಮಕೃಷ್ಣ ಹೆಗಡೆ, ದೇವೇಗೌಡ ಮೊದಲಾದವರು.

ಆದರೆ ಈ ಪುಸ್ತಕದಲ್ಲಿರುವ ಚರ್ಚೆಗಳು ಶಾಸಕರೊಬ್ಬರ ಸಾರ್ವಜನಿಕ ಕಾಳಜಿಯನ್ನು ಮಾತ್ರ ಸೂಚಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜನಪರ ರಾಜಕಾರಣದಿಂದ ಉಳ್ಳವರ ಹಿತಾಸಕ್ತಿ ರಕ್ಷಿಸುವತ್ತ ಪ್ರಭುತ್ವಗಳ ಸ್ವರೂಪಕ್ಕೆ ಬದಲಾಗುತ್ತಿರುವುದನ್ನು ಸೂಚಿಸುತ್ತವೆ. ಭೂಪತಿಯವರು ಐದು ಕೋಟಿ ಸಾರ್ವಜನಿಕ ಹಣವನ್ನು ಹೂಡಿದ ಖಾಸಗಿ ಕಂಪನಿಯು ಉತ್ಪಾದನೆ ಮಾಡದೆ ಕೆಲಸ ನಿಲ್ಲಿಸಿದ್ದರ ಬಗ್ಗೆ ಅಪಾರ ಸಿಟ್ಟಿನಿಂದ ಮಾತಾಡುತ್ತಾರೆ. ಇದೇನು ದೊಡ್ಡ ಸಂಗತಿಯಲ್ಲ ಎಂದು ಜೆ.ಎಚ್. ಪಟೇಲರು ಉಡಾಫೆಯಿಂದ ಉತ್ತರಿಸುತ್ತಾರೆ. ಈ ಪುಸ್ತಕದಲ್ಲಿರುವ ಮಾತುಕತೆಗಳು ಕಳೆದುಹೋದ ಸಮಾಜವಾದಿ ದಿನಗಳ ಸುವರ್ಣಯುಗದ ಅಧ್ಯಾಯವೊಂದರಂತೆ ಭಾಸವಾಗುತ್ತವೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ಮಾದರಿಗಳಿವೆ. ಅ. ಕ್ಯಾಪಿಟೇಶನ್, ಲಿಕ್ಕರ್, ರಿಯಲ್ ಎಸ್ಟೇಟು, ಗಣಿಗಾರಿಕೆ, ಮೊದಲಾದ ಹಣದ ವಹಿವಾಟಿನ ನೆಲೆಯಿಂದ ರೂಪುಗೊಂಡ ರಾಜಕಾರಣ; ಆ. ದ್ವೇಷದ ಸಿದ್ಧಾಂತ, ಗಲಭೆ, ಕೊಲೆ, ರಕ್ತ, ವಿವಾದಗಳ ನೆಲೆಯ ರಾಜಕಾರಣ; ಇ. ಫ್ಯೂಡಲ್ ಪಕ್ಷಗಳಲ್ಲಿದ್ದರೂ, ತಮ್ಮ ಮುತ್ಸದ್ದಿತನ ಮತ್ತು ಮುಂಗಾಣ್ಕೆಯಿಂದ ನಾಡನ್ನು ಕಟ್ಟುವ ರಾಜಕಾರಣ- ದೇವರಾಜ ಅರಸು, ಬಸವಲಿಂಗಪ್ಪ, ನಜೀರ್‌ಸಾಬ್, ಗೋವಿಂದೇಗೌಡ, ಇಂತಹವರು; ಈ ಜನಪರ ಚಳವಳಿಗಳಿಂದ ಮೂಡಿದ ರಾಜಕಾರಣ- ವಾಟಾಳ್ ನಾಗರಾಜ್, ಶಾಂತವೇರಿ ಗೋಪಾಲಗೌಡ, ನಂಜುಂಡಸ್ವಾಮಿ, ಭೂಪತಿ ಮೊದಲಾದವರು.

ಕನ್ನಡದಲ್ಲಿ ಸಿದ್ಧಲಿಂಗಯ್ಯನವರನ್ನು ಒಳಗೊಂಡಂತೆ ಅನೇಕ ಶಾಸಕರ ಸದನದ ಮಾತುಕತೆಯ ಕೃತಿಗಳು ಬಂದಿವೆ. ಅವುಗಳ ಸಾಲಿನಲ್ಲಿ ಭೂಪತಿಯವರದೂ ಒಂದು. ಕನ್ನಡ ಸಾಹಿತ್ಯದ ವಿಶಾಲ ಪರಿಕಲ್ಪನೆಯಲ್ಲಿ ಸದನದ ಸಾಹಿತ್ಯವೂ ಒಂದು. ಈ ದಾಖಲು ಸಾಹಿತ್ಯವು ಬರೆದಿದ್ದಲ್ಲ. ಮಾತಿನ ಬರೆಹರೂಪ. ಇದನ್ನು ಕರ್ತೃಗಳು ಸಾಮಾನ್ಯವಾಗಿ ರಾಜಕಾರಣಿಗಳು. ಜನಪ್ರತಿನಿಧಿಗಳಾಗಿ ತಮ್ಮ ಕ್ಷೇತ್ರದ ನಾಡಿನ ಸಮಸ್ಯೆಗಳನ್ನು ಚರ್ಚಿಸುತ್ತ ಆಡಿದ ಮಾತುಗಳು. ಇವು ಮೂಲತಃ ರಾಜಕೀಯ ಆರ್ಥಿಕ ಸಾಮಾಜಿಕ ಚರ್ಚೆಯನ್ನು ಒಳಗೊಂಡಿರುವ ಈ ಕೃತಿಗಳಲ್ಲಿ ಸಾಹಿತ್ಯ ಕಲೆಗೆ ಸಂಬಂಧಿಸಿದ್ದು ಕಡಿಮೆ. ಜನರ ನೋವು ನಲಿವಿಗೆ ಸಂಬಂಧಿಸಿದ್ದೇ ಹೆಚ್ಚು. ಆದರೂ ಇವು ಕತೆ ಕಾದಂಬರಿಯಂತೆ ಓದಿಸಿಕೊಂಡು ಹೋಗಬಲ್ಲವು. ಇದು ಯಾರು ಸದನದಲ್ಲಿ ಮಾತಾಡಿದ್ದಾರೆ ಎಂಬುದರ ಮೇಲೆ ಹೋಗುತ್ತದೆ.

ಇಂತಹ ದಾಖಲು ಸಾಹಿತ್ಯದ ಕೃತಿಯನ್ನು ಮುಕುಂದರಾಜು ಮತ್ತು ಅವರ ಜೀವನಸಂಗಾತಿ ಪದ್ಮಾ ಚಿನ್ಮಯಿ ಅವರು ಸೇರಿ ಸಂಪಾದಿಸಿದ್ದಾರೆ. ಭೂಪತಿ ಟ್ರಸ್ಟ್ ಪ್ರಕಟಸಿದೆ. ಕನ್ನಡದ ರಾಜಕೀಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರವಲ್ಲ, ಕರ್ನಾಟಕದ ರಾಜಕಾರಣ, ಆರ್ಥಿಕತೆ, ಸಾಮಾಜಿಕತೆ ಬಗ್ಗೆ ಆಸ್ಥೆಯುಳ್ಳವರೆಲ್ಲರೂ ಓದುವ ಹಾಗೆ ಈ ಕೃತಿ ರೂಪುಗೊಂಡಿದೆ. ಸದ್ಯ ಕರ್ನಾಟಕದ ಶಾಸಕರ ಮನೆಗಳಲ್ಲಿ ಕಂತೆ ಹಣ, ಅಶ್ಲೀಲ ಸಿಡಿಗಳು, ದ್ವೇಷಸಾಧನೆಯ ಆಯುಧಗಳು ಸಿಗುತ್ತಿರುವ ವರದಿ ಬರುತ್ತಿವೆ. ಶಾಸಕಾಂಗ ಅಧಃಪತನಕ್ಕೆ ಇಳಿದುಹೋಗಿದೆ. ಇಂತಹ ಹೊತ್ತಲ್ಲಿ ಆದರ್ಶವಾದಿ ರಾಜಕಾರಣಿಯೊಬ್ಬರ ಜನಪರ ಕಾಳಜಿಯ ಮಾತುಕತೆಯ ಪುಸ್ತಕವು ಪ್ರಕಟವಾಗಿದೆ. ಇದನ್ನು ವೈರುಧ್ಯವೆನ್ನಬೇಕೊ ಅಗತ್ಯವೆನ್ನಬೇಕೊ ತಿಳಿಯದಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...