HomeUncategorized’ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು’

’ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು’

- Advertisement -
- Advertisement -

ಜರ್ಮನಿಯ ಡ್ಯೂಷ ವಿಜ್ಞಾನ ವಸ್ತುಸಂಗ್ರಹಾಲಯದ ಬಗ್ಗೆ ಒಂದು ಜೋಕು ಐತಿ.

ಅದನ್ನ ನೋಡಲಿಕ್ಕೆ ಬಂದ ಒಬ್ಬ ಸಾಲಿ ಹುಡುಗ ಅಲ್ಲೆ ಇರುವ ಮೈಕೆಲ್ ಸೇಂದಿವೋಗಿಯಸ್ ಹಾಗೂ ಆಂಟೋನಿ ಲವೊಸಯಿಯರ ಅವರ ಚಿತ್ರಪಟ ನೋಡಿ ಗಾಬರಿ ಆಗಿಬಿಟ್ಟನಂತ. “ಅಯ್ಯೋ ಯಪ್ಪ, ಇವರು ಹುಟ್ಟುವದಕ್ಕಿಂತ ಮೊದಲು ನಾವು ಹೆಂಗ ಉಸರಾಟ ಮಾಡ್ತಾ ಇದ್ದೆವೋ ಏನೋ?” ಅಂತ. ಪೋಲಂಡ್‌ನ ವಿಜ್ಞಾನಿ ಮೈಕೆಲ್ ಅವರು ಗಾಳಿ ಒಳಗ ಮನುಷ್ಯ ಉಸರಾಟ ಮಾಡಲಿಕ್ಕೆ ಅನುಕೂಲ ಆಗುವ ಹವೆ ಒಂದು ಐತಿ

ಅಂತ ಸುಮಾರು 1605ಕ್ಕ ಕಂಡುಹಿಡದರು.

ಅದನ್ನ ಜೀವಾಹಾರ ಅಂತ ಕರಿಯಬಹುದು ಅಂತ ಹೇಳಿದರು.
ಅವರ ಆದ ಮ್ಯಾಲೆ 170 ವರ್ಷ ನಂತರ ಹುಟ್ಟಿದ ಸ್ವೀಡನ್ ದೇಶದ ಅಂಟೋನಿ ಅವರು ಅದಕ್ಕ ಆಮ್ಲಜನಕ ಅಂತ ಹೆಸರು ಇಟ್ಟರು. ಅದು ಯಾಕ್ ಅಂದ್ರ ಅದಕ್ಕ ನೀರು, ಅಥವಾ ಇತರ ದ್ರವ ಸೇರಿಸಿದರ ಅದು ಆಮ್ಲೀಯ ಗುಣ ಪಡೆದುಕೊಳ್ಳುತ್ತದ ಅಂತ ಹೇಳಿ.

ಆ ಹುಡುಗನ ಮತಿನಾಗ ಜೋಕು ಎನಪಾ ಅಂದ್ರ ಆ ವಿಜ್ಞಾನಿಗಳು ಆಮ್ಲಜನಕವನ್ನು ಸೃಷ್ಟಿ ಮಾಡಲಿಲ್ಲ. ಅದನ್ನು ಗುರುತಿಸಿದರು, ಅದಕ್ಕ ಹೆಸರು ಇಟ್ಟರು.

ಕವಿಗೆ ಏನು ಕೆಲಸ ಅಂತ ಕೇಳಿದಾಗ ಬೇಂದ್ರೆ ಅವರು ಹೇಳಿದರಂತ.

“ಕುದುರಿಯವರು ಬಂದಾರವ್ವಾ, ಕುದುರಿಯವರು ಬಂದಾರ, ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು, ಏನೇನೋ ಅಂದರವ್ವಾ, ಕುದುರಿಯವರು ಬಂದಾರ”.

ಈ ಪ್ರಕರಣದೊಳಗ ನಾವು ಮೈಕಲ್ ಅವರದು ಒಂದು ಕುದುರಿ, ಅಂಟೋನಿ ಅವರದು ಇನ್ನೊಂದು ಕುದುರಿ ಅಂತ ತಿಳಕೋಬಹುದು. ಅವರ ಸಂಶೋಧನೆ ಏನು ಅಂದ್ರ ಆಮ್ಲಜನಕದ ಗುಣ ಗುರುತು ಹಚ್ಚಿದ್ದು, ಮತ್ತು ಅದಕ್ಕ ಹೆಸರು ಕೊಟ್ಟಿದ್ದು. ಏನೇನೋ ಅಂದರವ್ವಾ ಅಂದ್ರ ಇಷ್ಟ ಮತ್ತ.

ಇವರು ಇಬ್ಬರು 17-18ನೆ ಶತಮಾನದೊಳಗ ಈ ಸಂಶೋಧನೆ ಮಾಡದೇ ಹೋಗಿದ್ದರೆ ನಾವು ಎಲ್ಲಾ ಏನು ಉಸಿರಾಡಿಸಬೇಕಿತ್ತು? ಅಥವಾ ಅದಕ್ಕಿಂತ ಮುಂಚಿನ ಮನುಷ್ಯರೆಲ್ಲಾ ಏನು ಉಸಿರಾಡುತ್ತಾ ಇದ್ದರು ಅನ್ನುವುದು ನಮ್ಮ ತಲಿ ಒಳಗ ಬರೋದು ಸಹಜ. ಇಂತಹ ಸಂದೇಹಗಳು ಈಗಲೂ ನಮ್ಮ ಜನರಿಗೆ ಕಾಡಲಿಕ್ಕೆ ಹತ್ತಿಬಿಟ್ಟಾವು.

ಈಗ ದೇಶಾದ್ಯಂತ ಆಮ್ಲಜನಕ ಕೊರತೆ ಐತಿ. ನಾವು ಉಸಿರು ಆಡುವ ಗಾಳಿ ಒಳಗ ಬೇಕಾದಷ್ಟು ಆಮ್ಲಜನಕ ಇದ್ದರೂ ಕೂಡ ಕೊರೊನಾ ರೋಗಿಗಳಿಗೆ ಅದು ಸಾಲೋದಿಲ್ಲಾ. ಅವರಿಗೆ ಬರೆ ಶುದ್ಧ ಆಮ್ಲಜನಕ ಬೇಕಾಗತದ.
ಇದು ಎರಡು ಮೂರು ರೀತಿಯಿಂದ ಸಿಗತದ. ಮನಿಯೊಳಗ ಇರೋ ರೋಗಿಗಳು ಸಾಂದ್ರ ಆಮ್ಲಜನಕ ತಯಾರಕ ಯಂತ್ರ ಇಟ್ಟುಕೋತಾರ. ಆಸ್ಪತ್ರೆಯೊಳಗ ಇರೋ ರೋಗಿಗಳಿಗೆ ಆಮ್ಲಜನಕದ ಸಿಲಿಂಡರ್ ಬೇಕಾಗತದ. ಇದು ಪ್ರತಿ ಹಾಸಿಗೆ ಪಕ್ಕದಾಗ ಇರಬಹುದು, ಅಥವಾ ಇಡೀ ಆಸ್ಪತ್ರೆಗೆ ಒಂದು ದೊಡ್ಡ ಯಂತ್ರ ಇದ್ದು, ಅದರಿಂದ ಪ್ರತಿ ಹಾಸಿಗೆಗೆ ನಳಿಕೆಯಿಂದ ಪೂರೈಕೆ ಆಗಬಹುದು.

ಇವು ಎರಡೂ ಈಗ ಕಮ್ಮಿ ಅಗಿಬಿಟ್ಟಾವ. ಯಾಕ್ ಅಂದ್ರ ಪೂರೈಕೆಗಿಂತ ಬೇಡಿಕೆ ಹೆಚ್ಚು ಆಗಿಬಿಟ್ಟದ. ಇದು ಅರ್ಥಶಾಸ್ತ್ರದ ಮೂಲ ನಿಯಮಗಳಲ್ಲಿ ಒಂದು.

ಕೊರೊನಾ ವೈರಸ್‌ನ ಎರಡನೇ ಅಲೆ ಶುರು ಆದ ಮೇಲೆ ಈ ಕೊರತೆ ಆಗೆತಿ. ಮೊದಲನೇ ಅಲೆ ಒಳಗ ಬಹಳ ಜನರಿಗೆ ರೋಗಲಕ್ಷಣ ಇರಲಿಲ್ಲ. ಹಾಗೂ ಈಗ ನಾವು ಈ ಸೋಂಕಿಗೆ ಯಾರನ್ನ ಬಯ್ಯಬೇಕು ಅನ್ನೋ ಚಿಂತನೆ ಒಳಗ ಇದ್ದೀವಿ.

ನಾಳೆ ಇದು ಹೆಚ್ಚು ಆದರ ನಮಗ ಯಾವುದರ ಕೊರತೆ ಆಗಬಹುದು ಅಂತ ತಿಳಕೊಂಡಿದ್ದರ ಈ ಪರಿಸ್ಥಿತಿ ಬರ್ತಾ ಇರಲಿಲ್ಲ. ಅಂದ್ರ ಒಬ್ಬ ವಿದ್ಯಾರ್ಥಿ ಎಂಟನೇ ಇಯತ್ತೆ ಪಾಸು ಮಾಡಿ ಒಂಬತ್ತನೇ ಇಯತ್ತೆಗೆ ಬಂದಾಗ ಎಂಟನೇ ಇಯತ್ತೆಯ ಪಾಠಗಳು ಒಂದಾದರೂ ನೆನಪು ಇರಬೇಕು, ಅಲ್ಲವೇ?

ಓದಿ, ಬರೆದು, ಪಾಸು ಆಗಿದ್ದರ ಅವರಿಗೆ ನೆನಪು ಇರ್ತದ. ಕೊರೊನಾ ಪಾಸು ಆದರ ಇರೋದಿಲ್ಲ. ನಮ್ಮ ಸರಕಾರಗಳಿಗೂ ಅಷ್ಟ. ಅವರು ಮೊದಲನೇ ಅಲೆಯೊಳಗ ಜನರಿಗೆ ಅನುಕೂಲ ಮಾಡಿಕೊಟ್ಟು, ರೋಗ ನಿಯಂತ್ರಣ ಮಾಡಿದ್ದರ ಎನರ ಪಾಠ ಕಲಿತಾ ಇದ್ದರು. ಅವರೂ ಕೈ ಝಾಡಿಸಿ, ದೂರ ನಿಂತು ಬರೆ ರೇಡಿಯೋ ಭಾಷಣ ಮಾಡಿದ್ದಕ್ಕ ಅವರಿಗೂ ನೆನಪು ಇಲ್ಲ.

ಅಂದಹಾಗೆ ಆಮ್ಲಜನಕ ತಯಾರಿ ಅಂದ್ರ ಉಪಗ್ರಹ ಉಡಾವಣೆಯಷ್ಟು ಸಂಕೀರ್ಣ ವಿಷಯ ಏನೂ ಅಲ್ಲ. ಅದಕ್ಕೆ ದೊಡ್ಡದೊಡ್ಡ ದುಬಾರಿ ಯಂತ್ರ ಬೇಕಾಗಿಲ್ಲ. ಅದನ್ನು ಸಕ್ಕರೆ ಕಾರ್ಖಾನೆಗಳ ಬಾಯಿಲರ್‌ಗಳಿಂದ ತಯಾರು ಮಾಡಬಹುದು. ಇಡೀ ದೇಶದಲ್ಲಿ ಎರಡನೇ ಅತಿಹೆಚ್ಚು ಸಕ್ಕರೆ ಕಾರಖಾನೆ ಹೊಂದಿರುವ ಮಹಾರಾಷ್ಟ್ರ ಸರಕಾರ ತನ್ನ ಸಕ್ಕರೆ ಕಾರಖಾನೆಗಳಿಂದ ಆಮ್ಲಜನಕ ತಯಾರು ಮಾಡಿಸುತ್ತಾ ಇದೆ.

ಇಡೀ ದೇಶದಲ್ಲಿ 732 ಸಕ್ಕರೆ ಕಾರ್ಖಾನೆ ಅದಾವು. ಅವು ಒಂದು ದಿನಕ್ಕ ಸರಾಸರಿ 70 ಟನ್ ಆಮ್ಲಜನಕ ತಯಾರು ಮಾಡಿದರ 1464 ಟನ್ ಆಮ್ಲಜನಕ ದೇಶದ ರೋಗಿಗಳಿಗೆ ಸಿಗತದ. ಆದರ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಇರುವ ಉತ್ತರ ಪ್ರದೇಶ ಹಾಗೂ ಕಬ್ಬು ಬೆಳೆಯುವ ಹರಿಯಾಣ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳ ಸರ್ಕಾರಗಳು ನಮಗೆ ಆಮ್ಲಜನಕ ಕೊರತೆ ಇಲ್ಲ, ನಮಗ ಈಗ ಏನು ಬೇಕಾಗಿಲ್ಲ ಅಂತ ಹೇಳಿ ಬಿಟ್ಟಾವು. ಈಗ ಏನು ಮಾಡ್ತೀರಿ? ರೊಟ್ಟಿ ಬ್ಯಾಡ ಅಂದವರಿಗೆ ಹೋಳಿಗೆ ತಿನ್ನಸಲಿಕ್ಕೆ ಆಗತದ?
ಇನ್ನೊಂದು ವಿಷಯ ಅಂದ್ರ ಕೊರೊನಾ ನಿವರ್ಹಹಣೆ ಒಳಗ ನಮ್ಮ ದೇಶದ ಅಡಳಿತದ ಒಂದು ಹುಳುಕು ಹೊರಗ ಬಂದದ. ಅದು ಎನಪ ಅಂದ್ರ ಅನಗತ್ಯ ಕೇಂದ್ರೀಕರಣ.

ಒಂದು ನೂರ ಮೂವತ್ತು ಕೋಟಿ ಜನಸಂಖ್ಯೆಯ ದೇಶದೊಳಗ ಎಲ್ಲ ನಿರ್ಧಾರಗಳನ್ನು ದೆಹಲಿಯ ಕೆಲವೇ ಕೆಲವು ಜನ ತೊಗೊಳ್ಳೋದು ಕಾರ್ಯಸಾಧು ಅಲ್ಲ. ಆದರ ಕಳೆದ ಏಳು ವರ್ಷಗಳಿಂದ ಹಂಗನ ನಡದದ. ಆಮ್ಲಜನಕದ ಕತಿನೂ ಹಂಗ. ಇಡೀ ದೇಶಕ್ಕೆ ಆಮ್ಲಜನಕ ಎಷ್ಟು ಬೇಕು ಅನ್ನೋದನ್ನ ಕೇಂದ್ರದ ಕೆಲವು ರಾಜಕಾರಣಿಗಳು-ಅಧಿಕಾರಿಗಳು ನಿರ್ಧಾರ ಮಾಡತಾರ. ಎಲ್ಲಾ ಮಾರಾಟಗಾರರಿಂದ ಸಂಪೂರ್ಣ ಖರೀದಿ ಅವರೇ ಮಾಡತಾರ. ಪ್ರತಿ ರಾಜ್ಯಕ್ಕ ಎಷ್ಟು ಬೇಕು ಅನ್ನೋದು ಅವರೇ ನಿಗದಿ ಮಾಡಿ ಕಳಸತಾರ. ಇದರಾಗ ಎಪ್ರಾ ತಪ್ರಾ ಆಗತದ. ಹೆಚ್ಚು ಕೇಸು ಇರೋ ರಾಜ್ಯಗಳಿಗೆ ಕಮ್ಮಿ, ಕಮ್ಮಿ ಕೇಸು ರಾಜ್ಯಗಳಿಗೆ ಹೆಚ್ಚು ಆಮ್ಲಜನಕ ಸಿಕ್ಕದ. ದೆಹಲಿಗೆ ಹತ್ತಿರ ಇರೋ ರಾಜ್ಯಗಳಿಗೆ ಸಹಜವಾಗಿ ಹೆಚ್ಚು ಆಮ್ಲಜನಕ ಸಿಕ್ಕು, ದೆಹಲಿಯಿಂದ ದೂರ ಇದ್ದ ರಾಜ್ಯಗಳಿಗೆ ಕಮ್ಮಿ ಸಿಕ್ಕದ.

ಇದನ್ನ ಪ್ರಶ್ನೆ ಮಾಡುವ, ಇದರ ಹಿಂದಿನ ಕೇಂದ್ರೀಕರಣದ ಸೂತ್ರದ ಅನಾನುಕೂಲತೆಯ ಬಗ್ಗೆ ಮಾತಾಡುವ ಬುದ್ಧಿಜೀವಿಗಳು ಯಾರು ಉಳಿದಿಲ್ಲ. ಹೆಚ್ಚು ವಯಸ್ಸಿನವರನ್ನ ಕೊರೊನಾ ಪೀಪಿಯಿ ಕಿಟ್ಟಿನಾಗ ಸುತ್ತಿ ಕರಕೊಂಡು ಹೋಗಿ ಬಿಟ್ಟೆತಿ. ಸಣ್ಣ ವಯಸ್ಸಿನವರು ಹೆದರಿಕೊಂಡು ಕೂತಾರ. ಹೆದರಲಾರದೆ ದನಿ ಎತ್ತಿದವರು ಜೈಲಿನೊಳಗ ಇದ್ದಾರ.

ಆಮ್ಲಜನಕದ ಸಂಶೋಧನೆಗೆ ಮುಂಚೆ ಜನ ಏನು ಉಸಿರು ಆಡ್ತಾ ಇದ್ದರೂ ಅಂತ ಸಣ್ಣ ಹುಡುಗರು ಕೇಳಿದರ, ಪಂಥ ಪ್ರಧಾನ ಸೇವಕರಿಗಿಂತ ಮುಂಚೆ ಈ ದೇಶವನ್ನ ಯಾರು ನಡೆಸುತ್ತಾ ಇದ್ದರು? ಇಲ್ಲೆ ಆಡಳಿತ ಅನ್ನೋದು ಇತ್ತೋ ಇಲ್ಲೋ ಅನ್ನೋ ಪ್ರಶ್ನೆಗಳನ್ನ ದೊಡ್ಡವರು ಕೇಳಾಕ ಹತ್ಯಾರ.

ಇದನ್ನ ಜೋಕು ಅಂತ ಹೇಳೋರು ಮಾತ್ರ ಯಾರೂ ಇರಲಾರದ ಹಂಗ ಆಗೇದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...