ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಅತೀ ದೊಡ್ಡ ಐಟಿಸೆಲ್ ನೆಟ್ವರ್ಕ್ ಬಿಜೆಪಿಗಿದೆ. ಇದಾಗಿಯೂ ಕಳೆದೊಂದು ದಿನದಿಂದ ನೆಟ್ಟಿಗರು ಬಿಜೆಪಿ ವಿರುದ್ದ ಮುಗಿಬಿದ್ದಿದ್ದಾರೆ. #spinelessmodi , #TejasviSuryaExposed , #DiaperSuryaExposed , #ArrestBJPMLASatish , #BBMP_MustApologise ಎಂಬ ಹ್ಯಾಶ್ ಟ್ಯಾಗ್ಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಕೊರೊನಾ ಹೆಚ್ಚುತ್ತಿರುವ ಮಧ್ಯೆ ಸರಿಯಾದ ಆರೋಗ್ಯ ಸೌಲಭ್ಯ ಸಿಗದೆ ಜನರು ಬೀದಿ ಬೀದಿಗಳಲ್ಲಿ ನರಳಾಡುತ್ತಿರುವುದು ವರದಿಯಾಗಿದೆ. ಆಡಳಿತ ಪಕ್ಷವಾದ ಬಿಜೆಪಿಯು ಸೋಂಕನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದಿದ್ದು ಸಾಮಾನ್ಯ ಜನರ ನಡುವೆ ಅಸಹನೆ ಹಚ್ಚುತ್ತಿದೆ. ಇದರಿಂದಾಗಿ ಜನರು ತಮ್ಮ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಜನರು ತಮ್ಮ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿರುವುದರಿಂದ ಮುಜುಗರಕ್ಕೀಡಾಗಿದ್ದ ಯುಪಿ ಸರ್ಕಾರವು, ಸಮಸ್ಯೆ ಬರೆದ ಯುವಕನ ಮೇಲೆ ಎಫ್ಐಆರ್ ದಾಖಲು ಮಾಡಿ ಎಚ್ಚರಿಕೆ ಕೂಡಾ ರವಾನಿಸಿತ್ತು. ಆದರೆ ಸುಪ್ರೀಂಕೋರ್ಟ್ ಅದರ ವಿರುದ್ದ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದು, ಸಮಸ್ಯೆ ಬರೆಯುವವರಿಗೆ ತೊಂದರೆ ಮಾಡದಂತೆ ಹೇಳಿತ್ತು.
ಇದನ್ನೂ ಓದಿ: ‘ಬೆಡ್ ಬ್ಲಾಕ್’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ
ಕೊರೊನಾ ಎರಡನೆ ಅಲೆ ಬರಲಿದೆ ಎಂದು ಹಲವಾರು ತಜ್ಞರು ಈ ಮೊದಲೆ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಮುಳುಗಿತ್ತು. ಇದೀಗ ದೇಶದಾದ್ಯಂತ ಜನರು ತೀವ್ರ ಸಂಕಷ್ಟದಲ್ಲಿದ್ದು ಪ್ರಧಾನಿ ಮೋದಿಯ ನಿಷ್ಕ್ರೀಯತೆಯನ್ನು ಪ್ರಶ್ನಿಸಿದ್ದು, ‘ಬೆನ್ನೆಲುಬಿಲ್ಲದ ಮೋದಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾರಮ್ ರಾಜು ಅವರು, “ಮೋದಿಗೆ ಯಾಕೆ ‘ಬೆನ್ನೆಲುಬಿಲ್ಲ’ ಎಂದರೆ, ಕೊರೊನಾವನ್ನು ಅವರು ಸರಿಯಾಗಿ ನಿರ್ವಹಣೆ ಮಾಡದೆ ಸಾವಿರಾರು ಜನರು ಆಮ್ಲಜನಕ, ಔಷಧಿ ಮತ್ತು ಇತರ ಆರೋಗ್ಯ ಸೌಲಭ್ಯದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಆದರೆ ಅವರು ತಮ್ಮ ಹೊಸ ಮನೆ, ಸೆಂಟ್ರಲ್ ವಿಸ್ಟಾಕ್ಕಾಗಿ ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತಿದ್ದಾರೆ. ಶೇಮ್’ ಎಂದು ಟ್ವೀಟ್ ಮಾಡಿದ್ದಾರೆ.
Mr. Modi is a #spinelessmodi as he is spending thousands of cores for his new house & Central Vista while thousands of common people are dying everyday due to lack of oxygen, medicine & other health facilities bcoz of his mismanagement of covid crisis.
SHAME! pic.twitter.com/nCNDKmtzzR— Gangaram Raju (@gangaram_raju) May 6, 2021
ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!
ಸಯಿದ್ ಜಿಬ್ರಾನ್ ಅವರು, “ನಾನು ಮೋದಿಗೆ ಬೆಂಬಲಿಸುತ್ತೇನೆ, ಯಾಕೆಂದರೆ ಅವರು ಅವರದೇ ಜನರನ್ನು ಕೊಲ್ಲುತ್ತಿದ್ದಾರೆ. ಒಂದು ಕ್ಷಣ ಯುಪಿಯಲ್ಲಿ ಮೃತಪಟ್ಟ ಜನರನ್ನು ನೋಡಿ. ಹಾಗೆ ಹೋಗುತ್ತಿರಿ ಮೋದಿ” ಎಂದು ಕಾರ್ಟೂನ್ ಒಂದರ ಚಿತ್ರವನ್ನು ಟ್ವೀಟ್ ಮಾಡಿ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
#IsupportModi because he is good at killing his own people. Just look at the stats of dead people in UP. Keep up Modiji.#ModiMustResign #TejasviSuryaExposed #spinelessmodi #spinelessbjp pic.twitter.com/wvHfRED9AD
— Syed अब्दुल रहमान جبران (@MrSyedJibran) May 6, 2021
ಈ ನಡುವೆ ಬೆಂಗಳೂರು ‘ಬೆಡ್ಬ್ಲಾಕ್’ ಪ್ರಕರಣದಲ್ಲಿ ಅನಾವಶ್ಯಕವಾಗಿ ಮುಸ್ಲಿಮರ ಹೆಸರನ್ನು ಮುನ್ನಲೆಗೆ ತಂದು ಕೋಮುವಾದಿಕರಣ ಮಾಡುವ ಪ್ರಯತ್ನಪಟ್ಟ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರ ರಾಜೀನಾಮೆ ಕೇಳಿ #TejasviSuryaExposed, #DiaperSuryaExposed, ಕೂಡಾ ಟ್ರೆಂಡ್ ಆಗುತ್ತಿದೆ.
ಅವರು ಸ್ವತಃ ಬೆಡ್ಬ್ಲಾಕ್ ದಂಧೆಯ ಪ್ರಮುಖ ಆರೋಪಿಯೆಂದು ‘ವಿಜಯ ಕರ್ನಾಟಕ’ ವರದಿಯಲ್ಲಿ ಹೇಳಲಾಗಿರುವ ಆರೋಪಿ ಶಾಸಕ ಸತೀಶ್ ರೆಡ್ಡಿ ಅವರೊಂದಿಗೆ ಬೆಂಗಳೂರಿನ ವಾರ್ರೂಂ ಒಂದಕ್ಕೆ ದಾಳಿ ಮಾಡಿದ್ದರು. ಅಲ್ಲಿ ಅವರು ಹಗರಣದ ದಾರಿ ತಪ್ಪಿಸಲು ಬೇಕಾಗಿ ಹಗರಣಕ್ಕೆ ಕೋಮು ಬಣ್ಣ ಹಚ್ಚಿದ್ದರು. ಇದರಿಂದಾಗಿ ಬಿಬಿಎಂಪಿ 17 ಜನ ಸಿಬ್ಬಂದಿಯನ್ನು ‘ಮುಸ್ಲಿಂ’ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಿದೆ.
ಇದನ್ನೂ ಓದಿ: ಬೆಡ್ಬ್ಲಾಕ್ ದಂಧೆಯಲ್ಲಿ ಬಿಜೆಪಿ ಶಾಸಕ ಭಾಗಿ; ಸಂಬಂಧವಿಲ್ಲದ 17 ಸಿಬ್ಬಂದಿಗಳು `ಮುಸ್ಲಿಂ’ ಎಂಬ ಕಾರಣಕ್ಕೆ ವಜಾ!
ಇದರ ವಿರುದ್ದ ಕೂಡಾ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಬಿಬಿಎಂಪಿ ಈ ಪ್ರಕರಣದಲ್ಲಿ ಕ್ಷಮೆ ಕೇಳಬೇಕು ಎಂದು #BBMP_MustApologise ಆಗ್ರಹಿಸಿದ್ದಾರೆ. ಜೊತೆಗೆ ಬೆಡ್ಬ್ಲಾಕ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಶಾಸಕ ಸತೀಶ್ ರೆಡ್ಡಿಯನ್ನು ಬಂಧಿಸಬೇಕು #ArrestBJPMLASatish ಎಂದು ಕೂಡಾ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಡಾ. ರಿಹಾನ ಅವರು, “ತೇಜಸ್ವಿ ಸೂರ್ಯ ನಿಮ್ಮ ಆಪ್ತ ಸತೀಶ್ ರೆಡ್ಡಿ ಈ ಇಡೀ ಬೆಡ್ಸ್ಕ್ಯಾಮ್ನ ಹಿಂದೆ ಇದ್ದಾರೆ. ಅಮಾಯಕರನ್ನು ದೂಷಿಸಿರುವ ನೀವು, ಆದ ಪ್ರಮಾದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಬಿಬಿಎಂಪಿ ಕೂಡಾ ಬಿಜೆಪಿ ಗೂಂಡಾಗಳ ಅಣತಿಯಂತೆ ವರ್ತಿಸುವುದನ್ನು ನಿಲ್ಲಿಸಬೇಕು” ಎಂದು ಆಕ್ರಶ ವ್ಯಕ್ತಪಡಿಸಿದ್ದಾರೆ.
Tejasvi Surya your own right hand Sathish Reddy is behind this whole bedscam
Now you must apologise publicly for the blunder you caused by defaming the innocents
BBMP must stop acting like finger tips of BJP Goondas#ArrestBJPMLASatish#BBMP_MustApologise #TejasviSuryaExposed https://t.co/Qr0ocIdNAU
— DrRehana (@drrehana_p) May 6, 2021
ಇದನ್ನೂ ಓದಿ: ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ‘ಸರಕಾರಾತ್ಮಕ’ ಆಗಿಯಲ್ಲ
ಇಮ್ರಾನ್ ಖಾನ್ ಅವರು, “ತೇಜಸ್ವಿ ಸೂರ್ಯ ಅವರು ಕೋಮುವಾದಿ ಭಯೋತ್ಪಾದಕ. ಬಿಬಿಎಂಪಿ ಕಮಿಷನರ್ ಅವರನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.
Tejasvi Surya is a Communal Terrorist and @BBMPCOMM stop supporting Him#BBMP_MustApologise#DiaperSuryaExposed pic.twitter.com/pwMGsdd9RN
— Imran Khan (@ImranKh97675259) May 6, 2021
ಯಶ್ವಂತ್ ನೇತಾಜಿ ಅವರು, “ತೇಜಸ್ವಿ ಸೂರ್ಯ ಬಿಜೆಪಿಯ ಕೋಮುವಾದಿ ಏಜೆಂಟ್” ಎಂದು ಕೊರೊನಾಗಿಂತ ಅಪಾಯಕಾರಿ ಎಂದು ಬರೆದಿರುವ ತೇಜಸ್ವಿ ಸೂರ್ಯ ಚಿತ್ರವನ್ನು ಹಾಕಿದ್ದಾರೆ. ಜೊತೆಗೆ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
Q & A:Tejaswi Surya
▪What did u do in First wave?
TS- I did absolutely did nothing apart from blaming it on Tablighis.▪What did u do in Second wave?
TS- I did absolutely nothing apart from blaming it on 17 Muslim workers.TS = Communal agent of BJP!#ArrestBJPMLASatish pic.twitter.com/jnWcfPTdx1
— Yashwanth Nethaji N T (@Nethajiyashwant) May 6, 2021
ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!