Homeಕರ್ನಾಟಕಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

ಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

- Advertisement -
- Advertisement -

‘ಈ ದೇಶದಲ್ಲಿ ಆ್ಯಂಬುಲೆನ್ಸ್‌ಗೂ ಜಾಗವಿಲ್ಲ’ ಎಂಬ ಮಾತು ಎಂತಹ ಗಟ್ಟಿ ಮನಸ್ಸಿನವರನ್ನೂ ಒಮ್ಮೆ ಕಾಡಿಸದೆ ಬಿಡದು. ಇದು ಕವಲುದಾರಿ ಸಿನಿಮಾದ ಒಂದು ದೃಶ್ಯ. ಅನಂತನಾಗ್‌ಗೆ ಗುಂಡೇಟು ಬಿದ್ದು, ಅವರನ್ನು ಉಳಿಸಬೇಕೆಂದು ಟ್ರಾಫಿಕ್ ಪೊಲೀಸ್‌ ಆದ ಹೀರೋ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಾನೆ. ಆದರೆ ರಸ್ತೆಯುದ್ದಕ್ಕೂ ಟ್ರಾಫಿಕ್. ಸೈರನ್ ಹಾಕಿದ್ದರೂ ಜಾಗಬಿಡುವವರಿಲ್ಲ. ಅನಂತ್‌ನಾಗ್ ರಸ್ತೆ ಮಧ್ಯದಲ್ಲೇ ಕೊನೆಯುಸಿರೆಳೆಯುತ್ತಾರೆ.
ಈ ದೃಶ್ಯವನ್ನು ನೋಡಿದ ಮೇಲೆ ಎಲ್ಲೇ ಆ್ಯಬುಂಲೆನ್ಸ್ ಶಬ್ದ ಕೇಳಿದರೂ ತಕ್ಷಣವೇ ಗಮನ ರಸ್ತೆಯೆಡೆಗೆ ಕೇಂದ್ರೀಕರಿಸುವಂತಾಗಿದೆ. ಇಂದು ಬೆಳಗ್ಗೆ ನಾನು ಕೆ.ಆರ್.ಮಾರ್ಕೆಟ್ ಬಳಿ ಬಸ್ಸಿನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಆ್ಯಂಬುಲೆನ್ಸ್ ಶಬ್ದ ಬಂತು. ತಕ್ಷವೇ ತಿರುಗಿ ನೋಡಿದೆ. ನಾಕುಳಿತಿದ್ದ ಬಸ್ಸಿನಿಂದ ಸ್ವಲ್ಪವೇ ದೂರದಲ್ಲಿತ್ತು. ಅದರ ಮುಂದೆ ಒಂದೆರಡು ಕಾರುಗಳು ಬೈಕುಗಳು ಬರುತ್ತಿದ್ದವು. ಅವರಾರೂ ಆ್ಯಂಬುಲೆನ್ಸ್‌ಗೆ ಸೈಡ್ ಕೊಡಲಿಲ್ಲ. ಬದಲಾಗಿ ಮತ್ತೊಂದೆರಡು ಬೈಕುಗಳು ಆ್ಯಬುಲೆನ್ಸ್‌ಗೆ ಸೈಡ್‌ ಹೊಡೆದು ಮುಂದೆಬರುತ್ತಿದ್ದವು. ದುರದೃಷ್ಟವೆಂದರೆ ನಾನು ಕುಳಿತಿದ್ದ ಬಸ್ಸು ಕೂಡ ಜಾಗಬಿಡಲಿಲ್ಲ, ಹಾಗೇ ಮುಂದೆ ಬಂತು. ಅಲ್ಲಿದ್ದ ಟ್ರಾಫಿಕ್ ಪೋಲಿಸ್ ಕೂಡ ಒಂದು ಹೆಜ್ಜೆ ಅಲುಗಾಡದೆ ನಿಂತಲ್ಲೇ ನಿಂತು, ಅಲ್ಲಿಯ ಸನ್ನಿವೇಶವನ್ನು ನೋಡುತ್ತಿದ್ದರು ಬಿಟ್ಟರೆ, ಆ್ಯಂಬುಲೆನ್ಸ್‌ಗೆ ಜಾಗ ಬಿಡಿಸುವ ಕೆಲಸ ಮಾಡಲೇ ಇಲ್ಲ.

ಇದು ಒಂದು ಉದಾಹರಣೆಯಷ್ಟೇ ಇಂತಹವು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಟ್ರಾಫಿಕ್ ಇಲ್ಲದ ರಸ್ತೆಗಳಲ್ಲೂ ಆ್ಯಬುಲೆನ್ಸ್‌ಗೆ ಸೈಡ್ ಕೊಡದೆ ಮಧ್ಯ ರಸ್ತೆಯಲ್ಲಿ ಹೋಗುವವರೂ ಇದ್ದಾರೆ. ಆ್ಯಬುಲೆನ್ಸ್ ಜೊತೆಗೆ ರೇಸ್‌ಗೆ ಬಿದ್ದವರಂತೆ ಅದರ ಜೊತೆಗೇ ರೇಸ್ ಹೋಗುವವರೂ ಇದ್ದಾರೆ. ಇವರೆಲ್ಲರ ನಡುವೆ ಟ್ರಾಫಿಕ್ ನಿಯಂತ್ರಿಸಿ ಆ್ಯಬುಲೆನ್ಸ್‌ಗೆ ಜಾಗಮಾಡಿಕೊಡುವ ಸಹನೆಯನ್ನೂ ನಮ್ಮ ಟ್ರಾಫಿಕ್ ಪೊಲೀಸರು ಕಳೆದುಕೊಂಡಿದ್ದಾರೆ. ಎಂತಹ ವಿಪರ್ಯಾಸವೆಂದರೆ ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯದ್ವಾರದ ಮುಂದೆಯೇ ಬಿಎಂಟಿಸಿ ಬಸ್ಸುಗಳ ಮತ್ತು ಆಟೋ ನಿಲ್ದಾಣಗಳಿದ್ದು ಆ್ಯಬುಲೆನ್ಸ್ ಅಲ್ಲಿ ನಿಲ್ಲುವ ಬಸ್ಸುಗಳನ್ನು ದಾಟಿ ಆಸ್ಪತ್ರೆಯೊಳಗೆ ಹೋಗಬೇಕಾದರೆ ಅದೇ ಒಂದು ದೊಡ್ಡ ಸಾಹಸವಾಗಿರುತ್ತದೆ.

ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಆ್ಯಂಬುಲೆನ್ಸ್‌ಗೆ ಜಾಗ ಕೊಡದೆ ತಡವಾಗುವುದರಿಂದ ಬದುಕುಳಿಯಬಹುದಾದ ಎಷ್ಟೋ ಜೀವಗಳು ದಾರಿ ಮಧ್ಯದಲ್ಲೇ ಅಸುನೀಗುತ್ತವೆ. ಆದರೂ ನಮ್ಮ ಅಂತಃಕರಣ ಕಲಕುವುದೇ ಇಲ್ಲ, ನಾವೆಷ್ಟು ಅಸೂಕ್ಷ್ಮರಾಗಿದ್ದೇವೆ ಎಂದು ಪ್ರತಿಯೊಬ್ಬನೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇವು ಕವಲುದಾರಿ ಸಿನಿಮಾದ ಆ ಮಾತನ್ನು ಮತ್ತೆ ಮತ್ತೆ ನನಪಿಸುತ್ತವೆ.

ಅಲ್ಲದೆ ರಸ್ತೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದವರನ್ನು ರಕ್ಷಿಸದೆ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾ ನಿಲ್ಲುವ, ಬಟ್ಟೆ ನೋಡಿ ಕಳ್ಳನೆಂದು ಹೊಡೆದು ಕೊಲ್ಲುವ, ಒಂಬತ್ತು ತಿಂಗಳ ಕಂದಮ್ಮಳನ್ನು ಅತ್ಯಾಚಾರಕ್ಕೆ ಯತ್ನಸುವ ಕ್ರೂರ ಮನಸ್ಸುಗಳ ಮಧ್ಯೆ ಆ್ಯಂಬುಲೆನ್ಸ್‌ ಒಳಗೆ ಸಾವು-ಬದುಕಿನಲ್ಲಿ ಹೋರಾಟ ಮಾಡುವವರ ನೋವು ಹೇಗೆ ತಾನೇ ಅರ್ಥವಾದೀತು ಎಂದು ನಮಗೆ ನಾವೇ ಕೇಳಿಕೊಳ್ಳಬೇಕು, ನಮ್ಮಿಂದಾಗುವ ಮಾನವೀಯ ಕೆಲಸಗಳನ್ನು ಮಾಡಬೇಕು.

ಅಂದರೆ ಎಲ್ಲರೂ ಹೀಗೆ ಇದ್ದಾರೆ ಎಂದರ್ಥವಲ್ಲ. ಆದರೂ ಒಳ್ಳೆಯ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂಬ ಭಯಕ್ಕೆ ಈ ಪತ್ರ ಬರೆದೆ. ಇದೆಲ್ಲದರ ನಡುವೆ ಮೊನ್ನೆ ಒಬ್ಬ ಟ್ರಾಫಿಕ್ ಪೋಲಿಸ್ ಬಟ್ಟೆರಹಿತನಾಗಿ ಬಿದ್ದಿದ್ದ ಬುದ್ದಮಾಂದ್ಯನಿಗೆ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು ಇಂತಹವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ.

ಸೋಮಶೇಖರ್ ಚಲ್ಯ, ಮಂಡ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...