Homeಅಂಕಣಗಳುಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

- Advertisement -
- Advertisement -

ಸರಕಾರಿ ಆಸ್ಪತ್ರೆಯ ವೈದ್ಯರೊಳಗ ಒಂದು ಜೋಕು ಓಡಾಡತಾ ಇರತೇತಿ. ಅದೇನಪಾ ಅಂದರ ತುರ್ತು ಚಿಕಿತ್ಸಾ ಘಟಕದೊಳಗ ಏನಾದರ ಒಂದು ಕೇಸು ಬಂತು ಅಂದರ ಅದನ್ನ ನೋಡಾಕ ನೂರು ಜನಾ ಹೊರಗ ಗುಂಪು ಕಟ್ಟಿಕೊಂಡು ಬರತಾರ. ಹೋಗರಿ, ಡಾಕ್ಟರಿಗೆ ಕೆಲಸಾ ಮಾಡಾಕ ಬಿಡ್ರಿ ಅಂದರ ಹೋಗಂಗಿಲ್ಲ. ಅವರನ್ನ ಚದುರಿಸಬೇಕು ಅಂತ ಡಾಕ್ಟರು ಒಂದು ಉಪಾಯ ಕಂಡುಕೊಂಡಿರತಾರ. ಅದೇನಪಾ ಅಂದರ ರೋಗಿಗೆ ತುರ್ತಾಗಿ ರಕ್ತ ಬೇಕಾಗೇತಿ. ಯಾರರ ಕೊಡವರು ಇದ್ದರ ಮುಂದ ಬರ್ರಿ ಅಂತ ಹೇಳತಾರ. ಆವಾಗ ಎಲ್ಲಾ ಶೂರರೂ ಅಲ್ಲಿಂದ ಹೋಗಿ ಬಿಡತಾರಂತ.

ಯಾವಾಗಲೂ, ಎಲ್ಲಾದಕ್ಕೂ `ಯಾಕ’ ಅಂತ ಪ್ರಶ್ನೆ ಮಾಡೋ ಉತ್ತರ ಕುಮಾರರಿಂದ ತುಂಬಿ ಹೋಗಿರೋ ದೇಶ ನಮ್ಮದು. ಹಂಗ ಇದ್ದಾಗ ದೆಹಲಿ- ಮುಂಬೈ ಮುಂತಾದ ನಗರಗಳಲ್ಲಿ ಕೆಲವು ಜನ ರಕ್ತ ದಾನ ಮಾಡೋ ಸುದ್ದಿ ಇದ್ದಕ್ಕಿದ್ದಂಗ ಜೋರಾಗಿ ಬಿಟ್ಟದಲ್ಲಾ ಎನು ಕತಿ?

ಈ ಹಿನ್ನೆಲೆಯೊಳಗ ಒಂದು ಮಜಾ ನೀವು ನೋಡಿದಿರಾ? ನಮ್ಮ ಠೀವಿ ಚಾನೆಲ್ಲುಗಳು ಬಳಸೋ ಶಬ್ದಗಳು ರಾತ್ರೋರಾತ್ರಿ ಬದಲಾಗಿದ್ದು ನೋಡಿದಿರಾ?

`ತಬ್ಲೀಘಿ ಜಿಹಾದಿಗಳು’ ಅಂತಿದ್ದವರು `ತಬ್ಲೀಘಿ ಸೇನಾನಿಗಳು’ ಅಂತ ಕರೀಲಿಕ್ಕೆ ಶುರು ಮಾಡಿದ್ದು ಯಾಕ ಅಂತ ವಿಚಾರ ಮಾಡಿದಿರಾ?

ನೋಡ್ರಿ, ನಿಮಗ ಬರೇ ಬಣ್ಣದ ಚಿತ್ರ ತೋರಿಸಿ, ನಿಮ್ಮ ಹತ್ರ ಹೂಂ ಅನ್ನಿಸಿ, ನಿಮ್ಮಿಂದ ವಿಚಾರ ಶಕ್ತಿ ಕಿತ್ತುಕೊಳ್ಳೋ ಜಾದೂ ಠೀವಿಯವರ ಹತ್ರ ಐತಿ.

ಎಲ್ಲಾ ಇರಲಿ, ಅದರ ಹಿಂದಿನ ಹಕೀಕತ್ತು ಏನು ಒಂದೀಟು ತಿಳಕೊಳ್ಳೋಣು. ಅದು ಏನಪಾ ಅಂದರ ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಈ ಪ್ಲಾಸ್ಮಾ ಅಂದರ ಅದು ಮನುಷ್ಯರ ರಕ್ತದಾಗ ಇರೋ ದ್ರವ್ಯ. ಇದರಾಗನ ಕೆಂಪು ಮತ್ತು ಬಿಳಿ ರಕ್ತ ಕಣಗಳು ಈಜಾಡಿಕೊಂಡು ಇರತಾವು. ಆದರ ಇದರಾಗ ಇರೋ ಪ್ರಮುಖ ವಸ್ತು ಅಂದರ ರೋಗ ನಿರೋಧಕ ಕಣಗಳು ಅಥವಾ ಇಮ್ಯುನೋ ಗ್ಲೋಬುಲಿನ್. ಅವಕ್ಕ ಆಂಟಿಬಾಡಿ ಅಥವಾ ಪ್ರತಿಜೀವಿಗಳು ಅಂತಾರ. ಇವು ರೋಗ ಬಂದು ಗುಣವಾದ ಪ್ರತಿ ರೋಗಿಯ ದೇಹದಾಗ ಇರತಾವು. ಇವನ್ನ ರೋಗ ಇದ್ದವನಿಗೆ ಕೊಟ್ಟರ ಅವನ ದೇಹದಾಗ ಪ್ರತಿಜೀವಿಯ ಸಂಖ್ಯೆ ಜಾಸ್ತಿ ಆಗಿ, ಅವನ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಅವನ ರೋಗ ಕಮ್ಮಿ ಆಗುವ ಸಾಧ್ಯತೆ ಹೆಚ್ಚು ಆಗತೇತಿ.

ಒಂದು ರೀತಿಯೊಳಗ ಇದು ಲಸಿಕೆ ಇದ್ದಂಗ. ಯಾವ ರೋಗಾಣುವಿನ ವಿರುದ್ಧ ಲಸಿಕೆಯೊ ತಯಾರು ಮಾಡಬೇಕಾಗೇದೋ, ಅದರದ ಒಂದು ಸಣ್ಣ ಪ್ರಮಾಣದ ಸೋಂಕನ್ನು ತೊಗೊಂಡು ಒಂದು ಕುದುರೆ, ಎಮ್ಮೆ ಅಥವಾ ಇನ್ನೊಂದು ಅಂಥಾ ಪ್ರಾಣಿಯ ದೇಹದಾಗ ಹಾಕತಾರ. ಅದರ ದೇಹದಾಗ ಪ್ರತಿಜೀವಿ ತಯಾರು ಆದ ಮ್ಯಾಲೆ ಅದನ್ನ ತಗದು ಮನುಷ್ಯರಿಗೆ ನಿರೋಧಕ ಔಷಧಿ ಅಂತ ಕೊಡತಾರ.

ಅದರ ರೀತಿಯೊಳಗನ ಇರೋದು ಇದು ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಇದನ್ನ ಯಾರು ರೋಗದಿಂದ ಗುಣಾ ಆಗಿರತಾರೋ ಅವರ ದೇಹದಿಂದ ತೊಗೋಬೇಕಾಗತದ. ಭಾರತದಾಗ ರಕ್ತ ದಾನ ಸ್ವಯಂ ಆಸಕ್ತಿಯಿಂದ ಮಾತ್ರ ಕೊಡಬಹುದಾದ್ದರಿಂದ, ರಕ್ತದಾಗ ಇರೋ ಜೀವದ್ರವ್ಯವನ್ನ ಸಹಿತ ದಾನಿಗಳ ಸಮ್ಮತಿಯಿಂದ ಮಾತ್ರ ತೊಗೋಬಹುದು.

ಆದರ ಈಗ ಈ ಜೀವದ್ರವ್ಯದ ಜರೂರತ್ತು ಬರೇ ಯಾರೋ ಕೆಲವರ ಆರೋಗ್ಯ ರಕ್ಷಣೆಯ ಕಾರಣಗಳಿಗೆ ಬೇಕಾಗಿಲ್ಲ. ಸಮಾಜದ ಸ್ವಾಸ ಕಾಪಾಡೋ ಸಲುವಾಗಿ ಬೇಕಾಗೇತಿ.

ತಮ್ಮ ರಕ್ತದೊಳಗಿನ ಪ್ಲಾಸ್ಮಾ ತೊಗೊಳ್ಳಲಿಕ್ಕೆ ದೆಹಲಿ- ಮುಂಬಯಿ ಸೇರಿದಂತೆ 300 ಜನ ತಬ್ಲೀಘ ಜಮಾತ ಸದಸ್ಯರು ಸಮ್ಮತಿ ಕೊಟ್ಟಾರ ಅನ್ನೋ ಸುದ್ದಿ ಬಂದಕೂಡಲೇ ಕೆಲವರು ವಿರೋಧ ಮಾಡಲಿಕ್ಕೆ ಸುರು ಮಾಡಿದರು. ನನಗ ಕೊರೋನಾ ಬಂದು, ನಾನು ಸತ್ತರೂ ಸತ್ತೆ, ಗದ್ದಾರುಗಳ ರಕ್ತ ತೊಗೊಳ್ಳೋದಿಲ್ಲಾ ಅಂತ ಘೋಷಣೆ ಮಾಡಿಕೊಂಡರು.

ಇನ್ನ ಕೆಲವರು ನೋಡ್ರಿ ಅವರು ದೇವರಂಥಾವರು. ರೋಗಿಗಳಿಗೆ ತಮ್ಮ ರಕ್ತ ಕೊಟ್ಟು ಉಳಿಸಿಕೊಳ್ಳಾಕ ಹತ್ಯಾರು, ಅಂತ ಹೇಳಿದರು. ಆದರ ಸತ್ಯ ಅನ್ನೋದು ಈ ಎರಡು ವಿಪರೀತಗಳ ನಡುವೆ ಐತಿ.

ರಕ್ತ ಸ್ರಾವದಿಂದ ಸಾಯುವವರನ್ನ ರಕ್ತ ಮರುಪೂರಣೆಯಿಂದ ರಕ್ಷಣೆ ಮಾಡೋ ತಂತ್ರಜ್ಞಾನ ಇವತ್ತಿನದಲ್ಲ. ಎರಡನೇ ಮಹಾ ಯುದ್ಧದಿಂದನೂ ಈ ಪದ್ಧತಿ ನಡೆಯುತ್ತಾ ಬಂದೇತಿ. ಭಾರತದೊಳಗ ಸ್ವಾತಂತ್ರ ಪೂರ್ವದಾಗೂ ರಕ್ತದಾನದ ಉದಾಹರಣೆಗಳು ಇದ್ದಾವ. ಪ್ರತಿ ಸಲೆ ನಮ್ಮ ತಂಗಿಯೋ, ಹೆಂಡತಿಯೋ, ಮಗಳೋ, ರಕ್ತ ಹೀನತೆಯಿಂದ ಬಳಲುವಾಗ, ಯಾರಿಗರ ನಮ್ಮವರಿಗೆ ಅಪಘಾತ ಆದಾಗ, ಅವರಿಗೆ ರಕ್ತ ಹೊಂದಿಸಲು ನಾವು ಹುಡುಕಾಡಿರುತೇವಿ. ರಕ್ತ ದಾನಿ ಸಿಕ್ಕರ ಸಾಕು ಅಂತ ಆಗಿರತೇತಿ. ಅವರ ಮತ, ಜಾತಿ ಕೇಳಾಕ ಹೋಗೋದಿಲ್ಲ. ಇದು ನಮಗ ಮಾನವ ಕುಲದ ಏಕತೆಯ ಪಾಠ ಆಗಿರತದೋ ಇಲ್ಲೋ. ಇಂಥಾ ಪರಿಸ್ಥಿತಿಯೊಳಗ `ಮಾನವ ಜಾತಿ ತಾನು ಒಂದೇ ವಲಂ’ ಅಂದರ ಅಲ್ಲಂ ಅಂತ ಯಾರರ ಹೇಳತೇವೇನು?

ಇನ್ನ ತಿಂಗಳಾನುಗಟ್ಟಲೆ ಕೊರೋನಾ ಜಿಹಾದು- ಭಯೋತ್ಪಾದನೆ ಅಂತ ಹೀಯಾಳಿಸಿಕೊಂಡ ತಬ್ಲೀಘು ಜಮಾತು ಸದಸ್ಯರು ರಕ್ತದಾನಕ್ಕೆ ತಯಾರಾದ ತಕ್ಷಣ ಅವರನ್ನು ಕೊರೊನಾ ಸೇನಾನಿಗಳು ಅಂತ ಮಾಡಿದವರು ಯಾರು? ಅವರಿಗೆ `ನಾನು ನಿನ್ನೆ ಏನು ಮಾತಾಡಿದ್ದೆ?- ಇವತ್ತು ಏನು ಮಾತಾಡಾಕ ಹತ್ತೇನಿ’ ಅಂತ ನೆನಪು ಇರತೈತೋ ಇಲ್ಲೋ?

ಅವರಿಗೆ ಇರಲಿ ಬಿಡಲಿ, ನಮಗರ ಅಷ್ಟು ಬುದ್ಧಿ ಅದನೋ ಇಲ್ಲೋ? ರಾಜಕಾರಣಿಗಳು ಮಾಧ್ಯಮ ದುರುಪಯೋಗ ಪಡಿಸಿಕೊಳ್ಳೋದು, ಮಾಧ್ಯಮದವರು ರಾಜಕಾರಣ ಮಾಡೋದು ನಮಗ ಗೊತ್ತು ಆಗತೇತೋ ಇಲ್ಲೋ? ಈ ಪ್ರಶ್ನೆಗಳ ಉತ್ತರಗಳೇ ನಮ್ಮ ನಾಳೆಗಳನ್ನ ನಿರ್ಧರಿಸತಾವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...