Homeಅಂಕಣಗಳುಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

- Advertisement -
- Advertisement -

ಸರಕಾರಿ ಆಸ್ಪತ್ರೆಯ ವೈದ್ಯರೊಳಗ ಒಂದು ಜೋಕು ಓಡಾಡತಾ ಇರತೇತಿ. ಅದೇನಪಾ ಅಂದರ ತುರ್ತು ಚಿಕಿತ್ಸಾ ಘಟಕದೊಳಗ ಏನಾದರ ಒಂದು ಕೇಸು ಬಂತು ಅಂದರ ಅದನ್ನ ನೋಡಾಕ ನೂರು ಜನಾ ಹೊರಗ ಗುಂಪು ಕಟ್ಟಿಕೊಂಡು ಬರತಾರ. ಹೋಗರಿ, ಡಾಕ್ಟರಿಗೆ ಕೆಲಸಾ ಮಾಡಾಕ ಬಿಡ್ರಿ ಅಂದರ ಹೋಗಂಗಿಲ್ಲ. ಅವರನ್ನ ಚದುರಿಸಬೇಕು ಅಂತ ಡಾಕ್ಟರು ಒಂದು ಉಪಾಯ ಕಂಡುಕೊಂಡಿರತಾರ. ಅದೇನಪಾ ಅಂದರ ರೋಗಿಗೆ ತುರ್ತಾಗಿ ರಕ್ತ ಬೇಕಾಗೇತಿ. ಯಾರರ ಕೊಡವರು ಇದ್ದರ ಮುಂದ ಬರ್ರಿ ಅಂತ ಹೇಳತಾರ. ಆವಾಗ ಎಲ್ಲಾ ಶೂರರೂ ಅಲ್ಲಿಂದ ಹೋಗಿ ಬಿಡತಾರಂತ.

ಯಾವಾಗಲೂ, ಎಲ್ಲಾದಕ್ಕೂ `ಯಾಕ’ ಅಂತ ಪ್ರಶ್ನೆ ಮಾಡೋ ಉತ್ತರ ಕುಮಾರರಿಂದ ತುಂಬಿ ಹೋಗಿರೋ ದೇಶ ನಮ್ಮದು. ಹಂಗ ಇದ್ದಾಗ ದೆಹಲಿ- ಮುಂಬೈ ಮುಂತಾದ ನಗರಗಳಲ್ಲಿ ಕೆಲವು ಜನ ರಕ್ತ ದಾನ ಮಾಡೋ ಸುದ್ದಿ ಇದ್ದಕ್ಕಿದ್ದಂಗ ಜೋರಾಗಿ ಬಿಟ್ಟದಲ್ಲಾ ಎನು ಕತಿ?

ಈ ಹಿನ್ನೆಲೆಯೊಳಗ ಒಂದು ಮಜಾ ನೀವು ನೋಡಿದಿರಾ? ನಮ್ಮ ಠೀವಿ ಚಾನೆಲ್ಲುಗಳು ಬಳಸೋ ಶಬ್ದಗಳು ರಾತ್ರೋರಾತ್ರಿ ಬದಲಾಗಿದ್ದು ನೋಡಿದಿರಾ?

`ತಬ್ಲೀಘಿ ಜಿಹಾದಿಗಳು’ ಅಂತಿದ್ದವರು `ತಬ್ಲೀಘಿ ಸೇನಾನಿಗಳು’ ಅಂತ ಕರೀಲಿಕ್ಕೆ ಶುರು ಮಾಡಿದ್ದು ಯಾಕ ಅಂತ ವಿಚಾರ ಮಾಡಿದಿರಾ?

ನೋಡ್ರಿ, ನಿಮಗ ಬರೇ ಬಣ್ಣದ ಚಿತ್ರ ತೋರಿಸಿ, ನಿಮ್ಮ ಹತ್ರ ಹೂಂ ಅನ್ನಿಸಿ, ನಿಮ್ಮಿಂದ ವಿಚಾರ ಶಕ್ತಿ ಕಿತ್ತುಕೊಳ್ಳೋ ಜಾದೂ ಠೀವಿಯವರ ಹತ್ರ ಐತಿ.

ಎಲ್ಲಾ ಇರಲಿ, ಅದರ ಹಿಂದಿನ ಹಕೀಕತ್ತು ಏನು ಒಂದೀಟು ತಿಳಕೊಳ್ಳೋಣು. ಅದು ಏನಪಾ ಅಂದರ ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಈ ಪ್ಲಾಸ್ಮಾ ಅಂದರ ಅದು ಮನುಷ್ಯರ ರಕ್ತದಾಗ ಇರೋ ದ್ರವ್ಯ. ಇದರಾಗನ ಕೆಂಪು ಮತ್ತು ಬಿಳಿ ರಕ್ತ ಕಣಗಳು ಈಜಾಡಿಕೊಂಡು ಇರತಾವು. ಆದರ ಇದರಾಗ ಇರೋ ಪ್ರಮುಖ ವಸ್ತು ಅಂದರ ರೋಗ ನಿರೋಧಕ ಕಣಗಳು ಅಥವಾ ಇಮ್ಯುನೋ ಗ್ಲೋಬುಲಿನ್. ಅವಕ್ಕ ಆಂಟಿಬಾಡಿ ಅಥವಾ ಪ್ರತಿಜೀವಿಗಳು ಅಂತಾರ. ಇವು ರೋಗ ಬಂದು ಗುಣವಾದ ಪ್ರತಿ ರೋಗಿಯ ದೇಹದಾಗ ಇರತಾವು. ಇವನ್ನ ರೋಗ ಇದ್ದವನಿಗೆ ಕೊಟ್ಟರ ಅವನ ದೇಹದಾಗ ಪ್ರತಿಜೀವಿಯ ಸಂಖ್ಯೆ ಜಾಸ್ತಿ ಆಗಿ, ಅವನ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಅವನ ರೋಗ ಕಮ್ಮಿ ಆಗುವ ಸಾಧ್ಯತೆ ಹೆಚ್ಚು ಆಗತೇತಿ.

ಒಂದು ರೀತಿಯೊಳಗ ಇದು ಲಸಿಕೆ ಇದ್ದಂಗ. ಯಾವ ರೋಗಾಣುವಿನ ವಿರುದ್ಧ ಲಸಿಕೆಯೊ ತಯಾರು ಮಾಡಬೇಕಾಗೇದೋ, ಅದರದ ಒಂದು ಸಣ್ಣ ಪ್ರಮಾಣದ ಸೋಂಕನ್ನು ತೊಗೊಂಡು ಒಂದು ಕುದುರೆ, ಎಮ್ಮೆ ಅಥವಾ ಇನ್ನೊಂದು ಅಂಥಾ ಪ್ರಾಣಿಯ ದೇಹದಾಗ ಹಾಕತಾರ. ಅದರ ದೇಹದಾಗ ಪ್ರತಿಜೀವಿ ತಯಾರು ಆದ ಮ್ಯಾಲೆ ಅದನ್ನ ತಗದು ಮನುಷ್ಯರಿಗೆ ನಿರೋಧಕ ಔಷಧಿ ಅಂತ ಕೊಡತಾರ.

ಅದರ ರೀತಿಯೊಳಗನ ಇರೋದು ಇದು ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಇದನ್ನ ಯಾರು ರೋಗದಿಂದ ಗುಣಾ ಆಗಿರತಾರೋ ಅವರ ದೇಹದಿಂದ ತೊಗೋಬೇಕಾಗತದ. ಭಾರತದಾಗ ರಕ್ತ ದಾನ ಸ್ವಯಂ ಆಸಕ್ತಿಯಿಂದ ಮಾತ್ರ ಕೊಡಬಹುದಾದ್ದರಿಂದ, ರಕ್ತದಾಗ ಇರೋ ಜೀವದ್ರವ್ಯವನ್ನ ಸಹಿತ ದಾನಿಗಳ ಸಮ್ಮತಿಯಿಂದ ಮಾತ್ರ ತೊಗೋಬಹುದು.

ಆದರ ಈಗ ಈ ಜೀವದ್ರವ್ಯದ ಜರೂರತ್ತು ಬರೇ ಯಾರೋ ಕೆಲವರ ಆರೋಗ್ಯ ರಕ್ಷಣೆಯ ಕಾರಣಗಳಿಗೆ ಬೇಕಾಗಿಲ್ಲ. ಸಮಾಜದ ಸ್ವಾಸ ಕಾಪಾಡೋ ಸಲುವಾಗಿ ಬೇಕಾಗೇತಿ.

ತಮ್ಮ ರಕ್ತದೊಳಗಿನ ಪ್ಲಾಸ್ಮಾ ತೊಗೊಳ್ಳಲಿಕ್ಕೆ ದೆಹಲಿ- ಮುಂಬಯಿ ಸೇರಿದಂತೆ 300 ಜನ ತಬ್ಲೀಘ ಜಮಾತ ಸದಸ್ಯರು ಸಮ್ಮತಿ ಕೊಟ್ಟಾರ ಅನ್ನೋ ಸುದ್ದಿ ಬಂದಕೂಡಲೇ ಕೆಲವರು ವಿರೋಧ ಮಾಡಲಿಕ್ಕೆ ಸುರು ಮಾಡಿದರು. ನನಗ ಕೊರೋನಾ ಬಂದು, ನಾನು ಸತ್ತರೂ ಸತ್ತೆ, ಗದ್ದಾರುಗಳ ರಕ್ತ ತೊಗೊಳ್ಳೋದಿಲ್ಲಾ ಅಂತ ಘೋಷಣೆ ಮಾಡಿಕೊಂಡರು.

ಇನ್ನ ಕೆಲವರು ನೋಡ್ರಿ ಅವರು ದೇವರಂಥಾವರು. ರೋಗಿಗಳಿಗೆ ತಮ್ಮ ರಕ್ತ ಕೊಟ್ಟು ಉಳಿಸಿಕೊಳ್ಳಾಕ ಹತ್ಯಾರು, ಅಂತ ಹೇಳಿದರು. ಆದರ ಸತ್ಯ ಅನ್ನೋದು ಈ ಎರಡು ವಿಪರೀತಗಳ ನಡುವೆ ಐತಿ.

ರಕ್ತ ಸ್ರಾವದಿಂದ ಸಾಯುವವರನ್ನ ರಕ್ತ ಮರುಪೂರಣೆಯಿಂದ ರಕ್ಷಣೆ ಮಾಡೋ ತಂತ್ರಜ್ಞಾನ ಇವತ್ತಿನದಲ್ಲ. ಎರಡನೇ ಮಹಾ ಯುದ್ಧದಿಂದನೂ ಈ ಪದ್ಧತಿ ನಡೆಯುತ್ತಾ ಬಂದೇತಿ. ಭಾರತದೊಳಗ ಸ್ವಾತಂತ್ರ ಪೂರ್ವದಾಗೂ ರಕ್ತದಾನದ ಉದಾಹರಣೆಗಳು ಇದ್ದಾವ. ಪ್ರತಿ ಸಲೆ ನಮ್ಮ ತಂಗಿಯೋ, ಹೆಂಡತಿಯೋ, ಮಗಳೋ, ರಕ್ತ ಹೀನತೆಯಿಂದ ಬಳಲುವಾಗ, ಯಾರಿಗರ ನಮ್ಮವರಿಗೆ ಅಪಘಾತ ಆದಾಗ, ಅವರಿಗೆ ರಕ್ತ ಹೊಂದಿಸಲು ನಾವು ಹುಡುಕಾಡಿರುತೇವಿ. ರಕ್ತ ದಾನಿ ಸಿಕ್ಕರ ಸಾಕು ಅಂತ ಆಗಿರತೇತಿ. ಅವರ ಮತ, ಜಾತಿ ಕೇಳಾಕ ಹೋಗೋದಿಲ್ಲ. ಇದು ನಮಗ ಮಾನವ ಕುಲದ ಏಕತೆಯ ಪಾಠ ಆಗಿರತದೋ ಇಲ್ಲೋ. ಇಂಥಾ ಪರಿಸ್ಥಿತಿಯೊಳಗ `ಮಾನವ ಜಾತಿ ತಾನು ಒಂದೇ ವಲಂ’ ಅಂದರ ಅಲ್ಲಂ ಅಂತ ಯಾರರ ಹೇಳತೇವೇನು?

ಇನ್ನ ತಿಂಗಳಾನುಗಟ್ಟಲೆ ಕೊರೋನಾ ಜಿಹಾದು- ಭಯೋತ್ಪಾದನೆ ಅಂತ ಹೀಯಾಳಿಸಿಕೊಂಡ ತಬ್ಲೀಘು ಜಮಾತು ಸದಸ್ಯರು ರಕ್ತದಾನಕ್ಕೆ ತಯಾರಾದ ತಕ್ಷಣ ಅವರನ್ನು ಕೊರೊನಾ ಸೇನಾನಿಗಳು ಅಂತ ಮಾಡಿದವರು ಯಾರು? ಅವರಿಗೆ `ನಾನು ನಿನ್ನೆ ಏನು ಮಾತಾಡಿದ್ದೆ?- ಇವತ್ತು ಏನು ಮಾತಾಡಾಕ ಹತ್ತೇನಿ’ ಅಂತ ನೆನಪು ಇರತೈತೋ ಇಲ್ಲೋ?

ಅವರಿಗೆ ಇರಲಿ ಬಿಡಲಿ, ನಮಗರ ಅಷ್ಟು ಬುದ್ಧಿ ಅದನೋ ಇಲ್ಲೋ? ರಾಜಕಾರಣಿಗಳು ಮಾಧ್ಯಮ ದುರುಪಯೋಗ ಪಡಿಸಿಕೊಳ್ಳೋದು, ಮಾಧ್ಯಮದವರು ರಾಜಕಾರಣ ಮಾಡೋದು ನಮಗ ಗೊತ್ತು ಆಗತೇತೋ ಇಲ್ಲೋ? ಈ ಪ್ರಶ್ನೆಗಳ ಉತ್ತರಗಳೇ ನಮ್ಮ ನಾಳೆಗಳನ್ನ ನಿರ್ಧರಿಸತಾವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...