ಜೂನ್ 20 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮುಂಚಿತವಾಗಿ ಮಾಡಲಾಗಿದ್ದ ಡಾಂಬರೀಕರಣದ ರಸ್ತೆಗಳು ಕಿತ್ತುಹೋಗಿದ್ದ ಹಿನ್ನೆಲೆಯಲ್ಲಿ, ಇಬ್ಬರು ಇಂಜಿನಿಯರ್ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜುಲೈ 22ರ ಶುಕ್ರವಾರ ಅಮಾನತುಗೊಳಿಸಿದೆ.
ಜೂನ್ 20 ರಂದು ಪ್ರಧಾನಿ ಮೋದಿ ಅವರ ಭೇಟಿಗೆ ಮುಂಚಿತವಾಗಿ, ಸುಮಾರು 14 ಕಿಮೀ ರಸ್ತೆಗಳನ್ನು ಮರು ಅಭಿವೃದ್ಧಿ ಮತ್ತು ದುರಸ್ತಿ ಮಾಡಲು 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಬಹಿರಂಗಪಡಿಸಿತ್ತು. ಆದರೆ, ಈ ಡಾಂಬರೀಕರಣದ ರಸ್ತೆಗಳು ನಿರ್ಮಾಣವಾದ 15 ದಿನಗಳಲ್ಲೇ ಹದಗೆಟ್ಟು ಹಾಳಾಗಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳಪೆ ರಸ್ತೆ ನಿರ್ಮಾಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಶೀಲನೆಗೆ ಒಳಗಾಯಿತು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಲ್ಲೂ ಪ್ರಧಾನ ಮಂತ್ರಿ ಕಚೇರಿ ವಿಚಾರಣೆ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ನೀರು ಸೋರಿಕೆಯಿಂದ ರಸ್ತೆ ಗುಂಡಿ ಬೀಳುವ ಸಾಧ್ಯತೆ ಇದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಮೋದಿ ಭೇಟಿಗಾಗಿ ಡಾಂಬರೀಕರಣ ಮಾಡಿದ್ದ 6 ಕೋಟಿ ವೆಚ್ಚದ ರಸ್ತೆ ಮೂರೇ ದಿನಕ್ಕೆ ಕುಸಿತ, ವರದಿ ಕೇಳಿದ ಪ್ರಧಾನಿ ಕಚೇರಿ
ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದ ಮರಿಯಪ್ಪನಪಾಳ್ಯ ಮುಖ್ಯರಸ್ತೆಗೆ ಮಾಡಲಾಗಿದ್ದ ಡಾಂಬರೀಕರಣದ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಅದರ ಮೇಲ್ಪದರವನ್ನು ಕೈಯಿಂದ ಕಿತ್ತು ಸುಲಭವಾಗಿ ತೆಗೆಯಬಹುದಾಗಿತ್ತು.
ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಆಗಾಗ್ಗೆ ಭೇಟಿ ನೀಡಿದರೆ ಮಾತ್ರ ನಗರದ ರಸ್ತೆಗಳು ಸುಧಾರಿಸುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಟೀಕಿಸಿತ್ತು. ಆಡಳಿತವು ತನ್ನ ಕರ್ತವ್ಯಗಳನ್ನು ನಿರ್ವಹಿಸಬೇಕಾದರೆ ಪ್ರಧಾನಿ ಬೇರೆ ಬೇರೆ ಮಾರ್ಗಗಳಲ್ಲಿ ಬರಬೇಕೆ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.