Homeಕರ್ನಾಟಕಕಾವಲುಗಾರನಿಲ್ಲದ ಕೋಟೆ!

ಕಾವಲುಗಾರನಿಲ್ಲದ ಕೋಟೆ!

- Advertisement -
- Advertisement -

ಫೆಡರಿಕ್ ನೀಷ್ಹೆ ಎಂಬ ಜರ್ಮನ್ ತತ್ತ್ವಶಾಸ್ತ್ರಜ್ಞ ತನ್ನ ’ಎಟರ್‍ನಲ್ ರಿಟರ್ನ್’ ಅಥವಾ ’ನಿರಂತರ ಪುನರಾವರ್ತನೆ’ ಅನ್ನೊ ತತ್ತ್ವದ ಮೂಲಕ ಮನುಕುಲಕ್ಕೆ ಸವಾಲು ಹಾಕಿದ. ಎಂದರೆ ನಾವು ಸತ್ತಮೇಲೆ ಮತ್ತೆಮತ್ತೆ ಮರಳಿ ಹುಟ್ಟಿ ಬಂದರೂ ಈಗ ನಾವು ಬದುಕಿ ಬಿಟ್ಟ ಬದುಕನ್ನೇ ಯಥಾವತ್ ಹಾಗೆ ಬದುಕುತ್ತೇವೆ. ಯಾವ ರೀತಿಯ ಮಾರ್ಪಾಟೂ, ಯಾವ ರೀತಿಯ ಬದಲಾವಣೆಯೂ ಇಲ್ಲದೆ; ಹಾಗೊಂದು ವೇಳೆ ಆದರೆ ಅದೆಂತಹ ದುಃಸ್ವಪ್ನ-ಮತ್ತೆ ಅದೇ ದುರಂತ ಬದುಕನ್ನು ಬದುಕುತ್ತಾ ಇರುವುದೆಂದರೆ? ಅವನ ಕಳಕಳಿ ಆಶಯ ಇಷ್ಟೆ: ಪುನಃ ಬದುಕಿದರೂ ಹೊಸಹೊಸ ಅರ್ಥ ಕೊಡುವ ಹಾಗೆ ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಜೀವನವನ್ನು ನೀವೇ ಕಟ್ಟಿಕೊಳ್ಳಿ; ಸೃಜನಶೀಲರಾಗಿ ಬದುಕಿ ಎಂಬುದು.

ಮಾನವ ಇತಿಹಾಸವನ್ನು ಅವಲೋಕಿಸಿದರೆ ನೀಷ್ಹೆಯ ಸಿದ್ಧಾಂತವನ್ನೇ ನಿಜಮಾಡುವತ್ತ ಸಾಗಿ ಬರುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನಮ್ಮ ಕಣ್ಮುಂದಿನ ಇಂದಿನ ಬದುಕನ್ನೇ ನೋಡಬಹುದು. ಕಳೆದೆರಡು ವರ್ಷಗಳಿಂದ ಕೊರೊನಾ ವೈರಾಣು ಸೋಂಕಿನಿಂದ ಮನುಕುಲ ಸತ್ತಂತಾಗಿತ್ತು. ಒಂದಾದ ಮೇಲೊಂದು ಕೊರೊನಾ ಅಲೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು, ನಿಜ. ಆದರೆ ನೆಲ ಜಲ ಗಾಳಿ ನಿರ್ಮಲವಾಗುತ್ತಿತ್ತು. ಈಗಿನ್ನೂ ಆ ವೈರಾಣು ಸಂಪೂರ್ಣ ನಾಶವಾಗಿಲ್ಲ. ನಿಯಂತ್ರಣಕ್ಕೆ ಬರುವ ಸೂಚನೆ ಇದೆ ಅಷ್ಟೆ. ಆದರೆ ಮನುಷ್ಯಕುಲ ಮಾತ್ರ ಪುನಃ ನಿಯಂತ್ರಣ ತಪ್ಪುತ್ತಿದೆ. ತನ್ನ ಮೊದಲಿನ ಚಾಳಿಗೇ ಹಿಂತಿರುಗುತ್ತಿದೆ. ಅತ್ತ ಉಕ್ರೇನ್-ರಷ್ಯಾ ಸಂಘರ್ಷದ ಸಾವು ನೋವು, ಆಸ್ತಿ ಪಾಸ್ತಿ ನಾಶವಾಗುತ್ತಿದ್ದರೆ ಇತ್ತ ಭಾರತದಲ್ಲಿ ರಾಜಕೀಯ ಹಿತಾಸಕ್ತಿಯ ಕೋಮು ಗಲಭೆಗಳು ಶಾಂತಿಯನ್ನು ಕದಡುತ್ತಿವೆ.

ಫೆಡರಿಕ್ ನೀಷ್ಹೆ

ಭಾರತ ಜನನಿಯ ತನುಜಾತೆಯಾದ ಕರ್ನಾಟಕವೂ ಅದಕ್ಕೆ ಹೊರತಲ್ಲ. ಕರುನಾಡು ಕೋಮು ಸಂಘರ್ಷ ಆಡುಬಲವಾಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಬೀಳುತ್ತಿದೆ. ಇದೆಲ್ಲ ಯಾಕಾಗಿ? ಯಾರಿಗಾಗಿ? ಈ ಕೇಡಿಗೆ ಕೊನೆಯುಂಟೆ? ಎಂಬ ಆತಂಕ ಕಾಡುತ್ತಿದೆ. ದಿನಬೆಳಗಾದರೆ ಕೇಡುಗಳ ಕೆಂಡದ ಮಳೆ ಧಾರಾಕಾರ ಸುರಿಯುತ್ತಿದೆ. ಅದನ್ನೇ ಮಾಧ್ಯಮಗಳು ತಿರುತಿರುಗಿ ಅಪ್ಪಳಿಸುತ್ತಿವೆ.

ಕಳೆದೆರಡು ತಿಂಗಳುಗಳಿಂದ ಹಲವು ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಮರ ಮೇಲೆ ಒಂದಲ್ಲ ಒಂದು ಕಿತಾಪತಿ ಜಗಳ ಝೂಟ್ ತೆಗೆಯುತ್ತಲೆ ಇದ್ದಾರೆ. ಅವರಿಗೆ ಗದರಿ ಕಿವಿಮಾತು ಹೇಳುವ ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ. ರಾಜ್ಯ ಕಾವಲುಗಾರರಿಲ್ಲದ ಕೋಟೆಯಂತಾಗುತ್ತಿದೆ. ಮುಸ್ಲಿಂ ಜನಾಂಗದ ವಿರುದ್ಧ ಅಜೆಂಡಾಗಳು ಅದೆಲ್ಲಿಂದ ಸೃಷ್ಟಿಯಾಗುತ್ತವೋ ಯಾರು ಸೃಷ್ಟಿ ಮಾಡುತ್ತಾರೋ? ಆ ಮರ್‍ಯಾದಾ ಪುರುಷೋತ್ತಮ ಶ್ರೀರಾಮನೇ ಬಲ್ಲ.

ಹಿಜಾಬ್-ಕೇಸರಿ ಶಾಲು ವಿವಾದದಿಂದ ಆರಂಭಗೊಂಡ ಈ ಘರ್ಷಣೆಗೆಳು ಹಲಾಲ್ ಕಟ್-ಜಟಕಾ ಕಟ್‌ವರೆಗೆ, ಆಜಾನ್ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಇತ್ಯಾದಿ ಕಿಡಿ ಹಾರುತ್ತಲೇ ಇವೆ. ಆದರೆ ಕರುನಾಡ ಜನ ಕಿವಿಗೊಡದೆ ಆ ಕಿಡಿಗಳಿಗೆ ಭಾವೈಕ್ಯದ ತಣ್ಣೀರು ಸುರಿದು ತಮ್ಮ ದೈನಂದಿನ ಬದುಕನ್ನು ಸಾಗಿಸುತ್ತಿರುವುದು ಸ್ವಾಗತಾರ್ಹ. ಆದರೆ ಬಿಸಿಬಿಸಿ ಸುದ್ದಿಗಾಗಿ ಹಾತೊರೆಯುವ ದೃಶ್ಯ ಮಾಧ್ಯಮಗಳ ಬೇಟೆಗಾರರು ಸುಮ್ಮನೆ ಇರಬೇಕಲ್ಲ! ಅಲ್ಲಿ ಇಲ್ಲಿ ಹಾರುವ ಕೊಳ್ಳಿ ಕಿಡಿಗಳಿಗೇ ಭೂತಗನ್ನಡಿ ಹಿಡಿದು ಬಹುಸಂಖ್ಯಾತ ಹಿಂದೂಗಳ ಹಾಲಿನಂತ ಮನಸ್ಸುಗಳಿಗೆ ಹುಳಿ ಹಿಂಡುವುದೂ ಅಲ್ಪಸಂಖ್ಯಾತರಿಗೆ ಅತಂಕ-ಕೀಳರಿಮೆ ಹುಟ್ಟಿಸುವುದೂ ಸತತ ನಡೆಯುತ್ತಲೇ ಇದೆ.

ಇತ್ತ ಒಳ ಜಗಳಗಳಿಂದ ಸತ್ತಂತಿರುವ ವಿರೋಧ ಪಕ್ಷಗಳನ್ನು ಬಡಿದೆಬ್ಬಿಸುವ ನವ ನಿರ್ಮಾಣ ವ್ಯಕ್ತಿ ಇಲ್ಲದೆ ಅವು ಗೊಂದಲದ ಗೂಡಾಗಿವೆ. ಒಟ್ಟಾರೆ ಮುಸ್ಲಿಮರ ಕೈಯಿಂದ ಅನ್ನಕ್ಕೆ ಮಾರ್ಗವಾದ ವ್ಯಾಪಾರ-ಸಾಪಾರ ಎಲ್ಲವನ್ನು ಕಿತ್ತುಕೊಳ್ಳುವ ’ಅನ್ನೇಕಾರರು’ ವಿಜೃಂಭಿಸುತ್ತಿದ್ದಾರೆ. ಬೇಟೆ ನಾಯಿಗೇನು ಗೊತ್ತು ಒಡೆಯನ ಕರಾಮತ್ತು? ಅವರೀಗ, ಸಂಗೀತ, ಸಾಹಿತ್ಯ, ಕ್ರೀಡೆ ಮುಂತಾದ ಸಕಲೆಂಟು ಕ್ಷೇತ್ರಗಳಿಗೂ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದಾರೆ. ಅವುಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಮುನ್ಸೂಚನೆಗಳು ಕಂಡುಬರುತ್ತಿವೆ.

ತೆರೆಮರೆಯಲ್ಲಿ ಕುಮ್ಮಕ್ಕು ಇಲ್ಲದಿದ್ದರೆ ಇದೆಲ್ಲ ಸಂಭವಿಸುವುದಾದರೂ ಹೇಗೆ? ಇಡೀ ಮುಸ್ಲಿಮ್ ಜನಾಂಗ ಕೀಳರಿಮೆ ತೊರೆದು ಸ್ವಾಭಿಮಾನ ಸರ್ವೋತ್ಕೃಷ್ಟವೆಂದು ಬಗೆದು ಒಟ್ಟಾಗಿ ಬೀದಿಗಿಳಿದು ಭಾರತೀಯರು ನಾವು, ನಾವೇನು ವಲಸೆ ಬಂದವರಲ್ಲ. ಈ ಮಣ್ಣಿನ ಮಕ್ಕಳು, ಇಲ್ಲಿ ಬದುಕುವುದು ನಮ್ಮ ಹಕ್ಕು; ಸಂವಿಧಾನ ನಮ್ಮ ಪವಿತ್ರ ದೇವರಿದ್ದಂತೆ. ಎಂದು ಗಲಭೆಕೋರರ ಮುಖಕ್ಕೆ ರಾಚಿ ತೂರುವ ಸಾತ್ವಿಕ ಸಿಟ್ಟು ರೂಢಿಸಿಕೊಳ್ಳಬೇಕು ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವ ಒಗ್ಗಟ್ಟು ಗಳಿಸಿಕೊಳ್ಳಬೇಕು. ’ಸಹಿಷ್ಣು ಹಿಂದೂಗಳಿಗೆ ಇದೇನು ಸಭ್ಯತೆ, ಇದೇನು ಸಂಸ್ಕೃತಿ?’ ಎಂದು ಕೇಳುವ ನೈತಿಕತೆಯನ್ನು ಗಳಿಸಿಕೊಳ್ಳಬೇಕು.

ಕೊನೆಯದಾಗಿ ’ಪರಮಾತ್ಮ ನಮ್ಮನ್ನು ಕಾಪಾಡಲಿ, ನಾವು ಜೊತೆಗೂಡಿ ಒಟ್ಟಾಗಿ ಕೆಲಸ ಮಾಡೋಣ. ನಮ್ಮ ಶಕ್ತಿ ಬೆಳೆಯಲಿ, ಸಾಮರ್ಥ್ಯ ಬೆಳೆಯಲಿ. ನಾವು ಓದಿದ್ದು ತೇಜಸ್ಸು ಆಗಲಿ. ನಾವು ಯಾರನ್ನು ದ್ವೇಷಿಸುವುದು ಬೇಡ, ನಮಗೆ ಹಗೆತನ ಬೇಡ’ ಎಂದ ಉಪನಿಷತ್ ಋಷಿ – ಅವನ ’ಓಂ ಸಹನಾ ಭವತು’ ಎಂಬ ಶಾಂತಿಮಂತ್ರಕ್ಕೆ ನಾವು ವಾರಸುದಾರರಲ್ಲವೆ? ’ಸಹಿಷ್ಣು ಹಿಂದೂ’ ವಾದಿಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ದುರಿತಕಾಲ ಕೊನೆಗೊಳ್ಳಲಿ. ಶಾಂತಿ ನೆಲೆಸಲಿ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...