Homeಕರ್ನಾಟಕಕಾವಲುಗಾರನಿಲ್ಲದ ಕೋಟೆ!

ಕಾವಲುಗಾರನಿಲ್ಲದ ಕೋಟೆ!

- Advertisement -
- Advertisement -

ಫೆಡರಿಕ್ ನೀಷ್ಹೆ ಎಂಬ ಜರ್ಮನ್ ತತ್ತ್ವಶಾಸ್ತ್ರಜ್ಞ ತನ್ನ ’ಎಟರ್‍ನಲ್ ರಿಟರ್ನ್’ ಅಥವಾ ’ನಿರಂತರ ಪುನರಾವರ್ತನೆ’ ಅನ್ನೊ ತತ್ತ್ವದ ಮೂಲಕ ಮನುಕುಲಕ್ಕೆ ಸವಾಲು ಹಾಕಿದ. ಎಂದರೆ ನಾವು ಸತ್ತಮೇಲೆ ಮತ್ತೆಮತ್ತೆ ಮರಳಿ ಹುಟ್ಟಿ ಬಂದರೂ ಈಗ ನಾವು ಬದುಕಿ ಬಿಟ್ಟ ಬದುಕನ್ನೇ ಯಥಾವತ್ ಹಾಗೆ ಬದುಕುತ್ತೇವೆ. ಯಾವ ರೀತಿಯ ಮಾರ್ಪಾಟೂ, ಯಾವ ರೀತಿಯ ಬದಲಾವಣೆಯೂ ಇಲ್ಲದೆ; ಹಾಗೊಂದು ವೇಳೆ ಆದರೆ ಅದೆಂತಹ ದುಃಸ್ವಪ್ನ-ಮತ್ತೆ ಅದೇ ದುರಂತ ಬದುಕನ್ನು ಬದುಕುತ್ತಾ ಇರುವುದೆಂದರೆ? ಅವನ ಕಳಕಳಿ ಆಶಯ ಇಷ್ಟೆ: ಪುನಃ ಬದುಕಿದರೂ ಹೊಸಹೊಸ ಅರ್ಥ ಕೊಡುವ ಹಾಗೆ ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಜೀವನವನ್ನು ನೀವೇ ಕಟ್ಟಿಕೊಳ್ಳಿ; ಸೃಜನಶೀಲರಾಗಿ ಬದುಕಿ ಎಂಬುದು.

ಮಾನವ ಇತಿಹಾಸವನ್ನು ಅವಲೋಕಿಸಿದರೆ ನೀಷ್ಹೆಯ ಸಿದ್ಧಾಂತವನ್ನೇ ನಿಜಮಾಡುವತ್ತ ಸಾಗಿ ಬರುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನಮ್ಮ ಕಣ್ಮುಂದಿನ ಇಂದಿನ ಬದುಕನ್ನೇ ನೋಡಬಹುದು. ಕಳೆದೆರಡು ವರ್ಷಗಳಿಂದ ಕೊರೊನಾ ವೈರಾಣು ಸೋಂಕಿನಿಂದ ಮನುಕುಲ ಸತ್ತಂತಾಗಿತ್ತು. ಒಂದಾದ ಮೇಲೊಂದು ಕೊರೊನಾ ಅಲೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು, ನಿಜ. ಆದರೆ ನೆಲ ಜಲ ಗಾಳಿ ನಿರ್ಮಲವಾಗುತ್ತಿತ್ತು. ಈಗಿನ್ನೂ ಆ ವೈರಾಣು ಸಂಪೂರ್ಣ ನಾಶವಾಗಿಲ್ಲ. ನಿಯಂತ್ರಣಕ್ಕೆ ಬರುವ ಸೂಚನೆ ಇದೆ ಅಷ್ಟೆ. ಆದರೆ ಮನುಷ್ಯಕುಲ ಮಾತ್ರ ಪುನಃ ನಿಯಂತ್ರಣ ತಪ್ಪುತ್ತಿದೆ. ತನ್ನ ಮೊದಲಿನ ಚಾಳಿಗೇ ಹಿಂತಿರುಗುತ್ತಿದೆ. ಅತ್ತ ಉಕ್ರೇನ್-ರಷ್ಯಾ ಸಂಘರ್ಷದ ಸಾವು ನೋವು, ಆಸ್ತಿ ಪಾಸ್ತಿ ನಾಶವಾಗುತ್ತಿದ್ದರೆ ಇತ್ತ ಭಾರತದಲ್ಲಿ ರಾಜಕೀಯ ಹಿತಾಸಕ್ತಿಯ ಕೋಮು ಗಲಭೆಗಳು ಶಾಂತಿಯನ್ನು ಕದಡುತ್ತಿವೆ.

ಫೆಡರಿಕ್ ನೀಷ್ಹೆ

ಭಾರತ ಜನನಿಯ ತನುಜಾತೆಯಾದ ಕರ್ನಾಟಕವೂ ಅದಕ್ಕೆ ಹೊರತಲ್ಲ. ಕರುನಾಡು ಕೋಮು ಸಂಘರ್ಷ ಆಡುಬಲವಾಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಬೀಳುತ್ತಿದೆ. ಇದೆಲ್ಲ ಯಾಕಾಗಿ? ಯಾರಿಗಾಗಿ? ಈ ಕೇಡಿಗೆ ಕೊನೆಯುಂಟೆ? ಎಂಬ ಆತಂಕ ಕಾಡುತ್ತಿದೆ. ದಿನಬೆಳಗಾದರೆ ಕೇಡುಗಳ ಕೆಂಡದ ಮಳೆ ಧಾರಾಕಾರ ಸುರಿಯುತ್ತಿದೆ. ಅದನ್ನೇ ಮಾಧ್ಯಮಗಳು ತಿರುತಿರುಗಿ ಅಪ್ಪಳಿಸುತ್ತಿವೆ.

ಕಳೆದೆರಡು ತಿಂಗಳುಗಳಿಂದ ಹಲವು ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಮರ ಮೇಲೆ ಒಂದಲ್ಲ ಒಂದು ಕಿತಾಪತಿ ಜಗಳ ಝೂಟ್ ತೆಗೆಯುತ್ತಲೆ ಇದ್ದಾರೆ. ಅವರಿಗೆ ಗದರಿ ಕಿವಿಮಾತು ಹೇಳುವ ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ. ರಾಜ್ಯ ಕಾವಲುಗಾರರಿಲ್ಲದ ಕೋಟೆಯಂತಾಗುತ್ತಿದೆ. ಮುಸ್ಲಿಂ ಜನಾಂಗದ ವಿರುದ್ಧ ಅಜೆಂಡಾಗಳು ಅದೆಲ್ಲಿಂದ ಸೃಷ್ಟಿಯಾಗುತ್ತವೋ ಯಾರು ಸೃಷ್ಟಿ ಮಾಡುತ್ತಾರೋ? ಆ ಮರ್‍ಯಾದಾ ಪುರುಷೋತ್ತಮ ಶ್ರೀರಾಮನೇ ಬಲ್ಲ.

ಹಿಜಾಬ್-ಕೇಸರಿ ಶಾಲು ವಿವಾದದಿಂದ ಆರಂಭಗೊಂಡ ಈ ಘರ್ಷಣೆಗೆಳು ಹಲಾಲ್ ಕಟ್-ಜಟಕಾ ಕಟ್‌ವರೆಗೆ, ಆಜಾನ್ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಇತ್ಯಾದಿ ಕಿಡಿ ಹಾರುತ್ತಲೇ ಇವೆ. ಆದರೆ ಕರುನಾಡ ಜನ ಕಿವಿಗೊಡದೆ ಆ ಕಿಡಿಗಳಿಗೆ ಭಾವೈಕ್ಯದ ತಣ್ಣೀರು ಸುರಿದು ತಮ್ಮ ದೈನಂದಿನ ಬದುಕನ್ನು ಸಾಗಿಸುತ್ತಿರುವುದು ಸ್ವಾಗತಾರ್ಹ. ಆದರೆ ಬಿಸಿಬಿಸಿ ಸುದ್ದಿಗಾಗಿ ಹಾತೊರೆಯುವ ದೃಶ್ಯ ಮಾಧ್ಯಮಗಳ ಬೇಟೆಗಾರರು ಸುಮ್ಮನೆ ಇರಬೇಕಲ್ಲ! ಅಲ್ಲಿ ಇಲ್ಲಿ ಹಾರುವ ಕೊಳ್ಳಿ ಕಿಡಿಗಳಿಗೇ ಭೂತಗನ್ನಡಿ ಹಿಡಿದು ಬಹುಸಂಖ್ಯಾತ ಹಿಂದೂಗಳ ಹಾಲಿನಂತ ಮನಸ್ಸುಗಳಿಗೆ ಹುಳಿ ಹಿಂಡುವುದೂ ಅಲ್ಪಸಂಖ್ಯಾತರಿಗೆ ಅತಂಕ-ಕೀಳರಿಮೆ ಹುಟ್ಟಿಸುವುದೂ ಸತತ ನಡೆಯುತ್ತಲೇ ಇದೆ.

ಇತ್ತ ಒಳ ಜಗಳಗಳಿಂದ ಸತ್ತಂತಿರುವ ವಿರೋಧ ಪಕ್ಷಗಳನ್ನು ಬಡಿದೆಬ್ಬಿಸುವ ನವ ನಿರ್ಮಾಣ ವ್ಯಕ್ತಿ ಇಲ್ಲದೆ ಅವು ಗೊಂದಲದ ಗೂಡಾಗಿವೆ. ಒಟ್ಟಾರೆ ಮುಸ್ಲಿಮರ ಕೈಯಿಂದ ಅನ್ನಕ್ಕೆ ಮಾರ್ಗವಾದ ವ್ಯಾಪಾರ-ಸಾಪಾರ ಎಲ್ಲವನ್ನು ಕಿತ್ತುಕೊಳ್ಳುವ ’ಅನ್ನೇಕಾರರು’ ವಿಜೃಂಭಿಸುತ್ತಿದ್ದಾರೆ. ಬೇಟೆ ನಾಯಿಗೇನು ಗೊತ್ತು ಒಡೆಯನ ಕರಾಮತ್ತು? ಅವರೀಗ, ಸಂಗೀತ, ಸಾಹಿತ್ಯ, ಕ್ರೀಡೆ ಮುಂತಾದ ಸಕಲೆಂಟು ಕ್ಷೇತ್ರಗಳಿಗೂ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದಾರೆ. ಅವುಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಮುನ್ಸೂಚನೆಗಳು ಕಂಡುಬರುತ್ತಿವೆ.

ತೆರೆಮರೆಯಲ್ಲಿ ಕುಮ್ಮಕ್ಕು ಇಲ್ಲದಿದ್ದರೆ ಇದೆಲ್ಲ ಸಂಭವಿಸುವುದಾದರೂ ಹೇಗೆ? ಇಡೀ ಮುಸ್ಲಿಮ್ ಜನಾಂಗ ಕೀಳರಿಮೆ ತೊರೆದು ಸ್ವಾಭಿಮಾನ ಸರ್ವೋತ್ಕೃಷ್ಟವೆಂದು ಬಗೆದು ಒಟ್ಟಾಗಿ ಬೀದಿಗಿಳಿದು ಭಾರತೀಯರು ನಾವು, ನಾವೇನು ವಲಸೆ ಬಂದವರಲ್ಲ. ಈ ಮಣ್ಣಿನ ಮಕ್ಕಳು, ಇಲ್ಲಿ ಬದುಕುವುದು ನಮ್ಮ ಹಕ್ಕು; ಸಂವಿಧಾನ ನಮ್ಮ ಪವಿತ್ರ ದೇವರಿದ್ದಂತೆ. ಎಂದು ಗಲಭೆಕೋರರ ಮುಖಕ್ಕೆ ರಾಚಿ ತೂರುವ ಸಾತ್ವಿಕ ಸಿಟ್ಟು ರೂಢಿಸಿಕೊಳ್ಳಬೇಕು ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವ ಒಗ್ಗಟ್ಟು ಗಳಿಸಿಕೊಳ್ಳಬೇಕು. ’ಸಹಿಷ್ಣು ಹಿಂದೂಗಳಿಗೆ ಇದೇನು ಸಭ್ಯತೆ, ಇದೇನು ಸಂಸ್ಕೃತಿ?’ ಎಂದು ಕೇಳುವ ನೈತಿಕತೆಯನ್ನು ಗಳಿಸಿಕೊಳ್ಳಬೇಕು.

ಕೊನೆಯದಾಗಿ ’ಪರಮಾತ್ಮ ನಮ್ಮನ್ನು ಕಾಪಾಡಲಿ, ನಾವು ಜೊತೆಗೂಡಿ ಒಟ್ಟಾಗಿ ಕೆಲಸ ಮಾಡೋಣ. ನಮ್ಮ ಶಕ್ತಿ ಬೆಳೆಯಲಿ, ಸಾಮರ್ಥ್ಯ ಬೆಳೆಯಲಿ. ನಾವು ಓದಿದ್ದು ತೇಜಸ್ಸು ಆಗಲಿ. ನಾವು ಯಾರನ್ನು ದ್ವೇಷಿಸುವುದು ಬೇಡ, ನಮಗೆ ಹಗೆತನ ಬೇಡ’ ಎಂದ ಉಪನಿಷತ್ ಋಷಿ – ಅವನ ’ಓಂ ಸಹನಾ ಭವತು’ ಎಂಬ ಶಾಂತಿಮಂತ್ರಕ್ಕೆ ನಾವು ವಾರಸುದಾರರಲ್ಲವೆ? ’ಸಹಿಷ್ಣು ಹಿಂದೂ’ ವಾದಿಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ದುರಿತಕಾಲ ಕೊನೆಗೊಳ್ಳಲಿ. ಶಾಂತಿ ನೆಲೆಸಲಿ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹಿಜಾಬ್: ಸಮತೋಲನವನ್ನು ಸಾಧಿಸದ, ಸಹಾನುಭೂತಿ ತೋರದ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...