Homeಎಕಾನಮಿ460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ 'ಆಕ್ಸ್‌ಫಾಮ್'...

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು

- Advertisement -
- Advertisement -

ಮೂಲ: ‘ಲೈವ್‌ಮಿಂಟ್’
ನಿರೂಪಣೆ: ನಿಖಿಲ್ ಕೋಲ್ಪೆ

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ 50ನೇ ವಾರ್ಷಿಕ ಸಭೆಯ ಸಂದರ್ಭದಲ್ಲಿ ಮಾನವ ಹಕ್ಕು ಸಂಸ್ಥೆ ‘ಆಕ್ಸ್‌ಫಾಮ್’ ತನ್ನ ಅಧ್ಯಯನ ವರದಿ ‘ಟೈಮ್ ಟು ಕೇರ್” ಬಿಡುಗಡೆ ಮಾಡಿದ್ದು, ಅದು, ಭಾರತ ಮತ್ತು ಜಗತ್ತಿನಾದ್ಯಂತ ಅತಿ ಶ್ರೀಮಂತರು ಹಾಗೂ ಬಡವರ ನಡುವಿನ ಕಂದರ ಆತಂಕಕಾರಿಯಾಗಿ ಬೆಳೆದಿರುವುದು ಮತ್ತು ಜಗತ್ತಿನ ಸಂಪತ್ತು ಕೆಲವೇ ಶ್ರೀಮಂತರ ಕೈಯಲ್ಲಿರುವುದನ್ನು ತೋರಿಸಿಕೊಟ್ಟಿದೆ.

ಅದರ ಪ್ರಕಾರ, ಒಂದು ಶೇಕಡಾ ಸಿರಿವಂತ ಭಾರತೀಯರ ಸಂಪತ್ತು- 70 ಶೇಕಡಾ ಬಡ ಭಾರತೀಯರ, ಅಂದರೆ 95.3 ಕೋಟಿ ಜನರ ಒಟ್ಟು ಸಂಪತ್ತಿನ ನಾಲ್ಕು ಪಟ್ಟಿನಷ್ಟಿದೆ. ಜಗತ್ತಿನ ಕೇವಲ 2,153 ಮಂದಿ ಶತಕೋಟಿಪತಿಗಳು 460 ಕೋಟಿ, ಅಂದರೆ ಈ ಭೂಮಿಯ 60 ಶೇಕಡಾ ಜನರ ಒಟ್ಟು ಸಂಪತ್ತಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಕಳೆದ ದಶಕದಲ್ಲಿ ಶತಕೋಟಿಪತಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಕಡು ಬಡವರ ಸಂಖ್ಯೆಯೂ ಅದೇ ರೀತಿಯಲ್ಲಿ ಬೆಳೆದಿದೆ.

“ಇಂತಹಾ ದಂಗುಬಡಿಸುವ ಕಂದರವನ್ನು ಕಡಿಮೆ ಮಾಡುವುದು, ಉದ್ದೇಶಪೂರ್ವಕವಾದ ಧೋರಣೆ ಮತ್ತು ಪ್ರಯತ್ನವಿಲ್ಲದೇ ಸಾಧ್ಯವಿಲ್ಲ. ಆದರೆ, ಕೆಲವೇ ಕೆಲವು ಸರಕಾರಗಳು ಇಂತಹಾ ಪ್ರಯತ್ನಗಳಿಗೆ ಬದ್ಧತೆ ಹೊಂದಿವೆ” ಎಂದು ‘ಆಕ್ಸ್‌ಫಾಮ್’ನ ಭಾರತ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಬೆಹರ್ ಹೇಳುತ್ತಾರೆ.

ಆದಾಯ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳು ಐದು ದಿನಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗುವ ನಿರೀಕ್ಷೆಯಿದೆ. ಡಬ್ಲ್ಯೂಇಎಫ್‌ನ ವಾರ್ಷಿಕ ಜಾಗತಿಕ ಅಪಾಯ ಕುರಿತ ಸ್ವಂತ ವರದಿ ಕೂಡಾ 2020ರಲ್ಲಿ ಜಾಗತಿಕ ಆರ್ಥಿಕತೆಯು ಕೆಳಮುಖ ಒತ್ತಡ ಎದುರಿಸುವ ಕುರಿತು ಎಚ್ಚರಿಕೆ ನೀಡಿದೆ. 2019ರಲ್ಲಿಯೂ ಅರ್ಥಿಕ ಅಸಮಾನತೆಯ ತೀವ್ರತೆ ಮುಂದುವರಿದಿತ್ತು.

ಲ್ಯಾಟಿನ್ ಮತ್ತು ಮಧ್ಯ ಅಮೆರಿಕ ದೇಶಗಳು ಸೇರಿದಂತೆ, ಜಗತ್ತಿನ ಪ್ರತಿಯೊಂದು ಖಂಡದಲ್ಲಿ ಸಾಮಾಜಿಕ ತಲ್ಲಣಗಳು ಸಂಭವಿಸುತ್ತಿದ್ದು, ಪ್ರಜಾಪ್ರಭುತ್ವಗಳು ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಆರ್ಥಿಕ ಕಂದರ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದು, ಪರಿಸ್ಥಿತಿಯ ಸ್ಫೋಟಕತೆಯನ್ನು ಸೂಚಿಸುತ್ತದೆ. ಏಕೆಂದರೆ, ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಕಂಡುಬರುತ್ತಿದ್ದು, ತೀವ್ರಗೊಳ್ಳುತ್ತಿರುವ ಸಾಮಾಜಿಕ ಅಶಾಂತಿಗೆ ಹೆಚ್ಚುತ್ತಿರುವ ಭ್ರಷ್ಟಾಚಾರ, ಸಂವಿಧಾನದ ಉಲ್ಲಂಘನೆ, ಬಲಪಂಥೀಯ ಪ್ರಭಾವ, ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆ, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳ, ನಿರುದ್ಯೋಗ, ಕುಸಿಯುತ್ತಿರುವ ಆದಾಯ ಇತ್ಯಾದಿಯಾಗಿ ಹಲವಾರು ಕಾರಣಗಳಿವೆ.

ದೇಶದೇಶಗಳ ನಡುವಿನ ಆರ್ಥಿಕ ಅಸಮಾನತೆ ಕಳೆದ ಮೂರು ದಶಕಗಳಲ್ಲಿ ಕಡಿಮೆಯಾಗಿದ್ದರೂ, ದೇಶಗಳೊಳಗೆ ಜನರ ಆದಾಯದಲ್ಲಿ ಅಸಮಾನತೆ ತೀವ್ರಗೊಂಡಿದೆ. ಇದು ಮುಖ್ಯವಾಗಿ ಮುಂದುವರಿದ ಆರ್ಥಿಕತೆಗಳನ್ನೂ ತಟ್ಟಿದ್ದು, ಕೆಲವು ದೇಶಗಳಲ್ಲಿ ಐತಿಹಾಸಿಕ ಮಟ್ಟವನ್ನು ತಲುಪಿದೆ. ಇದರ ಅರ್ಥ ಶ್ರೀಮಂತರು ಹೆಚ್ಚುಹೆಚ್ಚು ಶ್ರೀಮಂತರಾಗುತ್ತಿದ್ದು, ಬಡವರು ಹೆಚ್ಚುಹೆಚ್ಚು ಬಡವರಾಗುತ್ತಿದ್ದಾರೆ.

‘ಆಕ್ಸ್‌ಫಾಮ್’ ವರದಿ ಹೇಳುವ ಪ್ರಕಾರ ಕೆಲವು ದೊಡ್ಡ ರಾಷ್ಟ್ರಗಳು- ಸಾಮಾನ್ಯ ಜನರು, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಕೆಲವೇ ಅತಿ ಶ್ರೀಮಂತರು ಹೆಚ್ಚು ಹೆಚ್ಚು ಹಣ ಸಂಗ್ರಹಿಸಲು ಅವಕಾಶ ಮಾಡಿಕೊಡುವುದರ ಮೂಲಕ ಅಸಮಾನತೆಯ ಬೆಂಕಿಗೆ ತುಪ್ಪ ಸುರಿಯುತ್ತಿವೆ.

ಭಾರತದಲ್ಲಿಯೂ ಸಾಮಾನ್ಯ ಜನರು ಮತ್ತು ಮಧ್ಯಮ ಕೈಗಾರಿಕೆಗಳು ಆರ್ಥಿಕ ಬಿಕ್ಕಟ್ಟಿನ ಬಿಸಿ ಅನುಭವಿಸುತ್ತಿರುವಾಗ, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿರುವಾಗ, ನಿರುದ್ಯೋಗ ದಾಖಲೆ ಪ್ರಮಾಣಕ್ಕೆ ಏರುತ್ತಿರುವಾಗ, ಆರ್ಥಿಕ ಬೆಳವಣಿಗೆ 4.3 ಶೇಕಡಾದ ಆಸುಪಾಸಿಗೆ ಕುಸಿದಿರುವಾಗ ಅದಾನಿ, ಅಂಬಾನಿಗಳ ಹಾಗೂ ಬಿಜೆಪಿಯ ಆದಾಯ ಮತ್ತು ಸಂಪತ್ತು ಗಣನೀಯವಾಗಿ ಏರಿರುವುದನ್ನು ಉದಾಹರಣೆಯಾಗಿ ನೋಡಬಹುದು.

‘ಆಕ್ಸ್‌ಫಾಮ್’ ವರದಿಯ ಪ್ರಕಾರ ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲಿಗೆ ಹೆಸರು ಮಾಡುವವರು ಬಡ ಸಾಮಾನ್ಯರನ್ನ ತಲೆ ಹೊಡೆಯುತ್ತಾರೆ ಎರಡನೆಯದಾಗಿ ಪೊಲಿಟಿಕಲ್ ಪವರ್ ಬಳಸಿಕೊಳ್ಳುವ ತಂತ್ರ ಹುಡುಕಿಕೊಳ್ಳುತ್ತಾರೆ
    ಅದಾದ ನಂತರ ಅವರದೇ ಆದ ಧಾಟಿಯಲ್ಲಿ ಸಮಾಜದ ನಾಗರಿಕರ ಮೇಲೆ ಒತ್ತಡ ಭಯ ಹೆಸರು ಗಳಿಸಿಕೊಳ್ಳುತ್ತಾರೆ
    ಇವಿಷ್ಟು ಆದನಂತರ ಒಬ್ಬ ನಿಷ್ಠಾವಂತ ವ್ಯಕ್ತಿಯನ್ನು ತಲೆ ಹೊಡೆದು ನನ್ನದೇನೂ ತಪ್ಪಿಲ್ಲ ಎಂದು ಕಾನೂನಿನ ಚೌಕಟ್ಟಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯಾಲಯದಲ್ಲಿ ನಾನು ಅಪರಾಧಿಯಲ್ಲ ಎಂದು ಪ್ರೊ ಮಾಡಿಕೊಳ್ಳುತ್ತಾರೆ ಇದಾದ ನಂತರ ಗಣ್ಯಾತಿಗಣ್ಯರು ಅವನ ಬಲಾಡ್ಯ ತನಕ್ಕೆ ಮಣಿದು ಪೊಲಿಟಿಕಲ್ ಸ್ಕೆಳೆ ತರುತ್ತಾರೆ ಅದಾದ ನಂತರ ಯಾವುದು 1 ದೊಡ್ಡ ಇಮೇಜ್ ಬಂದಂತಾಗುತ್ತದೆ
    ನ್ಯಾಯವಾಗಿ ಸಂಪಾದನೆ ಮಾಡಬಹುದಾದ ವ್ಯಕ್ತಿಗಳಿಗೆ ಸಮಾಜದಲ್ಲಿ ಬೆಲೆ ಇಲ್ಲ
    ಲೂಟಿಕೋರರ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿತ್ವವುಳ್ಳವರು ಬದುಕುವಂತಹ ದುರ್ದೈವ ಭಾರತ ದೇಶಕ್ಕೆ ಬಂದೊದಗಿದೆ
    ಆಳುವವರಿಗೆ ನಾನು ಮೊದಲು ಅಖಂಡ ಚಕ್ರವರ್ತಿಯಾಗಬೇಕು ಎನ್ನುವ ಆಸೆ ಅಧಿಕವಾಗಿ ತುಂಬಿಕೊಂಡಿರುತ್ತವೆ
    ಬಡವರ ಬಂಧು ದೀನದಲಿತರ ಕಣ್ಮಣಿ ದಲಿತರ ಮನೆ ಊಟ ದಲಿತರ ಏಳಿಗೆಗೆ ನಾಯಕ ನಾನು ಎಂದು ಬಿಂಬಿಸಿಕೊಳ್ಳುತ್ತಾರೆ ಇವೆಲ್ಲಾ ಹೇಳುವುದಷ್ಟೇ ಸೀಮಿತವಾಗಿರುತ್ತದೆ ಬದಲಾವಣೆ ಮಾತ್ರ ಶೂನ್ಯ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...