ಉತ್ತರಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಮತ್ತೆ ಪ್ರಾರಂಭವಾಗಿದ್ದು, ಮೊರಾದಾಬಾದ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಾಗುತ್ತಿದೆ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿ ಬಣ ಸಮಾಜವಾದಿ ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮೊರಾದಾಬಾದ್ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರು ಅಮ್ರೋಹಾ, ಸಂಭಾಲ್, ಬುಲಂದ್ಶಹರ್, ಅಲಿಘರ್, ಹತ್ರಾಸ್ ಮತ್ತು ಆಗ್ರಾ ಮೂಲಕ ಫತೇಪುರ್ ಸಿಕ್ರಿಗೆ ಪ್ರಯಾಣಿಸಲಿದ್ದಾರೆ. ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಯಶಸ್ವಿ ಸೀಟು ಹಂಚಿಕೆಯ ನಂತರ, ಯುಪಿಸಿಸಿ ಅಧ್ಯಕ್ಷ ಅಜಯ್ ರೈ ಮತ್ತು ಎಸ್ಪಿಯ ಎಲ್ಲಾ ಪ್ರಮುಖ ನಾಯಕರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದು ಇಂಡಿಯಾ ಮೈತ್ರಿಕೂಟದ ಬಲವನ್ನು ವೃದ್ಧಿಸಿದೆ ಎಂಬುವುದನ್ನು ಬಹಿರಂಗಪಡಿಸುತ್ತಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕಳೆದ ವಾರ ಚಂದೌಲಿ ಜಿಲ್ಲೆಯ ಮೂಲಕ ಭಾರತ್ ಜೊಡೋ ನ್ಯಾಯ ಯಾತ್ರೆ ಉತ್ತರಪ್ರದೇಶವನ್ನು ಪ್ರವೇಶಿಸಿದಾಗ ಯಾತ್ರೆಯನ್ನು ಸೇರಲು ನಿರ್ಧರಿಸಿದ್ದರು. ಆದರೆ ಅನಾರೋಗ್ಯದ ಕಾರಣ ಅವರು ಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ.
#WATCH | Banners with the photos of Congress leaders Rahul Gandhi and Priyanka Gandhi Vadra & Samajwadi Party (SP) chief Akhilesh Yadav and MP S.T. Hasan, welcoming Bharat Jodo Nyay Yatra, seen in Moradabad.
The yatra will resume from Moradabad today. pic.twitter.com/1LD7yHwIsW
— ANI (@ANI) February 24, 2024
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊರಾದಾಬಾದ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದಾನಿ ಮತ್ತು ಅಂಬಾನಿಯಂತಹ ಉದ್ಯಮಿಗಳಿಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಾಗ್ಧಾಳಿಯನ್ನು ನಡೆಸಿದ್ದಾರೆ.
ಬಿಜೆಪಿಯ ಪದ್ದತಿ ಏನೆಂದರೆ, ಕೆಲವರು ಬಾಲಿವುಡ್, ಸರ್ಜಿಕಲ್ ಸ್ಟ್ರೈಕ್ ಅಂತೆಲ್ಲ ಮಾತಾಡಿ ದಿಕ್ಕು ತಪ್ಪಿಸುತ್ತಾರೆ. ಈ ದೇಶದಲ್ಲಿ 50% ಹಿಂದುಳಿದವರು, 15% ಅಲ್ಪಸಂಖ್ಯಾತರು, 15% ದಲಿತರು ಮತ್ತು 8% ಆದಿವಾಸಿಗಳಿದ್ದಾರೆ. ಈ ದೇಶದಲ್ಲಿ ಈ 90% ಇರುವ ಜನಸಂಖ್ಯೆಯ ಒಟ್ಟಾರೆ ಭಾಗವಹಿಸುವಿಕೆ ಎಷ್ಟು ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ಈ ಸಮುದಾಯದ ಎಷ್ಟು ಮಂದಿ ಮಾದ್ಯಮದಲ್ಲಿದ್ದಾರೆ. ನೀವು ಅವರನ್ನು MGNREGA ಪಟ್ಟಿಯಲ್ಲಿ ನೋಡುತ್ತೀರಿ ಆದರೆ ದೊಡ್ಡ ಕಂಪನಿಗಳು, ಹೈಕೋರ್ಟ್ಗಳಲ್ಲಿ, ಮಾದ್ಯಮಗಳಲ್ಲಿ ಕಾಣಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರು ಹಿಂದೂಸ್ತಾನ್ ಸಬ್ಕಾ ಹೈ ಎಂದು ಹೇಳುತ್ತಾರೆ 90% ಇರುವ ಜನಸಂಖ್ಯೆ ಹೆಚ್ಚಿನ ಭಾಗವಹಿಸುವಿಕೆಯನ್ನು ಹೊಂದಿರದಿದ್ದರೆ ‘ಯೇ ಸಬ್ಕಾ ಹಿಂದೂಸ್ತಾನ್ ಕೈಸೇ ಹೈ?’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ದೇಶ ಎಲ್ಲರದ್ದು ಎಂದು ನರೇಂದ್ರ ಮೋದಿ ಜೀ ಹೇಳುತ್ತಿದ್ದಾರೆ. ಆದರೆ 90ರಷ್ಟು ಜನರು ಯಾವುದೇ ಭಾಗವಹಿಸುವಿಕೆಯನ್ನು ಹೊಂದಿಲ್ಲ. ಈ ಶೇಕಡಾ 90ರಷ್ಟು ಜನರನ್ನು ಪಾಲ್ಗೊಳ್ಳುವಂತೆ ಮಾಡಲು ಜಾತಿ ಗಣತಿ ಮೊದಲ ಹೆಜ್ಜೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯುಪಿ ಪೊಲೀಸರ ನೇಮಕಾತಿ ಪರೀಕ್ಷೆಗೆ 28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ ಈಗ ಪೇಪರ್ ಲೀಕ್ ಆಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ನಿಮಗೆ ಉದ್ಯೋಗ ಸಿಗದವರೆಗೆ ಸೌಲಭ್ಯಗಳು ಸಿಗುವುದಿಲ್ಲ, ಪೇಪರ್ ಲೀಕ್ ನಿಲ್ಲುವುದಿಲ್ಲ, ಅಭಿವೃದ್ಧಿ ಆಗುವುದಿಲ್ಲ. ನಿಮ್ಮ ಅನುಭವಕ್ಕೆ ಅನುಗುಣವಾಗಿ ಮತ ಚಲಾಯಿಸಿದಾಗ ಮಾತ್ರ ಬದಲಾವಣೆಯಾಗುತ್ತದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ನೀವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಯೋಗಿ ಆದಿತ್ಯನಾಥ್ ಅವರಿಗೆ ಮತ ಹಾಕಿದ್ದೀರಿ, ಬೆಲೆ ಏರಿಕೆ, ನಿರುದ್ಯೋಗ, ಕಾಗದದ ಸೋರಿಕೆಯಂತಹ ನಿಮ್ಮ ನಿಜವಾದ ಸಮಸ್ಯೆಗಳು ಪರಿಹರಿಸಲ್ಪಟ್ಟಿವೆಯೇ ಎಂದು ನಾನು ನಿಮ್ಮೆಲ್ಲರನ್ನು ಕೇಳಲು ಬಯಸುತ್ತೇನೆ. ಮತ ಚಲಾಯಿಸುವಾಗ ನೀವು ಏನು ಯೋಚಿಸುತ್ತಿದ್ದೀರಿ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ? ಇಲ್ಲಿನ ಉದ್ಯಮದಲ್ಲಿ ಏನಾದರೂ ಅಭಿವೃದ್ಧಿಯಾಗಿದೆಯೇ? ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.
ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಫೆಬ್ರವರಿ 25ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕರು, ಕಾರ್ಯಕರ್ತರು ಉತ್ತರಪ್ರದೇಶದಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬೆಂಬಲವನ್ನು ಸೂಚಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖುದ್ದು ಅಖಿಲೇಶ್ ಅವರನ್ನು ರಾಹುಲ್ ಗಾಂಧಿ ಅವರೊಂದಿಗೆ ಕೈಜೋಡಿಸುವಂತೆ ಆಹ್ವಾನಿಸಿದ್ದಾರೆ.
#WATCH | Congress MP Rahul Gandhi and party's general secretary Priyanka Gandhi Vadra take out Bharat Jodo Nyay Yatra, in Moradabad, Uttar Pradesh. pic.twitter.com/DH6MTB8kh6
— ANI (@ANI) February 24, 2024
#WATCH | Uttar Pradesh | Congress MP Rahul Gandhi arrives in Moradabad. He will resume his Bharat Jodo Nyay Yatra from here today. pic.twitter.com/6HxvPB56Tu
— ANI (@ANI) February 24, 2024
ಜನವರಿ 14ರಂದು ಮಣಿಪುರದಲ್ಲಿ ಪ್ರಾರಂಭವಾದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದೆ. 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಯಾತ್ರೆ ಹಾದುಹೋಗಿ ಬಳಿಕ ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
ಇದನ್ನು ಓದಿ: ‘ಮಜ್ದೂರ್ ಪೈದಲ್ ಜೋಡೋ ಯಾತ್ರೆ’: ಭೂರಹಿತ ದಲಿತ ಕಾರ್ಮಿಕರಿಂದ ಹಕ್ಕಿಗಾಗಿ ಹೋರಾಟ