ಮನೆಗೆ ತಲುಪಲಾಗದೆ ಹತಾಶರಾಗಿದ್ದ ವಲಸೆ ಕಾರ್ಮಿಕರ ಗುಂಪು ಗುಜರಾತಿನ ಸೂರತ್ನಲ್ಲಿ ಆಕ್ರೋಶಗೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ.
ಗುಜರಾತಿನ ಸೂರತ್ ನ ಕೊಡೊದರ, ವರೇಲಿಯ ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಂದ ಕಲ್ಲು ತೂರಾಟ ನಡೆಯುತ್ತಿದೆ ಎಂದು ವರದಿಯಾಗುತ್ತಿದೆ. ಟ್ರಾವೆಲ್ ಪಾಸ್ ಗಳನ್ನು ಅನುಮತಿಸಿದರೂ, ಅಧಿಕಾರಿಗಳ ಅಸಮರ್ಥ ನಿರ್ವಹಣೆಯಿಂದಾಗಿ ವಲಸೆ ಕಾರ್ಮಿಕರು ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿದೆ.
#Gujarat migrant workers in Surat city turn violent yet again, clash with police demanding permission for traveling back home. @DeccanHerald pic.twitter.com/VZJORJyCfn
— satish jha. (@satishjha) May 4, 2020
ಆಕ್ರೋಶಗೊಂಡ ಕಾರ್ಮಿಕರು ಬೀದಿಯಲ್ಲಿ ಜಮಾಯಿಸಿ, ಗುಂಪಾಗಿ ನಿಂತು ಘೋಷಣೆ ಕೂಗತೊಡಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ವಲಸಿಗರು ಕಲ್ಲುಗಳನ್ನು ಎತ್ತಿಕೊಂಡು ಎಸೆಯುವ ಹಲವಾರು ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ.
Workers on road today, demanding to go back home at Vareli Industrial area in Surat. #Covid_19india #surat #india pic.twitter.com/NoeKq3wKeh
— $andeep Dang! (@saksham1) May 4, 2020
ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಹಲವಾರು ಜನ ಹೇಳುತ್ತಿದ್ದಾರೆ.
This happening in Kadodara area of Surat, Gujarat.
Migrant labourers clash with Police, Police used tear gas shells to disperse them.
Hey @sudhirchaudhary@DChaurasia2312@RubikaLiyaquat
Wil You Debate This Issue Like Markaz Or jamaat ?#LOCKDOWN2020
— Sanwar Ali (@AdvSanwar) May 4, 2020
ಏಪ್ರಿಲ್ 28 ರಂದು ಕೂಡಾ ಸೂರತ್ನಲ್ಲಿ ಲಾಕ್ಡೌನ್ ಜಾರಿಗೊಳಿಸಲು ಯತ್ನಿಸುತ್ತಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಕೆಲವು ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅದೇ ದಿನ ನಡೆದ ಮತ್ತೊಂದು ಘಟನೆಯಲ್ಲಿ, ಕಾರ್ಮಿಕರು ಡೈಮಂಡ್ ಬೋರ್ಸ್ನ ಕಚೇರಿಗೆ ಕಲ್ಲು ಎಸೆಯಲಾಗಿತ್ತು.
ಕಾರ್ಮಿಕ ದಿನವಾದ ಮೇ 1 ರಂದು, ಸಿಕ್ಕಿಕೊಂಡ ವಲಸಿಗರು, ವಿದ್ಯಾರ್ಥಿಗಳು ಇತ್ಯಾದಿಗಳನ್ನು ತಮ್ಮ ಮನೆಗಳಿಗೆ ಕರೆದೊಯ್ಯಲು ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ, ವಲಸಿಗರಿಂದಲೇ ಶುಲ್ಕ ವಿಧಿಸುವ ಕೇಂದ್ರದ ನೀತಿಯನ್ನು ಪ್ರತಿಪಕ್ಷಗಳು ಟೀಕೆ ಮಾಡಿವೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ರೈಲು ಪ್ರಯಾಣದ ಶುಲ್ಕ ಪಾವತಿಗೆ ಕೇಂದ್ರದ ಸೂಚನೆ: ವಿರೋಧ ಪಕ್ಷಗಳ ಆಕ್ಷೇಪ
ವಿಡಿಯೊ ನೋಡಿ: ಕೊರೊನಾದ ಜೊತೆಗೂ ಮೂರ್ಖತನವನ್ನೂ ಓಡಿಸೋಣ; ಮಾನವೀಯತೆಯನ್ನಲ್ಲ