ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿನ್ನೆ (ಫೆ. 17) ಪುದುಚೇರಿಗೆ ಭೇಟಿ ನೀಡಿದ್ದರು. ಇದರ ಭಾಗವಾಗಿ ಕರಾವಳಿ ತೀರದ ಹಳ್ಳಿಯೊಂದಕ್ಕೂ ಭೇಟಿ ನೀಡಿದ್ದರು. ಅಲ್ಲಿ ಮೀನುಗಾರ ಮಹಿಳೆಯೊಬ್ಬರು ಹೇಳಿಕೊಂಡ ಸಮಸ್ಯೆಯನ್ನು ಪುದುಚೇರಿಯ ಮುಖ್ಯಮಂತ್ರಿ ನಾರಾಯಣಸಾಮಿ ತಪ್ಪಾಗಿ ಭಾಷಾಂತರ ಮಾಡಿದ್ದಾರೆ. ಇದಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗಿದೆ.
ರಾಹುಲ್ ಗಾಂಧಿಯವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆ, “ಕಡಲತೀರದ ನಮ್ಮ ಬದುಕು ಹೀಗೆ ಇದೆ. ನಮಗೆ ಯಾರೂ ಸಹಕರಿಸುತ್ತಿಲ್ಲ. ಅವರೇ (ಮುಖ್ಯಮಂತ್ರಿ ನಾರಾಯಣಸಾಮಿ) ಇಲ್ಲಿದ್ದಾರೆ. ಅವರನ್ನೇ ಕೇಳಿ, ಚಂಡಮಾರುತದ ಸಂದರ್ಭದಲ್ಲಿ ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದಾರಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಇದನ್ನು ರಾಹುಲ್ ಗಾಂಧಿಯವರಿಗೆ ತಪ್ಪಾಗಿ ಭಾಷಾಂತರ ಮಾಡಿದ ಮುಖ್ಯಮಂತ್ರಿ ನಾರಾಯಣಸಾಮಿ, “ನಿವಾರ್ ಚಂಡಮಾರುತದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ನಾನು ಪರಿಹಾರ ನೀಡಿದ್ದೇನೆ. ಅದನ್ನೇ ಆಕೆ ಹೇಳುತ್ತಿದ್ದಾಳೆ” ಎಂದು ಹೇಳಿದ್ದಾರೆ.
During Rahul Gandhi interaction with fishermen lady says (in TAMIL) CM V Narayanasamy never visited us after Cyclone Nirav
Narayanswamy Translates to Rahul Gandhi : She saying that CM visited us after cyclone and gave relief materials to us. pic.twitter.com/2sw0bEKyjb— Chayan Chatterjee (@Satyanewshi) February 17, 2021
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂವಾದದಲ್ಲಿ ಮಹಿಳೆಯ ಕಷ್ಟವನ್ನು ತಪ್ಪಾಗಿ ಭಾಷಾಂತರ ಮಾಡಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮೀನುಗಾರರಿಗೇಕೆ ಸಚಿವಾಲಯವಿಲ್ಲ: ರಾಹುಲ್ ಗಾಂಧಿ ಪ್ರಶ್ನೆ