ರಾಜಸ್ಥಾನ ಸರ್ಕಾರ ಉರುಳಿಸುವ ಯತ್ನ ಆರೋಪದಲ್ಲಿ ವಿಶೇಷ ಕಾರ್ಯಾಚರಣೆ ತಂಡದಿಂದ ಬಂಧಿಸಲ್ಪಟ್ಟಿರುವ ಆರೋಪಿ ಸಂಜಯ್ ಜೈನ್ ಅವರನ್ನು ಸ್ಥಳೀಯ ನ್ಯಾಯಾಲಯ ಆಗಸ್ಟ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಂಜಯ್ ಜೈನ್ ಇತರ ಪಕ್ಷಗಳೊಂದಿಗೆ ಆಪ್ತ ಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ಪಕ್ಷಗಳು ಟೀಕಿಸಿವೆ.
ಬಿಕನೇರ್ ನ ಲುಂಕರನಪುರ ನಿವಾಸಿಯಾಗಿದ್ದ ಸಂಜಯ್ ಜೈನ್ 15-20 ವರ್ಷಗಳ ಹಿಂದೆ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಸ್ಥಳಾಂತರವಾಗಿದ್ದರು.
ಜೈಪುರ ರಾಜಕೀಯ ವಲಯದಲ್ಲಿ ಮಧ್ಯವರ್ತಿ ಎಂದೇ ಖ್ಯಾತಿಯಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದಲ್ಲಾಳಿಯಂತೆ ಕೆಲಸ ಮಾಡುತ್ತಿದ್ದರು ಎಂಬ ಮಾತುಗಳು ಜನಜನಿತವಾಗಿವೆ.
ಸಂಜಯ್ ಸಿಂಗ್, ಬಂಡಾಯ ಕಾಂಗ್ರೆಸ್ ಶಾಸಕ ಬನ್ವಾರಿ ಲಾಲ್ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಸಿಂಗ್ ಶೇಖಾವತ್ ರಾಜಸ್ಥಾನ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕರ ಖರೀದಿಗೆ ಮುಂದಾಗಿದ್ದರು ಎಂಬ ಧ್ವನಿಮುದ್ರಿಕೆ ಬಿಡುಗಡೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಮತ್ತು ಮಧ್ಯವರ್ತಿ ಸಂಜಯ್ ಜೈನ್ ಸೇರಿದಂತೆ ಮೂವರ ವಿರುದ್ದ ಪಿತೂರಿ ಮತ್ತು ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಹಾಗಾಗಿ ಸಂಜಯ್ ಜೈನ್ ಅವರನ್ನು ವಿಶೇಷ ಕಾರ್ಯಾಚರಣೆ ಪಡೆ ಬಂದಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪೊಲೀಸರು ಸಂಜಯ್ ಜೈನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಗಸ್ಟ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಓದಿ: ರಾಜಸ್ಥಾನ ಬಿಕ್ಕಟ್ಟು: ಜನ ದಂಗೆ ಎದ್ದರೆ ನಾವು ಜವಾಬ್ದಾರರಲ್ಲವೆಂದ ಅಶೋಕ್ ಗೆಹ್ಲೋಟ್