Homeನ್ಯಾಯ ಪಥಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ...

ಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ…

- Advertisement -
- Advertisement -

ಹೈದರಾಬಾದ್ ಅತ್ಯಾಚಾರ ಪ್ರಕರಣ ಕಂಡು ಇಡೀ ದೇಶವೇ ಮರುಕಪಟ್ಟಿತು. ಫಿಲ್ಮ್ ಇಂಡಸ್ಟ್ರಿಯೂ ಕಂಬನಿ ಮಿಡಿದು, ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿತು. ಇದೇ ಮೊದಲಲ್ಲ 2012ರ ನಿರ್ಭಯಾ ಪ್ರಕರಣದಲ್ಲಿರಲಿ, ಅಥವಾ ಇಂತಹುದೇ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಾಗ ಸಿನಿಮಂದಿ ಆಕ್ರೋಶದಿಂದ ಮಾತನಾಡೋದು ಸಿನಿಮಾ ಡೈಲಾಗ್‍ಗಳಷ್ಟೇ ಸಹಜವಾಗಿದೆ. ಆದರೆ, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಲಾಭದ ಬೆನ್ನು ಹತ್ತಿರುವ ಸಿನಿಮೋದ್ಯಮಕ್ಕೆ, ಅದರ ಪಾಲುದಾರರಿಗೆ ನಿಜಕ್ಕೂ ಹೀಗೆಲ್ಲ ಆಕ್ರೋಶ ಹೊರಹಾಕುವ ನೈತಿಕತೆ ಉಳಿದಿದೆಯಾ ಅನ್ನೋದು ಚರ್ಚೆಯಾಗಬೇಕಿರುವ ಸಂಗತಿ.

ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು `ದಂಡುಪಾಳ್ಯ’ ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಇದು ಒಂದು ಸಿನಿಮಾಗೆ ಸೀಮಿತವಾದುದಲ್ಲ ಅಥವಾ ಒಬ್ಬ ಕಾಮಾಂಧನ ಪ್ರೇರಣೆಗೂ ಸೀಮಿತವಾದುದಲ್ಲ. ಕಮರ್ಷಿಯಲ್ ಸಕ್ಸಸ್‍ನ ಜಾಡುಹಿಡಿದು ಹೊರಟಿರುವ ಬಹುತೇಕ ಸಿನಿಮಾಗಳ ನಿರ್ಮಾತೃಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಇಂಥಾ ಶೋಷಣೆಗಳನ್ನು ವಿಜೃಂಭಿಸುತ್ತಾ ಬಂದಿರೋದು ಇವತ್ತಿನ ವಾಸ್ತವ.

ಸಿನಿಮಾರಂಗ ಬೆಳೆದಂತೆ, 21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷದವರೆಗಿನ ಬಹುತೇಕ ಸಿನಿಮಾಗಳ ಕತೆಗಳಲ್ಲಿ ಅತ್ಯಾಚಾರವೆಂಬುದು ಸಾಮಾನ್ಯ ವಸ್ತುವಾಗಿ ಕಾಣಿಸಿಕೊಳ್ಳುತ್ತವೆ. ಪ್ರೀತಿ-ಪ್ರೇಮ-ಕಾಮ, ಆಸೆ, ಆಕರ್ಷಣೆ, ಸೇಡು, ದ್ವೇಷ ಇದೆಲ್ಲದಕ್ಕೂ ಕೇಂದ್ರವಾಗಿ ಅತ್ಯಾಚಾರದ ದೃಶ್ಯಗಳು ರಾರಾಜಿಸುತ್ತಿವೆ. ಅದಲ್ಲದೆ ಅನೈತಿಕ ಸಂಬಂಧದ ಕತೆ-ದೃಶ್ಯಗಳು ನೋಡುಗರಿಗೆ ಪ್ರಚೋದನೆಯ ಹೊಸ ಹುಮ್ಮಸ್ಸನ್ನು ತಂದೊಡ್ಡುವುದರ ಜೊತೆಗೆ ಸಿನಿಮಾದಲ್ಲಿ ನಟನೊಬ್ಬ ಎಸಗುವ ಅತ್ಯಾಚಾರ ಕೃತ್ಯವು ಆ ಪಾತ್ರದ ಗಂಡಸ್ತನದ ಅಹಮ್ಮಿಕೆಯನ್ನಾಗಿಯೋ, ಸ್ತ್ರೀ ಪಾತ್ರವನ್ನು ಅವಮಾನಿಸುವ ಸಾಧನವಾಗಿಯೋ ಬಳಕೆಯಾಗುತ್ತಲೇ ಇದೆ.

ಸಿನಿಮಾ ಎಂಬುದು ಸಮಾಜದ ಕನ್ನಡಿಯಿದ್ದಂತೆ, ಸಮಾಜದಲ್ಲಿ ನಡೆಯೋದನ್ನೇ ಸಿನಿಮಾದಲ್ಲಿ ತೋರಿಸಬೇಕಾಗುತ್ತೆ ಎಂಬ ವಾದವನ್ನು ಕೆಲವರು ಮುಂದಿಡಬಹುದು. ಆದರೆ ಅಂತವರು, ನೈಜತೆಯ ನೆಪದಲ್ಲಿ ಇಂತಹ ವಿಕೃತಿಗಳನ್ನು ಹಸಿಹಸಿಯಾಗಿ ಬಿತ್ತರಿಸುವ ಅದೇ ಸಿನಿಮಾ ಸಮಾಜವನ್ನು ತಿದ್ದಿ ತೀಡುವ ಇನ್ನುಳಿದ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ತಾನು ಪ್ರೀತಿಸಿದವಳು ತನಗೆ ಸಿಗಲಿಲ್ಲವೆಂದರೆ, ಆಕೆ ಬೇರಾರಿಗೂ ಸಿಗಬಾರದೆಂದು ಆಕೆಯನ್ನು ಅತ್ಯಾಚಾರಗೈಯುವ ಅಥವಾ ಕುಡಿದ ಮತ್ತಿನಲ್ಲಿ ಹೀರೋ ಎಸಗುವ ಅತ್ಯಾಚಾರವು ಆಕೆಯನ್ನು ಮದುವೆ ಆಗಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆಂಬ ದೃಶ್ಯದೊಂದಿಗೆ ಕೊನೆಗಾಣುತ್ತದೆ. ಇವೆಲ್ಲವೂ ಅತ್ಯಾಚಾರಿಗಳಿಗೆ ಎಷ್ಟೊಂದು ಸುಲಭವೆಂಬಂತೆ ಪ್ರಭಾವಿಸುತ್ತವೆ.

ಸಿನಿಮಾದಲ್ಲಿ ಅತ್ಯಾಚಾರಗೈದವನು ಇವತ್ತು ಅವಳ ಸೊಕ್ಕು ಇಳಿಸಿದ್ದೇನೆಂದು ಗರ್ವದಿಂದ ಹೇಳಿಕೊಳ್ಳುವಂತಹ ಹಾಗೂ ನಿಷ್ಕರ್ಷ ಸಿನಿಮಾದಲ್ಲಿ ಖಳನಟನೊಬ್ಬ `ಇವಳಿಗೆ ಯೌವನ ತುಂಬಿ ತುಳುಕ್ತಾಯಿದೆ ಸ್ವಲ್ಪ ಖಾಲಿ ಮಾಡು’ ಎನ್ನುವ ಮತ್ತು ಆತ ಅತ್ಯಾಚಾರಗೈಯುವ ದೃಶ್ಯಗಳು ಹೆಣ್ಣಿನ ಬಾಯಿ ಮುಚ್ಚಿಸಲು ಅಥವಾ ಆಕೆಯನ್ನು ತನ್ನ ಅಡಿಯಾಳಾಗಿಸಿಕೊಳ್ಳಲು ಅತ್ಯಾಚಾರವೊಂದು ಸಾಧನ ಎಂಬುದನ್ನು ಸುಪ್ತವಾಗಿ ಸಮಾಜಕ್ಕೆ ದಾಟಿಸಿಬಿಡುತ್ತವೆ. ಜಾತಿ, ವರ್ಗ ಮತ್ತು ಕಾಮದ ಅಮಲನ್ನು ನೆತ್ತಿಗೇರಿಸಿಕೊಂಡವನಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತವೆ. ಇಂತಹ ಸಿನಿಮಾಗಳು ಅತ್ಯಾಚಾರವಷ್ಟೇ ಅಲ್ಲದೆ ಆಸಿಡ್ ದಾಳಿ, ಹಿಂಸೆ, ಕಿರುಕುಳಗಳೂ ಮಹಿಳಾ ದೌರ್ಜನ್ಯದ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪ್ರಚೋದಿಸುತ್ತವೆ.

ಅಲ್ಲದೆ, ಸಿನಿಮಾಗಳಲ್ಲಿ ಅವಕಾಶಬೇಕೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎಂದು ಹೇಳುವ ನಿರ್ದೇಶಕರೂ, ನಿರ್ಮಾಪಕರೂ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಮತ್ತೊಂದು ದುರಂತ. ಇತ್ತೀಚೆಗೆ ಸದ್ದು ಮಾಡಿದ ಮೀಟೂ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹೀರೋ, ನಿರ್ದೇಶಕ, ನಿರ್ಮಾಪಕರ ಪರವಾಗಿ ನಿಲ್ಲುವ `ಫೇವರಿಸಂ’ ಮನಸ್ಥಿತಿ ಸಿನಿಮಾ ರಂಗದ ಯಾವ ನೈತಿಕತೆಯನ್ನು ಪ್ರತಿನಿಧಿಸುತ್ತದೆ. ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೇಳಿಕೊಂಡ ನಟಿಯರ ಸಿನಿ ಭವಿಷ್ಯಕ್ಕೆ ತಣ್ಣೀರೆರಚುವ ಇಂಡಸ್ರ್ಟಿಯು ಅತ್ಯಾಚಾರದ ವಿರುದ್ಧ ಮಾತನಾಡುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಮತ್ತೆಮತ್ತೆ ಮುನ್ನೆಲೆಗೆ ತರುತ್ತಿದೆ.

ಇಂದು ಸಿನಿಮಾಗಳಿಂದ ಪ್ರೇರೇಪಿಸಲ್ಪಡುವ ಯುವಸಮುದಾಯ ಬೆಳೆಯುತ್ತಿದೆ. ಇಂತಹ ಯುವಜನಾಂಗಕ್ಕೆ ಆದರ್ಶವಾಗಬೇಕಿರುವ ಸಿನಿಮಾಗಳು ಮಹಿಳೆಯರನ್ನು ಗೌರವಿಸುವ, ಮಾನವ ಪ್ರೀತಿಯನ್ನು ಹಂಚುವ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸುವಂತಹ ಹಾಗೂ ಆರೋಗ್ಯಕರ ಮನರಂಜನೆಯ ವಾಹಿನಿಯಾಗಿರಬೇಕೇ ಹೊರತು ಹಾದಿ ತಪ್ಪಿಸಿ, ಸಮಾಜದಲ್ಲಿ ಕೊಳಕನ್ನು ಬಿತ್ತುವ ಮಾಧ್ಯಮವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...