ಪತ್ರಕರ್ತ, ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಿಡುಗಡೆಗೆ ಆಗ್ರಹಿಸಿ ರಾಜ್ಯದ ವಿವಿದೆಡೆ ಪತ್ರಿಭಟನೆಗಳು ಮುಂದುವರೆದಿವೆ.
ಅಕ್ಟೋಬರ್ 24 ರಂದು ಸ್ವರಾಜ್ ಇಂಡಿಯಾ ಪಕ್ಷದ ಕಾರ್ಯದರ್ಶಿ ಮತ್ತು ಗೌರಿ ಮೀಡಿಯಾ ಟ್ರಸ್ಟ್ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ರಾಯಚೂರು ಪೊಲೀಸರು ಹಳೇ ಕೇಸಿನ ನೆಪದಲ್ಲಿ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
25 ವರ್ಷದ ಸುಳ್ಳು ಕೇಸಿನಲ್ಲಿ ಜನಪರ ಹೋರಾಟಗಾರರನ್ನು ಬಂಧಿಸಿರುವುದು ಅಕ್ಷಮ್ಯವಾದುದು. ಮುಖ್ಯವಾಹಿನಿ ಹೋರಾಟದಲ್ಲದ್ದವರನ್ನು ತಲೆಮರೆಸಿಕೊಂಡಿದ್ದರು ಎಂದು ಕೇಸು ಹಾಕಿರುವುದು ಹುನ್ನಾರ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ನರಸಿಂಹಮೂರ್ತಿಯವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅದೇ ರೀತಿಯಲ್ಲಿ ಕೊಪ್ಪಳದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಕೊಪ್ಪಳ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾಗರದಲ್ಲಿಯೂ ಸಹ ಸ್ಥಳೀಯ ಪತ್ರಕರ್ತರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಶೀಘ್ರ ಬಿಡುಗಡೆಗೆ ಒತ್ತಾಯಿಸಿದರು.
ನಿನ್ನೆ ಮತ್ತು ಮೊನ್ನೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ
ಕೋಲಾರ ಪ್ರಗತಿಪರ ಸಂಘಟನೆಗಳಿಂದ ಪತ್ರಿಕಾಗೋಷ್ಠಿ,
ಮಂಡ್ಯದಲ್ಲಿ ಪತ್ರಕರ್ತರ ಪ್ರತಿಭಟನೆ,
ಶಿವಮೊಗ್ಗ ಸ್ವರಾಜ್ ಇಂಡಿಯಾ ಪತ್ರಿಕಾಗೋಷ್ಠಿ,
ಕೊಡಗಿನಲ್ಲಿ ಭೂಮಿ ಮತ್ತು ವಸತಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ,
ಬೆಂಗಳೂರಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಹೇಳಿಕೆ,
ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಮನವಿ ಪತ್ರ,
ಬೆಂಗಳೂರಿನಲ್ಲಿ ಪ್ರಜ್ಞಾವಂತರಿಂದ ಪ್ರತಿಭಟನೆ,
ಶಿವಮೊಗ್ಗ, ಸಾಗರ: ಪತ್ರಕರ್ತರ ಸಂಘದಿಂದ ಖಂಡಿಸಿ ಮನವಿ
ಸೊರಬದಲ್ಲಿ ಪತ್ರಿಕಾಗೋಷ್ಟಿ,
ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಪಾಂಡವಪುರದಲ್ಲಿ ಪತ್ರಿಕಾಗೋಷ್ಟಿಗಳು ನಡೆದಿದ್ದವು.