Homeಚಳವಳಿಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಭಾರತದಲ್ಲಿ ಆಳುವ ವರ್ಗಗಳು ಹಿಂದುತ್ವದ ಶಕ್ತಿಗಳನ್ನು ಬಲಪಡಿಸುವ ಸಲುವಾಗಿ "ಇಸ್ಲಾಮೋಫೋಬಿಯಾ"ವನ್ನು ಒಂದು ಸಿದ್ಧಾಂತವಾಗಿ ಬಳಸುತ್ತಿದೆ ಎಂದು ಅವರ ಸಂಶೋಧನಾ ಪ್ರಬಂಧವು ಚರ್ಚಿಸುತ್ತದೆ.

- Advertisement -
- Advertisement -

ರೋಣ ವಿಲ್ಸನ್ ಒಬ್ಬ ಸಂಶೋಧನಾ ವಿದ್ವಾಂಸರಾಗಿದ್ದು, ರಾಜಕೀಯ ಕೈದಿಗಳ ಸ್ಥಿತಿಗತಿ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಹಾಗೂ ಇತರ ಕರಾಳ ಕಾನೂನುಗಳ ಬಳಕೆಯ ಕುರಿತು ಕೆಲಸ ಮಾಡಿದ್ದಾರೆ. ಮಧ್ಯ ಭಾರತದ ಅಂಚಿಗೆ ಸರಿಸಲ್ಪಟ್ಟ ಶೋಷಿತ ಆದಿವಾಸಿ ಸಮುದಾಯಗಳ ಮೇಲೆ ಸರಕಾರ ಹೂಡಿದ್ದ ಅಪರೇಷನ್ ಗ್ರೀನ್ ಹಂಟ್ ಯುದ್ಧನೀತಿಯ ವಿರುದ್ಧ ಮಾತನಾಡಿದ್ದಕ್ಕಾಗಿ ಬಂಧಿತರಾದ ಪ್ರೊ. ಜಿ.ಎನ್. ಸಾಯಿಬಾಬಾ, ಹೇಮ್ ಮಿಶ್ರಾ ಅವರಂತಹ ರಾಜಕೀಯ ಕೈದಿಗಳ ಪರವಾಗಿ ಅವರು ಸಕ್ರಿಯವಾಗಿ ಆಂದೋಲನ ನಡೆಸಿದ್ದಾರೆ.

ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧಿತರಾಗಿ, ಚಿತ್ರಹಿಂಸೆ ಮತ್ತು ಅಮಾನವೀಯ ವರ್ತನೆಗೆ ಗುರಿಪಡಿಸಲಾದ ಕಾಶ್ಮೀರಿ ವಿದ್ವಾಂಸ ಮತ್ತು ಪ್ರಾಧ್ಯಾಪಕ ಎಸ್.ಎ.ಆರ್. ಗಿಲಾನಿ ಅವರ ಬಿಡುಗಡೆಗಾಗಿ ನಡೆದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲುಗೊಂಡಂದಿನಿಂದ ರೋಣ ಅವರಿಗೆ ರಾಜಕೀಯ ಕೈದಿಗಳ ಜೊತೆ ಕೆಲಸ ಮಾಡುವ ಆಸಕ್ತಿ ಹುಟ್ಟಿಕೊಂಡಿತ್ತು. ವಾಸ್ತವವಾಗಿ ಪ್ರೊ. ಗಿಲಾನಿ ಅವರು ಆರೋಪಮುಕ್ತರಾಗಿ ಬಿಡುಗಡೆಯಾದ ಬಳಿಕ ರೋಣ ಮತ್ತು ಪ್ರೊ. ಗಿಲಾನಿ ಇತರ ಸಾಮಾಜಿಕ ಕಾರ್ಯಕರ್ತರ ಜೊತೆಸೇರಿ ’ಕಮಿಟಿ ಫಾರ್ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸ್‌ನರ್ಸ್’ (ಸಿಆರ್‌ಪಿಪಿ – ರಾಜಕೀಯ ಕೈದಿಗಳ ಬಿಡುಗಡೆಗಾಗಿ ಸಮಿತಿ) ಎಂಬ ಸಂಘಟನೆಯನ್ನು ರೂಪಿಸಿದ್ದರು.

ರೋಣ ಅವರು ಸಿಆರ್‌ಪಿಪಿಯ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿದ್ದಾಗ, ಸಿಆರ್‌ಪಿಪಿಯ ಮೂಲಕವೇ ಪ್ರೊ. ಗಿಲಾನಿ ಅವರೊಂದಿಗೆ, ಪ್ರೊ. ಸಾಯಿಬಾಬಾ ಪ್ರಕರಣದದಲ್ಲಿ ಆಸಕ್ತಿವಹಿಸಿ, ಅವರ ಬಿಡುಗಡೆಗಾಗಿ ಹೋರಾಟ ನಡೆಸಿದ್ದರು. ಸಿಆರ್‌ಪಿಪಿಯ ಭಾಗವಾಗಿ ಅವರು ಯುಎಪಿಎ, ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ), ಆರ್ಮ್‌ಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆಕ್ಟ್ (ಎಎಫ್‌ಎಸ್‌ಪಿಎ – ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ) ಮತ್ತು ವಿವಿಧ ರಾಜ್ಯ ಮಟ್ಟದ ಸಾರ್ವಜನಿಕ ಭದ್ರತಾ ಕಾಯಿದೆ (ಪಿಎಸ್‌ಎ)ಗಳು ಮುಂತಾದ ಕರಾಳ ಕಾಯಿದೆಗಳ ಅಸಾಂವಿಧಾನಿಕ ಸ್ವರೂಪ, ಮರಣ ದಂಡನೆಯನ್ನು ವಿವೇಚನೆಯಿಲ್ಲದೆ ಬಳಸುವುದರ ವಿರುದ್ಧ ಮತ್ತು ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಅದಕ್ಕೆ ಗುರಿಯಾಗುವುದರ ಬಗ್ಗೆ ಅವರು ಹಲವಾರು ಸಮಾವೇಶಗಳನ್ನು ಆಯೋಜಿಸಿದ್ದರು. ವಿಪರ್ಯಾಸವೆಂದರೆ ಅವರು ಈಗ ಅದೇ ಕರಾಳ ಯುಎಪಿಎ ಅಡಿ ರಾಜಕೀಯ ಬಂಧಿಯಾಗಿದ್ದಾರೆ.

ಕೈದಿಗಳ ಕುರಿತ ವಿಶ್ವಸಂಸ್ಥೆಯ ಒಪ್ಪಂದವನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿರುವ ಸಿಆರ್‌ಪಿಪಿ, “ಅನಾನುಕೂಲಕರ ಪರಿಸ್ಥಿತಿಯಲ್ಲಿರುವ; ಅಥವಾ ಮಾಧ್ಯಮಗಳ ಪ್ರಚಾರ, ಪೊಲೀಸ್, ಸೇನೆ ಅಥವಾ ಪ್ರಭುತ್ವದ ನ್ಯಾಯಸಮ್ಮತವಲ್ಲದ ಅಪಪ್ರಚಾರಗಳ ಕಾರಣದಿಂದಾಗಿ ನಿಷ್ಪಕ್ಷಪಾತಿ ವಿಚಾರಣೆ ನಡೆಯದಂತೆ ತಾರತಮ್ಯಕ್ಕೆ ಒಳಗಾಗಿರುವವರಿಗೆ ಕಾನೂನು ನೆರವು ಒದಗಿಸಬೇಕು” ಎಂದು ವಾದಿಸಿದೆ.

ಕೇರಳದ ಕೊಲ್ಲಂನಲ್ಲಿ ಹುಟ್ಟಿದ ರೋಣ, ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆಯುವವರೆಗೆ ಅಲ್ಲಿಯೇ ವಾಸಿಸುತ್ತಿದ್ದರು. ನಂತರ ಅವರು ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಪುದುಚೆರಿಯ ಸೆಂಟಲ್ ಯುನಿವರ್ಸಿಟಿ (ಪಿಸಿಯು)ಗೆ ಹೋದರು. ಅಲ್ಲಿಂದ ದೆಹಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)ಗೆ ತೆರಳಿ ಸ್ನಾತಕೋತ್ತರ ಎಂ.ಫಿಲ್ ಪದವಿಯನ್ನು ಗಳಿಸಿದರು. ಫುಟ್ಬಾಲ್ ಪ್ರೇಮಿಯಾದ ಅವರು, ಮುಖ್ಯವಾಗಿ ಲ್ಯಾಟಿನ್ ಅಮೇರಿಕಾ ದೇಶಗಳ ಆಟವನ್ನು ನಿಕಟವಾಗಿ ಅನುಸರಿಸುತ್ತಾರೆ.

ಇದನ್ನೂ ಓದಿ: ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ಇತ್ತೀಚೆಗೆ ಅವರನ್ನು ಡಾಕ್ಟರೇಟ್ ಪದವಿಗಾಗಿ ಇಂಗ್ಲೆಂಡ್‌ನ ಸರ್ರ್‍ಏ ಮತ್ತು ಲೀಸೆಸ್ಟರ್ ವಿಶ್ವವಿದ್ಯಾಲಯಗಳು ಸ್ವೀಕರಿಸಿದ್ದವು. ಅವರ ಪ್ರಸ್ತಾಪಿತ ವಿಷಯವು “ದಿ ಫಿಕ್ಷನ್ ಆಫ್ ದಿ ಮುಸ್ಲಿಂ ಅದರ್: ಸ್ಟೇಟ್, ಲಾ ಎಂಡ್ ಪಾಲಿಟಿಕ್ಸ್ ಆಫ್ ನೇಮಿಂಗ್ ಇನ್ ಕಂಟೆಂಪರರಿ ಇಂಡಿಯಾ” (ಅನ್ಯ ಮುಸ್ಲಿಂ ಎಂಬ ಕಟ್ಟುಕತೆ: ಪ್ರಭುತ್ವ, ಕಾನೂನು ಮತ್ತು ಸಮಕಾಲೀನ ಭಾರತದಲ್ಲಿ ಹೆಸರಿಸುವ ರಾಜಕೀಯ”). ಭಾರತದಲ್ಲಿ ಆಳುವ ವರ್ಗಗಳು ಹಿಂದುತ್ವದ ಶಕ್ತಿಗಳನ್ನು ಬಲಪಡಿಸುವ ಸಲುವಾಗಿ “ಇಸ್ಲಾಮೋಫೋಬಿಯಾ”ವನ್ನು ಒಂದು ಸಿದ್ಧಾಂತವಾಗಿ ಬಳಸುತ್ತಿದೆ ಎಂದು ಅವರ ಸಂಶೋಧನಾ ಪ್ರಬಂಧವು ಚರ್ಚಿಸುತ್ತದೆ.

ಮುಸ್ಲಿಂ ಪುರುಷನ್ನು “ಭಯೋತ್ಪಾದಕ”ನಾಗಿ ಪರಿಗಣಿಸುವ ಸಾಮಾಜಿಕ ಪರಿಗ್ರಹಣೆಯ ಕುರಿತು ಅಧ್ಯಯನ ಮಾಡುವ ಕಡೆಗೆ ಅವರ ಒಲವಿತ್ತು. ಕಾನೂನು ಹೇಗೆ ಒಬ್ಬ ಉಗ್ರವಾದಿ ಮುಸ್ಲಿಂ ಪುರುಷನ ಕಥಾನಕ ಕಟ್ಟಲು, ಭಯೋತ್ಪಾದಕ ಪುರುಷತ್ವವಾಗಿ ಬಿಂಬಿಸಿ ನಂತರ ಸೈದ್ಧಾಂತಿಕ ಪ್ರಭುತ್ವ ವ್ಯವಸ್ಥೆ ಅದನ್ನೇ ಬಳಸಿಕೊಂಡು ಬಹುಸಂಖ್ಯಾತ ಜನರಲ್ಲಿ ’ಅನ್ಯ ಮುಸ್ಲಿಂ’ ಎಂಬುದನ್ನು ಪುನರುಚ್ಚರಿಸಿ, ಅದೇ ಹೊತ್ತಿಗೆ, ಮುಸ್ಲಿಂ ಮಹಿಳೆಯರನ್ನು ಭಾರತ ಪ್ರಭುತ್ವದ ರಕ್ಷಣೆ ಅಗತ್ಯವಾಗಿರುವ, ವಿಧೇಯ ದೇಹಗಳಾಗಿ ಬಿಂಬಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಅಧ್ಯಯನದ ಉದ್ದೇಶವಾಗಿತ್ತು.

ಬಂಧನದ ನಂತರ ರೋಣ ತಮ್ಮ ಡಾಕ್ಟರೆಟ್ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲ ಅವರು ಇತರಿಗೆ ಒದಗಿಸುತ್ತಿದ್ದ ಕಾನೂನು ನೆರವನ್ನೂ ಕೂಡ ಕಡಿತಗೊಳಿಸಲಾಗಿದೆ.

ರೋಣ ಅಜೀವಪಯಂತ ಮಾನವಹಕ್ಕುಗಳ ಹೋರಾಟಗಾರ. ಜೈಲಿನ ಪರಿಮಿತಿಯೊಳಗಿಂದಲೇ ಅವರ ಹೋರಾಟ ಮುಂದುವರಿಯುತ್ತದೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ, ಹಣೆಪಟ್ಟಿ ಹಚ್ಚಿ, ನ್ಯಾಯವನ್ನು ನಿರಾಕರಿಸುವುದೆಂದರೆ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...