Homeಕರ್ನಾಟಕಕೆನರಾ ಬಿಜೆಪಿ ಭೂಪರಿಗೆ ಈಗ ರೂಪಾಲಿಯಮ್ಮನೇ ದುಃಸ್ವಪ್ನ!

ಕೆನರಾ ಬಿಜೆಪಿ ಭೂಪರಿಗೆ ಈಗ ರೂಪಾಲಿಯಮ್ಮನೇ ದುಃಸ್ವಪ್ನ!

- Advertisement -
- Advertisement -

| ಶುದ್ದೋಧನ |

ಉತ್ತರ ಕನ್ನಡದ ನಾಲ್ಕು ಬಿಜೆಪಿ ಎಮ್ಮೆಲ್ಲೆಗಳ ನಡುವೆ ಶುರುವಾದ ಹೊಟ್ಟೆಕಿಚ್ಚಿನ ಕಿತ್ತಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಶಿರಸಿಯ ಸೀನಿಯರ್ ಮೋಸ್ಟ್ ಕಾಗೇರಿ ತನಗರಿವಿಲ್ಲದೆ ಒಲ್ಲದ ಸ್ಪೀಕರ್ ಗದ್ದುಗೆಯೇರಿ ಕುಂತಿದ್ದಾರೆ. ಘಟ್ಟದ ಮೇಲಿನ ಕಾಗೇರಿಗೆ ಕರಾವಳಿ ಕಡೆಯ ಮೂವರು ಎಳಸು ಎಮ್ಮೆಲ್ಲೆಗಳು ಸ್ವಪಕ್ಷದಲ್ಲಿ ಪ್ರತಿಸ್ಪರ್ಧಿಗಳಾಗಲು ಸಾಧ್ಯವೇ ಇಲ್ಲ. ಆತನಿಗೇನಿದ್ದರೂ ಸದಾ ಮಗ್ಗಲು ಮುಳ್ಳಾಗಿ ಕಾಡುವ ಎಂಪಿ ಅನಂತ್ಮಾಣಿಯೇ ಆತಂಕಕಾರಿ! ಮಜಾ ಎಂದರೆ, ಕೋಮು ರಾಜಕಾರಣದ ವರಸೆ ಪ್ರಯೋಗಿಸುತ್ತ ಅದಕ್ಕೆ ಹುಸಿ ಅಭಿವೃದ್ಧಿಯ ಮುಸುಕು ತೊಡಿಸುವ ಬೋಂಗು ಬಿಡುವ ಕಾರವಾರದ ರೂಪಾಲಿ ನಾಯ್ಕ, ಕುಮಟೆಯ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನಿಲ್ ನಾಯ್ಕ್ ಮೂರು ಮೂಲೆಯಲ್ಲಿ ನಿಂತು ಪರಸ್ಪರ ಕಾಲೆಳೆದಾಡುತ್ತಿದ್ದಾರೆ. ಈ ಮೂವರೂ ಅನಂತ್ಮಾಣಿಯ ಚೇಲಾಗಳೇ. ಆದರೆ ಮಾಣಿ ಇವರನ್ನೀಗ ಪೂರ್ತಿ ನಂಬುತ್ತಿಲ್ಲ. ಅವರೆಲ್ಲ ಶಾಸಕರಾದ ತಿಂಗಳೊಪ್ಪತ್ತಿನಲ್ಲೇ ಅವರವರ ಕ್ಷೇತ್ರದಲ್ಲಿ “ಚೆಕ್” ಇಟ್ಟು ಬಿಟ್ಟಿದ್ದಾನೆ ಮಾಣಿ!!

ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಕೆನರಾದ ಕೇಸರಿ ಶಾಸಕರಿಗೆಲ್ಲ ಮಂತ್ರಿಗಿರಿ ಕನಸು ಪ್ರತಿ ರಾತ್ರಿಯೂ ಬಿಡದೇ ಬೀಳತೊಡಗಿತ್ತು. ಆದರೆ ಇವರ್ಯಾರೂ ಮಂತ್ರಿಯಾಗೋದು ಅನಂತ್ಮಾಣಿಗೆ ಇಷ್ಟವಿರಲಿಲ್ಲ. ಕಾಗೇರಿ ವಿಧಾನಸಭಾ ಅಧ್ಯಕ್ಷನಾದದ್ದು ರೂಪಾಲಿ, ದಿನಕರ್ ಮತ್ತು ಸುನೀಲ್‍ನಲ್ಲಿ ಮಂತ್ರಿಗಿರಿ ಆಸೆಯ ಹುಚ್ಚೆಬ್ಬಿಸಿತ್ತು. ಇವರಲ್ಲಿ ಒಂದು ಗುಲಗಂಜಿಯಷ್ಟು ಜಾಸ್ತಿಯೇ ಕಸರತ್ತು ಮಾಡಿದ್ದು ಮಾತ್ರ ರೂಪಾಲಿಯಮ್ಮನೇ. ಅದಕ್ಕೆ ಕಾರಣವೂ ಇತ್ತು. ಆಕೆಗೆ ಸಿಎಂ ಯಡ್ಡಿ ಜತೆ ವಿಶೇಷವಾದ ನಂಟಿತ್ತು. ಎರಡನೆಯದು ಮಹಿಳಾ ಕೋಟಾದಲ್ಲಿ ಸಚಿವೆಯಾಗುವ ಅವಕಾಶವಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಯಡ್ಡಿಗೆ ಕರಾವಳಿಯ ಬಿಜೆಪಿ ಶಾಸಕರ ಪೈಕಿ ರೂಪಾಲಿ ಎಂದರೇನೇ ನಂಬಿಕೆ-ಕಕ್ಕುಲಾತಿ ವಿಪರೀತ! ಆಕೆ ತನ್ನ ನಿಗೂಢ ಸಂಪತ್ತನ್ನು ರಾಜಕಾರಣಕ್ಕಾಗಿ ಹರಿಸುವ ದಾಢಸಿತನಕ್ಕೆ ಯಡ್ಡಿ ಮಾರುಹೋಗಿದ್ದಾರೆ. ಹಾಗಾಗಿ ರೂಪಾಲಿ ಮಂತ್ರಿಯಾಗ್ತಾರೆಂಬ ದಟ್ಟ ಭಾವನೆ ಬಿಜೆಪಿಗರಿಗಷ್ಟೇ ಅಲ್ಲ, ಜಿಲ್ಲೆಯಲ್ಲೂ ಮನೆಮಾಡಿತ್ತು.

ಇದು ಸಹಜವಾಗೇ ಜಿಲ್ಲೆಯ ಕಮಲ ಪಾಳಯದ ಪುರುಷೋತ್ತಮ ಶಾಸಕರಲ್ಲಿ ಅಸೂಯೆಗೆ ಕಾರಣವಾಯಿತ್ತು. ಅಕತ್ಮಾತ್ ರೂಪಾಲಿ ಮಂತ್ರಿಣಿಯಾದರೆ ಚಾಲಾಕಿತನದ ಈ ಹೆಣ್ಣು, ತಮ್ಮನ್ನು ನಗಣ್ಯ ಮಾಡಿಬಿಡುತ್ತಾಳೆಂಬ ಆತಂಕ “ಗಂಡು” ಶಾಸಕರ ಕಾಡತೊಡಗಿತ್ತು. ಚಿತ್ರದುರ್ಗದಲ್ಲಿ ಬಿಸ್ನೆಸ್ ಮಾಡುತ್ತಾ ಕಾರವಾರ – ಅಂಕೋಲದಲ್ಲಿ ರಾಜಕಾರಣ ನಡೆಸುವ ರೂಪಾಲಿಯ ಕೊಪ್ಪರಿಗೆ ಕಾಸು, ಗ್ಲಾಮರ್, ಸಿಎಂ ಮತ್ತಿತರ ಬಿಜೆಪಿ ಘಟಾನುಘಟಿಗಳೊಂದಿಗಿನ ನಿಕಟಸಂಪರ್ಕ….. ಹೀಗೆ ಮೂರು ಶಾಸಕರಿಗೆ ಗಂಡಾಂತರಕಾರಿಯೇ ಆಗಿತ್ತು. ಕಾಗೇರಿ ತನ್ನ ಚೆಡ್ಡಿ ಆಶ್ರಯದಾತರ ಬಲ ಮತ್ತು ಹಿರಿತನ ಹಾಗೂ ಸ್ಪೀಕರ್ ಆಗಿರುವುದರಿಂದ ರೂಪಾಲಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದರೂ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಮತ್ತವರ ಬಾಸ್ ಅನಂತ್ಮಾಣಿ ಆತಂಕಗೊಂಡಿದ್ದರು.

ಉತ್ತರ ಕನ್ನಡದ ಮಂತ್ರಿ ಕೋಟಾವನ್ನು ಅನರ್ಹ ಕಮ್ ಅಂತರ್‍ಪಿಶಾಚಿ ಶಾಸಕ ಶಿವರಾಮ ಹೆಬ್ಬಾರ್‍ಗೆ ಮೀಸಲಿಡಲಾಗಿದೆ. ಆದರೆ ಆತ ವನವಾಸ ಮುಗಿಸಿ ಬರುವತನಕ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಯೋಜನೆ ರೂಪಾಲಿ, ಸುನೀಲ್ ಮತ್ತು ದಿನಕರ್‍ಗೆ ಇತ್ತು. ಹೆಬ್ಬಾರ್‍ನನ್ನು ರಹಸ್ಯವಾಗಿ ಭೇಟಿಯಾಗಿದ್ದ ಮೂವರು ತಮ್ಮ ಹೆಸರು ರೆಕಮೆಂಡ್ ಮಾಡುವಂತೆ ಬೇಡಿಕೊಂಡಿದ್ದರು. ಅಂತಿಮವಾಗಿ ತಾವು ಮಂತ್ರಿಯಾಗದಿದ್ದರೂ ಪರವಾಗಿಲ್ಲ ಆದರೆ ರೂಪಾಲಿ ಮಾತ್ರ ಯಾವ ಕಾರಣಕ್ಕೂ ಮಂತ್ರಿಗಿರಿಗೆ ಹಕ್ಕುದಾರಿಣಿ ಆಗಬಾರದೆಂಬ ಹಠಕ್ಕೆ ದಿನಕರ್ ಶೆಟ್ಟಿ, ಸುನೀಲ್ ನಾಯ್ಕ ಮತ್ತು ಹೆಬ್ಬಾರ್ ಬಿದ್ದಿದ್ದರು. ಗುರು ಅನಂತ್ಮಾಣಿ ಮೂಲಕವೂ ರೂಪಾಲಿಗೆ ಅಡ್ಡಗಾಲು ಹಾಕಿಸಿದ್ದರು. ಈ ದ್ವೇಷಾಸೂಯೆ ವಿವಿಧ ರೂಪಾತಾಳುತ್ತ ಈಗ ಜಿಲ್ಲಾ ಬಿಜೆಪಿಯನ್ನು ಮನೆಯೊಂದು ಮೂರು ಬಾಗಿಲು ಮಾಡಿಬಿಟ್ಟಿದೆ!

ಈ ನಡುವೆ ಜಿಲ್ಲೆಯ ಹಿಂದೂತ್ವ ರಾಜಕಾರಣದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಎದುರಾಳಿ ಶಾಸಕರ ವರ್ಚಸ್ಸು ಕುಗ್ಗಿಸುವ ಹಿಕಮತ್ತಿನ ಕಾರ್ಯಾಚರಣೆ ಈ ಮೂರು ಶಾಸಕರು ನಡೆಸಿದ್ದರು. ಪರೇಶ್‍ನ ನಿಗೂಢ ಸಾವಿನ ನಂತರ ಜಿಲ್ಲೆಯಲ್ಲಿ ಭುಗಿಲೆದ್ದಿದ್ದಮತೀಯ ದಂಗೆಯಲ್ಲಿ ಭಾಗಿಯಾಗಿ ಕೋರ್ಟ್-ಕಚೇರಿ ಅಲೆಯುತ್ತಿದ್ದ ಆರೋಪಿಗಳ ಕೇಸನ್ನು ಸಂಪುಟ ಸಭೆಯಲ್ಲಿ ಸಿಎಂನಿಂದ ರದ್ದುಮಾಡಿಸುತ್ತೇವೆ ಎಂದು ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ ಮತ್ತು ಕಾಗೇರಿ ಎಲ್ಲರೂ ವೀರಾವೇಷದ ಮಾತು ಆಡುತ್ತಲೇ ಇದ್ದರು. ಆದರೆ ಎಲ್ಲರಿಗಿಂತ ಮೊದಲು ರೂಪಾಲಿ ಸಿಎಂ ಸಂಧಿಸಿ ಪರೇಶ್ ಸಾವಿನ ನಂತರದ ದೊಂಬಿ ಪ್ರಕರಣ ರದ್ದು ಮಾಡುವಂತೆ ಮನವಿ ಕೊಟ್ಟ ಆ ಫೋಟೋ ಮಾಧ್ಯಮಗಳಿಗೆ ಕೊಟ್ಟು ದೊಡ್ಡ ಸುದ್ದಿಯಾಗಿ ಹೋದರು. ಇದು ಪುರುಷ ಶಾಸಕರ ಬೆಚ್ಚಿಬೀಳಿಸಿತು.

ಕೇಸು ರದ್ದತಿಯ ಕ್ರೆಡಿಟ್ ರೂಪಾಲಿ ತಾನೊಬ್ಬಳೇ ಹೊಡೆದುಕೊಳ್ಳಲು ಹವಣಿಸುತ್ತಿರುವುದು ಇವರೆಲ್ಲರ ಕಣ್ಣು ಕೆಂಪಾಗಿಸಿತು. ಆಕೆಗೆ ಪಾಠ ಕಲಿಸಲು ಸ್ಕೆಚ್ ಹಾಕತೊಡಗಿದರು. ಅಷ್ಟೊತ್ತಿಗೆ ಸಿಎಂ ಕೇಸ್ ರದ್ದು ಮಾಡಿಯಾಗಿತ್ತು. ರೂಪಾಲಿ ನಾಯ್ಕ ಪ್ರಯತ್ನದಿಂದಲೇ ಹಿಂದೂ ಕಾರ್ಯಕರ್ತರು ಬಚಾವಾದರೆಂಬ ವ್ಯವಸ್ಥಿತ ಪ್ರಚಾರವೂ ಹಬ್ಬಿತು. ಅಲ್ಲಿಗೆ ರೂಪಾಲಿ ಪ್ರಭಾವ ವೃದ್ಧಿಸಿದರೆ, ಪುರುಷ ಶಾಸಕರ ಪುಂಗಿ ಬಂದ್ ಆಯಿತು!! ಈಗ ನಿಗಮ ಮಂಡಳಿಗಾಗಿ ಮೂವರಲ್ಲಿ ಮೇಲಾಟ ನಡೆದಿದೆ. ಮೊದಲಿನ ಬಾಂಧವ್ಯ ಈಗ ಮೂವರಲ್ಲಿ ಉಳಿದಿಲ್ಲ. ಒಬ್ಬರ ಮುಖ ಕಂಡರೆ ಇನ್ನೊಬ್ಬರು ಅಡ್ಡ ಮುಖ ಹಾಕುತ್ತಿದ್ದಾರೆ.

ಅಂತಿಮವಾಗಿ ಪುರುಷ ಶಾಸಕರು ತಮಗೆ ಅವಕಾಶ ಸಿಗದಿದ್ದರೂ ಸರಿ, ರೂಪಾಲಿಗೆ ಭಾಗ್ಯ ಬರಬಾರದು ಎಂಬ ಪ್ರಯತ್ನದಲ್ಲಿದ್ದಾರೆ. ಆದರೆ ಚಾಲೂ ಪುಢಾರಿಣಿ ಎಂದೇ ಕಾರವಾರದಲ್ಲಿ ಗುರುತಿಸಿಕೊಂಡಿರುವ ರೂಪಾಲಿ ನಾಯ್ಕ ಎದುರಾಳಿಗಳ ಬೇಸ್ತು ಬೀಳಿಸಲು ಏನೇನು ಸಾಧ್ಯವೋ ಅದೆಲ್ಲ ಮಾಡುತ್ತಿದ್ದಾರೆ! ಈ ಅಧಿಕಾರದಾಹದ ಬಡಿದಾಟಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿ ಕುಸಿದು ಬೀಳಲಿದೆ ಎಂದು ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಮಾತಾಡಿಕೊಳ್ಳುವಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...