ಹೀಗಿದೆ ಆರೆಸೆಸ್

- Advertisement -
- Advertisement -

ಆರ್.ಎಸ್.ಎಸ್. ಬೇಡಿಕೆ: “ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿಯ ಅನುಷ್ಠಾನ” – ಹಾಗಾದರೆ ದಲಿತರು ಮತ್ತು ಮಹಿಳೆಯರ ಗತಿಯೇನು? ಭಾರತ ಸಂವಿಧಾನದ ಮೇಲಿರುವ ಆರ್.ಎಸ್.ಎಸ್. ನಿಷ್ಠೆಯನ್ನು ಗೋಲ್ವಾಲ್ಕರ್ ಅವರ “ಚಿಂತನಾಗುಚ್ಛ” ಕೃತಿಯಲ್ಲಿನ ವಿವರ ಹೇಳಿಕೆಗಳಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಕೃತಿ ಕೇವಲ ಆಯ್ದ ಲೇಖನಗಳ ಸಂಕಲನವಷ್ಟೇ ಅಲ್ಲ, ಬದಲಿಗೆ ಆರ್.ಎಸ್.ಎಸ್. ಸ್ವಯಂಸೇವಕರ ಪಾಲಿಗೆ ಒಂದು ಪವಿತ್ರ ಗ್ರಂಥ ಕೂಡ.
“ನಮ್ಮ ಸಂವಿಧಾನ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನಗಳಿಂದ ಆಯ್ದುಕೊಂಡ ವಿವಿಧ ಲೇಖನಗಳು ಮತ್ತು ಅನುಚ್ಛೇದದ ತುಣುಕುಗಳ ಸಂಚಯಿತ ರೂಪ. ಇದು ನಮ್ಮದೆಂದು ಹೇಳಿಕೊಳ್ಳಲು ನಿಚ್ಚಳವಾದ ಯಾವ ಹೆಗ್ಗಳಿಕೆಯೂ ಇಲ್ಲ. ನಮ್ಮ ರಾಷ್ಟ್ರ ಬದುಕಿನ ಧ್ಯೇಯವನ್ನಾಗಲಿ ಅಥವಾ ನಮ್ಮ ಬದುಕಿಗಿರುವ ಮಾರ್ಗದರ್ಶಿ ತತ್ತ್ವವನ್ನಾಗಲಿ ತೆರೆದು ತೋರುವ ಯಾವ ಮಾರ್ಗದರ್ಶಕ ಸಿದ್ಧಾಂತಗಳ ಒಂದು ಪದವಾದರೂ ಅದರಲ್ಲಿದೆಯೆ?
ವಾಸ್ತವ ಸಂಗತಿಯೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿ ಅಥವಾ ಮನುಸಂಹಿತೆ ಅಥವಾ ಮನುಧರ್ಮಶಾಸ್ತ್ರವಿರಬೇಕೆಂದು ಆರ್.ಎಸ್.ಎಸ್. ಅಪೇಕ್ಷಿಸಿತ್ತು. ಎಲ್ಲರೂ ತಿಳಿದಿರುವಂತೆ ಶೂದ್ರರು, ದಲಿತರು ಮತ್ತು ಮಹಿಳೆಯರ ಕುರಿತಂತೆ, ಅತ್ಯಂತ ಅವಹೇಳನಕಾರಿ ಮತ್ತು ಅಮಾನುಷ ಪ್ರಸ್ತಾಪಗಳ ಉಲ್ಲೇಖವಿರುವ ಮನುಸ್ಮøತಿ ಅವರ ಅಪೇಕ್ಷೆಯ ಸಂವಿಧಾನವಾಗಿತ್ತು. ಸಂಸದೀಯ ಸಭೆ, ಸಂವಿಧಾನ ರಚನೆ ಮತ್ತು ಮಂಡನೆಯ ಕಾರ್ಯವನ್ನು ಅಂತಿಮಗೊಳಿಸಿದಾಗ, ಆರ್.ಎಸ್.ಎಸ್ ತನ್ನ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿತು. ನವೆಂಬರ್ 30, 1949ರ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದೆ.
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಕ್ತನ ಭಾರತದಲ್ಲಿ ಆಗಿರಬಹುದಾದ ಒಂದು ಅನನ್ಯ ಸಂವಿಧಾನಾತ್ಮಕ ಬೆಳವಣಿಗೆಯ ವಿವರಗಳಾಗಲಿ, ಉಲ್ಲೇಖಗಳಾಗಲಿ ಲವಲೇಶವಿಲ್ಲ. ಸ್ಪಾರ್ಟ್ ದ ಲೈಕರ್ಗಸ್ (820 ಬಿ.ಸಿ) ಅಥವಾ ಪರ್ಷಿಯಾದ ಸೊಲೊನ್ (640 ಬಿ.ಸಿ) ಅವರುಗಳಿಗೂ ಪೂರ್ವದಲ್ಲೇ ಮನುಸ್ಮøತಿ ರಚಿತವಾಗಿತ್ತು. ಇಂದಿನವರೆಗೂ ಮನುಸ್ಮøತಿಯಲ್ಲಿ ಪ್ರತಿಪಾದಿತವಾಗಿರುವ ವಿಧಿ ನಿಬಂಧನೆಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ ಹಾಗೂ ಸ್ವಯಂಪ್ರೇರಿತ ನಿಷ್ಠೆ ಮತ್ತು ಅನುಸರಣೀಯ ಗುಣವನ್ನು ಪ್ರೇರೇಪಿಸಿದೆ. ಆದರೆ ಈ ಯಾವ ವಿಚಾರವು ನಮ್ಮ ಸಂವಿಧಾನದ ಪಂಡಿತೋತ್ತಮರಿಗೆ ಅರ್ಥವಾಗುವುದಿಲ್ಲ. ಹಾಗೆ ಅವರಿಗೆ ಮುಖ್ಯವೂ ಅಲ್ಲ”
ಸ್ವತಂತ್ರ ಭಾರತದಲ್ಲಿ ಮನುಧರ್ಮಶಾಸ್ತ್ರವನ್ನು ಅಂಗೀಕರಿಸಿ, ಅಧಿಕೃತವಾಗಿ ಘೋಷಿಸಬೇಕೆಂದು ಆರ್.ಎಸ್.ಎಸ್. ಒತ್ತಾಯಿಸುತ್ತಿರುವುದಕ್ಕೆ ನಿಜವಾದ ಕಾರಣವೆಂದರೆ, ತಮ್ಮ ಮಾರ್ಗದರ್ಶಿ, ತತ್ವಜಿಜ್ಞಾಸು ಮತ್ತು ವಿಚಾರ ಉದ್ದೀಪಕರಾಗಿರುವ ವಿ.ಡಿ.ಸಾವರ್ಕರ್ ಅವರನ್ನು ನಿಷ್ಠೆಯಿಂದ ಹಿಂಬಾಲಿಸುತ್ತಿರುವುದು. ಸಾವರ್ಕರರ ಮೇರೆಗೆ ;
“ನಮ್ಮ ಹಿಂದು ರಾಷ್ಟ್ರದ ಪವಿತ್ರ ಕೃತಿಗಳಾದ ವೇದಗಳ ಅನಂತರ ಅತ್ಯಂತ ಪೂಜ್ಯನೀಯ ಮತಧರ್ಮಶಾಸ್ತ್ರವೆಂದರೆ ‘ಮನುಸ್ಮøತಿ’ ಮಾತ್ರ. ಅಲ್ಲದೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ, ಸಂಪ್ರದಾಯ, ಚಿಂತನೆ ಮತ್ತು ಆಚರಣೆಯ ಮೂಲ ತಳಹದಿ ‘ಮನುಸ್ಮøತಿ’ಯಾಗಿದೆ. ಅಧ್ಯಾತ್ಮ ಮತ್ತು ದೈವಿಕತೆ ಕೇಂದ್ರಿತ ನಮ್ಮ ದೇಶ ಸಾಧಿಸಿರುವ ಮುನ್ನಡೆಯನ್ನು ಈ ಕೃತಿ ಸಂಕೇತರೂಪದಲ್ಲಿ ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದುಗಳು ತಮ್ಮ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಪಾಲಿಸುತ್ತಿರುವ ವಿಧಿನಿಯಮಗಳು ‘ಮನುಸ್ಮøತಿ’ ಯನ್ನು ಆಧರಿಸಿವೆ. ಇಂದು ಹಿಂದು ಮತೀಯರ ಕಾನೂನು ಎಂದರೆ ಅದು ‘ಮನುಸ್ಮøತಿ’ ಮಾತ್ರ
ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದು ರಾಷ್ಟ್ರದ ಸಮಾನಾರ್ಥಕ ಪದವೆಂದರೆ ‘ಜಾತೀಯತೆ’:
ಆರ್.ಎಸ್.ಎಸ್. ಪ್ರಧಾನರ ಶ್ರದ್ಧೆ, ನಂಬಿಕೆಯಿರುವುದು ಮನುಸ್ಮøತಿಯಲ್ಲಿ. ಆದ್ದರಿಂದ ಸಹಜವಾಗಿಯೆ ಜಾತೀಯತೆಯನ್ನು ನಂಬುವ ಕಡೆಗೆ ಅವರನ್ನು ಕರೆದೊಯ್ಯಿತು. ಆರ್.ಎಸ್.ಎಸ್.ಗೆ ಜಾತೀಯತೆಯೇ ಹಿಂದು ಧರ್ಮದ ಮತ್ತು ಹಿಂದು ರಾಷ್ಟ್ರೀಯತೆಯ ಅಂತಃಸ್ಸಾರ. ಮನು ಮೇರೆಗೆ ಹಿಂದು ಧರ್ಮೀಯರು ಮತ್ತಾರೂ ಅಲ್ಲ, ಆದರೆ ;
“ಹಿಂದು ಧರ್ಮೀಯರು ವಿರಾಟ್ ಪುರುಷ ಸಂಭೂತರು, ಆ ದೈವೀಶಕ್ತಿಯ ಮಾನುಷಾವತಾರಿಗಳು, ‘ಹಿಂದು’ ಶಬ್ದದ ಬಳಕೆ ಮಾಡದಿದ್ದರೂ, ‘ಪುರುಷ ಸೂಕ್ತ’ ದಲ್ಲಿ ವರ್ಣಿತವಾಗಿರುವ ದೈವೀಶಕ್ತಿಯ ವಿವರಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ಸೂರ್ಯಚಂದ್ರರು ವಿರಾಟ್ ಪುರುಷನ ಎರಡು ಕಣ್ಣುಗಳು, ಅವನ ಹೊಕ್ಕಳು ಮೂಲದಿಂದಲೇ ತಾರೆಗಳು ಮತ್ತು ಗಗನ ಸೃಷ್ಟಿತವಾಗಿದೆ. ಹಾಗು ಅವನ ಶಿರವೇ ಬಾ ್ರಹ್ಮಣರು, ತೋಳುಗಳೇ ಕ್ಷತ್ರಿಯರು, ವೈಶ್ಯರು ಅವನೆರಡು ಊರುಗಳು ಮತ್ತು ಪಾದಗಳೇ ಶೂದ್ರರು. ಇಂಥ ಪುರಾಣ ರೂಪಿಕೆಯ ಅರ್ಥವೆಂದರೆ; ಚಾತುರ್ವಣ್ರ್ಯ ವ್ಯವಸ್ಥೆಯಿರುವ ಸಮುದಾಯವೇ ಹಿಂದು ಮತೀಯರು – ನಮ್ಮ ದೇವತೆಗಳು ಹಾಗು ವಿರಾಟ್ ಪುರುಷನ ಶ್ರೇಷ್ಠಾಂಗವಾದ ಶಿರದ ಉತ್ಕøಷ್ಟ ದರ್ಶನವೇ ನಮ್ಮ ‘ರಾಷ್ಟ್ರ’ ಪರಿಕಲ್ಪನೆಯ ಆಂತರ್ಯದ ತಿರುಳು. ಈ ಅಂತಃಸತ್ತ್ವ ನಮ್ಮ ಚಿಂತನಾಕ್ರಮವನ್ನು ವಿಸ್ತರಿಸಿದೆ ಹಾಗು ನಮ್ಮ ಸಾಂಸ್ಕøತಿಕ ಪರಂಪರೆಯ ವಿವಿಧ ಅನನ್ಯ ಪರಿಕಲ್ಪನೆಗಳ ಆವಿರ್ಭಾವಕ್ಕೆ ಕಾರಣವಾಗಿದೆ”.
ಆರ್.ಎಸ್.ಎಸ್. ಮತ್ತು ಹಿಂದುತ್ವದ ಸಂಘಟನೆಗಳು ಮನುಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಯಾವ ಬಗೆಯ ನಾಗರಿಕತೆಯನ್ನು ಕಟ್ಟಲು ಹೊರಟಿದ್ದಾರೆ ಎಂಬುದನ್ನು ಕೂಲಂಕಷವಾಗಿ ತಿಳಿಯಬೇಕಾದರೆ, ಮನುತತ್ತ್ವ ಶೂದ್ರರು ಮತ್ತು ಮಹಿಳೆಯರನ್ನು ಕುರಿತಂತೆ ರೂಪಿಸಿರುವ ನ್ಯಾಯವಿಧಿಗಳತ್ತ ಒಮ್ಮೆ ಅವಲೋಕಿಸಬೇಕಾಗುತ್ತದೆ. ಅಮಾನವೀಯವೂ ಮತ್ತು ಭ್ರಷ್ಟವೂ ಆಗಿರುವ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇವುಗಳೇ ತಮ್ಮ ಅರ್ಥವನ್ನು ಸ್ವಯಂ ನಿರ್ವಚಿಸಿಕೊಳ್ಳುತ್ತವೆ.
ಪ್ರಜಾಪ್ರಭುತ್ವದ ವಿರುದ್ಧ :
ಪ್ರಜಾಪ್ರಭುತ್ವದ ತಾತ್ತ್ವಿಕತೆಗೆ ತದ್ವಿರುದ್ಧವಾದ ನಿರಂಕುಶ ಆಳ್ವಿಕೆಯ ಅಡಿಯಲ್ಲಿ ಭಾರತ ತನ್ನ ಆಡಳಿತ ನಡೆಸಬೇಕೆಂದು ಆರ್.ಎಸ್.ಎಸ್. ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದೆ. 1940 ರಂದು ಆರ್.ಎಸ್.ಎಸ್. ಕೇಂದ್ರಸ್ಥಾನವಾಗಿರುವ ನಾಗಪುರದ ರೇಷಮ್ ಭಾಗ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಆರ್‍ಎಸ್‍ಎಸ್‍ನ ಸುಮಾರು 1350 ಮಂದಿ ಉನ್ನತ ಸ್ತರದ ಸಂಘಟನೆಯ ಸ್ವಯಂಸೇವಕ ಪದವೃಂದವನ್ನುದ್ದೇಶಿಸಿ ಮಾತಾಡುತ್ತಾ ಗೋಲ್ವಾಲ್ಕರ್ ಮಹತ್ತರ ಹೇಳಿಕೆಯೊಂದನ್ನು ಘೋಷಿಸಿದರು ;
“ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬ ನಿಲುವಿನಿಂದ ಆರ್.ಎಸ್.ಎಸ್. ಸ್ಫೂರ್ತಿ ಪಡೆದಿದೆ. ಈ ಸ್ಫೂರ್ತಿ ಜ್ಯೋತಿಯೇ ನಮ್ಮ ಮಹಾನ್ ನೆಲದ ಮೂಲೆಮೂಲೆಯಲ್ಲೂ ಹಿಂದುತ್ವದ ದೀಪ ಹಚ್ಚಿ ದೇದಿಪ್ಯಮಾನಗೊಳಿಸುತ್ತಿದೆ”.
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತವೆಂಬ ಈ ಘೋಷಣೆ, ಯುರೋಪಿನ ನಾಜಿ ಮತ್ತು ಉಗ್ರ ಬಲಪಂಥೀಯರಿಂದ ನೇರವಾಗಿ ಎರವಲು ಪಡೆದ, ಸ್ವಪಜ್ಞತೆಯಿರದ ಅನುಕರಣಾರ್ಥಕ ಘೋಷಣೆ. ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಹಿಂದು ಮಹಾಸಭಾದ ಮುಖಂಡರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೂ ಈ ಸಭೆಯಲ್ಲಿ ಉಪಸ್ಥಿತರಿದ್ದದ್ದು. ಇದೇ ಮುಖರ್ಜಿಯವರು, ವಿಭಜನೆ ಪೂರ್ವದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಹಿಂದು ಮಹಾಸಭಾ ಜೊತೆಗೂಡಿ 1942ರಲ್ಲಿ ರಚಿಸಿದ್ದ ಸಂಮಿಶ್ರ ಸರ್ಕಾರದಲಿ ್ಲ ಉಪಮುಖ್ಯಮಂತ್ರಿಯಾಗಿದ್ದವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...