ಹೀಗಿದೆ ಆರೆಸೆಸ್

- Advertisement -
- Advertisement -

ಆರ್.ಎಸ್.ಎಸ್. ಬೇಡಿಕೆ: “ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿಯ ಅನುಷ್ಠಾನ” – ಹಾಗಾದರೆ ದಲಿತರು ಮತ್ತು ಮಹಿಳೆಯರ ಗತಿಯೇನು? ಭಾರತ ಸಂವಿಧಾನದ ಮೇಲಿರುವ ಆರ್.ಎಸ್.ಎಸ್. ನಿಷ್ಠೆಯನ್ನು ಗೋಲ್ವಾಲ್ಕರ್ ಅವರ “ಚಿಂತನಾಗುಚ್ಛ” ಕೃತಿಯಲ್ಲಿನ ವಿವರ ಹೇಳಿಕೆಗಳಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಕೃತಿ ಕೇವಲ ಆಯ್ದ ಲೇಖನಗಳ ಸಂಕಲನವಷ್ಟೇ ಅಲ್ಲ, ಬದಲಿಗೆ ಆರ್.ಎಸ್.ಎಸ್. ಸ್ವಯಂಸೇವಕರ ಪಾಲಿಗೆ ಒಂದು ಪವಿತ್ರ ಗ್ರಂಥ ಕೂಡ.
“ನಮ್ಮ ಸಂವಿಧಾನ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನಗಳಿಂದ ಆಯ್ದುಕೊಂಡ ವಿವಿಧ ಲೇಖನಗಳು ಮತ್ತು ಅನುಚ್ಛೇದದ ತುಣುಕುಗಳ ಸಂಚಯಿತ ರೂಪ. ಇದು ನಮ್ಮದೆಂದು ಹೇಳಿಕೊಳ್ಳಲು ನಿಚ್ಚಳವಾದ ಯಾವ ಹೆಗ್ಗಳಿಕೆಯೂ ಇಲ್ಲ. ನಮ್ಮ ರಾಷ್ಟ್ರ ಬದುಕಿನ ಧ್ಯೇಯವನ್ನಾಗಲಿ ಅಥವಾ ನಮ್ಮ ಬದುಕಿಗಿರುವ ಮಾರ್ಗದರ್ಶಿ ತತ್ತ್ವವನ್ನಾಗಲಿ ತೆರೆದು ತೋರುವ ಯಾವ ಮಾರ್ಗದರ್ಶಕ ಸಿದ್ಧಾಂತಗಳ ಒಂದು ಪದವಾದರೂ ಅದರಲ್ಲಿದೆಯೆ?
ವಾಸ್ತವ ಸಂಗತಿಯೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮøತಿ ಅಥವಾ ಮನುಸಂಹಿತೆ ಅಥವಾ ಮನುಧರ್ಮಶಾಸ್ತ್ರವಿರಬೇಕೆಂದು ಆರ್.ಎಸ್.ಎಸ್. ಅಪೇಕ್ಷಿಸಿತ್ತು. ಎಲ್ಲರೂ ತಿಳಿದಿರುವಂತೆ ಶೂದ್ರರು, ದಲಿತರು ಮತ್ತು ಮಹಿಳೆಯರ ಕುರಿತಂತೆ, ಅತ್ಯಂತ ಅವಹೇಳನಕಾರಿ ಮತ್ತು ಅಮಾನುಷ ಪ್ರಸ್ತಾಪಗಳ ಉಲ್ಲೇಖವಿರುವ ಮನುಸ್ಮøತಿ ಅವರ ಅಪೇಕ್ಷೆಯ ಸಂವಿಧಾನವಾಗಿತ್ತು. ಸಂಸದೀಯ ಸಭೆ, ಸಂವಿಧಾನ ರಚನೆ ಮತ್ತು ಮಂಡನೆಯ ಕಾರ್ಯವನ್ನು ಅಂತಿಮಗೊಳಿಸಿದಾಗ, ಆರ್.ಎಸ್.ಎಸ್ ತನ್ನ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿತು. ನವೆಂಬರ್ 30, 1949ರ ಆರ್ಗನೈಸರ್ ಪತ್ರಿಕೆಯ ಸಂಪಾದಕೀಯದಲ್ಲಿ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದೆ.
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಕ್ತನ ಭಾರತದಲ್ಲಿ ಆಗಿರಬಹುದಾದ ಒಂದು ಅನನ್ಯ ಸಂವಿಧಾನಾತ್ಮಕ ಬೆಳವಣಿಗೆಯ ವಿವರಗಳಾಗಲಿ, ಉಲ್ಲೇಖಗಳಾಗಲಿ ಲವಲೇಶವಿಲ್ಲ. ಸ್ಪಾರ್ಟ್ ದ ಲೈಕರ್ಗಸ್ (820 ಬಿ.ಸಿ) ಅಥವಾ ಪರ್ಷಿಯಾದ ಸೊಲೊನ್ (640 ಬಿ.ಸಿ) ಅವರುಗಳಿಗೂ ಪೂರ್ವದಲ್ಲೇ ಮನುಸ್ಮøತಿ ರಚಿತವಾಗಿತ್ತು. ಇಂದಿನವರೆಗೂ ಮನುಸ್ಮøತಿಯಲ್ಲಿ ಪ್ರತಿಪಾದಿತವಾಗಿರುವ ವಿಧಿ ನಿಬಂಧನೆಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿವೆ ಹಾಗೂ ಸ್ವಯಂಪ್ರೇರಿತ ನಿಷ್ಠೆ ಮತ್ತು ಅನುಸರಣೀಯ ಗುಣವನ್ನು ಪ್ರೇರೇಪಿಸಿದೆ. ಆದರೆ ಈ ಯಾವ ವಿಚಾರವು ನಮ್ಮ ಸಂವಿಧಾನದ ಪಂಡಿತೋತ್ತಮರಿಗೆ ಅರ್ಥವಾಗುವುದಿಲ್ಲ. ಹಾಗೆ ಅವರಿಗೆ ಮುಖ್ಯವೂ ಅಲ್ಲ”
ಸ್ವತಂತ್ರ ಭಾರತದಲ್ಲಿ ಮನುಧರ್ಮಶಾಸ್ತ್ರವನ್ನು ಅಂಗೀಕರಿಸಿ, ಅಧಿಕೃತವಾಗಿ ಘೋಷಿಸಬೇಕೆಂದು ಆರ್.ಎಸ್.ಎಸ್. ಒತ್ತಾಯಿಸುತ್ತಿರುವುದಕ್ಕೆ ನಿಜವಾದ ಕಾರಣವೆಂದರೆ, ತಮ್ಮ ಮಾರ್ಗದರ್ಶಿ, ತತ್ವಜಿಜ್ಞಾಸು ಮತ್ತು ವಿಚಾರ ಉದ್ದೀಪಕರಾಗಿರುವ ವಿ.ಡಿ.ಸಾವರ್ಕರ್ ಅವರನ್ನು ನಿಷ್ಠೆಯಿಂದ ಹಿಂಬಾಲಿಸುತ್ತಿರುವುದು. ಸಾವರ್ಕರರ ಮೇರೆಗೆ ;
“ನಮ್ಮ ಹಿಂದು ರಾಷ್ಟ್ರದ ಪವಿತ್ರ ಕೃತಿಗಳಾದ ವೇದಗಳ ಅನಂತರ ಅತ್ಯಂತ ಪೂಜ್ಯನೀಯ ಮತಧರ್ಮಶಾಸ್ತ್ರವೆಂದರೆ ‘ಮನುಸ್ಮøತಿ’ ಮಾತ್ರ. ಅಲ್ಲದೆ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ, ಸಂಪ್ರದಾಯ, ಚಿಂತನೆ ಮತ್ತು ಆಚರಣೆಯ ಮೂಲ ತಳಹದಿ ‘ಮನುಸ್ಮøತಿ’ಯಾಗಿದೆ. ಅಧ್ಯಾತ್ಮ ಮತ್ತು ದೈವಿಕತೆ ಕೇಂದ್ರಿತ ನಮ್ಮ ದೇಶ ಸಾಧಿಸಿರುವ ಮುನ್ನಡೆಯನ್ನು ಈ ಕೃತಿ ಸಂಕೇತರೂಪದಲ್ಲಿ ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದುಗಳು ತಮ್ಮ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಪಾಲಿಸುತ್ತಿರುವ ವಿಧಿನಿಯಮಗಳು ‘ಮನುಸ್ಮøತಿ’ ಯನ್ನು ಆಧರಿಸಿವೆ. ಇಂದು ಹಿಂದು ಮತೀಯರ ಕಾನೂನು ಎಂದರೆ ಅದು ‘ಮನುಸ್ಮøತಿ’ ಮಾತ್ರ
ಆರ್.ಎಸ್.ಎಸ್. ದೃಷ್ಟಿಯಲ್ಲಿ ಹಿಂದು ರಾಷ್ಟ್ರದ ಸಮಾನಾರ್ಥಕ ಪದವೆಂದರೆ ‘ಜಾತೀಯತೆ’:
ಆರ್.ಎಸ್.ಎಸ್. ಪ್ರಧಾನರ ಶ್ರದ್ಧೆ, ನಂಬಿಕೆಯಿರುವುದು ಮನುಸ್ಮøತಿಯಲ್ಲಿ. ಆದ್ದರಿಂದ ಸಹಜವಾಗಿಯೆ ಜಾತೀಯತೆಯನ್ನು ನಂಬುವ ಕಡೆಗೆ ಅವರನ್ನು ಕರೆದೊಯ್ಯಿತು. ಆರ್.ಎಸ್.ಎಸ್.ಗೆ ಜಾತೀಯತೆಯೇ ಹಿಂದು ಧರ್ಮದ ಮತ್ತು ಹಿಂದು ರಾಷ್ಟ್ರೀಯತೆಯ ಅಂತಃಸ್ಸಾರ. ಮನು ಮೇರೆಗೆ ಹಿಂದು ಧರ್ಮೀಯರು ಮತ್ತಾರೂ ಅಲ್ಲ, ಆದರೆ ;
“ಹಿಂದು ಧರ್ಮೀಯರು ವಿರಾಟ್ ಪುರುಷ ಸಂಭೂತರು, ಆ ದೈವೀಶಕ್ತಿಯ ಮಾನುಷಾವತಾರಿಗಳು, ‘ಹಿಂದು’ ಶಬ್ದದ ಬಳಕೆ ಮಾಡದಿದ್ದರೂ, ‘ಪುರುಷ ಸೂಕ್ತ’ ದಲ್ಲಿ ವರ್ಣಿತವಾಗಿರುವ ದೈವೀಶಕ್ತಿಯ ವಿವರಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ; ಸೂರ್ಯಚಂದ್ರರು ವಿರಾಟ್ ಪುರುಷನ ಎರಡು ಕಣ್ಣುಗಳು, ಅವನ ಹೊಕ್ಕಳು ಮೂಲದಿಂದಲೇ ತಾರೆಗಳು ಮತ್ತು ಗಗನ ಸೃಷ್ಟಿತವಾಗಿದೆ. ಹಾಗು ಅವನ ಶಿರವೇ ಬಾ ್ರಹ್ಮಣರು, ತೋಳುಗಳೇ ಕ್ಷತ್ರಿಯರು, ವೈಶ್ಯರು ಅವನೆರಡು ಊರುಗಳು ಮತ್ತು ಪಾದಗಳೇ ಶೂದ್ರರು. ಇಂಥ ಪುರಾಣ ರೂಪಿಕೆಯ ಅರ್ಥವೆಂದರೆ; ಚಾತುರ್ವಣ್ರ್ಯ ವ್ಯವಸ್ಥೆಯಿರುವ ಸಮುದಾಯವೇ ಹಿಂದು ಮತೀಯರು – ನಮ್ಮ ದೇವತೆಗಳು ಹಾಗು ವಿರಾಟ್ ಪುರುಷನ ಶ್ರೇಷ್ಠಾಂಗವಾದ ಶಿರದ ಉತ್ಕøಷ್ಟ ದರ್ಶನವೇ ನಮ್ಮ ‘ರಾಷ್ಟ್ರ’ ಪರಿಕಲ್ಪನೆಯ ಆಂತರ್ಯದ ತಿರುಳು. ಈ ಅಂತಃಸತ್ತ್ವ ನಮ್ಮ ಚಿಂತನಾಕ್ರಮವನ್ನು ವಿಸ್ತರಿಸಿದೆ ಹಾಗು ನಮ್ಮ ಸಾಂಸ್ಕøತಿಕ ಪರಂಪರೆಯ ವಿವಿಧ ಅನನ್ಯ ಪರಿಕಲ್ಪನೆಗಳ ಆವಿರ್ಭಾವಕ್ಕೆ ಕಾರಣವಾಗಿದೆ”.
ಆರ್.ಎಸ್.ಎಸ್. ಮತ್ತು ಹಿಂದುತ್ವದ ಸಂಘಟನೆಗಳು ಮನುಸಂಹಿತೆಯನ್ನು ಜಾರಿಗೊಳಿಸುವ ಮೂಲಕ ಯಾವ ಬಗೆಯ ನಾಗರಿಕತೆಯನ್ನು ಕಟ್ಟಲು ಹೊರಟಿದ್ದಾರೆ ಎಂಬುದನ್ನು ಕೂಲಂಕಷವಾಗಿ ತಿಳಿಯಬೇಕಾದರೆ, ಮನುತತ್ತ್ವ ಶೂದ್ರರು ಮತ್ತು ಮಹಿಳೆಯರನ್ನು ಕುರಿತಂತೆ ರೂಪಿಸಿರುವ ನ್ಯಾಯವಿಧಿಗಳತ್ತ ಒಮ್ಮೆ ಅವಲೋಕಿಸಬೇಕಾಗುತ್ತದೆ. ಅಮಾನವೀಯವೂ ಮತ್ತು ಭ್ರಷ್ಟವೂ ಆಗಿರುವ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇವುಗಳೇ ತಮ್ಮ ಅರ್ಥವನ್ನು ಸ್ವಯಂ ನಿರ್ವಚಿಸಿಕೊಳ್ಳುತ್ತವೆ.
ಪ್ರಜಾಪ್ರಭುತ್ವದ ವಿರುದ್ಧ :
ಪ್ರಜಾಪ್ರಭುತ್ವದ ತಾತ್ತ್ವಿಕತೆಗೆ ತದ್ವಿರುದ್ಧವಾದ ನಿರಂಕುಶ ಆಳ್ವಿಕೆಯ ಅಡಿಯಲ್ಲಿ ಭಾರತ ತನ್ನ ಆಡಳಿತ ನಡೆಸಬೇಕೆಂದು ಆರ್.ಎಸ್.ಎಸ್. ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದೆ. 1940 ರಂದು ಆರ್.ಎಸ್.ಎಸ್. ಕೇಂದ್ರಸ್ಥಾನವಾಗಿರುವ ನಾಗಪುರದ ರೇಷಮ್ ಭಾಗ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಆರ್‍ಎಸ್‍ಎಸ್‍ನ ಸುಮಾರು 1350 ಮಂದಿ ಉನ್ನತ ಸ್ತರದ ಸಂಘಟನೆಯ ಸ್ವಯಂಸೇವಕ ಪದವೃಂದವನ್ನುದ್ದೇಶಿಸಿ ಮಾತಾಡುತ್ತಾ ಗೋಲ್ವಾಲ್ಕರ್ ಮಹತ್ತರ ಹೇಳಿಕೆಯೊಂದನ್ನು ಘೋಷಿಸಿದರು ;
“ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತ ಎಂಬ ನಿಲುವಿನಿಂದ ಆರ್.ಎಸ್.ಎಸ್. ಸ್ಫೂರ್ತಿ ಪಡೆದಿದೆ. ಈ ಸ್ಫೂರ್ತಿ ಜ್ಯೋತಿಯೇ ನಮ್ಮ ಮಹಾನ್ ನೆಲದ ಮೂಲೆಮೂಲೆಯಲ್ಲೂ ಹಿಂದುತ್ವದ ದೀಪ ಹಚ್ಚಿ ದೇದಿಪ್ಯಮಾನಗೊಳಿಸುತ್ತಿದೆ”.
ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತವೆಂಬ ಈ ಘೋಷಣೆ, ಯುರೋಪಿನ ನಾಜಿ ಮತ್ತು ಉಗ್ರ ಬಲಪಂಥೀಯರಿಂದ ನೇರವಾಗಿ ಎರವಲು ಪಡೆದ, ಸ್ವಪಜ್ಞತೆಯಿರದ ಅನುಕರಣಾರ್ಥಕ ಘೋಷಣೆ. ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಹಿಂದು ಮಹಾಸಭಾದ ಮುಖಂಡರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೂ ಈ ಸಭೆಯಲ್ಲಿ ಉಪಸ್ಥಿತರಿದ್ದದ್ದು. ಇದೇ ಮುಖರ್ಜಿಯವರು, ವಿಭಜನೆ ಪೂರ್ವದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಹಿಂದು ಮಹಾಸಭಾ ಜೊತೆಗೂಡಿ 1942ರಲ್ಲಿ ರಚಿಸಿದ್ದ ಸಂಮಿಶ್ರ ಸರ್ಕಾರದಲಿ ್ಲ ಉಪಮುಖ್ಯಮಂತ್ರಿಯಾಗಿದ್ದವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...