Homeಕರ್ನಾಟಕಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

- Advertisement -
- Advertisement -

ದಸರಾ ಉದ್ಘಾಟನಾ ಭಾಷಣದಲ್ಲಿ “ಮಹಿಳೆ ಮುಟ್ಟಾದಾಗ ಆಫೀಸಿಗೆ ಹೋಗೋದು ಬೇರೆ ದೇವಸ್ಥಾನಕ್ಕೆ ಹೋಗೋದು ಬೇರೆ” ಎಂದು ಹೇಳುವ ಮೂಲಕ ಮಹಿಳೆಯರ ಸಹಜ ಮುಟ್ಟನ್ನು ಅವಮಾನಿಸಿದ್ದ ಎಸ್.ಎಲ್ ಭೈರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಹಿತಿ ಭೈರಪ್ಪನವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು ಆಯ್ದ ಕೆಲವು ಇಲ್ಲಿವೆ.

ಎಡಗಡೆ ಮುಖ್ಯಮಂತ್ರಿ ಯಡಿಯೂರಪ್ಪ, ಬಲಗಡೆ ಕೇಂದ್ರ ಸಚಿವ ಸದಾನಂದರನ್ನು ಕೂರಿಸಿಕೊಂಡಿದ್ದ ಬೈರಪ್ಪ ನಾಡಿನ ಬಗ್ಗೆ ಕಾಳಜಿ ಇರುವ ಮನುಷ್ಯನೇ ಆಗಿದ್ದರೆ, ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿಯ ಜನರ ಬದುಕಿನ ಬಗ್ಗೆ‌ ಮಾತನಾಡಬೇಕಿತ್ತು. ಅವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಬೇಕು ಎಂಬ ಸಲಹೆ ಕೊಡಬಹುದಿತ್ತು.

ಅಲ್ಲಿ ಕೂತು ಬೆಂಡೆತ್ತಬೇಕಾಗಿರುವುದು ಪ್ರವಾಹ ಪರಿಹಾರಕ್ಕೆಂದು ಚಿಕ್ಕಾಸೂ ಕೊಡದ ಕೇಂದ್ರ ಸರ್ಕಾರವನ್ನು. ವಿಚಾರವಾದಿಗಳು, ಮುಟ್ಟಾಗುವ ಮಹಿಳೆಯರ ಬಗ್ಗೆ ಮಾತಾಡಿದರೆ ಯಾರಿಗೆ ಏನು ಪ್ರಯೋಜನ?

“ನಾಡಹಬ್ಬ ಉದ್ಘಾಟಕರಾಗಿ ಯಾವ ವಿಷಯ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಬೈರಪ್ಪನವರಿಗೇನಾದರೂ, ಈ ಎಲ್ಲಾ ಘನಂದಾರಿ ಸಾಧನೆಗೆ ಜ್ಞಾನಪೀಠ ಕೊಟ್ಟರೆ ಅಲ್ಲಿಗೆ ಜ್ಞಾನಪೀಠದ ಮಾನ ಮೂರ್ಕಾಸಿಗೆ ಹರಾಜಾದಂತೆಯೇ ಸರಿ” ಎಂದು ಪತ್ರಕರ್ತೆ ಹೇಮಾವತಿ ವೆಂಕಟ್‌ರವರು ಕಿಡಿಕಾರಿದ್ದಾರೆ.

ಮುಟ್ಟು ಎಂಬ ಪ್ರಕೃತಿ ವಿಸ್ಮಯ ಪುರುಷರ ದೇಹದಲ್ಲಿ ಆಗಿರುತ್ತಿದ್ದರೆ, ಇಲ್ಲ ಶಿಶ್ನವೇ ತಿಂಗಳಿಗೆ ನಾಲ್ಕೈದು ದಿನಗಳ ಕಾಲ ರಕ್ತ ಕಾರುವಂತೆ ಇದ್ದಿದ್ದರೆ ಅದಕ್ಕೆಂದೇ ಹಬ್ಬ, ವೃತಗಳು ಹುಟ್ಟಿರುತ್ತಿದ್ದವು. ಹಾಗಾಗಿ ಭೈರಪ್ಪನಂಥವರ ವಿರೋಧ ಕೇವಲ ಮುಟ್ಟಿಗಲ್ಲ ಬದಲಾಗಿ ಅದು ಪುರುಷ ಪ್ರಧಾನ ಸಮಾಜ ಮಹಿಳಾ ವಿರೋಧಿ ಧೋರಣೆಗಳ ಒಂದು ಭಾಗವಷ್ಟೇ. ಒಂದಂತೂ ಸತ್ಯ. ಮುಟ್ಟು ಪುರುಷರ ದೇಹದಲ್ಲಾಗಿರುತ್ತಿದ್ದರೂ ಮನೆಯಿಂದ ಆಚೆ ಹೆಣ್ಮಕ್ಕಳೇ ಹೋಗಬೇಕಾಗಿತ್ತು. ಮುಟ್ಟು ಪವಿತ್ರ. ಮುಟ್ಟಾದ ಪುರುಷರು Holy of Holies Periodನಲ್ಲಿರುವಾಗ ಮುಟ್ಟಾಗದ ಅಪವಿತ್ರ ಮಹಿಳೆಯರು ಪುರುಷರಿಂದ ದೂರವಿರಬೇಕೆಂದು ಕಟ್ಟಳೆಗಳನ್ನು ಮಾಡಿ ಮಹಿಳೆಯರನ್ನೇ ಮನೆಯಿಂದ ಹೊರಗಿಡುತ್ತಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ನೀಚತನಕ್ಕೆ ಪರಿಧಿಗಳಿಲ್ಲ. ಎಂದು ಆಲ್‌ಮೀಡಿಯಾ ಗ್ಲಾಡ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಕರುಳಿನಲ್ಲಿ ಮಲವಿರುತ್ತದೆ. ಮೂತ್ರಾಶಯದಲ್ಲಿ ಮೂತ್ರ ಇರುತ್ತದೆ. ಅದನ್ನೆಲ್ಲ ಭರ್ತಿ ಇರಿಸಿಕೊಂಡು ದೇವಸ್ಥಾನಕ್ಕೆ ಹೋಗಬಹುದು. ಆದರೆ ಋತುಸ್ರಾವ ಅನುಭವಿಸುತ್ತಿರುವ ಹೆಣ್ಣುಮಗಳು ಮಾತ್ರ ದೇವಸ್ಥಾನ ಪ್ರವೇಶಿಸಕೂಡದು ಅಲ್ವಾ ಬೈರಪ್ಪನವರೇ?!
ಸಾಹಿತಿಯಾದವರಲ್ಲಿ ಜೀವಪರ ಸಂವೇದನೆ ಇರುತ್ತದೆ ಅಂದುಕೊಂಡಿದ್ದೆವು, ವಯಸ್ಸಾಗುತ್ತಿದ್ದಂತೆ ಬುದ್ಧಿ ಬೆಳೆಯುತ್ತದೆ ಅಂದುಕೊಂಡಿದ್ದೆವು! ತಪ್ಪು ನಮ್ಮದೇ…

ಒಬ್ಬ ಅತ್ಯಾಚಾರಿ ದೇವಸ್ಥಾನ ಪ್ರವೇಶಿಸಬಹುದು. ಕೊಲೆಗಡುಕ, ಕಳ್ಳ, ಭ್ರಷ್ಟ, ವಂಚಕ, ದರೋಡೆಕೋರ ದೇವಸ್ಥಾನ ಪ್ರವೇಶಿಸಬಹುದು. ಜಗತ್ತಿಗೆ ಜೀವ ಕೊಟ್ಟ ಹೆಣ್ಣುಮಗಳು ಮಾತ್ರ ಋತುಸ್ರಾವ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಬಾರದು!.
ವಾವ್! ಅದ್ಭುತ ವಾದ ಬೈರಪ್ನೋರೆ!-
ಎಂದು  ಶ್ರೀನಿವಾಸ ಕಾರ್ಕಳರವರು ಬರೆದಿದ್ದಾರೆ.

ಅದೇ ರೀತಿ ಶ್ರೀನಿವಾಸ ಕಾರ್ಕಳರವರು ಮುಟ್ಟಿನ ಬಗ್ಗೆ ಬರೆದಿದ್ದ ಜಾಗೃತಿ ಹಾಡು ಕೂಡ ವೈರಲ್ ಆಗಿದೆ.

ಮುಟ್ಟುಮುಟ್ಟೆಂದೇಕೆ ಕೀಳಾಗಿ ಕಾಣುವಿರಿ
ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು
ಮುಟ್ಟುಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ
ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು //

ಮುಟ್ಟು ಕಾಣದ ಹೆಣ್ಣು ಬಸಿರು ಹೊಂದುವುದಿಲ್ಲ
ತಾಯಿಯಾಗುವುದಿನ್ನು ಸಾಧ್ಯವೇನು?
ನಮ್ಮನ್ನು ಹೆತ್ತವಳು ಮುಟ್ಟಾಗದಿರುತಿದ್ರೆ
ಭೂಮಿಯಲಿ ನಾವು ಇರುತ್ತಿದ್ದೆವೇನು //

ಮುಟ್ಟುಸ್ರಾವಗಳೆಲ್ಲ ಪ್ರಕೃತಿಯ ಸಹಜ ಕ್ರಿಯೆ
ಬೆವರು ಬಾಧೆಗಳಂತೆ ಅಲ್ಲವೇನು?
ಮುಟ್ಟಾದ ಹೆಣ್ಣನ್ನು ದೂರ ಅಟ್ಟುವುದೇಕೆ
ಅವಳು ಮಾಡಿದ ಘೋರ ಪಾಪವೇನು //

ಜಗದ ಜೀವಿಗಳೆಲ್ಲ ದೈವ ಸೃಷ್ಟಿ ಆದರೆ
ಮುಟ್ಟು ಕೂಡಾ ಪವಿತ್ರ ಹೌದು ತಾನೇ?
ದೇವರದೇ ಸೃಷ್ಟಿಯು ಶುಭದ ಕಾರ್ಯಗಳಲ್ಲಿ
ವರ್ಜ್ಯ ಅನ್ನುವುದೆಲ್ಲ ತಪ್ಪು ತಾನೇ //

ಮುಟ್ಟಿನ ಕುರಿತಾಗಿ ಸತ್ಯ ಸಂಗತಿ ಅರಿತು
ಹೊಸ ದೃಷ್ಟಿಯನು ನಾವು ಹೊಂದಬೇಕು
ಕುರುಡು ನಂಬಿಕೆಗಳನು ಇಲ್ಲವಾಗಿಸಿ ನಾವು
ಮಾನವೀಯತೆಯಿಂದ ಬದುಕಬೇಕು //..

“ಮುಟ್ಟಾಗುವುದು ಅಪವಿತ್ರ ಅನ್ನೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಈ ಭೈರಪ್ಪನಿಗೆ ತನ್ನ ಮನೆಯಲ್ಲಿರುವ ಹೆಣ್ಮಕ್ಳು ನೆನಪಾಗುವುದೇ ಇಲ್ವಾ?” ಎಂದು ಮಹಾಲಿಂಗಪ್ಪ ಆಲಬಾಳರವರು ಪ್ರಶ್ನಿಸಿದ್ದಾರೆ.

“ಹೆಣ್ಣು ಮಕ್ಳ ಮುಟ್ಟಿನ ಸ್ರಾವ ಅವರ ಗರ್ಭಕೋಶದಲ್ಲಿ ಮಾತ್ರ ಇರುತ್ತೆ.
(ಕೆಲವು) ಗಂಡಸರಿಗೆ ಸದಾ ಕಾಲ ತಲೇಲೆ ಇರುತ್ತೆ. ಯಾರಪ್ಪಾ ಹೆಚ್ಚು ಮೈಲಿಗೆ ಈಗ?” ಎಂದು ಪ್ರೀತಿ ನಾಗರಾಜ್ ಪ್ರಶ್ನೆ ಹಾಕಿದ್ದಾರೆ..

“ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡವೆಂದು ತೊಲಗುವ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ?” ಎಂದು ನೀಲಾ ಕೆ ಗುಲಬರ್ಗಾ ರವರು ಬರೆದುಕೊಂಡಿದ್ದಾರೆ.

“ಭೈರಪ್ಪನವರೇ ನಮ್ಗೆ ‘ಕಾಯಕವೇ ಕೈಲಾಸ’
ಕೈಲಾಸದಂತ ಆಫೀಸ್ಗೆ ಮುಟ್ಟಾದಾಗ ನಾವು ಹೋಗೋದು ಬೇಡ.
ನಿಮ್ ಹೆಸರಲ್ಲಿ ತಿಂಗ್ಳಿಗೆ ಮೂರ್ ದಿನ ರಜೆ ಕೊಡಿಸ್ಬಿಡಿ ಪ್ಲೀಸ್” ಎಂದು ಚೈತ್ರ ಕೋಟುರುರವರು ಟ್ರೋಲ್ ಮಾಡಿದ್ದಾರೆ.

ತಕಳ್ರಪ್ಪಾ… ಮುಟ್ಟಲ್ಲೇ ಹುಟ್ಟಿದವರು ಮುಟ್ಟಿನ ಬಗ್ಗೆ ಮಾತಾಡುತ್ತಾರೆ! ಎಂದು ಕಾದಂಬಿನಿ ರಾವಿಯವರು ಕಿಚಾಯಿಸಿದ್ದಾರೆ.

ಹಿರಿಯ ಸಾಹಿತಿಯೊಬ್ಬರು ಬರೆದ ಈ ಹೇಳಿಕೆ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದನ್ನು ಕಾದಂಬಿನಿ ರಾವಿಯವರು ಮೊದಲು ಷೇರ್ ಮಾಡಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದ ಸಂದರ್ಭದಲ್ಲಿ ಸಮಾಜದಲಿ ಆರಥಿಕತೆ ಪಕವವಾಗಿರಲಿಲ ಎಂದು ಹೇಳಿದ ಭೈರಪ್ಪನವರೆ ನಿಮ್ಮ ಬುದ್ಧಿಗೆ ಸವಲಪ ಸಗಣಿ ಹಾಕಿಕೊಳ್ಳಿ. ಬಸವಣ್ಣನವರು ಆ ಇಬ್ಬರು ಗಂಡು ಹೆಣ್ಣು ಪೃಕೃತಿ ಸಹಜ ಆಕರ್ಷಣೆಗೊಂಡಿದರಿಂದ ಅವರಿಬ್ಬರಿಗೂ ಮುತಸದಿಯ ಜಾಗೃತೆ ವಹಿಸಿ ಆಗಿನ ಕಾಲದ ಸಮಾಜ ಹಾಕಿಕೊಂಡ ಜಾತಿಯತೆಯ ಸಾಮಾಜಿಕ ಕಟ್ಟಳೆಯಿಂದ ಇವರಿಬ್ಬರಿಗೂ ತೊಂದರೆಯಾಗಬಾರದೆಂಬ ಕಳಕಳಿಯಿಂದ ಇಬ್ಬರಿಗೂ ಸಾಂಕೇತಿಕವಾಗಿ ಲಿಂಗ ದೀಕ್ಷೆ ಕೊಟ್ಟು ಸತಿಪತಿ ಗಳಾಗಿ ಬಾಳುವಂತೆ ಮದುವೆ ಮಾಡಿಸಿ ಜಾತ್ಯತೀತದ ಆದರ್ಶ ವನ್ನು ಎತ್ತಿ ಹಿಡಿದರು. ವಸ್ತು ಸ್ಥಿತಿ ವಿಷಯದ ಅಜಾನಿಗಳಾದ ನೀವು ನಿಮ್ಮ ಗೊಮುಖ ವಾಘೃದ ಮುಖವಾಡ ಹಾಕಿ ಕೊಂಡು ಕೈಗೆ ಮೈಕ್ ಮತ್ತು ನಿಂತು ಕೊಳಲು ಪುಕ್ಕಟೆಯ ವೇದಿಕೆ ಸಿಕಿದರಿಂದ ನಾನು ಹೇಳುವೆನೊ ಜನ ಅದನ್ನು ಕೇಳುತ್ತಾರೆ ಎಂಬ ಅಹಂನಿಂದ ಬಸವಣ್ಣನವರ ಮಾಡಿಸಿದ ಮದುವೆಯನ್ನು ಆರಥಿಕತೆ ರೂಪಕ್ಕೆ ಹೋಗಿ ಜೊಡಿಸಿದಿರಲ ನಿಮ್ಮ ಅಪೃಬುದತೆಗೆ ಛೀ ಮಾರಿ ಹಾಕುತಿದೆನೆ.
    ಹಾಗಾದರೆ ಇವತಿಗೆ ಆರಥಿಕತೆ ಪಕವವಾಗಿದೆ ಎನುವುದಾದರೆ ಒಬ್ಬರಿಗೂಬಬರಿಗೂ ಯಾವ ಆಕರ್ಷಣೆ ಇಲ್ಲದೇ ಕೇವಲ ಆರಥಿಕ ಆಕರ್ಷಣೆ ಗೊಸಕರ ಮದುವೆ ಯಾಗಬೇಕಾ. ಛೀ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...