Homeಅಂಕಣಗಳುಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

ಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

- Advertisement -
- Advertisement -

| ಯಾಹೂ |

ನೋಡಿದ ಕೂಡಲೆ ಅಖಿಲ ಭಾರತ ಮಟ್ಟದ ಮುಠ್ಠಾಳನಂತೆ ಕಾಣುವ ಅಮಿತ್ ಶಾ ಎಂಬ ಭಾಷಾ ಬೃಹಸ್ಪತಿ ಹಿಂದಿ ಭಾಷೆಯನ್ನು ಇಂಡಿಯಾದ ಮೇಲೆ ಹೇರುವ ಮಾತನಾಡಿದ್ದಾನಲ್ಲಾ. ಯಾವ ಭಾಷೆಯೂ ಸರಿಯಾಗಿ ಬರದ ಈತನ ಹಿಂದಿ ಹೇರಿಕೆ ಮಾತಿಗೆ ಕರ್ನಾಟಕದ ಕನ್ನಡ ಸಂಘಗಳು ಜೇನುಗೂಡಿಗೆ ಕಲ್ಲು ಬೀರಿದಂತೆ ರ್ವಯ್ಯನೆ ಬೀದಿಗೆ ಬರುತ್ತವೆಂದು ನಿರೀಕ್ಷಿಸಿದ್ದ ಕನ್ನಡಿಗರಿಗೆ ಆಘಾತವಾಗಿದೆಯಂತಲ್ಲಾ. ಹಾಗಾದರೆ ಎಲ್ಲಿ ಹೋದವು? ಬೆಂಗಳೂರಿನ ಆದಾಯ ಹಂಚಿಕೊಳ್ಳುವಲ್ಲಿ ಹೊಡೆದಾಡಿ ಇಬ್ಬಾಗವಾದ ಬಣಗಳು ಅದ್ಯಾವಾಗ ಉಸಿರೆಳೆದವು ಎಂದು ಹುಡುಕಲಾಗಿ ಅವೆಲ್ಲಾ ಉಂಡ ಉಬ್ಬಸದಲ್ಲಿ ನರಳುತ್ತಿವೆಯೇ ಹೊರತು, ಉಸಿರೆಳೆದಿಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಈ ನಡುವೆ ಬಹುಭಾಷೆ ನಟ ಕಮಲ್‍ಹಾಸನ್ ಶಾ ಎಂಬ ಸುಲ್ತಾನನ ಕರೆಗೆ ಸೆಡ್ಡು ಹೊಡೆದಿರುವುದಲ್ಲದೆ ಮತ್ತೊಮ್ಮೆ ಇಂತಹ ಹೇಳಿಕೆ ಕೊಟ್ಟರೆ ಜಲ್ಲಿಕಲ್ಲು ಬೀರಬೇಕಾಗುತ್ತದೆಂದು ಎಚ್ಚರಿಕೆ ಕೊಟ್ಟಿದ್ದಾರಲ್ಲಾ. ಶಾ ಮಾತಿಗೆ ಹ್ವಟ್ಯಾಳ ನಾಗರಾಜ, ನಾರಾಯಣಗೌಡ, ಪ್ರವೀಣ ಶೆಟ್ಟಿ ತಕ್ಕ ಉತ್ತರ ಕೊಡುತ್ತಾರೆಂದು ಕಾದ ಮುಖ್ಯಮಂತ್ರಿ ಎಡೂರಪ್ಪನವರೆ ಮುಂದಾಗಿ ಕನ್ನಡಪರ ದನಿ ಎತ್ತಿ ಮಯೂರನಂತೆ ಘರ್ಜಿಸಿದ್ದಾರಲ್ಲಾ, ಥೂತ್ತೇರಿ….!

ಯಾರು ಏನೇ ಹೇಳಲಿ ಕನ್ನಡ ಭಾಷೆ ನಶಿಸುತ್ತಿದೆಯಂತಲ್ಲಾ. ಸಿಟಿಗಳಲ್ಲಿನ ನಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಅಕ್ಷರ ಮಾಯವಾಗಿದೆ. ಕರ್ನಾಟಕದ ರಸ್ತೆ ಬದಿಯ ಮೈಲಿ ಕಲ್ಲುಗಳಲ್ಲಿ ಕನ್ನಡ ಮಾಯವಾಗಿದೆ. ಹಳ್ಳಿಗಾಡಿನ ಹೊಟೇಲು ಕೂಡ ತಿಂಡಿ ಚೀಟಿಯನ್ನು ಇಂಗ್ಲಿಷ್‍ನಲ್ಲೇ ಮುದ್ರಿಸಿವೆ. ಬಸ್ಸುಗಳಲ್ಲೂ ಕೂಡ ಸೂಚನಾ ಫಲಕಗಳು ಇಂಗ್ಲಿಷ್‍ನಲ್ಲಿವೆ. ನಮ್ಮ ಅಕ್ಷರಗಳು ಕಣ್ಣಿಂದ ಮರೆಯಾದರೆ, ಮುಂದೆ ಅವನ್ನು ನಾವು ಗುರುತು ಹಿಡಿಯಲಾಗುವುದಿಲ್ಲ. ಇನ್ನ ಕಾನ್ವೆಂಟ್ ಮಕ್ಕಳು ಮನೆಯಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರೆ ತಂದೆ ತಾಯಿಗಳಿಗೆ ಎಲ್ಲಿಲ್ಲದ ಪುಲಕ. ನಾವು ಬರೆದ ಪುಸ್ತಕ ಲೇಖನವನ್ನ ನಮ್ಮ ಮನೆ ಮಕ್ಕಳೇ ಓದುತ್ತಿಲ್ಲ. ಅದಕ್ಕೆ ಸತ್ತ ಸಾಹಿತಿಯ ಮನೆಯವರು ಆ ಪುಸ್ತಕಗಳನ್ನ ಯಾರಾದರೂ ತೆಗೆದುಕೊಂಡು ಹೋಗಿ ಎಂದು ಬೇಡುತ್ತಿರುವುದು. ಹೀಗೆ ಕನ್ನಡದ ಜೊತೆ ಸಾಹಿತಿಗಳೂ ಕೊನೆಯುಸಿರೆಳೆಯುತ್ತಿರುವ ಸಮಯ ನೋಡಿಯೇ ಅಮಿತ್ ಶಾ ಹಾಗಂದಿರುವುದು. ಅವನ ಮಾತಿಗೆ ನಾರಾಯಣಗೌಡ ಏನು ಹೇಳುತ್ತಾನೆಂದು ಹುಡುಕಿದರೆ, ಆತ ಡಿಕೆಸಿ ಅರೆಸ್ಟಾಗಿರುವುದನ್ನ ಅರಗಿಸಿಕೊಳ್ಳಲಾರದೆ ಅಳುತ್ತಾ ಕೂತಿದ್ದಾನಂತಲ್ಲಾ, ಥೂತ್ತೇರಿ!!

ಅಳಿಯನ ಆತ್ಮಹತ್ಯೆ ಸುದ್ದಿ ಕೇಳಿದಾಗಲೂ ಸಾವಧಾನವಾಗಿ ಎದ್ದ ಎಸ್ಸೆಂ ಕೃಷ್ಣರು ಕನ್ನಡಿ ಮುಂದೆ ನಿಂತು ವಿಗ್ ಧರಿಸಿಕೊಂಡು ತಮ್ಮ ಸೊಗಸಿಗೆ ಚ್ಯುತಿ ಬಾರದಂತೆ ವೇಶ ಧರಿಸಿ ನಡೆದ ದುರಂತವನ್ನು ತಾಳ್ಮೆಯಿಂದ ನಿಭಾಯಿಸಿ, ಅಳುಬುರುಕರ ಮನಗೆದ್ದ ಕೃಷ್ಣ ಸ್ಮಾರ್ಟ್ ಸಿಟಿಗಳು ಹೇಗಿರಬೇಕೆಂದು ಮೋದಿಗೆ ಎರಡು ಪುಟದ ಪತ್ರ ಬರೆದಿದ್ದಾರಂತಲ್ಲಾ. ದುಃಖದಲ್ಲೂ ಸಿಟಿಯನ್ನು ಸೊಗಸಾಗಿ ನಿರ್ಮಿಸುವ ಕನಸು ಕಾಣುತ್ತಿರುವ ಕೃಷ್ಣರು ಮೋದಿಗೆ ಎರಡು ಪುಟದ ಪತ್ರ ಬರೆಯುವ ಬದಲು ಸಿದ್ಧಾರ್ಥನಿಗೆ ಒಂದು ಪುಟದ ಧೈರ್ಯದ ಸಾಲು ಬರೆಯಬಹುದಿತ್ತೆಂಬುದು ಮಂಡ್ಯದ ಮುಗ್ದರ ಸಲಹೆಯಾಗಿದೆಯಲ್ಲಾ

ಏನೆಂದರೆ, “ಸಿದ್ಧಾರ್ಥ ಆದ್ದದ್ದಾಯ್ತು. ನನ್ನ ಸಂಪತ್ತು ಈ ಮೋದಿಯ ನೋಟು ಬ್ಯಾನು, ಜಿಎಸ್‍ಟಿ ಮತ್ತು ಬೇಟೆ ನಾಯಿಗಳಂತಹ ಇನ್‍ಕಮ್ ಟ್ಯಾಕ್ಸ್ ಸಿಬ್ಬಂದಿಯಿಂದ ಮುಳುಗಿಹೋಯ್ತು. ಹೋಗಲಿ ಬಿಡು, ಅದೇನು ನಾನು ಮದ್ದೂರಿನ ಗದ್ದೆ ಹುತ್ತು ಸಂಪಾದಿಸಿದ್ದಲ್ಲ. ನೀನು ಎಲ್ಲವನ್ನು ಮಾರಿ ಸಾಲ ತೀರಿಸಿ ನಿಮ್ಮಪ್ಪನ ಎಸ್ಟೇಟ್ ಉಳಿಸಿಕೊಂಡು ಬದುಕು. ಈ ದೇಶದಲ್ಲಿ ನಿರ್ಗತಿಕರು ಭಿಕ್ಷುಕರು, ಕುಷ್ಟ ರೋಗಿಗಳೂ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನಿನಗೆ ಕಪ್ಪು ಹಣ ಕೊಟ್ಟವರೇ ಮಾಡಿಕೊಳ್ಳಲಿ. ನೀನು ಧೈರ್ಯವಾಗಿ ಬಾ, ಮಾತನಾಡೋಣ” ಎಂದು ಬರೆದಿದ್ದರೆ ಸಿದ್ಧಾರ್ಥ ಮರಳಿ ಬರುತ್ತಿದ್ದರಂತಲ್ಲಾ, ಥೂತ್ತೇರಿ!!

ಮನುಷ್ಯನಿಗೆ ವಯಸ್ಸಾದಂತೆ ಬುದ್ಧಿ ಮಾಗುತ್ತದೆ. ಮಾತಿನಲ್ಲಿ ತೂಕ ಬರುತ್ತದೆ. ಆದರೆ ಸಿದ್ದರಾಮಯ್ಯನ ಎದುರಾಳಿಯಾದ ಈಶ್ವರಪ್ಪನ ಅವತಾರ ನೋಡಿದರೆ ಕುರುಬರು ಹೋಗಲಿ, ಕರ್ನಾಟಕದ ಮಾನವಂತರ ಜೊತೆಗೆ ಸಾಬರೂ ಕೂಡ ಹೆದರುತ್ತಿದ್ದಾರಂತಲ್ಲಾ. ಈತನ ಮಾತು ನೋಡಿದರೆ ನಿಜಕ್ಕೂ ಈಶ್ವರಪ್ಪನೇ ಪಾಕಿಸ್ತಾನಕ್ಕೆ ಯೋಗ್ಯವಾದ ಪ್ರಜೆ. ಅಲ್ಲಿ ಯಾವ ಎಗ್ಗೂ ಇಲ್ಲದೆ ಮತಾಂಧತೆಯ ಮಾತನಾಡಬಹುದು. ಅನ್ಯ ಧರ್ಮೀಯರನ್ನ ಹೀಯಾಳಿಸಬಹುದು. ತನ್ನ ಮಾತಿನ ಪರಿಣಾಮ ಗ್ರಹಿಸಿ ವೈದ್ಯರಲ್ಲಿಗೆ ಹೋಗುವುದರ ಬದಲು ತಾನು ಕೆಲಸ ಮಾಡುವ ಪಾರ್ಟಿ ಆಫೀಸಿಗೆ ಹೋಗಬಹುದು. ಆದ್ದರಿಂದ ಈಶ್ವರಪ್ಪ ಪಾಕೀಸ್ತಾನಕ್ಕೆ ಹೋಗಿ ನೆಲೆಸಲು ಬಹುಯೋಗ್ಯವಾದ ಪ್ರಜೆ ಎಂದು ಇಸ್ಮಾಯಿಲ್ ಖಾನ್ ಹೇಳುತ್ತಿದ್ದಾರಂತಲ್ಲಾ. ಶಿವಮೊಗ್ಗದ ದುರಂತ ನೋಡಿ, ಅಲ್ಲಿ ಈಗ ಪ್ರಖ್ಯಾತ ಮನೋವೈದ್ಯರಿಲ್ಲ. ಅಶೋಕ್ ಪೈ ಇದ್ದಿದ್ದರೆ ಈಶ್ವರಪ್ಪನ ಮೆದುಳು ಮತ್ತು ನಾಲಿಗೆ ನಡುವೆ ಒಂದು ನಿಷ್‍ತಂತು ಅಂಗವನ್ನು ಅಳವಡಿಸಿ ಮಾತಿಗೆ ಮಿತಿಯಿರುವಂತೆ, ತೂಕ ಬರುವಂತೆ ಮಾಡಬಹುದಿತ್ತು. ಆದರೆ ಎಲ್ಲವೂ ಕೈಮೀರಿ ಹೋಗಿದೆ. ಇವತ್ತು ಮುಸ್ಲಿಮರ ಮೇಲೆ ಕೆರಳಿರುವ ಈಶ್ವರಿ, ಮುಂದೆ ದಲಿತರು, ಅಲೆಮಾರಿಗಳು ಮತ್ತೂ ತಿರುಗಿಬಿದ್ದು ಸಾದ ಲಿಂಗಾಯಿತರ ಮೇಲೆ ಎಗರಬಹುದು. ಒಟ್ಟಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆಯಂತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...