- Advertisement -
ಅಘಫಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಹಿಡಿದದ್ದನ್ನು ಭಾರತದ ಕೆಲವು ಮುಸ್ಲಿಮರು ಸಂಭ್ರಮಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ನಟ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಾಸೀರುದ್ದೀನ್ ಶಾ ಆತಂಕ ವ್ಯಕ್ತಪಡಿಸಿದ್ದಾರೆ.
- Advertisement -
ವಿಡಿಯೊ ಸಂದೇಶ ನೀಡಿರುವ ಅವರು, ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಿರುವುದನ್ನು ಕಂಡು ಇಡೀ ಜಗತ್ತೇ ಎಚ್ಚರ ವಹಿಸಿರುವಾಗ, ಅನಾಗರಿಕತೆಯನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರೂ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಧಾರ್ಮಿಕತೆಯನ್ನುಸುಧಾರಿಸಿಕೊಂಡು, ಆಧುನಿಕತೆಯತ್ತ ಹೊರಳಬೇಕೆ ಅಥವಾ ಹಳೆಯ ಅನಾಗರೀಕತೆಯೇ ಇರಬೇಕಾ?” ಎಂಬ ಪ್ರಶ್ನೆಯನ್ನು ತಾಲಿಬಾನ್ ಅಧಿಕಾರವನ್ನು ಖುಷಿ ಪಡುವವರು ಕೇಳಿಕೊಳ್ಳಲಿ ಎಂದಿದ್ದಾರೆ.
Very well said Nasir sb. It needed to be said. https://t.co/7HCwDSVDAJ
— S lrfan Habib (@irfhabib) September 1, 2021
ಭಾರತದ ಇಸ್ಲಾಂಗೂ ಜಗತ್ತಿನ ಇತರೆಡೆ ಇರುವ ಇಸ್ಲಾಂಗೂ ಇರುವ ವ್ಯತ್ಯಾಸವನ್ನು ಅವರು ಪ್ರಸ್ತಾಪಿಸಿದ್ದು, “ಜಗತ್ತಿನ ಇತರೆಡೆ ಇರುವ ಇಸ್ಲಾಗಿಂತ ಭಾರತದಲ್ಲಿನ ಇಸ್ಲಾಂ ತೀರಾ ಭಿನ್ನ” ಎಂದಿದ್ದಾರೆ. “
ಇದನ್ನೂ ಓದಿ: ಕೋಮುದ್ವೇಷ ಬಿತ್ತುವ ವರದಿಗಳಿಂದ ದೇಶಕ್ಕೆ ಕೆಟ್ಟ ಹೆಸರು: ಸುಪ್ರೀಂ ಆತಂಕ