Homeಅಂತರಾಷ್ಟ್ರೀಯಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮುದ್ ಫ್ಲೋಟಿಲ್ಲಾ ತಂಡದ ಮೇಲೆ ದೌರ್ಜನ್ಯ: ಇಸ್ರೇಲ್ ವಿರುದ್ದ ಗಂಭೀರ ಆರೋಪ

ಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮುದ್ ಫ್ಲೋಟಿಲ್ಲಾ ತಂಡದ ಮೇಲೆ ದೌರ್ಜನ್ಯ: ಇಸ್ರೇಲ್ ವಿರುದ್ದ ಗಂಭೀರ ಆರೋಪ

- Advertisement -
- Advertisement -

‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಮೂಲಕ ಗಾಝಾಗೆ ಮಾನವೀಯ ನೆರವು ತಲುಪಿಸಲು ಪ್ರಯತ್ನಿಸಿದ ಸುಮಾರು 137 ಹೋರಾಟಗಾರರನ್ನು ಇಸ್ರೇಲ್‌ ಬಂಧಿಸಿತ್ತು. ಶನಿವಾರ (ಅ.4) ಅವರೆಲ್ಲರನ್ನೂ ಟರ್ಕಿಗೆ ಗಡಿಪಾರು ಮಾಡಲಾಗಿದೆ.

ಟರ್ಕಿ ತಲುಪಿದ ಹೋರಾಟಗಾರರ ಪೈಕಿ ಇಬ್ಬರು, ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರನ್ನು ಬಂಧನದ ಸಮಯದಲ್ಲಿ ಇಸ್ರೇಲ್ ಸೇನೆ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.

ಹೊಸ ಆರೋಪಗಳ ಬಗ್ಗೆ ಇಸ್ರೇಲಿ ನಾಯಕರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ವಿದೇಶಾಂಗ ಸಚಿವಾಲಯವು ಬಂಧಿತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು’ ಎಂದಿದೆ.

ಶನಿವಾರ ಇಸ್ತಾಂಬುಲ್ ವಿಮಾನ ನಿಲ್ದಾಣದ ತಲುಪಿದ ಹೋರಾಟಗಾರರಲ್ಲಿ 36 ಟರ್ಕಿಶ್ ಪ್ರಜೆಗಳು, ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಅಲ್ಜೀರಿಯಾ, ಮೊರಾಕೊ, ಇಟಲಿ, ಕುವೈತ್, ಲಿಬಿಯಾ, ಮಲೇಷ್ಯಾ, ಮಾರಿಟಾನಿಯಾ, ಸ್ವಿಟ್ಜರ್ಲೆಂಡ್, ಟುನೀಶಿಯಾ ಮತ್ತು ಜೋರ್ಡಾನ್ ನಾಗರಿಕರು ಸೇರಿದ್ದಾರೆ ಎಂದು ಟರ್ಕಿಶ್ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಗ್ರೇಟಾ ಥನ್‌ಬರ್ಗ್ ಅವರನ್ನು ‘ಭಯಾನಕವಾಗಿ ನಡೆಸಿಕೊಂಡರು’- ಹೋರಾಟಗಾರರ ಆರೋಪ

ಗ್ರೇಟಾ ಥನ್‌ಬರ್ಗ್ ಅವರನ್ನು ಇಸ್ರೇಲ್ ಸೇನೆ ಕೆಟ್ಟದ್ದಾಗಿ ನಡೆಸಿಕೊಂಡಿದೆ. ಆಕೆಯ ಕೂದಳು ಹಿಡಿದು ಎಳೆದಾಡಿದ್ದಾರೆ. ಇಸ್ರೇಲ್ ಧ್ವಜ ಧರಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೋರಾಟಗಾರರಾದ ಮಲೇಷ್ಯಾದ ಪ್ರಜೆ ಹಜ್ವಾನಿ ಹೆಲ್ಮಿ ಮತ್ತು ಅಮೆರಿಕನ್ ಪ್ರಜೆ ವಿಂಡ್‌ಫೀಲ್ಡ್ ಬೀವರ್ ಶನಿವಾರ ಇಸ್ತಾಂಬುಲ್ ವಿಮಾನ ನಿಲ್ದಾಣ ತಲುಪಿದಾಗ ಆರೋಪಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್ ನಮ್ಮನ್ನು ಬಂಧಿಸಿದ್ದ ವೇಳೆ ಪ್ರಾಣಿಗಳಂತೆ ನಡೆಸಿಕೊಂಡಿದೆ. ಶುದ್ದ ಆಹಾರ, ನೀರು ಒದಗಿಸಿಲ್ಲ. ನಮ್ಮಲ್ಲಿದ್ದ ಔಷಧ ಮತ್ತು ಇತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು 28 ವರ್ಷದ ಹೆಲ್ಮಿ ಹೇಳಿದ್ದಾರೆ.

ಇಸ್ರೇಲ್‌ನ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಬಂದಾಗ ತನ್ನನ್ನು ಕೋಣೆಗೆ ತಳ್ಳಲಾಯಿತು. ಗ್ರೇಟಾ ಥನ್‌ಬರ್ಗ್ ಅವರನ್ನು ಭಯಾನಕವಾಗಿ ಮತ್ತು ಪ್ರೊಪಗಂಡವಾಗಿ ನಡೆಸಿಕೊಂಡರು ಎಂದು 43 ವರ್ಷದ ಬೀವರ್ ಆರೋಪಿಸಿದ್ದಾರೆ.

ಗಾಝಾಗೆ ನೆರವು ಹೊತ್ತು ಸಾಗಿದ್ದ ಸುಮಾರು ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ತಂಡದ 40 ಬೋಟ್‌ಗಳನ್ನು ತಡೆದು, ಅವುಗಳಲ್ಲಿ ಇದ್ದ ಸುಮಾರು 450ಕ್ಕೂ ಹೆಚ್ಚು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿರುವುದಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ.

ಬಂಧಿತ ಎಲ್ಲಾ ಮಾನವ ಹಕ್ಕು ಕಾರ್ಯಕರ್ತರು ಸುರಕ್ಷಿತ ಮತ್ತು ಉತ್ತಮ ಆರೋಗ್ಯದಲ್ಲಿದ್ದಾರೆ. ಇನ್ನುಳಿದವರನ್ನು ಸಾಧ್ಯವಾದಷ್ಟು ಬೇಗ ಗಡಿಪಾರು ಮಾಡಲಾಗುವುದು ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದೆ.

ಪ್ರತ್ಯೇಕ ಪೋಸ್ಟ್‌ನಲ್ಲಿ, ಕೆಲವು ಫ್ಲೋಟಿಲ್ಲಾ ಸದಸ್ಯರು ದಾಖಲೆಗಳನ್ನು ಒದಗಿಸದೆ ಗಡಿಪಾರು ಪ್ರಕ್ರಿಯೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ಆರೋಪವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.

ದೌರ್ಜನ್ಯದ ಆರೋಪಗಳನ್ನು ತಳ್ಳಿ ಹಾಕಿದ ಇಸ್ರೇಲ್

ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ 26 ಇಟಾಲಿಯನ್ನರಿದ್ದರು, ಇನ್ನೂ 15 ಜನರನ್ನು ಇಸ್ರೇಲ್‌ನಲ್ಲಿ ಬಂಧಿಸಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಇತರ ರಾಷ್ಟ್ರಗಳ ಹೋರಾಟಗಾರರೊಂದಿಗೆ ಅವರನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದಾರೆ.

ಉಳಿದ ನಮ್ಮ ಪ್ರಜೆಗಳನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಮತ್ತೊಮ್ಮೆ ಟೆಲ್ ಅವೀವ್‌ನಲ್ಲಿರುವ ಇಟಾಲಿಯನ್ ರಾಯಭಾರ ಕಚೇರಿಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ತಜಾನಿ ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗ್ಲೋಬಲ್ ಫ್ಲೋಟಿಲ್ಲಾದಲ್ಲಿದ್ದ ಇಟಾಲಿಯನ್ನರ ಮೊದಲ ಗುಂಪು (ನಾಲ್ವರು ಸಂಸದರು) ಶುಕ್ರವಾರ ರೋಮ್‌ ತಲುಪಿದ್ದಾರೆ ಎಂದು ರಾಯಿಟರ್ಸ್ ತಿಳಿಸಿದೆ.

“ಕಾನೂನುಬದ್ಧವಾಗಿ ವರ್ತಿಸಿದವರು ಬೋಟ್‌ಗಳಲ್ಲಿ ಇದ್ದವರು, ಕಾನೂನುಬಾಹಿರವಾಗಿ ವರ್ತಿಸಿದವರು ಗಾಝಾಗೆ ಮಾನವೀಯ ನೆರವು ತಲುಪದಂತೆ ತಡೆದವರು” ಎಂದು ಫ್ಲೋಟಿಲ್ಲಾದ ಭಾಗವಾಗಿದ್ದ ಇಟಾಲಿಯನ್ ಸಂಸದರಲ್ಲಿ ಒಬ್ಬರಾದ ಆರ್ಟುರೊ ಸ್ಕಾಟೊ ರೋಮ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ನಮ್ಮನ್ನು ಕ್ರೂರವಾಗಿ ತಡೆಹಿಡಿಯಲಾಯಿತು … ಕ್ರೂರವಾಗಿ ಒತ್ತೆಯಾಳಾಗಿ ಇರಿಸಲಾಯಿತು” ಎಂದು ಇಟಲಿಯ ಮತ್ತೊಬ್ಬ ಸಂಸದೆ ಬೆನೆಡೆಟ್ಟಾ ಸ್ಕುಡೆರಿ ಆರೋಪಿಸಿದ್ದಾರೆ.

ಫ್ಲೋಟಿಲ್ಲಾ ಸದಸ್ಯರಿಗೆ ಕಾನೂನು ನೆರವು ನೀಡುವ ಇಸ್ರೇಲಿ ಗುಂಪಿನ ಅದಾಲಾ ಪ್ರಕಾರ, ಕೆಲವು ಬಂಧಿತರಿಗೆ ವಕೀಲರು, ನೀರು, ಔಷಧಿಗಳು ಮತ್ತು ಶೌಚಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ.

ಕೆಲವು ಹೋರಾಟಗಾರರು ‘ಫ್ರೀ ಪ್ಯಾಲೆಸ್ಟೈನ್’ ಎಂದು ಘೋಷಣೆ ಕೂಗಿದ ನಂತರ, ಅವರ ಕೈಗಳನ್ನು ಜಿಪ್-ಟೈ (ಕೇಬಲ್ ಟೈ) ಬಳಸಿ ಕಟ್ಟಿ, ಕನಿಷ್ಠ ಐದು ಗಂಟೆಗಳ ಕಾಲ ಮಂಡಿಯೂರಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ಆದಾಲ ವಿವರಿಸಿದ್ದಾರೆ.

ದಾಳಿ ನಿಲ್ಲಿಸುವಂತೆ ಟ್ರಂಪ್ ಕರೆ ಬೆನ್ನಲ್ಲೇ ಗಾಜಾದಲ್ಲಿ ಇಸ್ರೇಲ್ ದಾಳಿ; 6 ಜನರು ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...