Homeಕರ್ನಾಟಕವಿಜಯಾ ಬ್ಯಾಂಕ್ ವಿಲೀನ - ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

ವಿಜಯಾ ಬ್ಯಾಂಕ್ ವಿಲೀನ – ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

- Advertisement -
- Advertisement -

| ನಹುಷ |

ಏಪ್ರಿಲ್ 1ರಂದು ವಿಲೀನದ ಹೆಸರಿನಲ್ಲಿ ಅಜಮಾಸು ಒಂಬತ್ತು ದಶಕಗಳ ಇತಿಹಾಸವಿದ್ದ ಕನ್ನಡ ನೆಲದ ವಿಜಯ ಬ್ಯಾಂಕ್‌ನ ಉಸಿರು ನಿಲ್ಲಿಸಲಾಗಿದೆ. ಮೇಲ್ನೋಟಕ್ಕೆ ಇದು ವ್ಯವಹಾರವನ್ನು ಸರಳಗೊಳಿಸುವ ಪ್ರಕ್ರಿಯೆಯಂತೆ ಕಂಡುಬಂದರೂ ಆಂತರ್ಯದಲ್ಲಿ ಅಪಾಯಕಾರಿ ಕಾರ್ಪೊರೇಟ್ ಅಜೆಂಡಾವನ್ನು ಹೊಂದಿದೆ. ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಳಗೆ ವಿಲೀನ ಮಾಡುವುದನ್ನು ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರದ ಕ್ರಮದ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಬ್ಯಾಂಕ್‌ಗಳು ಉದ್ಯಮಿಗಳಿಗೆ ಕೋಟಿಗಟ್ಟಲೆ ಸಾಲ ಕೊಟ್ಟು, ಅವರೆಲ್ಲ ಅನಾಯಾಸವಾಗಿ ದೇಶ ಬಿಟ್ಟು ಪರಾರಿಯಾಗಿ ಸಾಲ ಕೊಟ್ಟ ಬ್ಯಾಂಕುಗಳನ್ನೇ ದಿವಾಳಿಯಂಚಿಗೆ ತಳ್ಳುತ್ತಿರುವ ಈ ಹಂತದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಈ ಕ್ರಮ ಬೇರೆಯದೇ ಹಕೀಕತ್ತುಗಳನ್ನು ಒಳಗೊಂಡಿದೆ. ಏನು ಆ ಹಕೀಕತ್ತುಗಳು, ಜನರ ದುಡ್ಡು ಹೇಗೆಲ್ಲ ಯಾಮಾರುವ ಸಾಧ್ಯತೆ ಇದೆ ಅನ್ನೋದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ರಿಸರ್ವ್ ಬ್ಯಾಂಕಿನ ಮೀಸಲು ನಿಧಿ ಬಳಸಿಕೊಳ್ಳಲು ಹೆಣಗಾಡಿ ಸೋತ ಕೇಂದ್ರ ಸರ್ಕಾರ ಈಗ ಬ್ಯಾಂಕ್ ವಿಲೀನದ ವಿಕೃತ ಆಟ ಆರಂಭಿಸಿದೆ! ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಬ್ಯಾಂಕ್‌ನಲ್ಲಿ ಸೇರಿಸುವ ಮೋದಿ ತಂಡದ ಮಸಲತ್ತಿನಲ್ಲಿ ಇಡೀ ಬ್ಯಾಂಕಿಂಗ್ ಕ್ಷೇತ್ರವನ್ನೇ ಖಾಸಗಿಯವರಿಗೆ ವಹಿಸುವ ರಹಸ್ಯ ಕಾರ್ಯಸೂಚಿ ಅಡಗಿದೆ. ವಿಲೀನದ ನಂತರ ಸಹಜವಾಗೇ ಹಾನಿಗೊಳಗಾಗುವ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರವಿದು!

ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣದ ದಿಟ್ಟ ನಿರ್ಧಾರದಿಂದ ಬ್ಯಾಂಕುಗಳು ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡಿದ್ದರು. ಆದರೆ ಮೋದಿಯವರು ಮತ್ತೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ ವಂಚಕ ವರ್ತಕರಿಗಷ್ಟೇ ಸೀಮಿತಗೊಳಿಸುತ್ತಿದ್ದಾರಾ ಎಂಬ ಅನುಮಾನ ಇತ್ತೀಚಿನ ಅವರ ನಡೆಗಳಿಂದ ಮೂಡುತ್ತದೆ. ಕೆಲವು ತಿಂಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು-ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪನೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೀನ ಮಾಡಲಾಗಿತ್ತು. ಈಗ ಕರಾವಳಿ ಜನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿಜಯ ಬ್ಯಾಂಕನ್ನು ಗುಜರಾತಿ ಬನಿಯಾಗಳ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನ ಮಾಡಲಾಗಿದೆ. ಮಹಾರಾಷ್ಟ್ರದ ದೇನಾ ಬ್ಯಾಂಕ್ ಸಹ ಈ ವಿಲೀನದಲ್ಲಿ ಸೇರಿದೆ. ಮೊದಲು ಕರಾವಳಿಯ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳನ್ನೆಲ್ಲ ಸೇರಿಸಿ ಒಂದೇ ಬ್ಯಾಂಕ್ ಮಾಡಲಾಗುತ್ತದೆಂಬ ಮಾತು ಕೇಳಿಬಂದಿತ್ತು. ಆದರೆ ಲಾಭದ ವಿಜಯಾ ಬ್ಯಾಂಕನ್ನು ಮಾತ್ರ ನಷ್ಟದ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನದ ಕರಾಮತ್ತು ನಡೆದಿದೆ.

ಸುಂದರ ರಾಮ ಶೆಟ್ಟಿ

ವಿಜಯ ಬ್ಯಾಂಕ್ ಅಂದರೆ, ಅದು ಕರ್ನಾಟಕ-ಕರಾವಳಿಯ ತುಳುವರ ಅಸ್ಮಿತೆಯ ಆಸ್ತಿ; ಸ್ಥಳೀಯ ಬಂಟ ಸಮುದಾಯದ ಆತ್ಮಾಭಿಮಾನದ ಸಂಕೇತ. ಈ ಸಮುದಾಯದ ಶ್ರಮ-ಸಾಹಸದ ಫಲವಾಗಿ ವಿಜಯ ಬ್ಯಾಂಕ್ ಲಾಭದಾಯಕ ಆರ್ಥಿಕ ಆಡಳಿತದ ಬರೋಬ್ಬರಿ 2,129 ಶಾಖೆಗಳ ಬೃಹತ್ ಪ್ರತಿಷ್ಠಿತ ಉದ್ಯಮವಾಗಿ ದೇಶಾದ್ಯಂತ ಕಂಗೊಳಿಸುತ್ತಿತ್ತು! 23 ಅಕ್ಟೋಬರ್ 1931ರಲ್ಲಿ ಎ.ಬಿ.ಶೆಟ್ಟಿ (ಅತ್ತಾವರ ಬಾಲಕೃಷ್ಣ ಶೆಟ್ಟಿ) ಪ್ರಗತಿಪರ ರೈತರ ಸಹಕಾರದಿಂದ ಬಂಟ್ಸ್ ಹಾಸ್ಟೆಲ್ ಬಳಿಯ ಪುಟ್ಟ ಕೊಠಡಿಯಲ್ಲಿ ಬ್ಯಾಂಕ್ ಹುಟ್ಟುಹಾಕಿದ್ದರು. ವಿಜಯ ದಶಮಿ ದಿನದಂದು ಬ್ಯಾಂಕ್ ಸ್ಥಾಪನೆಯಾಗಿದ್ದರಿಂದ ಅದಕ್ಕೆ “ವಿಜಯ ಬ್ಯಾಂಕ್” ಎಂದು ನಾಮಕರಣ ಮಾಡಲಾಗಿತ್ತು. ತುಳುನಾಡಿನ ದುರ್ಬಲ ರೈತರು, ಅಮಾಯಕ ಮಂದಿಯ ಆರ್ಥಿಕ ಅನುಕೂಲದ ಉದ್ದೇಶದಿಂದ ಜನ್ಮತಳೆದಿದ್ದ ವಿಜಯ ಬ್ಯಾಂಕಿಗೆ ಆಧುನಿಕ ಸ್ಪರ್ಶ ಕೊಟ್ಟು ದೇಶಾದ್ಯಂತ ಹಬ್ಬಿಸಿದ್ದು ಮುಲ್ಕಿ ಸುಂದರ ರಾಮಶೆಟ್ಟಿ. ಆ ಕಾಲದ ಮಂಗಳೂರಿನ ಪ್ರತಿಷ್ಠಿತ ಬ್ಯಾಂಕ್ ಅನ್ನಿಸಿದ್ದ ಜಯಲಕ್ಷ್ಮೀ ಬ್ಯಾಂಕ್ ಸೇರಿದಂತೆ ಇನ್ನಿತರ ಹದಿನಾಲ್ಕು ಬ್ಯಾಂಕ್‌ಗಳು ವಿಜಯ ಬ್ಯಾಂಕ್‌ನಲ್ಲಿ ವಿಲೀನವಾಗಿದ್ದವು.

ಎ.ಬಿ ಶೆಟ್ಟಿ

ಪ್ರಗತಿಪರ ರೈತರ ಪರಿಶ್ರಮದಿಂದ ಪ್ರಗತಿಯತ್ತ ಸಾಗಿದ ವಿಜಯ ಬ್ಯಾಂಕ್‌ನ 27 ಶಾಖೆಗಳು 1975ರಲ್ಲಿ ಒಂದೇ ದಿನ ತೆರೆಯಲ್ಪಟ್ಟಿದ್ದು ಬ್ಯಾಂಕಿಂಗ್ ವಲಯದಲ್ಲೊಂದು ಅಚ್ಚಳಿಯದ ಸಾಧನೆ! ಇವತ್ತು ವಿಜಯ ಬ್ಯಾಂಕಿನ 583 ಶಾಖೆಗಳು ಕರ್ನಾಟಕದಲ್ಲಿದ್ದರೆ, ಉಳಿದದ್ದು ದೇಶದ ವಿವಿಧೆಡೆ ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಿದ್ದವು. ಗ್ರಾಮಿಣ ಪ್ರದೇಶದಲ್ಲೇ ಶೇ.50ರಷ್ಟು ಶಾಖೆಗಳಿರುವುದು ವಿಜಯ ಬ್ಯಾಂಕಿನ ಹೆಚ್ಚುಗಾರಿಕೆ. ಸಿಂಡಿಕೇಟ್ ಬ್ಯಾಂಕಿಗೆ ಹೇಗೆ ಕೊಂಕಣಿಗರ ಬ್ಯಾಂಕ್ ಎಂದೇ ಛಾಪು ಬಿದ್ದಿದೆಯೋ ಹಾಗೆ ವಿಜಯಾ ಬ್ಯಾಂಕ್ ಅಂದರೆ, ಬಂಟರ ಬ್ಯಾಂಕ್ ಎಂದೇ ಹೆಸರುವಾಸಿ. ಈ ಎರಡು ಬ್ಯಾಂಕುಗಳಿಂದ ಎಲ್ಲ ಸಮುದಾಯದವರಿಗೆ ಪ್ರಯೋಜನವಾಗಿದೆ.

ಬಂಟರು ದೇಶಕ್ಕೆ ಕೊಟ್ಟ ಕೊಡುಗೆಯಲ್ಲಿ ವಿಜಯಾ ಬ್ಯಾಂಕ್ ಎದ್ದು ಕಾಣುವಂತದ್ದು. ರಾಜ್ಯದ ಹಿಡಿತದಲ್ಲಿರುವ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ನಿರಂತರ ಲಾಭದ ಬ್ಯಾಂಕ್ ಎಂದೇ ಗುರುತಿಸಿಕೊಂಡಿದೆ. ಇಂಥ ಹೆಗ್ಗಳಿಕೆ ಸಾಧನೆಯ ಜನಾನುರಾಗಿ ಬ್ಯಾಂಕನ್ನು ನಾಮಾವಶೇಷ ಮಾಡಲು ಮೋದಿಯ ಕೇಂದ್ರ ಸರ್ಕಾರ ಸಂಚು ಹೂಡಿರುವುದಾದರು ಯಾಕೆ? ಈ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಪಕವಾದ ಉತ್ತರವೇ ಇಲ್ಲ.

ಗುಜರಾತಿ ಲಾಬಿ ಅವಸಾನದ ಅಂಚಲ್ಲಿರುವ ತಮ್ಮ ಬ್ಯಾಂಕ್ ಆಫ್ ಬರೋಡ ಎಂಬ ಬರಡು ಆರ್ಥಿಕ ಅಡ್ಡೆಯನ್ನು ಬಚಾವು ಮಾಡಲು ವಿಜಯಾ ಬ್ಯಾಂಕಿನ ಬಲಿ ಕೇಳುತ್ತಿದೆ!! ಮುಳುಗುತ್ತಿರುವ ಮಹಾರಾಷ್ಟ್ರದ ದೇನಾ ಬ್ಯಾಂಕನ್ನು ನೆಪಕ್ಕಷ್ಟೇ ಈ ವಿಲೀನದಲ್ಲಿ ಸೇರಿಸಲಾಗಿದೆ. ಮೂರು ಬ್ಯಾಂಕನ್ನು ಸ್ಯಾಂಡ್‌ವಿಚ್ ಮಾಡಿ ಪಾಪರ್ ಹಾದಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಹೆಸರನ್ನು ಏಕೀಕೃತ ಸಂಸ್ಥೆಗೆ ಇಡಲಾಗಿದೆ.

ವಿಲೀನದ ವಿರುದ್ಧ ಬ್ಯಾಂಕ್ ನೌಕರರ ಪ್ರತಿಭಟನೆ

ಇದೊಂದು ಗುಜರಾತಿ ಬನಿಯಾ ಗ್ಯಾಂಗಿನ ವಂಚನೆ-ಮೋಸದ ವಿಲೀನ! ದೊಡ್ಡ-ದೊಡ್ಡ ವರ್ತಕರು, ಉದ್ಯಮಿಗಳು ಸಾಲ ಮರುಪಾವತಿ ಮಾಡದೆ ಉಂಡೆನಾಮ ತಿಕ್ಕಿದ್ದರಿಂದ ಬರೋಡ ಬ್ಯಾಂಕು ಬಾಗಿಲು ಎಳೆದುಕೊಳ್ಳುವಂತಾಗಿದೆ. ಗುಜರಾತಿನ ದೋಖಾ ದಂಧೆದಾರರು ಹೇಗೆ ಬ್ಯಾಂಕುಗಳನ್ನು ಯೋಜನಾಬದ್ಧವಾಗಿ ದೋಚಿದ್ದಾರೆಂಬುದಕ್ಕೆ ಬರೋಡಾ ಬ್ಯಾಂಕು ಭಾನ್ಗಡಿ ಜೀವಂತ ನಿದರ್ಶನ! ಇಂಥ ಟೈಟಾನಿಕ್ ಹಡಗನ್ನು ಎತ್ತುವ ಹಠಕ್ಕೆ ಬಿದ್ದಿರುವ ಕೇಂದ್ರ ಹಣಕಾಸು ಇಲಾಖೆಗೆ ಕಂಡದ್ದು ಕರ್ನಾಟಕ ಮೂಲದ ಸಮೃದ್ಧ ವಿಜಯಾ ಬ್ಯಾಂಕ್. 2017-18ರ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಇಪ್ಪತ್ತೊಂದು ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲವೂ ಹಾನಿಯಲ್ಲಿ ಏದುಸಿರು ಬಿಡುತ್ತಿದ್ದವು. ವಿಜಯಾ ಬ್ಯಾಂಕ್ ಭರ್ಜರಿ 727 ಕೋಟಿ ರೂ. ಲಾಭದ ಸಾಧನೆ ಮಾಡಿತ್ತು. ಇದು ಗುಜರಾತಿ ಗ್ಯಾಂಗಿನ ಕಣ್ಣು ಕುಕ್ಕಿತು.

ಗುಜರಾತಿನ ಬರೋಡಾ ಬ್ಯಾಂಕ್ ಮತ್ತು ಮಹಾರಾಷ್ಟçದ ದೇನಾ ಬ್ಯಾಂಕ್ ಪೈಪೋಟಿಗೆ ಬಿದ್ದಂತೆ ನಷ್ಟ ಮಾಡಿಕೊಂಡಿವೆ. 2017-18ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬರೋಡ ಬ್ಯಾಂಕ್‌ಗೆ 3.102.34 ಕೋಟಿ ಹಾನಿಯಾಗಿದೆ. ಅತ್ತ ದೇನಾ ಬ್ಯಾಂಕ್‌ಗೆ 2016-17ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 416.70 ಕೋಟಿ ರೂಪಾಯಿ ಟೋಪಿ ಬಿದ್ದಿದೆ! ಹಿಂದಿನ ವರ್ಷ ಇದೇ ಅವಧಿಯಲ್ಲಿ ಆದದ್ದಕಿಂತ ದುಪ್ಪಟ್ಟು ನಷ್ಟವಾಯಿತೆಂದು ದೇನಾ ಬ್ಯಾಂಕ್ ಹೇಳಿಕೆ ನೀಡಿದೆ. ಕೆಟ್ಟ ಸಾಲಗಳಿಗಾಗಿನ ಬರೋಡ ಬ್ಯಾಂಕ್ ಮೀಸಲು ನಿಧಿ 2016-17ನೇ ಸಾಲಿನಲ್ಲಿ 2.425.07 ಕೋಟಿ; 2017-18ನೇ ವರ್ಷದಲ್ಲಿ ಕೆಟ್ಟ ಸಾಲಗಳ ಮಿಸಲು ನಿಧಿ 7.052.53 ಕೋಟಿಯಷ್ಟು ಏರಿಕೆಯಾಗಿದೆ. ಹಾಗಂತ ಬರೋಡ ಬ್ಯಾಂಕ್ ವರದಿಯೇ ಹೇಳುತ್ತಿದೆ.

ಬೇಕಾಬಿಟ್ಟಿ ಸಾಲ ಕೊಟ್ಟಿರೋ ಬರೋಡ ಬ್ಯಾಂಕ್ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಎಡವಿದೆ. ಅಸಮರ್ಥ ಕಾರ್ಯವೈಖರಿಯ ಈ ಗುಜರಾತಿ ಬ್ಯಾಂಕ್ ಬದುಕಿಸಲು ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಫೈನಾನ್ಸಿಯಲ್ ಟೆಕ್‌ಟೀಸ್ ತನ್ನದೆಂಬಂತೆ ಬಿಂಬಿಸುತ್ತಿದೆ. ದುರ್ಬಲ ಬ್ಯಾಂಕ್ ಉಳಿಸಲು ಸದೃಢ ಬ್ಯಾಂಕನ್ನು ನುಂಗಿ ಹಾಕೋದು ಯಾವ ಸೀಮೆ ನ್ಯಾಯ? ದುರ್ಬಲ ಬ್ಯಾಂಕ್-ಬಲಿಷ್ಟ ಬ್ಯಾಂಕ್ ಒಂದಾಗಿಸುವುದಕ್ಕೆ ಆಕ್ಷೇಪ ಬರಲಾರದು. ಆದರೆ ಯಾವ ಪ್ರಮಾದ ಮಾಡದ ನ್ಯೂನತೆ ಇಲ್ಲದ ಬ್ಯಾಂಕಿನ ಹೆಸರೇಕೆ ಅಳಿಸಲಾಗುತ್ತಿದೆ? ಸದ್ರಿ ವಿಲೀನ ಪ್ರಕ್ರಿಯೆಯಲ್ಲಿ ಶಕ್ತಿಶಾಲಿ, ಕಳಂಕ ರಹಿತ ಆರ್ಥಿಕ ವಹಿವಾಟಿನ ಸಂಸ್ಥೆ ವಿಜಯ ಬ್ಯಾಂಕ್ ನ್ಯಾಯಯುತವಾಗಿ ದಿವಾಳಿಗೊಂಡ ದೇನಾ ಮತ್ತು ಬರೋಡ ಬ್ಯಾಂಕ್‌ನ ಬೋರ್ಡ್ ತೆಗೆದು ವಿಜಯ ಬ್ಯಾಂಕ್ ಎಂದು ಹೆಸರಿಡಬೇಕಿತ್ತು. ಇದು ನೈಸರ್ಗಿಕ ನ್ಯಾಯತತ್ವವಷ್ಟೇ ಅಲ್ಲ ನೈತಿಕ ನಡೆಯೂ ಹೌದು. ಇಂಥ ನೀತಿ ಮೋದಿ ಮತ್ತವರ ಸಲಹೆಗಾರ ಪಂಡಿತರಿಗೆ ಅದ್ಹೇಗೆ ಅರ್ಥವಾದೀತು?

ಮೋದಿಯವರ ರಾಜ್ಯ ಗುಜರಾತಿ ಬ್ಯಾಂಕ್‌ನ ಹೆಸರನ್ನು ನಿರ್ಲಜ್ಜವಾಗಿ ಮೆರೆಸಲು ವಿಜಯ ಬ್ಯಾಂಕಿನ ಅಸ್ತಿತ್ವವನ್ನೇ ತುಳಿದು ಹಾಕಿದೆ. ಕರ್ನಾಟಕದ ಮಣ್ಣಿನ ಮಕ್ಕಳು ಕಟ್ಟಿ ಬೆಳೆಸಿದ ಬ್ಯಾಂಕನ್ನು ಗುಜರಾತಿಗಳು ಅಪಹರಿಸಿದ್ದಾರೆ. ಈಗ ವಿಜಯ ಬ್ಯಾಂಕ್ ಅನ್ನು ಆಪೋಷನ ತೆಗೆದುಕೊಂಡಂತೆ ನಂತರದ ದಿನಗಳಲ್ಲಿ ಬ್ಯಾಂಕುಗಳ ತವರು ಕರಾವಳಿಯ ಕೆನರಾ, ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳನ್ನು ಒಂದೊಂದಾಗಿ ಉತ್ತರ ಭಾರತದ ಮುಳುಗುವ ಬ್ಯಾಂಕುಗಳ ಉಳಿಸಲು ಬೇಟೆ ಆಡಿದರೆ ಅಚ್ಚರಿಯಿಲ್ಲ.

ಈ ವಿಲೀನದ ವಿಕೃತಿ ಹಲವು ತಿಂಗಳಿಂದ ನಡೆಯುತ್ತಲೇ ಇತ್ತು. ವಿಜಯಾ ಬ್ಯಾಂಕಿನ ಉದ್ಯೋಗಿಗಳು ಹಾಗೂ ನಿವೃತ್ತ ನೌಕರರು ವಿಲೀನ ಬೇಡವೆಂದು ಪ್ರತಿಭಟನೆ ಮಾಡಿದ್ದರು. ಪ್ರತಿರೋಧದ ಮೂಲಕ ಕೇಂದ್ರ ಸರ್ಕಾರದ ಪ್ರಭೃತಿಗಳ ಕಣ್ಣುತೆರೆಸಲು ಪ್ರಯತ್ನಿಸಿದ್ದರು. ಆದರೆ ಇದ್ಯಾವುದನ್ನು ಆಳುವ ವರ್ಗ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಏಕಪಕ್ಷೀಯವಾಗಿ ಕೇಂದ್ರ ಸಚಿವ ಸಂಪುಟ ವಿಲೀನಕ್ಕೆ ತಥಾಸ್ತು ಎಂದಿದೆ! ಇಷ್ಟಾದರೂ ಕೇಂದ್ರದಲ್ಲಿ ಮಂತ್ರಿಯಾಗಿರುವ ಕರಾವಳಿಯ ಸದಾನಂದಗೌಡ, ಅನಂತ್ಕುಮಾರ ಹೆಗಡೆ, ಸಂಸದ ನಳೀನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮೊದಲಾದವರು ತಮ್ಮದೇ ಸರ್ಕಾರದ ಮುಂದೆ ಕನ್ನಡ ನೆಲದ ಬ್ಯಾಂಕು ಉಳಿಸಲು ಪ್ರಯತ್ನ ನಡೆಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...