Homeಕರ್ನಾಟಕವಿಜಯಾ ಬ್ಯಾಂಕ್ ವಿಲೀನ - ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

ವಿಜಯಾ ಬ್ಯಾಂಕ್ ವಿಲೀನ – ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

- Advertisement -
- Advertisement -

| ನಹುಷ |

ಏಪ್ರಿಲ್ 1ರಂದು ವಿಲೀನದ ಹೆಸರಿನಲ್ಲಿ ಅಜಮಾಸು ಒಂಬತ್ತು ದಶಕಗಳ ಇತಿಹಾಸವಿದ್ದ ಕನ್ನಡ ನೆಲದ ವಿಜಯ ಬ್ಯಾಂಕ್‌ನ ಉಸಿರು ನಿಲ್ಲಿಸಲಾಗಿದೆ. ಮೇಲ್ನೋಟಕ್ಕೆ ಇದು ವ್ಯವಹಾರವನ್ನು ಸರಳಗೊಳಿಸುವ ಪ್ರಕ್ರಿಯೆಯಂತೆ ಕಂಡುಬಂದರೂ ಆಂತರ್ಯದಲ್ಲಿ ಅಪಾಯಕಾರಿ ಕಾರ್ಪೊರೇಟ್ ಅಜೆಂಡಾವನ್ನು ಹೊಂದಿದೆ. ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಳಗೆ ವಿಲೀನ ಮಾಡುವುದನ್ನು ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರದ ಕ್ರಮದ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಬ್ಯಾಂಕ್‌ಗಳು ಉದ್ಯಮಿಗಳಿಗೆ ಕೋಟಿಗಟ್ಟಲೆ ಸಾಲ ಕೊಟ್ಟು, ಅವರೆಲ್ಲ ಅನಾಯಾಸವಾಗಿ ದೇಶ ಬಿಟ್ಟು ಪರಾರಿಯಾಗಿ ಸಾಲ ಕೊಟ್ಟ ಬ್ಯಾಂಕುಗಳನ್ನೇ ದಿವಾಳಿಯಂಚಿಗೆ ತಳ್ಳುತ್ತಿರುವ ಈ ಹಂತದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಈ ಕ್ರಮ ಬೇರೆಯದೇ ಹಕೀಕತ್ತುಗಳನ್ನು ಒಳಗೊಂಡಿದೆ. ಏನು ಆ ಹಕೀಕತ್ತುಗಳು, ಜನರ ದುಡ್ಡು ಹೇಗೆಲ್ಲ ಯಾಮಾರುವ ಸಾಧ್ಯತೆ ಇದೆ ಅನ್ನೋದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ರಿಸರ್ವ್ ಬ್ಯಾಂಕಿನ ಮೀಸಲು ನಿಧಿ ಬಳಸಿಕೊಳ್ಳಲು ಹೆಣಗಾಡಿ ಸೋತ ಕೇಂದ್ರ ಸರ್ಕಾರ ಈಗ ಬ್ಯಾಂಕ್ ವಿಲೀನದ ವಿಕೃತ ಆಟ ಆರಂಭಿಸಿದೆ! ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಬ್ಯಾಂಕ್‌ನಲ್ಲಿ ಸೇರಿಸುವ ಮೋದಿ ತಂಡದ ಮಸಲತ್ತಿನಲ್ಲಿ ಇಡೀ ಬ್ಯಾಂಕಿಂಗ್ ಕ್ಷೇತ್ರವನ್ನೇ ಖಾಸಗಿಯವರಿಗೆ ವಹಿಸುವ ರಹಸ್ಯ ಕಾರ್ಯಸೂಚಿ ಅಡಗಿದೆ. ವಿಲೀನದ ನಂತರ ಸಹಜವಾಗೇ ಹಾನಿಗೊಳಗಾಗುವ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರವಿದು!

ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣದ ದಿಟ್ಟ ನಿರ್ಧಾರದಿಂದ ಬ್ಯಾಂಕುಗಳು ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡಿದ್ದರು. ಆದರೆ ಮೋದಿಯವರು ಮತ್ತೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ ವಂಚಕ ವರ್ತಕರಿಗಷ್ಟೇ ಸೀಮಿತಗೊಳಿಸುತ್ತಿದ್ದಾರಾ ಎಂಬ ಅನುಮಾನ ಇತ್ತೀಚಿನ ಅವರ ನಡೆಗಳಿಂದ ಮೂಡುತ್ತದೆ. ಕೆಲವು ತಿಂಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು-ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪನೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೀನ ಮಾಡಲಾಗಿತ್ತು. ಈಗ ಕರಾವಳಿ ಜನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿಜಯ ಬ್ಯಾಂಕನ್ನು ಗುಜರಾತಿ ಬನಿಯಾಗಳ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನ ಮಾಡಲಾಗಿದೆ. ಮಹಾರಾಷ್ಟ್ರದ ದೇನಾ ಬ್ಯಾಂಕ್ ಸಹ ಈ ವಿಲೀನದಲ್ಲಿ ಸೇರಿದೆ. ಮೊದಲು ಕರಾವಳಿಯ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳನ್ನೆಲ್ಲ ಸೇರಿಸಿ ಒಂದೇ ಬ್ಯಾಂಕ್ ಮಾಡಲಾಗುತ್ತದೆಂಬ ಮಾತು ಕೇಳಿಬಂದಿತ್ತು. ಆದರೆ ಲಾಭದ ವಿಜಯಾ ಬ್ಯಾಂಕನ್ನು ಮಾತ್ರ ನಷ್ಟದ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನದ ಕರಾಮತ್ತು ನಡೆದಿದೆ.

ಸುಂದರ ರಾಮ ಶೆಟ್ಟಿ

ವಿಜಯ ಬ್ಯಾಂಕ್ ಅಂದರೆ, ಅದು ಕರ್ನಾಟಕ-ಕರಾವಳಿಯ ತುಳುವರ ಅಸ್ಮಿತೆಯ ಆಸ್ತಿ; ಸ್ಥಳೀಯ ಬಂಟ ಸಮುದಾಯದ ಆತ್ಮಾಭಿಮಾನದ ಸಂಕೇತ. ಈ ಸಮುದಾಯದ ಶ್ರಮ-ಸಾಹಸದ ಫಲವಾಗಿ ವಿಜಯ ಬ್ಯಾಂಕ್ ಲಾಭದಾಯಕ ಆರ್ಥಿಕ ಆಡಳಿತದ ಬರೋಬ್ಬರಿ 2,129 ಶಾಖೆಗಳ ಬೃಹತ್ ಪ್ರತಿಷ್ಠಿತ ಉದ್ಯಮವಾಗಿ ದೇಶಾದ್ಯಂತ ಕಂಗೊಳಿಸುತ್ತಿತ್ತು! 23 ಅಕ್ಟೋಬರ್ 1931ರಲ್ಲಿ ಎ.ಬಿ.ಶೆಟ್ಟಿ (ಅತ್ತಾವರ ಬಾಲಕೃಷ್ಣ ಶೆಟ್ಟಿ) ಪ್ರಗತಿಪರ ರೈತರ ಸಹಕಾರದಿಂದ ಬಂಟ್ಸ್ ಹಾಸ್ಟೆಲ್ ಬಳಿಯ ಪುಟ್ಟ ಕೊಠಡಿಯಲ್ಲಿ ಬ್ಯಾಂಕ್ ಹುಟ್ಟುಹಾಕಿದ್ದರು. ವಿಜಯ ದಶಮಿ ದಿನದಂದು ಬ್ಯಾಂಕ್ ಸ್ಥಾಪನೆಯಾಗಿದ್ದರಿಂದ ಅದಕ್ಕೆ “ವಿಜಯ ಬ್ಯಾಂಕ್” ಎಂದು ನಾಮಕರಣ ಮಾಡಲಾಗಿತ್ತು. ತುಳುನಾಡಿನ ದುರ್ಬಲ ರೈತರು, ಅಮಾಯಕ ಮಂದಿಯ ಆರ್ಥಿಕ ಅನುಕೂಲದ ಉದ್ದೇಶದಿಂದ ಜನ್ಮತಳೆದಿದ್ದ ವಿಜಯ ಬ್ಯಾಂಕಿಗೆ ಆಧುನಿಕ ಸ್ಪರ್ಶ ಕೊಟ್ಟು ದೇಶಾದ್ಯಂತ ಹಬ್ಬಿಸಿದ್ದು ಮುಲ್ಕಿ ಸುಂದರ ರಾಮಶೆಟ್ಟಿ. ಆ ಕಾಲದ ಮಂಗಳೂರಿನ ಪ್ರತಿಷ್ಠಿತ ಬ್ಯಾಂಕ್ ಅನ್ನಿಸಿದ್ದ ಜಯಲಕ್ಷ್ಮೀ ಬ್ಯಾಂಕ್ ಸೇರಿದಂತೆ ಇನ್ನಿತರ ಹದಿನಾಲ್ಕು ಬ್ಯಾಂಕ್‌ಗಳು ವಿಜಯ ಬ್ಯಾಂಕ್‌ನಲ್ಲಿ ವಿಲೀನವಾಗಿದ್ದವು.

ಎ.ಬಿ ಶೆಟ್ಟಿ

ಪ್ರಗತಿಪರ ರೈತರ ಪರಿಶ್ರಮದಿಂದ ಪ್ರಗತಿಯತ್ತ ಸಾಗಿದ ವಿಜಯ ಬ್ಯಾಂಕ್‌ನ 27 ಶಾಖೆಗಳು 1975ರಲ್ಲಿ ಒಂದೇ ದಿನ ತೆರೆಯಲ್ಪಟ್ಟಿದ್ದು ಬ್ಯಾಂಕಿಂಗ್ ವಲಯದಲ್ಲೊಂದು ಅಚ್ಚಳಿಯದ ಸಾಧನೆ! ಇವತ್ತು ವಿಜಯ ಬ್ಯಾಂಕಿನ 583 ಶಾಖೆಗಳು ಕರ್ನಾಟಕದಲ್ಲಿದ್ದರೆ, ಉಳಿದದ್ದು ದೇಶದ ವಿವಿಧೆಡೆ ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಿದ್ದವು. ಗ್ರಾಮಿಣ ಪ್ರದೇಶದಲ್ಲೇ ಶೇ.50ರಷ್ಟು ಶಾಖೆಗಳಿರುವುದು ವಿಜಯ ಬ್ಯಾಂಕಿನ ಹೆಚ್ಚುಗಾರಿಕೆ. ಸಿಂಡಿಕೇಟ್ ಬ್ಯಾಂಕಿಗೆ ಹೇಗೆ ಕೊಂಕಣಿಗರ ಬ್ಯಾಂಕ್ ಎಂದೇ ಛಾಪು ಬಿದ್ದಿದೆಯೋ ಹಾಗೆ ವಿಜಯಾ ಬ್ಯಾಂಕ್ ಅಂದರೆ, ಬಂಟರ ಬ್ಯಾಂಕ್ ಎಂದೇ ಹೆಸರುವಾಸಿ. ಈ ಎರಡು ಬ್ಯಾಂಕುಗಳಿಂದ ಎಲ್ಲ ಸಮುದಾಯದವರಿಗೆ ಪ್ರಯೋಜನವಾಗಿದೆ.

ಬಂಟರು ದೇಶಕ್ಕೆ ಕೊಟ್ಟ ಕೊಡುಗೆಯಲ್ಲಿ ವಿಜಯಾ ಬ್ಯಾಂಕ್ ಎದ್ದು ಕಾಣುವಂತದ್ದು. ರಾಜ್ಯದ ಹಿಡಿತದಲ್ಲಿರುವ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ನಿರಂತರ ಲಾಭದ ಬ್ಯಾಂಕ್ ಎಂದೇ ಗುರುತಿಸಿಕೊಂಡಿದೆ. ಇಂಥ ಹೆಗ್ಗಳಿಕೆ ಸಾಧನೆಯ ಜನಾನುರಾಗಿ ಬ್ಯಾಂಕನ್ನು ನಾಮಾವಶೇಷ ಮಾಡಲು ಮೋದಿಯ ಕೇಂದ್ರ ಸರ್ಕಾರ ಸಂಚು ಹೂಡಿರುವುದಾದರು ಯಾಕೆ? ಈ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಪಕವಾದ ಉತ್ತರವೇ ಇಲ್ಲ.

ಗುಜರಾತಿ ಲಾಬಿ ಅವಸಾನದ ಅಂಚಲ್ಲಿರುವ ತಮ್ಮ ಬ್ಯಾಂಕ್ ಆಫ್ ಬರೋಡ ಎಂಬ ಬರಡು ಆರ್ಥಿಕ ಅಡ್ಡೆಯನ್ನು ಬಚಾವು ಮಾಡಲು ವಿಜಯಾ ಬ್ಯಾಂಕಿನ ಬಲಿ ಕೇಳುತ್ತಿದೆ!! ಮುಳುಗುತ್ತಿರುವ ಮಹಾರಾಷ್ಟ್ರದ ದೇನಾ ಬ್ಯಾಂಕನ್ನು ನೆಪಕ್ಕಷ್ಟೇ ಈ ವಿಲೀನದಲ್ಲಿ ಸೇರಿಸಲಾಗಿದೆ. ಮೂರು ಬ್ಯಾಂಕನ್ನು ಸ್ಯಾಂಡ್‌ವಿಚ್ ಮಾಡಿ ಪಾಪರ್ ಹಾದಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಹೆಸರನ್ನು ಏಕೀಕೃತ ಸಂಸ್ಥೆಗೆ ಇಡಲಾಗಿದೆ.

ವಿಲೀನದ ವಿರುದ್ಧ ಬ್ಯಾಂಕ್ ನೌಕರರ ಪ್ರತಿಭಟನೆ

ಇದೊಂದು ಗುಜರಾತಿ ಬನಿಯಾ ಗ್ಯಾಂಗಿನ ವಂಚನೆ-ಮೋಸದ ವಿಲೀನ! ದೊಡ್ಡ-ದೊಡ್ಡ ವರ್ತಕರು, ಉದ್ಯಮಿಗಳು ಸಾಲ ಮರುಪಾವತಿ ಮಾಡದೆ ಉಂಡೆನಾಮ ತಿಕ್ಕಿದ್ದರಿಂದ ಬರೋಡ ಬ್ಯಾಂಕು ಬಾಗಿಲು ಎಳೆದುಕೊಳ್ಳುವಂತಾಗಿದೆ. ಗುಜರಾತಿನ ದೋಖಾ ದಂಧೆದಾರರು ಹೇಗೆ ಬ್ಯಾಂಕುಗಳನ್ನು ಯೋಜನಾಬದ್ಧವಾಗಿ ದೋಚಿದ್ದಾರೆಂಬುದಕ್ಕೆ ಬರೋಡಾ ಬ್ಯಾಂಕು ಭಾನ್ಗಡಿ ಜೀವಂತ ನಿದರ್ಶನ! ಇಂಥ ಟೈಟಾನಿಕ್ ಹಡಗನ್ನು ಎತ್ತುವ ಹಠಕ್ಕೆ ಬಿದ್ದಿರುವ ಕೇಂದ್ರ ಹಣಕಾಸು ಇಲಾಖೆಗೆ ಕಂಡದ್ದು ಕರ್ನಾಟಕ ಮೂಲದ ಸಮೃದ್ಧ ವಿಜಯಾ ಬ್ಯಾಂಕ್. 2017-18ರ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಇಪ್ಪತ್ತೊಂದು ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲವೂ ಹಾನಿಯಲ್ಲಿ ಏದುಸಿರು ಬಿಡುತ್ತಿದ್ದವು. ವಿಜಯಾ ಬ್ಯಾಂಕ್ ಭರ್ಜರಿ 727 ಕೋಟಿ ರೂ. ಲಾಭದ ಸಾಧನೆ ಮಾಡಿತ್ತು. ಇದು ಗುಜರಾತಿ ಗ್ಯಾಂಗಿನ ಕಣ್ಣು ಕುಕ್ಕಿತು.

ಗುಜರಾತಿನ ಬರೋಡಾ ಬ್ಯಾಂಕ್ ಮತ್ತು ಮಹಾರಾಷ್ಟçದ ದೇನಾ ಬ್ಯಾಂಕ್ ಪೈಪೋಟಿಗೆ ಬಿದ್ದಂತೆ ನಷ್ಟ ಮಾಡಿಕೊಂಡಿವೆ. 2017-18ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬರೋಡ ಬ್ಯಾಂಕ್‌ಗೆ 3.102.34 ಕೋಟಿ ಹಾನಿಯಾಗಿದೆ. ಅತ್ತ ದೇನಾ ಬ್ಯಾಂಕ್‌ಗೆ 2016-17ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 416.70 ಕೋಟಿ ರೂಪಾಯಿ ಟೋಪಿ ಬಿದ್ದಿದೆ! ಹಿಂದಿನ ವರ್ಷ ಇದೇ ಅವಧಿಯಲ್ಲಿ ಆದದ್ದಕಿಂತ ದುಪ್ಪಟ್ಟು ನಷ್ಟವಾಯಿತೆಂದು ದೇನಾ ಬ್ಯಾಂಕ್ ಹೇಳಿಕೆ ನೀಡಿದೆ. ಕೆಟ್ಟ ಸಾಲಗಳಿಗಾಗಿನ ಬರೋಡ ಬ್ಯಾಂಕ್ ಮೀಸಲು ನಿಧಿ 2016-17ನೇ ಸಾಲಿನಲ್ಲಿ 2.425.07 ಕೋಟಿ; 2017-18ನೇ ವರ್ಷದಲ್ಲಿ ಕೆಟ್ಟ ಸಾಲಗಳ ಮಿಸಲು ನಿಧಿ 7.052.53 ಕೋಟಿಯಷ್ಟು ಏರಿಕೆಯಾಗಿದೆ. ಹಾಗಂತ ಬರೋಡ ಬ್ಯಾಂಕ್ ವರದಿಯೇ ಹೇಳುತ್ತಿದೆ.

ಬೇಕಾಬಿಟ್ಟಿ ಸಾಲ ಕೊಟ್ಟಿರೋ ಬರೋಡ ಬ್ಯಾಂಕ್ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಎಡವಿದೆ. ಅಸಮರ್ಥ ಕಾರ್ಯವೈಖರಿಯ ಈ ಗುಜರಾತಿ ಬ್ಯಾಂಕ್ ಬದುಕಿಸಲು ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಫೈನಾನ್ಸಿಯಲ್ ಟೆಕ್‌ಟೀಸ್ ತನ್ನದೆಂಬಂತೆ ಬಿಂಬಿಸುತ್ತಿದೆ. ದುರ್ಬಲ ಬ್ಯಾಂಕ್ ಉಳಿಸಲು ಸದೃಢ ಬ್ಯಾಂಕನ್ನು ನುಂಗಿ ಹಾಕೋದು ಯಾವ ಸೀಮೆ ನ್ಯಾಯ? ದುರ್ಬಲ ಬ್ಯಾಂಕ್-ಬಲಿಷ್ಟ ಬ್ಯಾಂಕ್ ಒಂದಾಗಿಸುವುದಕ್ಕೆ ಆಕ್ಷೇಪ ಬರಲಾರದು. ಆದರೆ ಯಾವ ಪ್ರಮಾದ ಮಾಡದ ನ್ಯೂನತೆ ಇಲ್ಲದ ಬ್ಯಾಂಕಿನ ಹೆಸರೇಕೆ ಅಳಿಸಲಾಗುತ್ತಿದೆ? ಸದ್ರಿ ವಿಲೀನ ಪ್ರಕ್ರಿಯೆಯಲ್ಲಿ ಶಕ್ತಿಶಾಲಿ, ಕಳಂಕ ರಹಿತ ಆರ್ಥಿಕ ವಹಿವಾಟಿನ ಸಂಸ್ಥೆ ವಿಜಯ ಬ್ಯಾಂಕ್ ನ್ಯಾಯಯುತವಾಗಿ ದಿವಾಳಿಗೊಂಡ ದೇನಾ ಮತ್ತು ಬರೋಡ ಬ್ಯಾಂಕ್‌ನ ಬೋರ್ಡ್ ತೆಗೆದು ವಿಜಯ ಬ್ಯಾಂಕ್ ಎಂದು ಹೆಸರಿಡಬೇಕಿತ್ತು. ಇದು ನೈಸರ್ಗಿಕ ನ್ಯಾಯತತ್ವವಷ್ಟೇ ಅಲ್ಲ ನೈತಿಕ ನಡೆಯೂ ಹೌದು. ಇಂಥ ನೀತಿ ಮೋದಿ ಮತ್ತವರ ಸಲಹೆಗಾರ ಪಂಡಿತರಿಗೆ ಅದ್ಹೇಗೆ ಅರ್ಥವಾದೀತು?

ಮೋದಿಯವರ ರಾಜ್ಯ ಗುಜರಾತಿ ಬ್ಯಾಂಕ್‌ನ ಹೆಸರನ್ನು ನಿರ್ಲಜ್ಜವಾಗಿ ಮೆರೆಸಲು ವಿಜಯ ಬ್ಯಾಂಕಿನ ಅಸ್ತಿತ್ವವನ್ನೇ ತುಳಿದು ಹಾಕಿದೆ. ಕರ್ನಾಟಕದ ಮಣ್ಣಿನ ಮಕ್ಕಳು ಕಟ್ಟಿ ಬೆಳೆಸಿದ ಬ್ಯಾಂಕನ್ನು ಗುಜರಾತಿಗಳು ಅಪಹರಿಸಿದ್ದಾರೆ. ಈಗ ವಿಜಯ ಬ್ಯಾಂಕ್ ಅನ್ನು ಆಪೋಷನ ತೆಗೆದುಕೊಂಡಂತೆ ನಂತರದ ದಿನಗಳಲ್ಲಿ ಬ್ಯಾಂಕುಗಳ ತವರು ಕರಾವಳಿಯ ಕೆನರಾ, ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳನ್ನು ಒಂದೊಂದಾಗಿ ಉತ್ತರ ಭಾರತದ ಮುಳುಗುವ ಬ್ಯಾಂಕುಗಳ ಉಳಿಸಲು ಬೇಟೆ ಆಡಿದರೆ ಅಚ್ಚರಿಯಿಲ್ಲ.

ಈ ವಿಲೀನದ ವಿಕೃತಿ ಹಲವು ತಿಂಗಳಿಂದ ನಡೆಯುತ್ತಲೇ ಇತ್ತು. ವಿಜಯಾ ಬ್ಯಾಂಕಿನ ಉದ್ಯೋಗಿಗಳು ಹಾಗೂ ನಿವೃತ್ತ ನೌಕರರು ವಿಲೀನ ಬೇಡವೆಂದು ಪ್ರತಿಭಟನೆ ಮಾಡಿದ್ದರು. ಪ್ರತಿರೋಧದ ಮೂಲಕ ಕೇಂದ್ರ ಸರ್ಕಾರದ ಪ್ರಭೃತಿಗಳ ಕಣ್ಣುತೆರೆಸಲು ಪ್ರಯತ್ನಿಸಿದ್ದರು. ಆದರೆ ಇದ್ಯಾವುದನ್ನು ಆಳುವ ವರ್ಗ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಏಕಪಕ್ಷೀಯವಾಗಿ ಕೇಂದ್ರ ಸಚಿವ ಸಂಪುಟ ವಿಲೀನಕ್ಕೆ ತಥಾಸ್ತು ಎಂದಿದೆ! ಇಷ್ಟಾದರೂ ಕೇಂದ್ರದಲ್ಲಿ ಮಂತ್ರಿಯಾಗಿರುವ ಕರಾವಳಿಯ ಸದಾನಂದಗೌಡ, ಅನಂತ್ಕುಮಾರ ಹೆಗಡೆ, ಸಂಸದ ನಳೀನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮೊದಲಾದವರು ತಮ್ಮದೇ ಸರ್ಕಾರದ ಮುಂದೆ ಕನ್ನಡ ನೆಲದ ಬ್ಯಾಂಕು ಉಳಿಸಲು ಪ್ರಯತ್ನ ನಡೆಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...