Homeಮುಖಪುಟಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ 'ಇಲಿನಾ ಸೇನ್' ನಿಧನ

ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ‘ಇಲಿನಾ ಸೇನ್’ ನಿಧನ

ಅವರು ಭಾನುವಾರ ಸಂಜೆ 7 ರ ಸುಮಾರಿಗೆ ಕೊಲ್ಕತ್ತಾದಲ್ಲಿ ನಿಧನರಾದರು ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರೈಟ್ಸ್ ಪದಾಧಿಕಾರಿ ರಂಜಿತ್ ಸುರ್ ತಿಳಿಸಿದರು.

- Advertisement -
- Advertisement -

ಹಲವಾರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಇಲಿನಾ ಸೇನ್ ಆಗಸ್ಟ್ 9 ರಂದು ನಿಧನರಾದರು. ಅವರಿಗೆ ಪತಿ ಡಾ. ಬಿನಾಯಕ್ ಸೇನ್ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಪ್ರಹ್ನಿತಾ ಮತ್ತು ಅಪರಾಜಿತಾ ಇದ್ದಾರೆ.

ಅವರು ಭಾನುವಾರ ಸಂಜೆ 7 ರ ಸುಮಾರಿಗೆ ಕೊಲ್ಕತ್ತಾದಲ್ಲಿ ನಿಧನರಾದರು ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರೈಟ್ಸ್ ಪದಾಧಿಕಾರಿ ರಂಜಿತ್ ಸುರ್ ತಿಳಿಸಿದ್ದಾರೆ.

ಕಾರ್ಮಿಕ ಸಂಘಗಳು, ದೀನದಲಿತರು ಮತ್ತು ಆದಿವಾಸಿ ಸಮುದಾಯದೊಂದಿಗೆ ಕೆಲಸ ಮಾಡಲು ಸೇನ್ ಚತ್ತೀಸ್‌ಘಡದಲ್ಲಿ ಹಲವು ವರ್ಷ ಉಳಿದುಕೊಂಡಿದ್ದರು. ಅವರು ಇನ್ಸೈಡ್ ಚತ್ತೀಸ್‌ಘಡ: ಎ ಪೊಲಿಟಿಕಲ್ ಮೆಮೋಯಿರ್ ಅಂಡ್ ಸುಖವಾಸಿನ್ ಮತ್ತು ದಿ ಮೈಗ್ರಂಟ್ ವುಮನ್ ಆಫ್ ಚತ್ತೀಸ್‌ಘಡ ಎರಡು ಪುಸ್ತಕಗಳನ್ನು ಬರೆದಿದ್ದಾರೆ.

ಇವರು ಮಹಾರಾಷ್ಟ್ರದ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮುಂಬೈಗೆ ತೆರಳಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಮಹಿಳಾ ಅಧ್ಯಯನಕ್ಕಾಗಿ ಸುಧಾರಿತ ಕೇಂದ್ರಕ್ಕೆ ಸೇರಿದ್ದರು.

ವೈದ್ಯರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿದ್ದ ಅವರ ಪತಿ ಬಿನಾಯಕ್ ಸೇನ್ ಗೆ 2010 ರಲ್ಲಿ ಛತ್ತೀಸ್ ಗಡದ ವಿಚಾರಣಾ ನ್ಯಾಯಾಲಯವು ದೇಶದ್ರೋಹಕ್ಕೆ ಸಂಚು ರೂಪಿಸಿದ ಆರೋಪ ಮತ್ತು ಮಾವೋವಾದಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ರಾಯಪುರ ಸೆಷನ್ಸ್ ನ್ಯಾಯಾಲಯವು ದೇಶದ್ರೋಹದ ಆರೋಪದ ಮೇಲೆ ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಶಿಕ್ಷೆಗೊಳಪಡಿಸಿತು

ಇಲಿನಾ ಪತಿಯ ಬಿಡುಗಡೆಗಾಗಿ ಕಾನೂನು ಹೋರಾಟಕ್ಕೆ ಮುಂದಾದರು. ಮಧ್ಯ ಭಾರತದ ಆದಿವಾಸಿ ಸಮುದಾಯದ ಹಲವಾರು ಯುವಕರನ್ನು ಕಾರಣವಿಲ್ಲದೇ ಬಂಧಿಸುವುದರ ವಿರುದ್ಧ ಪ್ರಚಾರ ನಡೆಸಿದ್ದರು. 2011 ರಲ್ಲಿ ಸುಪ್ರೀಂ ಕೋರ್ಟ್ ಬಿನಾಯಕ್ ಅವರಿಗೆ ಜಾಮೀನು ನೀಡಿ, ಇವರ ವಿರುದ್ಧ ದೇಶದ್ರೋಹದ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದಿತ್ತು.

ಇಲಿನಾ ಸಾವಿನ ಸುದ್ದಿ ಪ್ರಕಟವಾದ ತಕ್ಷಣ, ಹಲವಾರು ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರು ತಮ್ಮ ದುಃಖವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಛತ್ತೀಸ್ ಗಡದಲ್ಲಿ ಅತಿಯಾದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಇಲಿನಾ ತೀವ್ರವಾಗಿ ಟೀಕಿಸಿದ್ದರು.

ದೆಹಲಿಯ ಸ್ವತಂತ್ರ ಸ್ತ್ರೀಸಮಾನತಾವಾದಿ ಪ್ರಕಾಶನ ಕೇಂದ್ರವಾದ ಜುಬಾನ್ ಪ್ರಕಟಿಸಿದ ಎ ಸ್ಪೇಸ್ ವಿಥಾನ್ ದಿ ಸ್ಟ್ರಗಲ್ ಎಂಬ ಪುಸ್ತಕದಲ್ಲಿ, ಇಲಿನಾ ಸಾಮಾಜಿಕ ಚಳುವಳಿಗಳಲ್ಲಿ ಹಲವಾರು ಮಹಿಳೆಯರ ಬಗ್ಗೆ ಮತ್ತು ಅವರೊಳಗಿನ ಪಿತೃಪ್ರಭುತ್ವವನ್ನು ಪ್ರಶ್ನಿಸಿದ್ದರು.

1970 ರ ದಶಕದ ಉತ್ತರಾರ್ಧ ಮತ್ತು 80 ರ ದಶಕದ ಆರಂಭದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ,  ವರದಕ್ಷಿಣೆ ಸಾವು ಮತ್ತು ಮಥುರಾ ಅತ್ಯಾಚಾರ ಪ್ರಕರಣದ ವಿರುದ್ಧ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇಬ್ಬರೂ ಸೇರಿ ರೂಪಾಂತರ್ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಇದರ ಕಾರ್ಯಗಳು ಲಿಂಗ ಸಮಸ್ಯೆಗಳು ಮತ್ತು ತರಬೇತಿಗಳು ಮತ್ತು ಕೃಷಿ ಜೀವವೈವಿಧ್ಯತೆಯ ಮೇಲೆ ಕೇಂದ್ರೀಕರಿಸಿತ್ತು.

ಆರೋಗ್ಯವು ಹದಗೆಟ್ಟಾಗಲೂ, ಇಲಿನಾ ಹಲವಾರು ಜನರ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು.

ಇತ್ತೀಚೆಗೆ ಮಹಾರಾಷ್ಟ್ರದ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಹೆಚ್ಚಾಗಿ ಬಂಧಿಸುತ್ತಿರುವ ಬಗ್ಗೆ ತನ್ನ ಭಿನ್ನಾಭಿಪ್ರಾಯ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ಪ್ರಾಧ್ಯಾಪಕನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...