Homeಕರ್ನಾಟಕಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಯುದ್ದ ನಿಲ್ಲಿಸಿ: ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ...

ಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಯುದ್ದ ನಿಲ್ಲಿಸಿ: ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ ಆಗ್ರಹ

- Advertisement -
- Advertisement -

ಬೆಂಗಳೂರು: ‘ಭಾರತದ ದುಡಿಯುವ ಜನರ ಮತ್ತು ನೈಸರ್ಗಿಕ ಸಂಪತ್ತನ್ನು ಕೆಲವೇ ಕೆಲವು ವ್ಯಕ್ತಿಗಳು ಶೋಷಣೆ ಮಾಡುವವರೆಗೆ ಯುದ್ಧ ಮುಂದುವರೆಯುತ್ತದೆ’ ಎಂದು ಹೇಳಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಉಲ್ಲೇಖದೊಂದಿಗೆ, ಛತ್ತೀಸಗಡ ರಾಜ್ಯದಂತಹ ಮಧ್ಯ ಭಾರತದ ಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಕುರಿತು ‘ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ’ ಒಂದು ಪ್ರಕಟಣೆ ಹೊರಡಿಸಿದೆ. ಈ ಒಕ್ಕೂಟವು ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿದೆ.

‘ಆಪರೇಷನ್ ಖಗರ್’: ಆದಿವಾಸಿಗಳ ಮೇಲಿನ ಯುದ್ಧ

2024ರ ಜನವರಿಯಿಂದ ನಡೆಯುತ್ತಿರುವ ಈ ‘ಆಪರೇಷನ್ ಖಗಾರ್’ ವಾಸ್ತವವಾಗಿ ಭಾರತದ ದೊಡ್ಡ ಬಂಡವಾಳಶಾಹಿಗಳು ಮತ್ತು ಸರ್ಕಾರದ ಜಂಟಿ ಕಾರ್ಯಾಚರಣೆಯಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಮಧ್ಯ ಭಾರತದ ಅಪಾರ ಖನಿಜ ಸಂಪತ್ತನ್ನು ಲೂಟಿ ಮಾಡುವುದಾಗಿದೆ. ಅಂಬಾನಿ, ಅದಾನಿ, ವೇದಾಂತ, ಟಾಟಾ ಮುಂತಾದ ದೊಡ್ಡ ಗಣಿ ಕಂಪನಿಗಳ ಲಾಭಕ್ಕಾಗಿ ಆದಿವಾಸಿಗಳನ್ನು ಅವರ ಪ್ರದೇಶಗಳಿಂದ ಸ್ಥಳಾಂತರಿಸಲು ಸರ್ಕಾರ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತಿದೆ ಎಂದು ಹೇಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2026ರ ಮಾರ್ಚ್‌ ವೇಳೆಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಹೇಳಿಕೆಯ ಹಿಂದಿನ ನಿಜವಾದ ಉದ್ದೇಶ, ದೊಡ್ಡ ಬಂಡವಾಳಶಾಹಿಗಳಿಗೆ ದಾರಿ ಮಾಡಿಕೊಡುವುದು ಎಂದು ಒಕ್ಕೂಟ ಆರೋಪಿಸಿದೆ. ಇದರ ಭಾಗವಾಗಿ ಈಗಾಗಲೇ ಗಡ್ಚಿರೋಲಿ (ಮಹಾರಾಷ್ಟ್ರ) ಮತ್ತು ರಾಯ್‌ಗಢ (ಛತ್ತೀಸ್‌ಗಢ) ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಅರಣ್ಯನಾಶ ಪ್ರಾರಂಭವಾಗಿದೆ. ಬಸ್ತರ್ ಜಿಲ್ಲೆಯಲ್ಲಿ ಸೇನೆಯು ಅದಿವಾಸಿಗಳ ವಿರುದ್ಧ ದಮನ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾಧ್ಯಮಗಳ ಮೌನ

ಈ ಕಾರ್ಯಾಚರಣೆಯಲ್ಲಿ ಸರ್ಕಾರ 150ರಿಂದ 200 ಮಾವೋವಾದಿಗಳನ್ನು ಮತ್ತು 100 ರಿಂದ 150 ಮುಗ್ಧ ಆದಿವಾಸಿಗಳನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ಆದರೆ ಮುಖ್ಯವಾಹಿನಿ ಮಾಧ್ಯಮಗಳು ಈ ವಿಷಯವನ್ನು ಸರಿಯಾಗಿ ವರದಿ ಮಾಡುತ್ತಿಲ್ಲ. ಮಾಧ್ಯಮಗಳು ಕೋಟ್ಯಾಂತರ ರೂಪಾಯಿ ತಲೆದಂಡ ಹೊಂದಿರುವ ಹಿರಿಯ ಮಾವೋವಾದಿ ನಾಯಕರ ಹತ್ಯೆಯನ್ನು ಮಾತ್ರ ವರದಿ ಮಾಡುತ್ತಿವೆ. ಆದರೆ, ಅಮಾಯಕ ಆದಿವಾಸಿಗಳ ಸಾವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

‘ಆಪರೇಷನ್ ಖಗರ್’ ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು (ಆರ್ಟಿಕಲ್ 21), ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ವಿಶ್ವಸಂಸ್ಥೆಯ ಆದಿವಾಸಿಗಳ ಹಕ್ಕುಗಳ ಘೋಷಣೆಯ ಉಲ್ಲಂಘನೆಯಾಗಿದೆ ಎಂದು ಒಕ್ಕೂಟ ಹೇಳಿದೆ. ಇದು ಕೇವಲ ದೊಡ್ಡ ಬಂಡವಾಳಶಾಹಿಗಳ ಲಾಭಕ್ಕಾಗಿ ನಡೆಸುತ್ತಿರುವ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಒಕ್ಕೂಟ ತಿಳಿಸಿದೆ.

ಶಾಂತಿ ಮಾತುಕತೆಗಳ ನಿರಾಕರಣೆ ಮತ್ತು ವ್ಯಾಪಕ ಪ್ರತಿರೋಧ

ಈ ಕಾರ್ಯಾಚರಣೆಯ ಅವಧಿಯಲ್ಲಿ, ತಲೆದಂಡ ಹೊಂದಿದ ಮಾವೋವಾದಿಗಳು ಎಂದಿಗೂ ಬಂಧನಕ್ಕೆ ಒಳಗಾದ ಅಥವಾ ಗಾಯಗೊಂಡ ಉದಾಹರಣೆಗಳಿಲ್ಲ. ಸರ್ಕಾರ ಬಹುಮಾನಗಳಿಗಾಗಿ ಅವರನ್ನು ಕಾನೂನು ಬಾಹಿರ ಎನ್‌ಕೌಂಟರ್‌ಗಳಲ್ಲಿ ಕೊಲ್ಲುತ್ತಿದೆ ಎಂದು ಆರೋಪಿಸಲಾಗಿದೆ. ನಾಗರಿಕ ಹಕ್ಕುಗಳ ಸಂಘಟನೆಗಳು ಮತ್ತು ಮಾವೋವಾದಿಗಳು ಕದನ ವಿರಾಮ ಘೋಷಿಸಿ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಪದೇ ಪದೇ ಮನವಿ ಮಾಡಿಕೊಂಡರೂ ಸರ್ಕಾರ ಅದನ್ನು ನಿರಾಕರಿಸುತ್ತಿದೆ. ಆದರೆ, ತೆಲಂಗಾಣ ಸರ್ಕಾರವು ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ತೋರಿಸಿರುವುದು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಒಕ್ಕೂಟ ಹೇಳಿದೆ.

‘ಆಪರೇಷನ್ ಖಗಾರ್’ ಕೇವಲ ಸಶಸ್ತ್ರ ಮಾವೋವಾದಿಗಳನ್ನು ನಿಯಂತ್ರಿಸಲು ಸೀಮಿತವಾಗಿಲ್ಲ. ಅನ್ಯಾಯ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ವಿರೋಧಿಸುವ ಎಲ್ಲ ಬಗೆಯ ಪ್ರತಿರೋಧಗಳನ್ನೂ ಹತ್ತಿಕ್ಕುವುದು ಇದರ ಮುಖ್ಯ ಉದ್ದೇಶ. ಅಹಿಂಸಾತ್ಮಕವಾಗಿ ಹೋರಾಟ ನಡೆಸುತ್ತಿದ್ದ ‘ಮೂಲವಾಸಿ ಬಚಾವೋ ಮಂಚ್’ ಸಂಘಟನೆಯನ್ನು ನಿಷೇಧಿಸಿರುವುದು ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ಹೇರಿರುವುದು ಇದಕ್ಕೆ ಸಾಕ್ಷಿ ಎಂದು ಒಕ್ಕೂಟ ಪ್ರತಿಪಾದಿಸಿದೆ. ಆದ್ದರಿಂದ, ‘ಆಪರೇಷನ್ ಖಗಾರ್’ ವಿರುದ್ಧದ ಪ್ರತಿರೋಧವು ಪ್ರಜಾಪ್ರಭುತ್ವವನ್ನು ಉಳಿಸುವ ಒಂದು ಜವಾಬ್ದಾರಿಯಾಗಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಒಕ್ಕೂಟದ ಪ್ರಮುಖ ಬೇಡಿಕೆಗಳು

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ‘ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ’ವು ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದೆ:

  1. ‘ಆಪರೇಶನ್ ಖಗಾರ್’ ಅನ್ನು ತಕ್ಷಣವೇ ನಿಲ್ಲಿಸಬೇಕು.
  2. ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ತಕ್ಷಣದ ಕದನ ವಿರಾಮ ಮತ್ತು ಷರತ್ತುರಹಿತ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಬೇಕು.
  3. ಎಲ್ಲಾ ಕಾನೂನು ಬಾಹಿರ ಹತ್ಯೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು.

ಈ ಹೋರಾಟದಲ್ಲಿ ಎಲ್ಲರೂ ತಮ್ಮ ಧ್ವನಿ ಎತ್ತಬೇಕು ಎಂದು ಒಕ್ಕೂಟವು ದೇಶದ ನಾಗರಿಕರಲ್ಲಿ ವಿನಂತಿಸಿದೆ.

ಈ ಒಕ್ಕೂಟದ ಸಂಘಟನೆಗಳು (Organizations):

  1. ಆದಿವಾಸಿ ಸಂಘರ್ಷ ಮೋರ್ಚಾ
  2. ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್
  3. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್
  4. ಅಂಬೇಡ್ಕರ್ ರೀಡಿಂಗ್ ಸರ್ಕಲ್
  5. ಭೀಮ ಸಂಘಟನೆಗಳ ಮಹಾ ಒಕ್ಕೂಟ
  6. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ (ದೇವನಹಳ್ಳಿ)
  7. ಕಲೆಕ್ಟಿವ್
  8. ಡಿಎಸ್ಎಸ್
  9. ಡಿಎಸ್ಎಸ್ (ಅಂಬೇಡ್ಕರ್ ವಾದ)
  10. ದಲಿತ್ ಟೈಗರ್ಸ್
  11. ಡೊಮೆಸ್ಟಿಕ್ ವರ್ಕರ್ಸ್ ರೈಟ್ಸ್ ಯೂನಿಯನ್
  12. ಎದ್ದೇಳು ಕರ್ನಾಟಕ
  13. ಬಿ.ಆರ್. ಅಂಬೇಡ್ಕರ್ ದಲಿತ್ ಸೇನಾ ಸಮಿತಿ
  14. ಫ್ರೈಡೇಸ್ ಫಾರ್ ಫ್ಯೂಚರ್ – ಕರ್ನಾಟಕ
  15. ಗ್ರೋತ್ ವಾಚ್
  16. ಇಂಡಿಯನ್ ಸೋಷಿಯಲ್ ಆಕ್ಷನ್ ಫೋರಂ (ಇನ್ಸಾಫ್)
  17. ಕರ್ನಾಟಕ ಜನ ಜಾಗೃತಿ ವೇದಿಕೆ
  18. ಕರ್ನಾಟಕ ಜನಶಕ್ತಿ
  19. ಕನ್ನಡ ಪ್ಲಾನೆಟ್
  20. ಕರ್ನಾಟಕ ವಾಯ್ಸ್ ಆಫ್ ಪಬ್ಲಿಕ್
  21. ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ
  22. ಕರ್ನಾಟಕ ರೈತ ಸಂಘ (ಎಯುಸಿ)
  23. ಮೂಲನಿವಾಸಿಗಳ ಬಿ.ಆರ್. ಅಂಬೇಡ್ಕರ್ ಸೇನೆ
  24. ನ್ಯಾಷನಲ್ ಅಲಯನ್ಸ್ ಫಾರ್ ಜಸ್ಟಿಸ್, ಅಕೌಂಟಬಿಲಿಟಿ ಅಂಡ್ ರೈಟ್ಸ್
  25. ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ – ಕರ್ನಾಟಕ
  26. ಪ್ರಗತಿಪರ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಯೂನಿಯನ್
  27. ಪ್ರಜಾತಾಂತ್ರಿಕ ಜನರ ವೇದಿಕೆ (ಪಿಡಿಎಫ್)
  28. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್
  29. ಸ್ಪಾರ್ಕ್ ರೀಡಿಂಗ್ ಸರ್ಕಲ್
  30. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್
  31. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್
  32. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ಸಿಸ್ಟ್)
  33. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಮ್ಎಲ್) ಲಿಬರೇಷನ್

ಒಕ್ಕೂಟದಲ್ಲಿರುವ ವ್ಯಕ್ತಿಗಳು (Individuals):

  1. ಡಾ. ಜಿ. ರಾಮಕೃಷ್ಣ (ಲೇಖಕರು)
  2. ಶಿವಸುಂದರ್ (ಸಾಮಾಜಿಕ ಕಾರ್ಯಕರ್ತ ಮತ್ತು ಅಂಕಣಕಾರರು)
  3. ಡಾ. ನಿರಂಜನ ಆರಾಧ್ಯ (ಶಿಕ್ಷಣತಜ್ಞರು)
  4. ಶ್ರೀಪಾದ್ ಭಟ್ (ಶಿಕ್ಷಣತಜ್ಞರು)
  5. ಡಾ. ಪ್ರಜ್ವಲ್ ಶಾಸ್ತ್ರಿ (ಭೌತಶಾಸ್ತ್ರಜ್ಞ)
  6. ಮಧು ಭೂಷಣ್ (ಕಾರ್ಯಕರ್ತ)
  7. ಡಾ. ದು. ಸರಸ್ವತಿ (ರಂಗಭೂಮಿ ಕಲಾವಿದೆ)
  8. ಡಾ. ಸಬಿಹಾ ಭೂಮಿಗೌಡ (ನಿವೃತ್ತ ಉಪಕುಲಪತಿ)
  9. ವಿದ್ಯಾ ದಿನಕರ್ (ಕಾರ್ಯಕರ್ತೆ)
  10. ಡಾ. ಸುವ್ರತ್ ರಾಜು (ಭೌತಶಾಸ್ತ್ರಜ್ಞ)
  11. ರಾಮ್ನೀಕ್ ಸಿಂಗ್ (ನಾಟಕಕಾರ)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...