Homeದಲಿತ್ ಫೈಲ್ಸ್ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು

ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು

- Advertisement -
- Advertisement -

ಜಾತಿ ತಾರತಮ್ಯ ಮತ್ತು ಅಧಿಕಾರಶಾಹಿಗಳ ವಿಳಂಬದ ವಿರುದ್ಧದ ಹೋರಾಟದಲ್ಲಿ, ಗುಜರಾತ್‌ನ ಸೂರತ್‌ನಲ್ಲಿ 80 ದಲಿತ ಕುಟುಂಬಗಳು ಮೇ 14, 2025 ರಂದು ಅಮ್ರೋಲಿಯ ಬಾಂಬೆ ಕಾಲೋನಿಯ ಆನಂದ್ ಬುದ್ಧ ವಿಹಾರ್‌ನಲ್ಲಿ ನಡೆದ ಸಮಾರಂಭದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದವು.

ತಮ್ಮ ಧರ್ಮವನ್ನು ಬದಲಾಯಿಸಲು ಅಧಿಕೃತ ಅನುಮತಿಯನ್ನು ಪಡೆಯಲು ಎರಡು ವರ್ಷಗಳ ಸುದೀರ್ಘ ಹೋರಾಟದ ನಂತರ ಈ ಮತಾಂತರ ನಡೆದಿದೆ.

ಸಾಂಪ್ರದಾಯಿಕ ಹಿಂದೂ ಆಚರಣೆಗಳಲ್ಲಿ ಪ್ರಚಲಿತದಲ್ಲಿರುವ ಜಾತಿ ಆಧಾರಿತ ತಾರತಮ್ಯದಿಂದ ವಿಮೋಚನೆ ಪಡೆಯಲು ಈ ಕುಟುಂಬಗಳು 2023 ರಲ್ಲಿ ಔಪಚಾರಿಕವಾಗಿ ಬೌದ್ಧ ಧರ್ಮವನ್ನು ಅಳವಡಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದವು ಎಂದು ‘ದಿ ಮೂಕನಾಯಕ್’ ವರದಿ ಮಾಡಿದೆ.

ಗುಜರಾತ್‌ನ ನಿಯಮಗಳ ಅಡಿಯಲ್ಲಿ, ಧಾರ್ಮಿಕ ಮತಾಂತರಕ್ಕಾಗಿ ಅರ್ಜಿಗಳನ್ನು (ಫಾರ್ಮ್ ಎ) ಒಂದು ತಿಂಗಳೊಳಗೆ ಜಿಲ್ಲಾಧಿಕಾರಿ ಪರಿಶೀಲಿಸಿ ಅನುಮೋದಿಸಬೇಕು. ಈ ಪ್ರಕ್ರಿಯೆಯು ಎರಡು ವರ್ಷಗಳವರೆಗೆ ಗಮನಾರ್ಹ ವಿಳಂಬವನ್ನು ಎದುರಿಸಿತು, ಇದನ್ನು ಕುಟುಂಬಗಳನ್ನು ಬೆಂಬಲಿಸುವ ದಲಿತ ಸಂಘಟನೆಯಾದ ಸ್ವಯಂ ಸೈನಿಕ್ ದಳ (ಎಸ್‌ಎಸ್‌ಡಿ) ಸದಸ್ಯರು ಮತಾಂತರಗಳನ್ನು ನಿರುತ್ಸಾಹಗೊಳಿಸಲು ಉದ್ದೇಶಪೂರ್ವಕವಾದ ವಿಳಂಬ ಮತ್ತು ಮತಾಂತರ ತೆಡಯುವ ತಂತ್ರ ಎಂದು ವಿವರಿಸಿದ್ದಾರೆ.

ಗುಜರಾತ್‌ನಾದ್ಯಂತ, ಎಸ್‌ಎಸ್‌ಡಿ ಮತ್ತು ಇತರ ಬಹುಜನ ಸಂಘಟನೆಗಳು ಸಲ್ಲಿಸಿದ ಸುಮಾರು 40,000–50,000 ಇದೇ ರೀತಿಯ ಅರ್ಜಿಗಳು ಬಾಕಿ ಉಳಿದಿವೆ ಎಂದು ಎಸ್‌ಎಸ್‌ಡಿ ನಾಯಕರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕುಟುಂಬಗಳು ಅಧಿಕಾರಿಗಳಿಗೆ ದೃಢವಾದ ನಿಲುವಿನೊಂದಿಗೆ ಗಡುವು ನೀಡಿ, ತಮ್ಮ ಅರ್ಜಿಗಳನ್ನು ಅನುಮೋದಿಸದಿದ್ದರೆ ಬೀದಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದರು. ಈ ದೃಢನಿಶ್ಚಯದ ನಿಲುವು ಆಡಳಿತವನ್ನು ಅಂತಿಮವಾಗಿ ಅಗತ್ಯ ಅನುಮೋದನೆಗಳನ್ನು ನೀಡುವಂತೆ ಒತ್ತಾಯಿಸಿತು.

ಮೇ 14 ರಂದು ನಡೆದ ಮತಾಂತರ ಸಮಾರಂಭವು ಕುಟುಂಬಗಳಿಗೆ ಭಾವನಾತ್ಮಕ ಘಟನೆಯಾಗಿತ್ತು. ಅವರು ಬುದ್ಧ ವಂದನೆಯನ್ನು ಪಠಿಸಿದರು, 1956 ರಲ್ಲಿ ಸ್ವತಃ ಬೌದ್ಧಧರ್ಮಕ್ಕೆ ಮತಾಂತರಗೊಂಡ ಭಾರತೀಯ ಸಂವಿಧಾನದ ಶಿಲ್ಪಿ ಮತ್ತು ದಲಿತ ಹಕ್ಕುಗಳ ಪ್ರತಿಪಾದಕ ಡಾ. ಬಿ.ಆರ್. ಅಂಬೇಡ್ಕರ್ ನೀಡಿದ 22 ಪ್ರತಿಜ್ಞೆಗಳನ್ನು ಪಠಿಸಿದರು.

ಜಾತಿ ದಬ್ಬಾಳಿಕೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸಿ, ಸಮಾನತೆ ಮತ್ತು ಘನತೆಯತ್ತ ಮಾರ್ಗವನ್ನು ಅಳವಡಿಸಿಕೊಂಡಾಗ ಅಲ್ಲಿನ ವಾತಾವರಣವು ವಿಮೋಚನೆ ಮತ್ತು ಭರವಸೆಯಿಂದ ತುಂಬಿತ್ತು.

ಸೂರತ್ ವಜ್ರ ಕಾರ್ಖಾನೆಯಲ್ಲಿ ಯಂತ್ರ ನಿರ್ವಾಹಕ ಮತ್ತು 2019 ರಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಎಸ್‌ಎಸ್‌ಡಿ ಸದಸ್ಯ ಮಯೂರ್‌ರಾಜ್ ನಾಗ್ ಕೂಡ ಮತಾಂತರ ಆದವರಲ್ಲಿ ಒಬ್ಬರು. ಇತ್ತೀಚೆಗೆ ಮತಾಂತರಗೊಂಡ 80 ಕುಟುಂಬಗಳು ಸೇರಿದಂತೆ 110 ಅರ್ಜಿಗಳನ್ನು ಈಗ ತೆರವುಗೊಳಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡರು. ಪ್ರೇಮ ವಿವಾಹದಲ್ಲಿ ಅವರು ಮದುವೆಯಾದ ಅವರ ಪತ್ನಿ ಅಶ್ಮಿತಾ ಕೂಡ ಅವರಿಂದ ಬೌದ್ಧಧರ್ಮದ ಬೋಧನೆಗಳ ಬಗ್ಗೆ ತಿಳಿದುಕೊಂಡು ಧರ್ಮ ಸ್ವೀಕರಿಸಿದರು. ಮಯೂರ್‌ರಾಜ್ ಮತಾಂತರದ ನಂತರ ತಮ್ಮ ಸಮುದಾಯದಲ್ಲಿ ಹೊಸದಾಗಿ ಗೌರವವನ್ನು ಅನುಭವಿಸುತ್ತಿದ್ದಾರೆ ಎಂದು ವ್ಯಕ್ತಪಡಿಸಿದರು.

“ಎಂಟು ವರ್ಷಗಳ ಹಿಂದೆ, ನಾನು ದಾರಿ ತಪ್ಪಿದ್ದೆ, ಧೂಮಪಾನ, ಗುಟ್ಕಾ ಅಗಿಯುವುದು, ನನ್ನ ಕುಟುಂಬವನ್ನು ನಿರ್ಲಕ್ಷಿಸುವುದು ನಡೆದಿತ್ತು. 2017 ರಲ್ಲಿ ಎಸ್‌ಎಸ್‌ಡಿಯನ್ನು ಭೇಟಿಯಾಗಿ ಬಾಬಾಸಾಹೇಬರ ಬಗ್ಗೆ ತಿಳಿದುಕೊಂಡ ನಂತರ ನಾನು ಬದಲಾಗಿದ್ದೆ. ನಾನು ನನ್ನ ಅಭ್ಯಾಸಗಳನ್ನು ತ್ಯಜಿಸಿದೆ, ನನ್ನ ಹೆತ್ತವರನ್ನು ನೋಡಿಕೊಳ್ಳಲು ಪ್ರಾರಂಭಿಸಿದೆ ಮತ್ತು ನನ್ನ ಬದುಕಿನ ಉದ್ದೇಶವನ್ನು ಕಂಡುಕೊಂಡೆ” ಎಂದು ಅವರು ಹೇಳಿದರು.

ಬೌದ್ಧಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರವನ್ನು ದಲಿತರು ಹೆಚ್ಚಾಗಿ ಜಾತಿ ವ್ಯವಸ್ಥೆಗೆ ಸಂಬಂಧಿಸಿದ ಕಠಿಣ ಶ್ರೇಣಿ ಮತ್ತು ತಾರತಮ್ಯದಿಂದ ತಪ್ಪಿಸಿಕೊಳ್ಳುವ ಮಾರ್ಗವೆಂದು ನೋಡುತ್ತಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಒತ್ತು ನೀಡುವ ಬೌದ್ಧಧರ್ಮವು ಘನತೆ ಮತ್ತು ಗೌರವವನ್ನು ಬಯಸುವವರಿಗೆ ಪರ್ಯಾಯ ಮಾರ್ಗವನ್ನು ನೀಡುತ್ತದೆ.

ಸೂರತ್‌ನಲ್ಲಿ ನಡೆದ ಈ ಘಟನೆಯು ಭಾರತದಲ್ಲಿ ಜಾತಿ ತಾರತಮ್ಯದ ವಿರುದ್ಧ ನಡೆಯುತ್ತಿರುವ ಹೋರಾಟ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಪಡೆಯುವ ಅಂಚಿನಲ್ಲಿರುವ ಸಮುದಾಯಗಳ ಬಯಕೆಯನ್ನು ಒತ್ತಿಹೇಳುತ್ತದೆ.

ಇದು ಪ್ರತ್ಯೇಕ ಘಟನೆಯಲ್ಲ. ಇತ್ತೀಚಿನ ವರ್ಷಗಳಲ್ಲಿ ಗುಜರಾತ್‌ನಲ್ಲಿ ದಲಿತರು ಸಾಮೂಹಿಕವಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಘಟನೆಗಳು ನಡೆದಿವೆ, ಇವು ಹೆಚ್ಚಾಗಿ ಜಾತಿ ಆಧಾರಿತ ಹಿಂಸೆ ಅಥವಾ ತಾರತಮ್ಯದ ನಿರ್ದಿಷ್ಟ ಘಟನೆಗಳಿಂದ ಉಂಟಾಗುತ್ತವೆ. ಈ ಮತಾಂತರಗಳು ಡಾ. ಅಂಬೇಡ್ಕರ್ ಅವರ ದಲಿತ ವಿಮೋಚನೆಗೆ ಒಂದು ಸಾಧನ, ತಾರತಮ್ಯದ ಆಚರಣೆಗಳ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಪ್ರಶ್ನಿಸುವ ಒಂದು ಮಾರ್ಗ ಎಂಬ ತತ್ವಶಾಸ್ತ್ರದ ನಿರಂತರ ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತವೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...