ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನನ್ನು 6ನೇ ತರಗತಿಯ ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.
ಹಂಗಾಮಿ ಶಿಕ್ಷಕ ಮೋಹನ್ ಬಾಬು ಮೇಲೆ ಹಲ್ಲೆ ನಡೆಸಲಾಗಿದೆ.ವಿದ್ಯಾರ್ಥಿಗೆ ಹಲ್ಲೆ ಮಾಡಿ ಘಟನೆಯನ್ನು ಮನೆಯಲ್ಲಿ ಹೇಳಿದರೆ ಶಾಲೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಲಾಗಿದೆ.
ಗುರುವರಾಜನ ಕಂಡಿಗೈ ಸರಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಹರಿಹರನ್ ರಾತ್ರಿ 8 ಗಂಟೆಗೆ ಕೈಕಾಲುಗಳು ಊದಿಕೊಂಡು ಮನೆಗೆ ಮರಳಿದ್ದಾನೆ.
ಮರುದಿನ ಶಾಲೆಗೆ ಬಂದ ಹರಿಹರನ್ ಪೋಷಕರು ಮತ್ತು ಸಂಬಂಧಿಕರು, ಬಾಲಕನ ಕೈಕಾಲು ಊದಿಕೊಂಡಿದ್ದು ತಡವಾಗಿ ಮನೆಗೆ ಬಂದಿದ್ದಾನೆ.ಮಗುವಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಬದಲು ಸಂಜೆಯವರೆಗೂ ಶಾಲೆಯ ಆವರಣದಲ್ಲಿ ಕೂರಿಸಲಾಗಿದೆ ಎಂದು ಆರೋಪಿಸಿದರು.
ಊತವನ್ನು ಕಡಿಮೆ ಮಾಡಲು ಹರಿಹರನ್ ಅವರಿಗೆ ಐಸ್ ತುಂಡನ್ನು ನೀಡಲಾಯಿತು ಮತ್ತು ಗಾಯಕ್ಕೆ ಹಲ್ಲೆ ಕಾರಣ ಎಂದು ಹೇಳಿದರೆ ಶಾಲೆಯಿಂದ ಹೊರ ಹಾಕುವುದಾಗಿ ಶಿಕ್ಷಕ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶಾಲೆಯ ಪ್ರಾಂಶುಪಾಲರು ಮೋಹನ್ ಬಾಬು ಅವರನ್ನು ಈ ಕುರಿತು ವಿಚಾರಣೆ ನಡೆಸಿದಾಗ, ವಿದ್ಯಾರ್ಥಿಯ ಸಂಬಂಧಿಕರು ಅವರನ್ನು ಸುತ್ತುವರೆದು ಅಮಾನುಷವಾಗಿ ಥಳಿಸಿದರು ಮತ್ತು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಮೋಹನ್ ಬಾಬು ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹನ್ ಬಾಬು ಅವರನ್ನು ರಕ್ಷಿಸಿ ಜನರನ್ನು ಚದುರಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ