Homeಅಂಕಣಗಳುತೆಲಂಗಾಣ ಎನ್‌ಕೌಂಟರ್‌: ಸಮರ್ಥನೀಯವು ಅಲ್ಲ, ಪರಿಹಾರವೂ ಅಲ್ಲ.

ತೆಲಂಗಾಣ ಎನ್‌ಕೌಂಟರ್‌: ಸಮರ್ಥನೀಯವು ಅಲ್ಲ, ಪರಿಹಾರವೂ ಅಲ್ಲ.

- Advertisement -
- Advertisement -

ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರ-ಹತ್ಯೆಯನ್ನೂ ಯಾರೂ ಒಪ್ಪಲು ಸಾಧ್ಯವಿಲ್ಲ. ಅದು ಸಮರ್ಥನೀಯವೂ ಅಲ್ಲ. ಪಶುವೈದ್ಯೆಯನ್ನು ಕ್ರೂರಿಗಳು ಎತ್ತಿಕೊಂಡು ಹೋಗಿ ತೃಷೆ ತೀರಿದ ನಂತರ ಪೆಟ್ರೋಲ್ ಹಾಕಿ ಸುಟ್ಟಿರುವುದು ಮಾನವ ಲೋಕವನ್ನು ಬೆಚ್ಚಿ ಬೀಳಿಸಿದೆ. ಅದೇ ರೀತಿ ಪಶುವೈದ್ಯೆ ಹತ್ಯೆಯಾದ ಕೆಲವು ದಿನಗಳಲ್ಲೇ ಆರೋಪಿಗಳನ್ನು ಕ್ರೂರವಾಗಿ ಪೊಲೀಸರು ಎನ್‌ ಕೌಂಟರ್‌ ಮಾಡಿದ್ದಾರೆ.

ಪಶುವೈದ್ಯೆಯ ಅತ್ಯಾಚಾರ-ಹತ್ಯೆಗೂ ಮುನ್ನ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಅತ್ಯಾಚಾರ-ಕೊಲೆ ಪ್ರಕರಣಗಳು ನಡೆದಿರಲಿಲ್ಲ ಎಂದು ಪ್ರಶ್ನೆ ಮಾಡಿಕೊಂಡರೆ, ಈ ಪ್ರಕರಣಕ್ಕೂ ಕ್ರೂರವಾದ ಅತ್ಯಾಚಾರ ನಡೆದಿವೆ. ಹಲವು ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ ಹೆಣ್ಣನ್ನು ಸೀಮೆಎಣ್ಣೆ, ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದೂ ಉಂಟು. ಆದರೆ ಇಲ್ಲೆಲ್ಲ ಯಾಕೆ ಆರೋಪಿಗಳನ್ನು ಎನ್ ಕೌಂಟರ್ ಮಾಡಲಿಲ್ಲ ಎಂದರೆ ಆರೋಪಿಗಳು ಮೇಲ್ಜಾತಿಯವರಾಗಿದ್ದು, ಪ್ರಬಲ ವ್ಯಕ್ತಿಗಳಾಗಿದ್ದರೆಂಬುದು ತಿಳಿದುಬಂದಿರುವ ಸಂಗತಿ.

ಪಶುವೈದ್ಯೆ ಮೇಲ್ನೋಟಕ್ಕೆ ಮೇಲ್ವರ್ಗ, ಜಾತಿಗೆ ಸೇರಿದ ಸಂತ್ರಸ್ತೆ. ಹೀಗೆಂದು ಹೇಳಿದರೆ ಕೆಲವರಿಗೆ ಸಿಟ್ಟು ಬರಬಹುದು. ಇದು ಸಹಜವೂ ಹೌದು. ಆದರೆ ಅವರ ಮೇಲಿನ ಹಲ್ಲೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ. ಇಡೀ ದೇಶದ್ಯಂತ ಜಾತಿಬೇಧವಿಲ್ಲದೇ ಎಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ನಾಲ್ವರು ಆರೋಪಿಗಳನ್ನು ಗುಂಡಿಟ್ಟು ಎನ್‌ಕೌಂಟರ್‌. ಇದರಲ್ಲಿ ರಾಜಕೀಯ ಲಾಭವೂ ಇರಬಹುದು. ಮೇಲ್ಜಾತಿಯ ಹೆಣ್ಣು ಮಗಳಿಗೆ ಆದ ಅನ್ಯಾಯವೇ, ಕೆಳಜಾತಿ ಹೆಣ್ಣು ಮಗಳಿಗೆ ಆದಾಗ ಈ ಸಮಾಜ ನಿರ್ಲಕ್ಷ್ಯ ಧೋರಣೆಯಿಂದ ನಡೆದುಕೊಂಡಿದೆ. ಕೆಳಜಾತಿಯ ಹೆಣ್ಣು ಮಗಳು ಅತ್ಯಾಚಾರಕ್ಕೆ ಒಳಗಾಗಿ ಕೊಲ್ಲಲ್ಪಟ್ಟರು ಮೇಲ್ಜಾತಿಯ ಮತ್ತು ಇತರ ಜಾತಿಗಳು ಜನರು ತಮಗೂ ಆ ಪ್ರಕರಣಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಾರೆ. ಅಂದರೆ ಮೇಲ್ಜಾತಿಯ ಗಂಡು ಗೂಳಿಗಳು ಏನು ಬೇಕಾದರೂ ಮಾಡಬಹುದು ಎಂಬ ಸನಾತನ ಧೋರಣೆ ಅದು.

ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಪ್ರಾಬಲ್ಯವಿದ್ದ ಮತ್ತು ಹಣಬಲವಿದ್ದ ಯಾರೇ ಇಂತಹ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾದರೂ ಅವರಿಗೆ ಕನಿಷ್ಠ ಶಿಕ್ಷೆ, ಇಲ್ಲವೇ ಶಿಕ್ಷೆಯೇ ಆಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ. ಅತ್ಯಾಚಾರ ಸಂತ್ರಸ್ಥೆ ಅಥವಾ ಅತ್ಯಾಚಾರಕ್ಕೆ ಒಳಗಾಗಿ ಬರ್ಬರವಾಗಿ ಕೊಲೆಯಾದ ಮಹಿಳೆ/ಬಾಲಕಿ ಯಾವುದೇ ಜಾತಿಗೆ, ಧರ್ಮಕ್ಕೆ ಸೇರಿರಲಿ ಆಕೆ ಒಬ್ಬ ಹೆಣ್ಣು ಎಂದು ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೇ ಹೊರತು, ಜಾತಿ, ಧರ್ಮ ಮತ್ತು ಹಣಬಲದ ಆಧಾರದ ಮೇಲೆ ಆರೊಪಿಗಳನ್ನು ಹತ್ಯೆ ಮಾಡಬಾರದು. ನಮಗೆ ನಮ್ಮದೇ ಆದ ಕಾನೂನು, ನ್ಯಾಯ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನಮ್ಮ ರಾಜ್ಯದಲ್ಲೇ ನಡೆದ ಕೆಲವು ಘಟನೆಗಳನ್ನು ಪ್ರಸ್ತಾಪಿಸುವುದಾದರೆ ಉಮೇಶ್ ರೆಡ್ಡಿ ಪ್ರಕರಣ. ಆತ ಹತ್ತಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿ. ಆತನನ್ನು ಇದೇ ಪೊಲೀಸರು ಗುಂಡಿಕ್ಕಿ ಎನ್ ಕೌಂಟರ್ ಮಾಡಬಹುದಿತ್ತು. ಹಾಗೆ ಆಗಲೇ ಇಲ್ಲ. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮಹಿಳಾ ಸಂಘಟನೆಗಳು ಒಕ್ಕೊರಲಿನಿಂದ ಕೂಗಿ ಆಗ್ರಹಿಸಿದವು. ಕಾನೂನು ತಿಳುವಳಿಕೆ ಇದ್ದ ಉಮೇಶ್ ರೆಡ್ಡಿ ಪೊಲೀಸ್ ಪೇದೆಯಾಗಿದ್ದವನು. ಅವನಿಗೆ ಜೀವಾವಧಿ ಶಿಕ್ಷೆಯಾಯಿತು. ಉತ್ತರ  ಕರ್ನಾಟಕದ ದಾನಮ್ಮ, ದಕ್ಷಿಣ ಕನ್ನಡದ ಸೌಜನ್ಯ ಪ್ರಕಣಗಳ ಆರೋಪಿಗಳಿಗೆ ಸಮರ್ಪಕ ಶಿಕ್ಷೆ ಆಗಲೇ ಇಲ್ಲ. ಪೊಲೀಸ್ ವ್ಯವಸ್ಥೆ ಪ್ರಭಾವಿಗಳ ಮರ್ಜಿಗೆ ಒಳಗಾಯಿತು. ದಾನಮ್ಮ ಮತ್ತು ಸೌಜನ್ಯ ಕೆಳಜಾತಿಗೆ ಸೇರಿದವರು. ಇಲ್ಲಿ ಮೇಲ್ಜಾತಿಯ ವ್ಯಕ್ತಿಗಳು ಆರೋಪಿಗಳಾಗಿದ್ದರು. ಹೀಗಾಗಿ ಇಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಲೇ ಇಲ್ಲ.

ಪಶುವೈದ್ಯೆಯ ಪ್ರಕರಣದಲ್ಲಿ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಹಾಗಿದ್ದ ಮೇಲೆ ಬೇರೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸಮಾಜ ಒತ್ತಡ ಹಾಕಲಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ಯೂಡಲ್ ವ್ಯವಸ್ಥೆಯನ್ನು ಹೊಂದಿದೆ. ಈ ಪ್ಯೂಡಲ್ ವ್ಯವಸ್ಥೆ ಪೊಲೀಸರೊಂದಿಗೆ ಶಾಮೀಲಾಗಿ ಎನ್ ಕೌಂಟರ್ ನಡೆದಿರಲು ಸಾಧ್ಯವಿವೆ. ಆದರೆ ಪೊಲೀಸರು ದಿಢೀರನೇ ಎನ್ ಕೌಂಟರ್ ಮಾಡಿರುವುದು ಸರ್ವಥಾ ಸಮರ್ಥನೀಯವಲ್ಲ. ಬೇರೆ ಪ್ರಕರಣಗಳಲ್ಲಿ ಆಂಧ್ರ ಪೊಲೀಸರು ಇದೇ ರೀತಿ ವರ್ತಿಸಿದರೇ? ಉತ್ತರ ಮಾತ್ರ ಇಲ್ಲ.

ಮಹಿಳಾ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ ಅವರು ಹೇಳುವಂತೆ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ಖಂಡನೀಯ. ಅದರ ಸಮರ್ಥನೆಗೆ ಯಾರು ಇಳಿದರೂ ಸರಿಯಲ್ಲ. ಆದರೆ ಅತ್ಯಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆಯಾಗಬೇಕು. ಹೀಗೆ ಎನ್ ಕೌಂಟರ್ ಮಾಡುವುದನ್ನು ಬೆಂಬಲಿಸಲೂಬಾರದು. ಮುಂದೆ ಇದನ್ನೇ ಮಾದರಿಯಾಗಿಸಿಕೊಂಡ ಪ್ಯೂಡಲ್ ವ್ಯವಸ್ಥೆಯಲ್ಲಿ ಜನರೇ ಕಾನೂನನ್ನು ಕೈಗೆತ್ತಿಕೊಂಡು ಕೊಲ್ಲಲು ಆರಂಭಿಸಿದರೆ ಆತಂಕ ಉಂಟುಮಾಡುತ್ತದೆ. ಯಾವ ಮಹಿಳೆಯ ಮೇಲೇ ಲೈಂಗಿಕ ದೌರ್ಜನ್ಯ ಜೊತೆಗೆ ಕೊಲೆ ನಡೆದರೂ ಅದು ಎಂಥಾ ಪ್ರಭಾವಿಯಾದರೂ ಸಮನಾಗಿ ಶಿಕ್ಷೆಯಾಗಬೇಕು. ಉಳ್ಳವರಿಗೆ ಒಂದು ಬಡವರಿಗೆ ಒಂದು ನ್ಯಾಯ ಆಗಬಾರದು ಎನ್ನುತ್ತಾರೆ.

ದೇಶದಲ್ಲಿ ಇದೇ ಮೊದಲಿಗೆ ಅತ್ಯಾಚಾರ-ಕೊಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಿದೆ. ಇದು ಇತರ ಕಡೆಯೂ ಸನ್ನಿಯಂತೆ ಹರಡುವ ಅಪಾಯವಿದೆ. ದೇಶದೆಲ್ಲೆಡೆ ಇದು ಮಾದರಿ ಹಬ್ಬಿದರೆ ಜನರೇ ನಡುಬೀದಿಯಲ್ಲಿ ನಿಂತು ಕೊಲೆ ಮಾಡಲು ಹಿಂಜರಿಯುವುದಿಲ್ಲ. ಇದನ್ನು ಪೊಲೀಸ್ ಇಲಾಖೆ ಅರ್ಥಮಾಡಿಕೊಳ್ಳಬೇಕಿತ್ತು. ಪೊಲೀಸ್ ವೈಫಲ್ಯಗಳನ್ನು ಮುಚ್ಚಿಹಾಕಲು ಎನ್ ಕೌಂಟರ್ ಮಾಡಲಾಗಿದೆ ಮತ್ತು ಸರ್ಕಾರದ ಒತ್ತಡವೂ ಈ ಎನ್ ಕೌಂಟರ್ ಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ದಲಿತರು, ಮುಸ್ಲಿಮರು, ಹಿಂದುಳಿದ ಜಾತಿಗಳ ಮಹಿಳೆ/ಬಾಲಕಿಯರ ಮೇಲೆ ಅತ್ಯಾಚಾರ-ಕೊಲೆ ನಡೆದರೂ ಅಲ್ಲಿ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಸಿಗುವುದು ದುರ್ಬರ. ಅಷ್ಟೇ ಅಲ್ಲ, ಕೆಳಜಾತಿ ಧರ್ಮಕ್ಕೆ ಸೇರಿದ ಹೆಣ್ಣೇ ಅತ್ಯಾಚಾರಕ್ಕೆ ಒಳಗಾಗಲಿ, ಗಂಡೇ ಅತ್ಯಾಚಾರದಲ್ಲಿ ಭಾಗಿಯಾಗಿದ್ದರೂ ಶಿಕ್ಷೆ ಇವರೇ ಅನುಭವಿಸಬೇಕು. ಮೇಲ್ಜಾತಿಯ, ಧರ್ಮದ ಮತ್ತು ಹಣಬಲವುಳ್ಳ ಆರೋಪಿಗಳು ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಇದರಿಂದ ಸಮಾಜಕ್ಕೆ ಹೋಗುವ ಸಂದೇಶವೆಂದರೆ ಉಳ್ಳವರು ಏನು ಮಾಡಿದರೂ ಜಯಿಸಬಹುದು. ಇಲ್ಲವದವರು ಮಾತ್ರ ನೋವು ಸಂಕಟಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಎಂಬುದು. ಅತ್ಯಾಚಾರ ಯಾರೇ ಮಾಡಲಿ, ಕೊಲೆ ಯಾರೇ ಮಾಡಿರಲಿ ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯಾಗಬೇಕು. ಆದರೆ ಅದು ಸಮರ್ಪಕ ತ್ವರಿತ ವಿಚಾರಣೆಯ ನಂತರ ನ್ಯಾಯಾಲಯದ ಮೂಲಕ ಆಗಬೇಕೆ ಹೊರತು ಕಾಡಿನ ನ್ಯಾಯದ ರೀತಿಯಲ್ಲಿ ಅಲ್ಲ.

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ಅವರ ಸ್ವಂತದ್ದಾಗಿರುತ್ತವೆ. ಅವು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಕೆಳಜಾತಿ, ಮೇಲ್ಜಾತಿ, ಮಧ್ಯಜಾತಿ ಯಾವುದಕ್ಕೆ ಸೇರಿದ ಹೆಣ್ಣುಮಗಳ‌ ಮೇಲೆ ನಡೆಯುವ ಅತ್ಯಾಚಾರವಾಗಲಿ, ದೇಶದ ಯಾವ ಸಂದಿಯಲ್ಲಾಗಲಿ, ಅದು ಅತ್ಯಾಚಾರ ಅಷ್ಟೇ. ಹೆಣ್ಣು ಯಾವತ್ತೂ ಕೆಳಜಾತಿಯೇ.

    ಇಂದು ನಡೆದ ಎನ್ ಕೌಂಟರನ್ನು‌ ತಾಯಿಯಾಗಿ ನಾನು ಸ್ವಾಗತಿಸುವೆ/ವಿರೋಧಿಸುವೆ.

    ನಮ್ಮ ಮನೆಗಳ ಹೆಣ್ಣು ಮಕ್ಕಳನ್ನು‌ ಪ್ರಿಯಾಂಕ ಜಾಗದಲ್ಲಿ ಕಲ್ಪಿಸಿಕೊಂಡು ನೋಡಿ. ಮರು ಚಣವೆ ಅನಿಸುತ್ತದೆ, ಪೋಲೀಸರಲ್ಲ ನಾವೇ ಎನ್ಕೌಂಟರ್ ಮಾಡಿಬಿಡೋಣವೆಂದು. ಅತ್ಯಾಚಾರಿಗಳ ತಾಯಂದಿರ ಜಾಗದಲ್ಲಿ ನಿಂತು ನೋಡಿ , ಬದುಕಿರುವ ತನಕ‌ ಕಠಿಣ ಶಿಕ್ಷೆ ಅಂತಾದರೂ ಆಗಿದ್ದರೆ , ಮಗ ಜೀವಬೆರಸೆ ಯಾದರೂ ಇರುತ್ತಿದ್ದನೇ ಎನಿಸುತ್ತದೆ.

    ನನಗೆ ಈ ಲೇಖನ ಇಷ್ಟವಾಗಲಿಲ್ಲ.

  2. In our country there are certain group of people who talk as if they are messaiah of minority and down trodden class of people. who ever may be subject to attracity like rape and murder should not be clasified as uppercast and lowercast. We have seen the same group maintain silence when upper cast person undergoing the same pain. Its group and people like yours who are dividing nation on cast and religion. I strongly condem atrocity on person of any cast or religion. No political party or leader should use such cases for their gain.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...