Homeಮುಖಪುಟಗೋಡ್ಸೆ ದೇಶಭಕ್ತ ಹೇಳಿಕೆ ; ಅದು RSS, ಬಿಜೆಪಿಯ ಹೃದಯದ ಮಾತು - ರಾಹುಲ್ ಟೀಕೆ

ಗೋಡ್ಸೆ ದೇಶಭಕ್ತ ಹೇಳಿಕೆ ; ಅದು RSS, ಬಿಜೆಪಿಯ ಹೃದಯದ ಮಾತು – ರಾಹುಲ್ ಟೀಕೆ

- Advertisement -
- Advertisement -

‘ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಭಯೋತ್ಪಾದಕಿ’ ಎಂಬ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು ನಾನು ಟ್ವೀಟರ್ ನಲ್ಲಿ ಬರೆದಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ಪ್ರಗ್ಯಾ ಭಯೋತ್ಪಾದಕಿ ಎನ್ನುತ್ತೇನೆ. ಸರ್ಕಾರ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ದ ಎಂದು ಹೇಳಿದರು.

ಪ್ರಗ್ಯಾ ಅವರು ನಾಥೂರಾಮ್ ಗೋಡ್ಸೆಯಂತೆ ಹಿಂಸೆಯಲ್ಲಿ ನಂಬಿಕೆಯುಳ್ಳವರು. ಹಿಂಸೆಯನ್ನೇ ಪ್ರತಿಪಾದಿಸುತ್ತಾರೆ. ಇದನ್ನು  ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ವಿರುದ್ಧ ಕರಪತ್ರ ಹಂಚಿಲು ಹೋಗಿ ಸಿಕ್ಕಿಬಿದ್ದ ನಾಲ್ವರು ಹಿಂದೂ ಮಹಾಸಭಾದ ಕಾರ್ಯಕರ್ತರು

ಮಾಧ್ಯಮಪ್ರತಿನಿಧಿಗಳು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಹೌದು, ನನ್ನ ಹೇಳಿಗೆ ಈಗಲೂ ಬದ್ದ. ನಾನು ಟ್ವೀಟರ್ ನಲ್ಲಿ ಬರೆದಿದ್ದೇನೆ. ಬಿಜೆಪಿ ನನ್ನ ವಿರುದ್ಧ ಕ್ರಮ ಕೈಗೊಂಡರೂ ನಾನು ಅದನ್ನು ಸ್ವಾಗತಿಸುತ್ತೇನೆ ಎಂದರು.

ಆಕೆ ಹಿಂಸಾವಾದದಲ್ಲಿ ನಂಬಿಕೆಯಿಟ್ಟಿದ್ದಾರೆ. ಅದಕ್ಕೆ ನನ್ನ ಸಮ್ಮತಿ ಇಲ್ಲ ಎಂದು ಹೇಳಿದ್ದಾರೆ. ಆರ್ ಎಸ್.ಎಸ್ ಮತ್ತು ಬಿಜೆಪಿಯ ಹೃದಯದಲ್ಲಿರುವುದನ್ನು ಆಕೆ ಹೇಳಿದ್ದಾರೆ. ಅದನ್ನು ಮುಚ್ಚಿಡಲು ಆಗುವುದಿಲ್ಲ.

ಭಯೋತ್ಪಾದಕಿ ಪ್ರಜ್ಞಾ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದಿದ್ದಾರೆ. ಇದು ಸಂಸತ್ತಿನ ಇತಿಹಾಸದಲ್ಲಿ ದುಃಖದ ದಿನ ಎಂದು ನಿನ್ನೆ ರಾಹುಲ್‌ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read