Homeಅಂತರಾಷ್ಟ್ರೀಯಸೋಮವಾರ ಟ್ರಂಪ್‌ ವಿರುದ್ಧ 2ನೇ ದೋಷಾರೋಪಣೆ?: ಭವಿಷ್ಯದಲ್ಲಿ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಾಧ್ಯತೆ!

ಸೋಮವಾರ ಟ್ರಂಪ್‌ ವಿರುದ್ಧ 2ನೇ ದೋಷಾರೋಪಣೆ?: ಭವಿಷ್ಯದಲ್ಲಿ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಾಧ್ಯತೆ!

ಸೋಮವಾರ ಟ್ರಂಪ್ ಎರಡನೇ ದೋಷಾರೋಪಣೆ (Impeachment) ಎದುರಿಸಬೇಕಾಗಬಹುದು ಎನ್ನಲಾಗಿದೆ. ಇದರ ಸ್ವರೂಪ ಹೇಗಿರಲಿದೆ?

- Advertisement -
- Advertisement -

ಕಾಂಗ್ರೆಸ್‌ನಲ್ಲಿನ ಡೆಮೋಕ್ರಾಟ್‌ಗಳು ಸೋಮವಾರ ಟ್ರಂಪ್ ಅವರ ದುರ್ನಡತೆ ಆರೋಪಗಳನ್ನು ಪ್ರಸ್ತಾಪಿಸಲು ಯೋಜಿಸಿದ್ದಾರೆ. ಇದು ಟ್ರಂಪ್ ಎರಡನೆ ಬಾರಿಗೆ ದೋಷಾರೋಪಣೆ ಎದುರಿಸುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಟ್ರಂಪ್ ಅವರ ಚುನಾವಣಾ ವಂಚನೆಯ ಸುಳ್ಳು ಹೇಳಿಕೆಗಳು ಮತ್ತು ಕಾಂಗ್ರೆಸ್ ಮೇಲೆ (ಕ್ಯಾಪಿಟಲ್ ಮೇಲೆ) ದಾಳಿ ನಡೆಸಲು ಬೆಂಬಲಿಗರಿಗೆ ಪ್ರಚೋದನೆ ನೀಡಿದರು ಎಂಬ ಅಂಶಗಳ ಆಧಾರದಲ್ಲಿ ಈ ದೋಷಾರೋಪಣೆ ನಡೆಯಬಹುದು ಎನ್ನಲಾಗಿದೆ.

ದೋಷಾರೋಪಣೆ (Impeachment) ಹೇಗಿರುತ್ತದೆ?

ಇಂಪೀಚ್‌ಮೆಂಟ್ ಬಗ್ಗೆ ಇರುವ ಒಂದು ತಪ್ಪು ತಿಳುವಳಿಕೆ ಎಂದರೆ, ಅದು ಅಧ್ಯಕ್ಷ ಪದವಿಯಿಂದ ಕಿತ್ತು ಹಾಕುತ್ತದೆ ಎಂಬುದು. ಆದರೆ ಇದು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಂದರೆ ಕಾಂಗ್ರೆಸ್‌ನ ಕೆಳಮನೆಯು, ಗುರುತರ ಅಪರಾಧ ಅಥವಾ ದುಷ್ಕೃತ್ಯದ ಅಪಾದನೆಗಳನ್ನು ಮಾಡುವ ಪ್ರಕ್ರಿಯೆ. ಒಂಥರಾ ಕ್ರಿಮಿನಲ್ ಪ್ರಕರಣದಲ್ಲಿ ದೋಷಾರೋಪಣೆ ಮಾಡಿದಂತೆ.

435 ಸದಸ್ಯರ ಕೆಳಮನೆಯು ಸರಳ ಬಹುಮತದಲ್ಲಿ ಅಪಾದನೆಗಳನ್ನು ಪ್ರಸ್ತಾಪಿಸಲು ಯಶಸ್ವಿಯಾದರೆ, ಇದು ಸೆನೆಟ್ (ಮೇಲ್ಮನೆ)ಗೆ ವರ್ಗಾಯಿಸಲ್ಪಡುತ್ತದೆ. ಸೆನೆಟ್ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ.

ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷನನ್ನು ಶಿಕ್ಷೆಗೆ ಒಳಪಡಿಸಲು ಮತ್ತು ಹುದ್ದೆಯಿಂದ ತೆಗೆಯಲು ಸೆನೆಟ್‌ನ 2/3 (ಮೂರನೇ ಎರಡು ಭಾಗ) ಬಹುಮತ ಅಗತ್ಯ.

ಆದರೆ ಹಳೆಯ ಎರಡು ಐತಿಹಾಸಿಕ ಪ್ರಕರಣಗಳನ್ನು ಗಮನಿಸಿದರೆ, ಟ್ರಂಪ್ ಪದಚ್ಯುತಿಗೆ ಸೆನೆಟ್‌ನಲ್ಲಿ ಸರಳ ಬಹುಮತವು ಸಾಕು ಎನಿಸುತ್ತದೆ, ಇದು ಭವಿಷ್ಯದಲ್ಲಿ ಟ್ರಂಪ್ ಆ ಹುದ್ದೆ ಏರುವುದನ್ನೂ ತಡೆಗಟ್ಟಬಹುದು.

ಈ ಜನವರಿಯಲ್ಲಿ ಸೆನೆಟ್ ಮೇಲೆ ನಿಯಂತ್ರಣ ಹೊಂದಲಿರುವ ಡೆಮಾಕ್ರಟ್ಸ್, 2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸಿದಂತೆ ನಿರ್ಣಯಿಸುವ ಅವಕಾಶವನ್ನೂ ಪಡೆಯಲಿದ್ದಾರೆ.

ಆದರೆ ಇಲ್ಲಿ ಒಂದು ತೊಡಕಿದೆ. ಚುನಾವಣೆಯ ಸ್ಪರ್ಧೆಯಿಂದ ಅನರ್ಹತೆಗೊಳಿಸುವ ಮತದಾನಕ್ಕೂ ಮೊದಲು, ಶಿಕ್ಷಿಸಬೇಕು ಮತ್ತು ಪದವಿಯಿಂದ ಪದಚ್ಯುತಿಗೊಳಿಸಬೇಕೇ ಎಂಬ ವಿಷಯದ ಮೇಲೆ ಮತದಾನ ನಡೆಯಲಿದೆ. ಮೊದಲನೆಯದು ಯಶಸ್ವಿಯಾದರಷ್ಟೇ ಎರಡನೆ ಪ್ರಕ್ರಿಯೆ ನಡೆಯಲಿದೆ.

ಯುನಿವರ್ಸಿಟಿ ಆಫ್ ಕ್ಯಾಲಿರೋಡಾದ ಕಾನೂನು ಪ್ರೊಫೆಸರ್ ಪೌಲ್ ಕ್ಯಾಂಪೋಸ್, ‘ಸೆನೆಟ್‌ಗೆ ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸಲಾರದಂತೆ ಅನರ್ಹಗೊಳಿಸುವ ವೋಟಿಂಗ್ ಅಧಿಕಾರ ಮಾತ್ರವಿದೆ. ಜನೆವರಿ 20ರಂದು ಟ್ರಂಪ್ ನಿರ್ಗಮಿಸಲಿರುವ ದಿನದವರೆಗೂ ಇಂಪೀಚ್‌ಮೆಂಟ್ ವಿಚಾರಣೆ ಚಾಲ್ತಿಯಲ್ಲಿದ್ದರೆ ಈ ವಿದ್ಯಮಾನ ಸಂಭವಿಸಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಗಮನದ ನಂತರ ಇಂಪ್ರೀಚ್‌ಮೆಂಟ್ ಸಾಧ್ಯವೇ?

ಈ ಕುರಿತು ಯಾವ ನ್ಯಾಯಾಲಯವೂ ಸ್ಪಷ್ಟವಾಗಿ ತಿಳಿಸಿಲ್ಲವಾದರೂ, ತಜ್ಞರ ಪ್ರಕಾರ, ಟ್ರಂಪ್ ನಿರ್ಗಮನದ ನಂತರವೂ ಭವಿಷ್ಯದಲ್ಲಿ ಈ ಹುದ್ದೆಗೇರದಂತೆ ಅನರ್ಹಗೊಳಿಸುವ ವಿಷಯ ಜೀವಂತವಿರುತ್ತದೆ.

ಎರಡು ಸಲ ದೋಷಾರೋಪಣೆ

ಈ ಹಿಂದಿನ ಯಾವುದಾದರೂ ಅಮೆರಿಕ ಅಧ್ಯಕ್ಷ ಎರಡು ಬಾರಿ ಇಂಪೀಚ್‌ಮೆಂಟ್ ಎದುರಿಸಿದ್ದಾರೆಯೇ? ಇಲ್ಲಿವರೆಗೆ ಇದು ಸಂಭವಿಸಿಲ್ಲ. ಈ ಕುರಿತು ಕಾಂಗ್ರೆಸ್ ಅಷ್ಟೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ.
2019ರಲ್ಲಿ ಟ್ರಂಪ್ ವಿರುದ್ಧ ಅಧಿಕಾರ ದುರ್ಬಳಕೆಯ ಕಾರಣದಲ್ಲಿ ಇಂಪೀಚ್‌ಮೆಂಟ್ ಮಾಡಲಾಗಿತ್ತು. ಆದರೆ ಮುಂದೆ ಫೆಬ್ರುವರಿ 2020ರಲ್ಲಿ ರಿಪಬ್ಲಿಕನ್‌ಗಳೇ ಹೆಚ್ಚಿದ್ದ ಸೆನೆಟ್ ಅವರನ್ನು ಆರೋಪಮುಕ್ತ ಮಾಡಿತ್ತು.
ಟ್ರಂಪ್ ಇಂಪೀಚ್‌ಮೆಂಟ್‌ಗೆ ಜೋ ಬೈಡೆನ್ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಆದರೆ ಸೋಮವಾರ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....

ಪಂಜಾಬ್: ತರಗತಿಯೊಳಗೆ ವಿದ್ಯಾರ್ಥಿನಿಯನ್ನು ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು...

ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ. ಅಸ್ಸಾಂ...

‘ಎಂಡಿಎಂಎ ಡ್ರಗ್ಸ್ ಕೇಂದ್ರವಾಗಿ ಮಾರ್ಪಟ್ಟ ಮಧ್ಯಪ್ರದೇಶ-ರಾಜಸ್ಥಾನ ಗಡಿ’: 13ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು. 

ಭೋಪಾಲ್: ದೇಶದ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಮಾರ್ಗವಾಗಿ ದೀರ್ಘಕಾಲದಿಂದ ಕುಖ್ಯಾತಿ ಗಳಿಸಿರುವ ಪಶ್ಚಿಮ ಮಧ್ಯಪ್ರದೇಶ ಮತ್ತು ಪಕ್ಕದ ಆಗ್ನೇಯ ರಾಜಸ್ಥಾನದ ಜಿಲ್ಲೆಗಳು ಈಗ MDMA ಸಂಶ್ಲೇಷಿತ ಡ್ರಗ್ಸ್ ಅಕ್ರಮ ಉತ್ಪಾದನೆ ಮತ್ತು...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...

ಪ್ರಬಲಜಾತಿ ಯುವತಿಯೊಂದಿಗೆ ಗ್ರಾಮ ತೊರೆದ ದಲಿತ ಯುವಕ; ಕುಟುಂಬದ ಮೇಲೆ ದಾಳಿ ಮಾಡಿದ ಹದಿಮೂರು ಜನರ ಬಂಧನ

ಸೂರತ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಆಕೆಯ ಇಬ್ಬರು ವಯಸ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಶನಿವಾರ ಒಂದೇ ಕುಟುಂಬದ 13 ಸದಸ್ಯರನ್ನು ಬಂಧಿಸಿದ್ದಾರೆ. ಆಕೆಯ...

‘ದೆಹಲಿ ಖಾಲಿಸ್ತಾನವಾಗಲಿದೆ’: 10 ಶಾಲೆಗಳು, ಸಂಸತ್ತಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ವಿದ್ಯಾರ್ಥಿಗಳ ಸ್ಥಳಾಂತರ

ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ಸಂಸತ್ತಿನ ಕನಿಷ್ಠ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭಾರಿ ಭದ್ರತಾ ಪ್ರತಿಕ್ರಿಯೆ ನೀಡಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ತಿಳಿಸಿವೆ. ಡಿಎಫ್‌ಎಸ್ ಪ್ರಕಾರ, ಬೆಳಿಗ್ಗೆ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತರ ಪಾಲಿಗೆ ಮರಣಶಾಸನ: ಸಿಎಂ ಸಿದ್ದರಾಮಯ್ಯ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ...