Homeಮುಖಪುಟ2017 ರ ನಂತರದ ಎಲ್ಲಾ ಮಾಸಿಕ ವರದಿಯನ್ನು ತೆಗೆದು ಹಾಕಿದ ರಕ್ಷಣಾ ಸಚಿವಾಲಯ!

2017 ರ ನಂತರದ ಎಲ್ಲಾ ಮಾಸಿಕ ವರದಿಯನ್ನು ತೆಗೆದು ಹಾಕಿದ ರಕ್ಷಣಾ ಸಚಿವಾಲಯ!

ಈ ಹಿಂದೆ ಜೂನ್ 2020 ರ ವರದಿಯನ್ನು ಆಗಸ್ಟ್‌ನಲ್ಲಿ ಕಿತ್ತು ಹಾಕಲಾಗಿತ್ತು, ಅದರಲ್ಲಿ ಮೇ 2020 ರ ನಂತರ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪದ ಗಲ್ವಾನ್ ಕಣಿವೆಯಲ್ಲಿ ಚೀನೀಯರ ಆಕ್ರಮಣ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು.

- Advertisement -
- Advertisement -

ರಕ್ಷಣಾ ಸಚಿವಾಲಯದ 2017 ರ ನಂತರದ ಎಲ್ಲಾ ಮಾಸಿಕ ವರದಿಗಳನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಿದೆ ಎಂದು ವರದಿಯಾಗಿದೆ. ಈ ಹಿಂದೆ ಸಚಿವಾಲಯವು ಲಡಾಖ್‍ನಲ್ಲಿ ಚೀನಾದ ಆಕ್ರಮಣದ ಬಗ್ಗೆ ಸೂಚಿಸಿದ್ದ ಮಾಸಿಕ ವರದಿಯನ್ನು ತನ್ನ ವೆಬ್ ಸೈಟ್‍ನಿಂದ ತೆಗೆದು ಹಾಕಿತ್ತು.

ಇದೇಗ ಡಿಲೀಟ್ ಮಾಡಿರುವ ವರದಿಯಲ್ಲಿ 2017 ಡೋಕ್ಲಾಂ ಬಿಕ್ಕಟ್ಟಿನ ವರದಿಗಳೂ ಸೇರಿದೆ. ಇದರಲ್ಲಿ ಭಾರತ-ಚೀನಾ ಸೇನಾ ಪಡೆಗಳ ನಡುವಿನ ಉದ್ವಿಗ್ನತೆಯನ್ನು ಉಲ್ಲೇಖಿಸಿರಲಿಲ್ಲ. ಈ ವರದಿಗಳನ್ನು ಯಾಕೆ ತೆಗೆದು ಹಾಕಲಾಗಿದೆಯೆಂದು ರಕ್ಷಣಾ ಸಚಿವಾಲಯ ಅಧೀಕೃತವಾಗಿ ಹೇಳದಿದ್ದರೂ ಹಳೆಯ ವರದಿಗಳು ಈ ತಿಂಗಳ ಒಳಗೆ ಮತ್ತೆ ವೆಬ್‌ಸೈಟ್‍ನಲ್ಲಿ ಕಾಣಿಸಬಹುದು ಎಂದು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ:ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!

ವರದಿಗಳನ್ನು ಹೆಚ್ಚು ವಿಸ್ತೃತ ಹಾಗೂ ಸಮಗ್ರಗೊಳಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆಯಾದರೂ ಈ ವರದಿಗಳು ಪ್ರಮುಖ ಘಟನಾವಳಿಗಳಾದ ಬಾಲಾಕೋಟ್ ವಾಯುದಾಳಿ, ಭಾರತ-ಪಾಕಿಸ್ತಾನದ ನಡುವೆ ನಂತರ ಉಂಟಾದ ಸಂಘರ್ಷಮಯ ವಾತಾವರಣ ಹಾಗೂ ಡೋಕ್ಲಾಂ ಸ್ಥಿತಿಯ ಕುರಿತು ಮೌನ ವಹಿಸಿವೆ.

ಈ ಹಿಂದೆ ಜೂನ್ 2020 ರ ವರದಿಯನ್ನು ಆಗಸ್ಟ್‌ನಲ್ಲಿ ಕಿತ್ತು ಹಾಕಲಾಗಿತ್ತು. ಆ ವರದಿಯಲ್ಲಿ ಮೇ 2020 ರ ನಂತರ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪದ ಗಲ್ವಾನ್ ಕಣಿವೆಯಲ್ಲಿ ಚೀನೀಯರ ಆಕ್ರಮಣ ಹೆಚ್ಚಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ಚೀನಾದೊಂದಿಗಿನ ನಿಲುವಿನ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದ ರಾಹುಲ್ ಗಾಂಧಿ ಡಿಲಿಟ್ ಮಾಡಿರುವ ವರದಿಯನ್ನು ಸೂಚಿಸಿ ಪ್ರಧಾನಿ ಯಾಕೆ ಸುಳ್ಳು ಹೇಳುತ್ತದ್ದಾರೆ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:1962 ರ ನಂತರ ಇದೇ ಮೊದಲ ಬಾರಿಗೆ ಲಡಾಖ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ಒಪ್ಪಿಕೊಂಡ ವಿದೇಶಾಂಗ ಸಚಿವ

ವಿಡಿಯೋ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...