ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಯೂಟ್ಯೂಬ್ ಚಾನೆಲ್ಗಳಿಗೆ ನಿರ್ಬಂಧಿಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡಿಸಿದ್ದು, ಈ ದಿಗ್ಬಂಧನವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.
ಅನುರಾಗ್ ಸಿಂಗ್ ಠಾಕೂರ್ ನೇತೃತ್ವದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಯು ಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸುವ ಇಂತಹ ಕಠಿಣ ಆದೇಶದ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಆಗ್ರಹಿಸಿದೆ.
ಕಳೆದ 10ದಿನಗಳಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಎರಡು ಹಿಂದಿ ಸುದ್ದಿ ಚಾನಲ್ಗಳನ್ನು ಬ್ಲಾಕ್ ಮಾಡುವಂತೆ ಯೂಟ್ಯೂಬ್ಗೆ ಸೂಚಿಸಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇಂತಹ ಕ್ರಮಗಳು ಮಾದ್ಯಮಗಳ ಸ್ವಾತಂತ್ರ್ಯಗಳ ಮೇಲಿನ ದಾಳಿಯಾಗಿದೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮತ್ತು ಪ್ರೆಸ್ ಅಸೋಸಿಯೇಷನ್ ಇಂತಹ ಸರಕಾರದ ಕ್ರಮಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ಏಪ್ರಿಲ್ ಆರಂಭದಿಂದ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (MIB) ಎರಡು ಹಿಂದಿ ಸುದ್ದಿವಾಹಿನಿಗಳ ಚಾನೆಲ್ಗಳನ್ನು ನಿರ್ಬಂಧಿಸಲು YouTubeಗೆ ನಿರ್ದೇಶಿಸಿದೆ, ಬೋಲ್ಟಾ ಹಿಂದೂಸ್ತಾನ್’ ಮತ್ತು ‘ನ್ಯಾಷನಲ್ ದಸ್ತಕ್’ ನಿರ್ಬಂಧಕ್ಕೊಳಗಾದ ಯೂಟ್ಯೂಬ್ ಚಾನೆಲ್ಗಳಾಗಿದೆ. ‘ಬೋಲ್ಟಾ ಹಿಂದೂಸ್ತಾನ್’ 3 ಲಕ್ಷ ಚಂದಾದಾರರನ್ನು ಹೊಂದಿದ್ದು, ‘ನ್ಯಾಷನಲ್ ದಸ್ತಕ್’ 94.2 ಲಕ್ಷ ಚಂದಾದಾರರನ್ನು ಹೊಂದಿವೆ.
ಈ ಚಾನೆಲ್ಗಳ ಮಾಲೀಕರಿಗೆ ಕಳುಹಿಸಲಾದ ಇಮೇಲ್ಗಳಲ್ಲಿ, ತಮಗೆ ಮಾಹಿತಿ ತಂತ್ರಜ್ಞಾನದ ನಿಯಮದಡಿ YouTube ಚಾನಲ್ನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದಿಂದ ಸೂಚನೆ ಬಂದಿದೆ ಎಂದು ತಿಳಿಸಿದೆ. ಈ ಎರಡು ಚಾನೆಲ್ಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್ಗೆ ನಿರ್ದೇಶಿಸುವ MIBಯ ಸೂಚನೆಗಳ ಕಾನೂನು ಬದ್ಧತೆಯನ್ನು ಪ್ರಶ್ನಿಸಲಾಗಿದೆ, ಚಾನಲ್ಗಳಿಗೆ ನಿರ್ಬಂಧ ವಿಧಿಸುವಾಗ ಅನುಸರಿಸಬೇಕಾದ ಕಾನೂನು ಕಾರ್ಯವಿಧಾನವನ್ನು ಪಾಲಿಸಿಲ್ಲ ಎಂದು ತಜ್ಞರು ಆರೋಪಿಸಿದ್ದಾರೆ.
ಏಪ್ರೀಲ್ 13ರಂದು ಇವಿಎಂ ಮತ್ತು ವಿವಿಪ್ಯಾಟ್ಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸಿದ್ದ ಸೋನಿತ್ ಮಿಶ್ರಾ ಮತ್ತು ಮೇಗಾನಂದ್ ಅವರಿಗೆ ನೊಟೀಸ್ ನೀಡಲಾಗಿದೆ. ಇದಕ್ಕೂ ಮೊದಲು ಹಲವಾರು ಎಕ್ಸ್ ಬಳಕೆದಾರರ ಖಾತೆಗಳು, ಸ್ವತಂತ್ರ ಪತ್ರಕರ್ತರ ಮತ್ತು ರೈತ ಪ್ರತಿಭಟನಾಕಾರರ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸರಕಾರದ ಈ ಕ್ರಮಗಳ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.
The Press Club of India condemns blocking of YouTube channels
Information and Broadcasting ministry, headed by Anurag Singh Thakur, must disclose the reason behind such draconian orders of blocking You Tube channels.
We demand immediate lifting of this blockade. pic.twitter.com/WuGqojLwe6
— Press Club of India (@PCITweets) April 13, 2024
ಇದನ್ನು ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಇಬ್ಬರ ಹತ್ಯೆ