Homeಮುಖಪುಟಸ್ಟ್ಯಾನ್ ಸ್ವಾಮಿ ಸಾವು ಮತ್ತು ದಮನಕಾರಿ ಕಾನೂನುಗಳ ಕರಾಳ ಕಥೆ

ಸ್ಟ್ಯಾನ್ ಸ್ವಾಮಿ ಸಾವು ಮತ್ತು ದಮನಕಾರಿ ಕಾನೂನುಗಳ ಕರಾಳ ಕಥೆ

ದೇಶದ ಭದ್ರತೆ, ಜನರ ರಕ್ಷಣೆಗೆ ಕಾನೂನುಗಳು ಅಗತ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಕಾನೂನುಗಳು ಸಂವಿಧಾನ ಆಶಯಗಳನ್ನು ಗಾಳಿಗೆ ತೂರುತ್ತಿದ್ದರೆ?

- Advertisement -
- Advertisement -

1990ರ ದಶಕದಿಂದಲೇ ಜಾರ್ಖಂಡ್‌ನ ಆದಿವಾಸಿಗಳು ಮತ್ತು ವಂಚಿತ ಸಮುದಾಯಗಳ ಹಕ್ಕುಗಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರ ಮೇಲೆ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಆರೋಪವನ್ನು ಹೊರಿಸಲಾಗಿತ್ತು. ಇದೀಗ ಸ್ಟ್ಯಾನ್ ಸ್ವಾಮಿಯವರ ಸಾವಿಗೆ ಸಂಬಂಧಿಸಿದಂತೆ ದೇಶ-ವಿದೇಶಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಾರತದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಸಾವು ಮಹಾ ದುರಂತ ಎಂದು ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯ, ಅಸಡ್ಡೆ ತೋರಿದ ನ್ಯಾಯಾಲಯಗಳು ಮತ್ತು ದುರುದ್ದೇಶಪೂರಿತ ತನಿಖಾ ಸಂಸ್ಥೆಗಳು ಈ ಸಾವಿಗೆ ಜವಾಬ್ದಾರರಾಗಿದ್ದು, ಸ್ವಾಮಿಯವರ ಸಾವು ಒಂದು ಸಾಂಸ್ಥಿಕ ಹತ್ಯೆಯಾಗಿದೆ ಎಂದು ಸ್ವಾಮಿಯವರ ಕುಟುಂಬಸ್ಥರು ಮತ್ತು ಸ್ನೇಹಿತರು ಹೇಳಿದ್ದಾರೆ.

ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿದ್ದ ಸ್ಟ್ಯಾನ್ ಸ್ವಾಮಿಯವರಿಗೆ ಅಗತ್ಯ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು. ಪಾನೀಯ ಸೇವನೆಗಾಗಿ ಅಗತ್ಯವಿದ್ದ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೂ ಅವಕಾಶ ನೀಡಿರಲಿಲ್ಲ. ಈ ನಡುವೆ ಜಾಮೀನು ಸಿಗದಿದ್ದರೆ ತನ್ನ ಸಾವು ಸಂಭವಿಸಬಹುದು ಎಂದು ಅವರು ಆತಂಕ ತೋಡಿಕೊಂಡರೂ, ಅವರ ರೋದನಕ್ಕೆ ನ್ಯಾಯಾಲಯ ಮರುಗಲೇ ಇಲ್ಲ. ಕೋರ್ಟ್ ಎರಡು ಬಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಸ್ವಾಮಿಯವರು 7 ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿದ್ದರೂ ಎನ್.ಐ.ಎ ಅವರ ವಿಚಾರಣೆಯನ್ನೇ ನಡೆಸಿರಲಿಲ್ಲ ಎಂದು ಸ್ವತಃ ಅವರ ವಕೀಲರು ಹೇಳಿದ್ದಾರೆ. ಕೊನೆ ಗಳಿಗೆಯಲ್ಲಿ ಮೂರನೇ ಜಾಮೀನು ಅರ್ಜಿ ವಿಚಾರಣೆ ನಡೆಯುವ ಒಂದು ಗಂಟೆ ಮೊದಲು ಅವರು ಪ್ರಾಣ ತೆತ್ತರು. ಆರೋಪಿಯಾದವನು ತನ್ನ ಮೇಲಿನ ಆರೋಪ ಸಾಬೀತಾಗುವವರೆಗೂ ಆತ ಅಮಾಯಕನಾಗಿಯೇ ಇರುತ್ತಾನೆ. ಇದು ಆರೋಪಿಯ ಕುರಿತಂತೆ ಇರುವ ಸಾಮಾನ್ಯ ಪರಿಕಲ್ಪನೆ. ಆರೋಪಿ ಬಂಧನದಲ್ಲಿರುವಾಗ ತನ್ನೆಲ್ಲಾ ಮಾನವ ಹಕ್ಕುಗಳನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಬಂಧಿತರೊಂದಿಗೆ ಮಾನವೀಯವಾಗಿ ವರ್ತಿಸುವುದು ಜೈಲು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅದಕ್ಕಿಂತಲೂ ಮಿಗಿಲಾಗಿ ಅಪರಾಧಿಯ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕೆಂದೂ ಕಾನೂನು ಹೇಳುತ್ತದೆ. ಇಷ್ಟೆಲ್ಲಾ ನಿಯಮಗಳು ಇದ್ದರೂ ಪಾರ್ಕಿನ್ಸನ್ಸ್ ಪೀಡಿತ 84ರ ಹರೆಯದ ವೃದ್ಧ ಸ್ಟ್ಯಾನ್ ಸ್ವಾಮಿಯವರ ಅಮಾನವೀಯ ಸಾವಿಗೆ ಕಾರಣವೇನು? ಈ ಪರಿಸ್ಥಿತಿಯಲ್ಲಿ ಚರ್ಚೆಗೆ ಬರುವುದು ಯುಎಪಿಎಯಂತಹ ದಮನಕಾರಿ ಕಾನೂನುಗಳ ಕರಾಳ ಮುಖ.

ದೇಶದ ಭದ್ರತೆ ಹಾಗೂ ಜನರ ರಕ್ಷಣೆಗೆ ಕಾನೂನುಗಳು ಅಗತ್ಯವಾಗಿ ಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಕಾನೂನುಗಳು ಸಂವಿಧಾನ ಆಶಯಗಳನ್ನು ಗಾಳಿಗೆ ತೂರುತ್ತಿದ್ದರೆ, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದರೆ ಅಂತಹ ಕಾನೂನುಗಳಿಂದ ಪ್ರಯೋಜಕ್ಕಿಂತ ಅಪಾಯವೇ ಹೆಚ್ಚು. ಭಾರತದಲ್ಲಿ ದಮನಕಾರಿ ಕಾನೂನುಗಳ ಇತಿಹಾಸವು ಭಯಾನಕವಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಟಾಡಾ ಮತ್ತು ಪೋಟಾಗಳೆಂಬ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗಿತ್ತು. ಆದರೆ ಆ ಕಾನೂನುಗಳನ್ನು ಕಾರ್ಯಗತಗೊಳಿಸುವ ವೇಳೆ ಸ್ವಜನ ಪಕ್ಷಪಾತ, ಪೂರ್ವಗ್ರಹಪೀಡಿತ ಧೋರಣೆ, ದುರ್ಬಳಕೆಯ ಮಾತುಗಳು ವ್ಯಾಪಕವಾಗಿ ಕೇಳಿ ಬಂದವು. ಈ ಮಧ್ಯೆ, ಅಮಾಯಕ ಯುವಕರು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ವರ್ಷಾನುಗಟ್ಟಳೆ ಕೊಳೆಯಬೇಕಾಯಿತು. ಅಕ್ರಮ ಬಂಧನಗಳ ಸರಣಿ ಮುಂದುವರಿದು ಮಾಡದ ತಪ್ಪಿಗಾಗಿ ಯುವಕರು ತೀವ್ರ ತೆರನಾದ ಚಿತ್ರಹಿಂಸೆಯನ್ನು ಅನುಭವಿಸಬೇಕಾಯಿತು.

ಪೊಲೀಸರ ಅನ್ಯಾಯದ ಕಾರ್ಯಾಚರಣೆಗಳು ಸಂತ್ರಸ್ತರ ಬದುಕನ್ನು ಕತ್ತಲೆಗೆ ದೂಡಿತು. ಈ ಕರಾಳ ಕಾನುನಿನ ಪ್ರಮುಖ ಸಂತ್ರಸ್ತರು ಬಹುತೇಕ ಮುಸ್ಲಿಮರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ. ಕೊನೆಗೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಮಾತುಗಳು ಕೇಳಿ ಬಂದಾಗ 1995ರಲ್ಲಿ ಟಾಡಾ ಕಾನೂನನ್ನು ರದ್ದುಪಡಿಸಲಾಯಿತು. ಅಮೆರಿಕಾದಲ್ಲಿ ನಡೆದ 9/11 ದಾಳಿಯ ಹಿನ್ನೆಲೆಯಲ್ಲಿ 2002ರಲ್ಲಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪೋಟಾ ಕಾನೂನನ್ನು ಅಂಗೀಕರಿಸಲಾಗಿತ್ತು. ಇದು ಟಾಡಾದ ಸುಧಾರಿತ ಕಾನೂನು ಆಗಬೇಕೆಂಬುದು ಇದರ ಉದ್ದೇಶವಾಗಿತ್ತು. ಆದರೆ ಆ ನಂತರದಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಟಾಡಾ, ಪೋಟಾಗಿಂತಲೂ ಕರಾಳ ಕಾನೂನಾಗಿತ್ತು ಎಂಬ ಅಂಶ ಅನುಭವಕ್ಕೆ ಬಂತು. ಆರೋಪಿ ತಾನು ಆರೋಪ ಮುಕ್ತನಾಗಬೇಕಾದರೆ ಅದಕ್ಕೆ ಬೇಕಾದ ಪುರಾವೆಯನ್ನು ತಾನೇ ಸಲ್ಲಿಸಬೇಕಾಗಿತ್ತು. ಒಂದು ರೀತಿಯಲ್ಲಿ ಇದು ಅಪರಾಧ ನ್ಯಾಯ ವ್ಯವಸ್ಥೆಯ ತತ್ವ ಸ್ವರೂಪವನ್ನೇ ಬುಡಮೇಲುಗೊಳಿಸಿತು. ಪೊಲೀಸರು ಸೃಷ್ಟಿಸಿದ ಕಲ್ಪಿತ ಕಥೆಗಳ ಆಧಾರದಲ್ಲಿಯೇ ನ್ಯಾಯಾಲಯಗಳು ವಿಚಾರಣೆಯನ್ನು ಪ್ರಾರಂಭಿಸಿದ್ದವು. ಗಮನಾರ್ಹವೆಂದರೆ, ಅಂದಿನ ಬಿಜೆಪಿ ಸರಕಾರ ತನ್ನ ರಾಜಕೀಯ ಅಜೆಂಡಾಗಳ ಅನುಷ್ಠಾನಕ್ಕಾಗಿ ಈ ಕಾನೂನನ್ನು ವ್ಯಾಪಕ ದುರ್ಬಳಕೆಗೆ ಒಳಪಡಿಸಿತ್ತು.

ಭಾರೀ ಜನಾಕ್ರೋಶದ ಬಳಿಕ ಟಾಡಾ ಮತ್ತು ಪೋಟಾಗಳನ್ನು ರದ್ದುಪಡಿಸಲಾಯಿತಾದರೂ, 1967ರಲ್ಲಿ ತರಲಾಗಿದ್ದ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯನ್ನು ತಿದ್ದುಪಡಿಗಳ ಮೂಲಕ ಮತ್ತಷ್ಟು ಕರಾಳಗೊಳಿಸಲಾಯಿತು. ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ತರಲಾದ ಈ ಕಾನೂನಿನ ಪ್ರಕಾರ, ಪೊಲೀಸರಿಗೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳು, ಅದಕ್ಕಾಗಿ ಜನರನ್ನು ಸಿದ್ಧಪಡಿಸುವವರು ಮತ್ತು ಆ ಚಟುವಟಿಕೆಗಳನ್ನು ಪ್ರಚೋದಿಸುವ ವ್ಯಕ್ತಿಗಳನ್ನೂ  ಗುರಿಪಡಿಸುವ ಅವಕಾಶ ನೀಡಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್.ಐ.ಎಗೆ ಬಹಳಷ್ಟು ಅಧಿಕಾರವನ್ನು ನೀಡಲಾಗಿದೆ. ಹಿಂದಿನ ನಿಯಮಗಳ ಅನುಸಾರ ಇಂತಹ ಪ್ರಕರಣಗಳ ತನಿಖೆಯನ್ನು ಡಿ.ಎಸ್.ಪಿ. ದರ್ಜೆಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಹೊಸ ನಿಯಮಗಳ ಪ್ರಕಾರ ಎನ್.ಐ.ಎ ಮಹಾ ನಿರ್ದೇಶಕರು ತನಿಖೆಯ ವೇಳೆ ಆರೋಪಿಯ ಆಸ್ತಿ ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ. 2019ರ ತಿದ್ದುಪಡಿಯ ಪ್ರಕಾರ ಯಾವನೇ ವ್ಯಕ್ತಿಯನ್ನು ತನಿಖೆಯ ಆಧಾರದಲ್ಲಿ ಭಯೋತ್ಪಾದಕನೆಂದು ಘೋಷಿಸಬಹುದು. ಈ ಮೊದಲು ಸಂಘಟನೆಯನ್ನು ಭಯೋತ್ಪಾದಕ ಎಂದು ಘೋಷಿಸಲಾಗುತ್ತಿತ್ತು. ಇದೀಗ ಹೊಸ ನಿಯಮದ ಪ್ರಕಾರ, ವ್ಯಕ್ತಿ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಬೇಕಾಗಿಲ್ಲ. ಭಯೋತ್ಪಾದಕ ಹಣೆಪಟ್ಟಿಯನ್ನು ತೊಡೆದು ಹಾಕಲು ಕೋರ್ಟ್ ಬದಲು ಆತ ಸರಕಾರ ರಚಿಸಿದ ರಿವ್ಯೂವ್ ಕಮಿಟಿಯ ಬಳಿ ತೆರಳಬೇಕಾಗುತ್ತದೆ. ಆದಾಗ್ಯೂ ಆತ ನಂತರ ಕೋರ್ಟ್ ನಲ್ಲಿ ಮನವಿ ಸಲ್ಲಿಸಬಹುದು. ಈ ಕಾಯ್ದೆಯು ಪೊಲೀಸರಿಗೆ ವ್ಯಕ್ತಿಯನ್ನು 30 ದಿನಗಳ ವರೆಗೆ ಕಸ್ಟಡಿ ತೆಗೆದುಕೊಳ್ಳುವ ಮತ್ತು 90 ದಿನಗಳ ವರೆಗೆ ನ್ಯಾಯಾಂಗ ಬಂಧನದ ಅವಕಾಶ ನೀಡುತ್ತದೆ.

ಯುಎಪಿಎ ಅಡಿ ಕೇಸು ದಾಖಲಾದರೆ ನಿರೀಕ್ಷಣಾ ಜಾಮೀನು ಪಡೆಯುವುದು ಕೂಡ ಅಷ್ಟೊಂದು ಸುಲಭದ ಮಾತಲ್ಲ. ಕೇವಲ ನಾಲ್ಕು ವರ್ಷಗಳಲ್ಲೇ (2016-2019) 5,922 ಮಂದಿಯನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದ್ದು, ಇದರಲ್ಲಿ ಕೇವಲ 132 ಅಂದರೆ ಶೇ.2.22 ಮಂದಿಗಷ್ಟೇ ಶಿಕ್ಷೆಯಾಗಿದೆ. ಈ ಅಂಕಿಅಂಶವು ಯುಎಪಿಎ ಎಷ್ಟರ ಮಟ್ಟಿಗೆ ದುರ್ಬಳಕೆಯಾಗುತ್ತಿದೆ ಮತ್ತು ಅಮಾಯಕರ ಬದುಕನ್ನು ಯಾವ ರೀತಿ ಕತ್ತಲ ಕೋಣೆಗೆ ತಳ್ಳುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಟಾಡಾ, ಪೋಟಾ, ಯುಎಪಿಎ ಜೊತೆಗೆ ಭಾರತೀಯ ನಾಗರಿಕರಿಗೆ ಕಂಟಕವಾಗಿರುವ ಮತ್ತಷ್ಟು ಕಾನೂನುಗಳೂ ಇವೆ. ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ, 1958 (AFSPA), ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ, 1978 (PSA ), ದೇಶದ್ರೋಹದ ಕಾನೂನು (ಭಾರತೀಯ ದಂಡ ಸಂಹಿತೆ, 1860  ಸೆಕ್ಷನ್ 124ಎ), ರಾಷ್ಟ್ರೀಯ ಭದ್ರತಾ ಕಾಯ್ದೆ, 1980 (NSA), ಪಿ.ಎಂ.ಎಲ್.ಎ, 2002 ಮತ್ತು ಈಡಿ, ರಾಷ್ಟ್ರೀಯ ತನಿಖಾ ಏಜೆನ್ಸಿ ಕಾಯ್ದೆ, 2008 (NIA) ಇವು ದಮನಕಾರಿ ಕಾನೂನುಗಳ ಪಟ್ಟಿಯಲ್ಲಿ ಸೇರಿದವುಗಳು. ಈ ಮಾರಕ ಕಾನೂನುಗಳು ಜನರ ಜೀವವನ್ನು ನರಕಸದೃಶವನ್ನಾಗಿ ಮಾಡಿವೆ. AFSPA ಸಶಸ್ತ್ರ ಪಡೆಗಳಿಗೆ ಅಕ್ರಮ ಬಂಧನ, ಹತ್ಯೆ, ಅತ್ಯಾಚಾರದ ಅಪರಾಧದಿಂದ ಪಾರಾಗುವ ಅವಕಾಶ ನೀಡಿತು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ವಿದ್ಯಾರ್ಥಿ ಹೋರಾಟಗಾರರು, ರಾಜಕೀಯ ನಾಯಕರು, ಪತ್ರಕರ್ತರನ್ನು ದೇಶದ್ರೋಹದ ಕಾನೂನಿನ ಮೂಲಕ ಗುರಿಪಡಿಸಲಾಯಿತು. ಮೋದಿಯವರನ್ನು ಟೀಕಿಸಿದ ಕಾರಣಕ್ಕಾಗಿ 149 ಮಂದಿ ಮತ್ತು ಯೋಗಿಯನ್ನು ಟೀಕಿಸಿದ ಕಾರಣಕ್ಕಾಗಿ 44 ಮಂದಿಯ ಮೇಲೆ ದೇಶದ್ರೋಹದ ಕಾನೂನು ಜಡಿಯಲಾಗಿತ್ತು.

ಎನ್.ಐ.ಎ ಕಾನೂನು ಕೂಡ ಭಾರತವನ್ನು ಒಂದು “ಪೊಲೀಸ್ ರಾಜ್ಯ”ವನ್ನಾಗಿ ಪರಿವರ್ತಿಸುತ್ತಿದೆ. ರಾಜ್ಯ ಪೊಲೀಸರ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಇದು ರಾಜ್ಯ ಸರಕಾರಗಳ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. 1982ರಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪೊಂದರಲ್ಲಿ ಪಿ.ಎಸ್.ಎ.ಯನ್ನು “ಒಂದು ಕಾನೂನುಬಾಹಿರ ಕಾನೂನು” ಎಂದು ಹೇಳಿತ್ತು. ಆದರೂ ಈ ಕಾನೂನಿನ ಹೇರುವಿಕೆ ಇನ್ನೂ ನಿಂತಿಲ್ಲ. ಬಿಜೆಪಿ ಸರಕಾರವು 2019ರಲ್ಲಿ ಜಮ್ಮು ಕಾಶ್ಮೀರದ ವಿಧಿ 370 ರದ್ದುಪಡಿಸಿದ ಬಳಿಕ ಅಲ್ಲಿ ಈ ಕಾನೂನಿನಡಿ 4000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಎನ್.ಎಸ್. ದುರ್ಬಳಕೆಯೂ ಕಡಿಮೆಯೇನಿಲ್ಲ. ಯುಪಿ ಪೊಲೀಸರು 2020ರಲ್ಲಿ ಕೇವಲ 7 ತಿಂಗಳ ಮಧ್ಯೆ 139 ಮಂದಿಯ ಮೇಲೆ ಎನ್.ಎಸ್.ಎ ಹೇರಿದ್ದು, 76 ಗೋಹತ್ಯೆ ಮತ್ತು 13 ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈಡಿಯಂತೂ ಸರಕಾರದ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ. ಬಿಜೆಪಿ ಸದಸ್ಯರು ಹಾಗೂ ಬಿಜೆಪಿಯೊಂದಿಗೆ ಸಹಮತಿ ಹೊಂದಿದವರಿಗೆ ಈ ಕಾನೂನಿನಿಂದ ಯಾವುದೇ ಅಪಾಯವಿಲ್ಲ ಎಂಬುದನ್ನು ಸ್ವತಃ ಈಡಿ ಕಾರ್ಯಾಚರಣೆಯೇ ಸ್ಪಷ್ಟಪಡಿಸಿದೆ. ಈ ಮಾರಕ ಕಾನೂನುಗಳ ಪ್ರಮುಖ ಬಲಿಪಶುಗಳು ಮುಸ್ಲಿಮರು, ದಲಿತರು, ಆದಿವಾಸಿಗಳು ಮತ್ತು ಅವರ ಪರವಾಗಿ ಧ್ವನಿ ಎತ್ತುವವರು ಎಂಬುದನ್ನು  ಅಧ್ಯಯನ ವರದಿಗಳು ಈಗಾಗಲೇ ಬಹಿರಂಗಪಡಿಸಿವೆ. ಸಿಎಎ ವಿರೋಧಿ ಹೋರಾಟಗಾರರನ್ನು ಮಟ್ಟಹಾಕಲು ಮತ್ತು ಮುಸ್ಲಿಮ್ ಸಂಘಟನೆಗಳನ್ನು ಹಾಗೂ ಅದರ ನಾಯಕರನ್ನು ಬೇಟೆಯಾಡಲು ಈ ದಮನಕಾರಿ ಕಾನೂನುಗಳನ್ನು ದುರ್ಬಳಕೆ ಮಾಡುತ್ತಿರುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ.

ಆರೆಸ್ಸೆಸ್/ಬಿಜೆಪಿ ಎಲ್ಲಾ ದಮನಕಾರಿ ಕಾನೂನುಗಳನ್ನು ತನ್ನ ದ್ವೇಷದ ಅಜೆಂಡಾಗಳ ಅನುಷ್ಠಾನಕ್ಕೆ ಮತ್ತು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳಿಗಾಗಿ ಬಳಸಿಕೊಳ್ಳುತ್ತಿರುವುದು ಬಹಳ ಸ್ಪಷ್ಟ. ನಾಗರಿಕರು ತಮ್ಮ ವಿಚಾರಧಾರೆಯೊಂದಿಗೆ ಒಂದೋ ಸಹಮತ ಹೊಂದಿರಬೇಕು ಇಲ್ಲವೇ ಮೌನವಾಗಿರಬೇಕೆಂದು ಆರೆಸ್ಸೆಸ್/ಬಿಜೆಪಿ ಬಯಸುತ್ತದೆ. ಇದಕ್ಕೆ ತಪ್ಪಿದರೆ ಕಠಿಣ ಕಾನೂನುಗಳ ಮೂಲಕ ವಿರೋಧಿಗಳನ್ನು ಬೇಟೆಯಾಡಲು ಒಂದು ನಿಮಿಷವನ್ನೂ ಅದು ವ್ಯರ್ಥ ಮಾಡುವುದಿಲ್ಲ. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಾದರೂ ಇನ್ನೂ ಚಾರ್ಜ್ ಶೀಟ್ ದಾಖಲಿಸಲಾಗಿಲ್ಲ. ಇದರಲ್ಲಿ ಬಂಧಿತರಾಗಿರುವವರೆಲ್ಲಾ ಮಾನವ ಹಕ್ಕುಗಳಿಗಾಗಿ, ಜನರ ಸಮಸ್ಯೆಗಳಿಗಾಗಿ  ದುಡಿದವರು ಮತ್ತು ಪ್ರಭುತ್ವದ ದಬ್ಬಾಳಿಕೆ, ದಮನಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತಿದವರು. ಪ್ರಸಕ್ತ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಶಿಸ್ಟ್ ಸರ್ವಾಧಿಕಾರಿದತ್ತ ಕೊಂಡೊಯ್ಯಲು ಕಾನೂನು ಅಥವಾ ನ್ಯಾಯದ ಮಾನ್ಯತೆ ಹೊಂದಿರುವ ಮಾನದಂಡಗಳನ್ನು ಉಪೇಕ್ಷಿಸುವ ಕಾಂಗರೂ ಕೋರ್ಟ್ ಗಳನ್ನು ಪರೋಕ್ಷವಾಗಿ ನೆಲೆಗೊಳಿಸುವ ಉದ್ದೇಶವನ್ನು ಹೊಂದಿದಂತೆ ಭಾಸವಾಗುತ್ತಿದೆ. ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ದಮನಕಾರಿ ಕಾನೂನುಗಳನ್ನು ರದ್ದುಪಡಿಸಬೇಕೆನ್ನುವುದು ಜನರ ಆಗ್ರಹವಾಗಿದೆ. ಇದಕ್ಕಾಗಿ ಹಲವು ರೀತಿಯ ಆಂದೋಲನಗಳು ಪ್ರಸಕ್ತ ದೇಶದಲ್ಲಿ ನಡೆಯುತ್ತಿವೆ. ಸ್ಟ್ಯಾನ್ ಸ್ವಾಮಿಯವರ ಕಸ್ಟಡಿ ಸಾವು ಮತ್ತು ಮಾಡದ ತಪ್ಪಿಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತಿ ವಿಚಾರಣಾಧೀನ ಖೈದಿಗಳಾಗಿ ದಿನದೂಡುತ್ತಿರುವ ಹೋರಾಟಗಾರರಿಗೆ ಆಗುತ್ತಿರುವ ಅನ್ಯಾಯವು ಈ ಜನಾಗ್ರಹಕ್ಕೆ ಮತ್ತಷ್ಟು ಶಕ್ತಿ ತುಂಬಲಿ. ಕರಾಳ ಕಾನೂನುಗಳ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಕ್ಷಿಥಿಲಗೊಳಿಸುವ ಕರಾಳ ಅಧ್ಯಾಯವು ಅಂತ್ಯ ಕಾಣಲಿ ಎಂದು ಆಶಿಸೋಣ.

  • ಏ.ಕೆ ಅಶ್ರಫ್
    (ರಾಜ್ಯ ಕಾರ್ಯದರ್ಶಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ)

ಇದನ್ನೂ ಓದಿ: ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...