Homeಮುಖಪುಟರೈತಸಂಘ ಇಳಿಮುಖವಾದ ಘಟ್ಟ

ರೈತಸಂಘ ಇಳಿಮುಖವಾದ ಘಟ್ಟ

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರ ಬತ್ತಳಿಕೆಯಿಂದ ಒಂದೊಂದೇ ಬಾಣಗಳು ಹೊರಬಂದು ಯಶಸ್ವಿ ಹೋರಾಟಗಳನ್ನು ರೂಪಿಸಿದ ಪರಿಣಾಮವಾಗಿ ರೈತಸಂಘ ನಾಡಿನಲ್ಲಿ ಒಂದು ಪ್ರಬಲವಾದ ಶಕ್ತಿಯಾಗಿ ಬೆಳೆಯತೊಡಗಿತು. ಒಂದು ಘಟ್ಟದವರೆಗೆ ರೈತಸಂಘದ ಖರ್ಚುವೆಚ್ಚಗಳು ಕಬ್ಬುಬೆಳೆಗಾರರ ವಂತಿಕೆ ಹಣದಿಂದ ನಡೆಯುತ್ತಿತ್ತು. ನಂತರ ಹಣದ ಸಮಸ್ಯೆ ಎದುರಾದಾಗ ಮುಂದೇನು ಮಾಡುವುದೆಂಬ ಆಲೋಚನೆಗಿಳಿದ ರೈತನಾಯಕರು ಯೋಚನೆಯಲ್ಲಿ ಮುಳುಗಿದರು. ಆಗ ಫ್ರೊಫೆಸರ್ “ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟರೆ ಸಾಕು ನಾಲ್ಕು ಕೋಟಿ ಆಗತ್ತೆ ಅಂದ್ರೆ, ಈಗಾಗ್ಲೆ ನಮ್ಮತ್ರ ಆರುಕೋಟಿ ಇದೆ” ಎಂದರು. ಇದು ತಮಾಷೆಯಂತಿದ್ದರೂ ಪ್ರೊಫೆಸರ್ ಕಾರ್ಯಸೂಚಿ ಯಾವಾಗಲೂ ಸಮಸ್ಯೆಯನ್ನು ದೊಡ್ಡದು ಮಾಡದೆ ಮುನ್ನುಗ್ಗುವ ಕಡೆಗಿರುತ್ತಿತ್ತು.

ಕಡಿದಾಳು ಶಾಮಣ್ಣ

ಆಗ ಕಡಿದಾಳು ಶಾಮಣ್ಣನವರು ’ನೋಡಿ ರೈತರು ಭತ್ತ, ರಾಗಿ, ಅಡಕೆ ಇಂಥವುನ್ನೆಲ್ಲ
ಕೊಡ್ತಾರೆ. ಅವನ್ನೆ ಸಂಗ್ರಹಿಸಿ ಮಾರಿದ ಖರ್ಚಿನಲ್ಲಿ ನಮ್ಮ ಪ್ರಯಾಣ, ಸಭೆಗಳ ಖರ್ಚನ್ನ ನಿಭಾಯಿಸಬಹುದು’ ಎಂದರು. ಇದನ್ನ ಒಲ್ಲದ ಮನಸ್ಸಿನಿಂದ ಎಲ್ಲ ಸಮ್ಮತಿಸಿದರು. ಅದರಂತೆ ಮೇಗರವಳ್ಳಿ ಹೆಗಡೆಯವರ ಮನೆಗೆ ಹೋಗಿ ಅಡಕೆ ಕೇಳುವುದೆಂದು ತೀರ್ಮಾನಿಸಿದ ಶಾಮಣ್ಣನವರು, ಸುಂದರೇಶರನ್ನು ಹೊರಡಿಸಿಕೊಂಡು ಸಿದ್ಧರಾಗಿಯೇಬಿಟ್ಟರು. ಅನಿರೀಕ್ಷಿತವಾಗಿ ದಾಳಿಯಿಟ್ಟ ರೈತನಾಯಕರನ್ನು ತುಂಬ ಗೌರವದಿಂದಲೇ ಬರಮಾಡಿಕೊಂಡ ಹೆಗಡೆ ’ಏನು ಸಮಾಚಾರ ಇಲ್ಲಿಗೆ ದಯಮಾಡಿಸಿದ್ದು’ ಎಂದರು. ಆಗ ಶಾಮಣ್ಣ, ’ನಾವು ರೈತರ ಪರವಾಗಿ ಹೋರಾಟಕ್ಕೆ ರೈತಸಂಘ ಕಟ್ಟಿದ್ದೀವಿ, ಚಳವಳಿ ಅಂದಮೇಲೆ ಖರ್ಚುವೆಚ್ಚ ಇರುತ್ತೆ. ಅದಕ್ಕಾಗಿ ರೈತರಿಂದ ದವಸ ಧಾನ್ಯ ಅಡಕೆ ಸಂಗ್ರಹಿಸ್ತಾ ಇದ್ದೀವಿ. ತಾವು ಒಂದೈದು ಕೆ.ಜಿ ಅಡಿಕೆ ಸಹಾಯ ಮಾಡಿ’ ಎಂದರು. ಆಗ ಹೆಗಡೆಯವರು ’ನಮ್ಮ ರೈತರ ಸಮಸ್ಯೆ ಮುಂದಿಟ್ಟುಕೊಂಡು ನೀವು ಹೋರಾಡುವುದೇನು ಬೇಡಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತಿವಿ’ ಎಂದರು. ಅಲ್ಲಿಗೆ ಸಾರ್ವಜನಿಕ ದೇಣಿಗೆ ಎತ್ತುವ ಕೆಲಸ ನಿಲುಗಡೆಯಾಯ್ತು. ಆದರೇನು ರೈತಸಂಘ ತನ್ನ ಎಂದಿನ ಬಿರುಸಿನ ಹೋರಾಟವನ್ನ ಮುಂದುವರೆಸಿತು.

ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ನಂಜುಂಡಸ್ವಾಮಿಯವರಷ್ಟೇ ಪ್ರಬಲರಾದ ಜನಪ್ರಿಯ ರೈತ ನಾಯಕ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಸಮಾನವಾದ ಸಂಕಷ್ಟ ಎದುರಿಸುವಂತಹ ಕಾವೇರಿ ವಿಷಯದಲ್ಲಿ ರೈತರನ್ನು ಬದಿಗೊತ್ತಿ ಬರೀ ರಾಜಕಾರಣಿಗಳೇ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ಬಗ್ಗೆ ಕರ್ನಾಟಕದ ರೈತರಿಗೆ ತುಂಬಾ ಗೌರವವಿದೆ. ಹಾಗೆಯೇ ನಂಜುಂಡಸ್ವಾಮಿಯವರ ವಿದ್ವತ್ತಿಗೆ ತಮಿಳುನಾಡು ರೈತರು ಅತೀವ ಗೌರವ ಕೊಡುತ್ತಾರೆ. ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೈದರಾಬಾದಿನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅಲ್ಲಿ ರೈತ ಸಂಘಕ್ಕೆ ಒಂದು ಸಿಂಬಲ್ ಬೇಕು ಎಂಬ ಚರ್ಚೆ ಪ್ರಸ್ತಾಪಕ್ಕೆ ಬಂತು. ಜೋಡೆತ್ತು ಚೆನ್ನಾಗಿದೆ ಎಂದುಕೊಂಡರೂ, ಅದನ್ನಾಗಲೇ ಕಾಂಗ್ರೆಸ್‌ನವರು ಪಡೆದಿದ್ದರಿಂದ, ನೇಗಿಲ ಒಡೆಯ ರೈತನಿರಲಿ ಎಂಬ ತೀರ್ಮಾನವಾಯ್ತು. ಅದಾಗಲೇ ಹಸಿರುಶಾಲು ದೇಶವನ್ನು ವ್ಯಾಪಿಸಿತ್ತು. ಇಂತಹ ಮಹತ್ವದ ಸಭೆಗೆ ಕರ್ನಾಟಕದಿಂದಲೂ ರೈತ ದಂಡು ಹೋಗಿತ್ತು.

ನಾರಾಯಣಸ್ವಾಮಿ ನಾಯ್ಡು

ರೈತರು ತಮ್ಮ ವಾಹನವನ್ನು ಆಂಧ್ರದ ಟ್ರಾಫಿಕ್ ನಿಯಮವನ್ನು ಮೀರಿ ನಿಲ್ಲಿಸಿದ್ದರು. ಕೂಡಲೇ ಅಲ್ಲಿಗೆ ಬಂದ ಪೊಲೀಸನೊಬ್ಬ ರೈತರು ನಿಯಮ ಉಲ್ಲಂಘಿಸಿದ್ದಾರೆ ಎಂದು ಚೀಟಿ ಹರಿದುಕೊಟ್ಟ. ರೈತರು ಪ್ರೊಫೆಸರ್ ಮೊರೆ ಹೋದರು. ಸ್ಥಳಕ್ಕೆ ಬಂದ ಪ್ರೊಫೆಸರ್ ಪೊಲೀಸ್ ಕೊಟ್ಟ ನೋಟಿಸನ್ನು ಕೈಲಿಡಿದು, ಅಲ್ಲಿದ್ದ ಪೊಲೀಸ್ ಮುಂದೆಯೇ ಹರಿದುಹಾಕಿದರು. ತನ್ನ ಜೀವಮಾನದಲ್ಲಿ ಇಂತಹ ಪ್ರತಿಕ್ರಿಯೆ ನೋಡದ ಆತ “ಏಮಂಟಾ ಇದಿ” ಎಂದು ಗೊಣಗಿಕೊಂಡು ಹೊರಟುಹೋದ. ಅನ್ಯ ರಾಜ್ಯದಿಂದ ಬಂದ ರೈತರಿಗೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಗೊತ್ತಿರಲಾರದು, ಆದ್ದರಿಂದ ವಾಹನವನ್ನು ಸರಿಯಾದ ಜಾಗಕ್ಕೆ ನಿಲ್ಲಿಸುವಂತೆ ಸಹಾಯ ಮಾಡುವುದು ಪೊಲೀಸನ ಕರ್ತವ್ಯ ಎಂಬುದು ಪ್ರೊಫೆಸರ್ ಅವರ ನಿಲುವಾಗಿತ್ತು.

ಅದು ರೈತಸಂಘದ ಉತ್ತುಂಗ ಸ್ಥಿತಿ ತಲುಪಿದ ಕಾಲ. ಸರಕಾರ ರೈತ ಸಂಘಕ್ಕೆ ಹೆದರಿ ಮಾತುಕತೆಗೆ ಕರೆಯುತ್ತಿದ್ದ ಕಾಲ. ಆದರೇನು ರೈತ ಹೋರಾಟದಿಂದ ಅವಕಾಶ ಪಡೆದು ಅಧಿಕಾರಕ್ಕೆ ಏರಿದ್ದ ಜನತಾ ಪಕ್ಷದ ಸರಕಾರವೂ ಕೂಡ ಯಥಾಸ್ಥಿತಿವಾದದ ಪ್ರತಿಪಾದಕರಂತೆ, ಗೋಲಿಬಾರವೊಂದನ್ನ ಹೊರತುಪಡಿಸಿದರೆ, ಇದೂ ಕೂಡ ಗುಂಡೂರಾಯರ ಸರಕಾರ ಎಂಬಂತೆ ರೈತ ಮುಖಂಡರಿಗೆ ಕಾಣಿಸಿತು. ಆದ್ದರಿಂದ ರೈತ ಸಂಘವೇ ಏಕೆ ರಾಜಕೀಯ ಮಾಡಬಾರದೆಂಬ ಚರ್ಚೆಯಾಯ್ತು. ಅದಕ್ಕಾಗಿ ಬೆಂಗಳೂರಿನ ಲಾ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆ ಹುದ್ದೆಗೆ ರಾಜಿನಾಮೆ ನೀಡಿ, ರೈತಸಂಘದ ಮುಂದಾಳತ್ವವನ್ನು ಹೆಚ್.ಎಸ್ ರುದ್ರಪ್ಪನವರಿಗೆ ಬಿಟ್ಟು ಕನ್ನಡ ದೇಶ ಪಕ್ಷ ಸ್ಥಾಪಿಸಿದರು. ಅಲ್ಲಿಂದ ರೈತ ಸಂಘದ ಇಳಿಮುಖ ಆರಂಭವಾಯ್ತು ಎನ್ನಬಹುದು. ಈವರೆಗೆ ರೈತ ಸಂಘಕ್ಕೆ ಹೆದರುತ್ತಿದ್ದ ಜನತಾ ಪಕ್ಷದವರು ನೀವು ರಾಜಕೀಯಕ್ಕೆ ಬಂದ ಮೇಲೆ ನಿಮಗೆ ಹೆದರುವ ಅಗತ್ಯವೇನು ಎನ್ನವಂತಾದರು. ಅದಾಗಲೇ ರೈತ ಸಂಘದ ಚಳವಳಿಯಲ್ಲಿದ್ದ ಅನೇಕರು ಜನತಾಪಕ್ಷದಲ್ಲಿ ತಲೆ ಮರೆಸಿಕೊಂಡಿದ್ದರು.

ರಾಜಕಾರಣ ಮಾಡಬೇಕಾದರೆ ಹಣಕಾಸಿನ ಮೂಲ ಝರಿಯೊಂದರ ಅಗತ್ಯವಿದ್ದುದ್ದರಿಂದ,
ಪ್ರೊಫೆಸರ್ ’ಒಂದು ರೂಪಾಯಿ ಜೊತೆಗೆ ಒಂದು ಓಟುಕೊಡಿ’ ಎಂಬ ಘೋಷಣೆಯೊಂದಿಗೆ ರಾಜಕಾರಣ ಆರಂಭಿಸಿದರು. ರೈತ ಸಂಘದ ನೆಲೆಯಿದ್ದದ್ದು ಗ್ರಾಮೀಣ ಪ್ರದೇಶದಲ್ಲಿ. ಆದರೆ, ಮಂಡಲ ಪಂಚಾಯ್ತಿ ಚುನಾವಣೆ ಮನೆ ಬಾಗಿಲಿಗೆ ಬಂದಾಗ ಸುಮ್ಮನಿದ್ದ ರೈತ ನಾಯಕರು, ಮೊದಲು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸಿ, ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಅದಾಗಲೇ ರೈತರು ಜನತಾ ಸರಕಾರದಲ್ಲಿ ಭಾಗಿಯಾಗಿದ್ದರಿಂದ, ರೈತ ಸಂಘ ಕೇವಲ ಒಂದೆರಡು ಅಭ್ಯರ್ಥಿಗಳನ್ನ ಮಾತ್ರ ಗೆಲ್ಲಿಸಿಕೊಂಡಿತು. ಬಾಬಾಗೌಡರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಒಂದನ್ನ ಪ್ರೊಫೆಸರ್‌ಗೆ ಬಿಟ್ಟುಕೊಟ್ಟು ಅವರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ವಿಧಾನಸೌಧದ ಮೇಲೆ ಬಾವುಟ ಹಾರಿಸುತ್ತೇವೆಂದಿದ್ದ ಪ್ರೊಫೆಸರ್ ಎರಡು ಸ್ಥಾನಕ್ಕೆ ಸೀಮಿತವಾದರು. ಆ ನಂತರ ರೈತ ನಾಯಕರ ಉಚ್ಛಟನೆಗಳು ನಡೆದವು. ನಿಷ್ಕ್ರಿಯ ನಾಯಕರು ಒಳ ಜಗಳದಲ್ಲಿ ಮುಳುಗಿದರು. ಅಂತಹ ಒಂದು ಸನ್ನಿವೇಶದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಭಾಗಕ್ಕೆ ಕರ್ಣನಂತಿದ್ದ ಸುಂದರೇಶ್ ಹೃದಯಾಘಾತದಿಂದ ನಿಧನರಾದರು. ಅದೊಂದು ರೀತಿ ರೈತ ಸಂಘದ ಹೃದಯ ಸ್ತಬ್ಧವಾದಂತಹ ಸ್ಥಿತಿ. ಅದಕ್ಕಾಗಿಯೆ ಪ್ರೊಫೆಸರ್ ಮಗುವಿನಂತೆ ಅತ್ತಿದ್ದರು. ಅವರ ಹೋರಾಟದ ಧನಸ್ಸಿನ ಬಿಲ್ಲು ಹುರಿಯೇ ಕಿತ್ತುಹೋದಂತಾಗಿತ್ತು.

ಸುಂದರೇಶ್

ಸುಂದರೇಶ್ ದೇಹವನ್ನು ಭೂಮಿಯೊಡಲು ಬಗೆದು ಮಡಗಿ ಬಂದ ಮೇಲೆ ಪ್ರೊಫೆಸರ್ ಆಗಲಿ ರೈತ ಸಂಘವಾಗಲಿ ಚೇತರಿಸಿಕೊಳ್ಳಲೇ ಇಲ್ಲ. ಸುಂದರೇಶ್ ಸಾವಿನ ನಂತರ ರೈತಸಂಘ ಬಿಡುವವರು ಮತ್ತು ಪ್ರೊಫೆಸರ್ ಅವರಿಗೇ ತಿರುಗಿಬಿದ್ದು ಬೇರೆ ಸಂಘ ಕಟ್ಟಿಕೊಳ್ಳುವವರು ಎಲ್ಲಾ ಹುಟ್ಟಿಕೊಂಡರು. ಇದರಿಂದ ಪ್ರೊಫೆಸರ್ ಕಿಂಚಿತ್ತೂ ಜಗ್ಗದೆ ’ಇವೆಲ್ಲಾ ಸಾಮಾನ್ಯ, ಹೋಗೋರೆಲ್ಲಾ ಬೇಗ ಹೋಗಬೇಕು’ ಎಂದರು. ಅದಾಗಲೇ ಪುಟ್ಟಣ್ಣಯ್ಯ ದೂರವಾಗಿದ್ದರು. ಪ್ರೊಫೆಸರ್ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋದ ಪುಟ್ಟಣ್ಣಯ್ಯನನ್ನು ಕುರಿತು ’ಡಾಕ್ಟರು ಮಾತನಾಡಬೇಡ ಅಂದಿದ್ದಾರೆ’ ಎಂದು ಮೌನ ವಹಿಸಿದರು. ಪ್ರೊಫೆಸರ್ ದೇಹಕ್ಕಂಟಿದ ಕಾಯಿಲೆ ರೈತಸಂಘದ ವಿಷಯದಲ್ಲಿ ಸಾಂಕೇತಿಕವಾಗಿತ್ತು. ಅವರ ಶಕ್ತಿಯೇನೆಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ರೊಫೆಸರ್ ಅವರ ತೀವ್ರ ನಿಯಂತ್ರಿಸುವ ಗುಣ, ರೈತ ಸಂಘದ ಬಹುದೊಡ್ಡ ನಾಯಕರು ನಿಷ್ಕ್ರಿಯರಾಗಿ ಉಳಿಯುವಂತೆ ಮಾಡಿತು ಎಂಬ ಆರೋಪ ಕೂಡ ಇದೆ. ಈ ಪೈಕಿ ಕಡಿದಾಳು ಶಾಮಣ್ಣನವರನ್ನು ರೈತ ಸಂಘದಿಂದ ತೆಗೆದು ಹಾಕಿದಾಗ, ಅವರೇ ’ಅದು ಹೇಗೆ ನನ್ನನ್ನ ತೆಗೀತಾರೆ’ ಎಂಬ ಪ್ರಶ್ನೆ ಹಾಕಿಕೊಂಡಿದ್ದರು. ಇನ್ನು ತೇಜಸ್ವಿಯವರಂತೂ ’ಕಡಿದಾಳು ಶಾಮಣ್ಣನಂತಹವರನ್ನೆ ರೈತ ಸಂಘ ಹೊರಹಾಕುತ್ತದೆ ಎಂದರೆ ಅದಕ್ಕೆ ಉಳಿಗಾಲವಿಲ್ಲ’ ಎಂಬಂತೆ ಪ್ರತಿಕ್ರಿಯಿಸಿದ್ದರು. ಇವೆಲ್ಲ ಸಂಗತಿಗಳಿದ್ದರೂ, ಪ್ರೊಫೆಸರ್ ಹಾಕಿಕೊಟ್ಟ ಮೂಲ ತತ್ತ್ವಗಳ ಮೇಲೆ ನಡೆದಿದ್ದರೆ ರೈತ ಸಂಘ ದೊಡ್ಡ ಫೋರ್ಸ್ ಆಗಿ ಬೆಳೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ಪ್ರೊಫೆಸರ್ ಇಲ್ಲ, ರೈತರ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ದೇಶವನ್ನಾಳುತ್ತಿದ್ದಾರೆ. ಮುಂಬರುವ ದಿನಗಳು ರೈತರ ಪಾಲಿಗೆ ದುರ್ದಿನಗಳಾಗಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...