Homeಅಂತರಾಷ್ಟ್ರೀಯಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಜಾಪ್ರಭುತ್ವದ ಮೂಲಬೇರುಗಳ ಮೇಲೆ ಟರ್ಕಿಯ ದಾಳಿಗಳು

ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಜಾಪ್ರಭುತ್ವದ ಮೂಲಬೇರುಗಳ ಮೇಲೆ ಟರ್ಕಿಯ ದಾಳಿಗಳು

- Advertisement -
- Advertisement -

ಸಿರಿಯಾ ಮತ್ತು ಇರಾಕ್‌ನಲ್ಲಿಯ ಕರ್ಡಿಶ್ ಜನರ ವಿರುದ್ಧ ಆಪರೇಷನ್ ಕ್ಲಾ-ಲಾಕ್ ಹೆಸರಿನ ಅತಿದೊಡ್ಡ ಮಿಲಿಟರಿ ದಾಳಿಯನ್ನು ಟರ್ಕಿಯ ಪ್ರಭುತ್ವ ಶುರು ಮಾಡಿ ಈಗ ಒಂದು ತಿಂಗಳಾಗಿದೆ. ಈ ವಿಶೇಷ ಪಡೆಗಳು ಕರ್ಡಿಸ್ತಾನದ ಪರ್ವತಗಳಿಗೆ ತಲುಪಿವೆ ಹಾಗೂ ಅಲ್ಲಿ ಬಾಂಬ್ ದಾಳಿ ಹಗಲೂರಾತ್ರಿ ನಿರಂತರ ನಡೆಯುತ್ತಿದೆ. ಈ ದಾಳಿಗೆ ನ್ಯಾಟೋ ಬೆಂಬಲವಾಗಿ ನಿಂತಿದೆ.

ಆಪರೇಷನ್ ಕ್ಲಾ-ಕ್ ಎಂಬುದು ಟರ್ಕಿಯು 2019ರಲ್ಲಿ ಆರಂಭಿಸಿದ ದಾಳಿಗಳ ಸರಣಿಯಲ್ಲಿ ಇತ್ತೀಚಿನದು. ಟರ್ಕಿಯ ಈ ದಾಳಿಗಳಿಂದ ನೂರಾರು ಸಾವುಗಳಾಗಿವೆ. ಈ ದಾಳಿಗಳು ಇರಾಕ್ ಮತ್ತು ಸಿರಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತವೆ. ಇಳು ಸಿರಿಯಾದ ರೊಜಾವದಲ್ಲಿನ ಜನರು ಈಗ ಮುನ್ನೆಲೆಗೆ ತಂದುಕೊಳ್ಳುತ್ತಿರುವ ರಾಜಕೀಯ ಸಂರಚನೆಗಳ ಮೇಲಿನ ದಾಳಿಗಳಾಗಿವೆ.

ಸಿರಿಯಾದ ಒಳಗೆ ಇರುವ ಮೂಲಭೂತವಾದಿ, ಪುರುಷಪ್ರಧಾನ ಮತ್ತು ನಿರಂಕುಶ ಶಕ್ತಿಗಳಿಗೆ ಪರಿಣಾಮಕಾರಿಯಾದ ಪ್ರತಿರೋಧ ತೋರುತ್ತಿರುವುದಕ್ಕೆ ಮತ್ತು ತನ್ನ ವಿಶಿಷ್ಟವಾದ ಹಾಗೂ ಸ್ಫೂರ್ತಿದಾಯಕವಾದ ನೆಲಮಟ್ಟದ ಪ್ರಜಾಪ್ರಭುತ್ವಕ್ಕಾಗಿ ರೋಜವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಟರ್ಕಿ ದೇಶವು ಈಗ ರಷಿಯ-ಉಕ್ರೇನ್ ಯುದ್ಧವನ್ನು ಬಳಸಿಕೊಂಡು ಕರ್ಡಿಶ್ ಜನರ ಮೇಲೆ ತನ್ನ ದಾಳಿಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಇರಾಕ್ ಮತ್ತು ಸಿರಿಯಾದಲ್ಲಿನ ಕರ್ಡಿಶ್ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಟರ್ಕಿಯು ವಾಯುದಾಳಿ, ಸ್ವಯಂಚಾಲಿತ ಡ್ರೋನ್‌ಗಳು ಮತ್ತು ಅರ್ಟಿಲರಿ ದಾಳಿಗಳನ್ನು ಮಾಡಿ, ಟರ್ಕಿಯಲ್ಲಿನ ಕರ್ಡಿಶ್ ಜನರೊಂದಿಗೆ ಅವರ ಸಂಪರ್ಕ ಕಡಿತಗೊಳಿಸಲು ಯೋಜಿಸಿದೆ. ಈ ಡ್ರೋನ್‌ಗಳು ಫ್ರೀ ಕರ್ಡಿಶ್ ಆಂದೋಲನದ ಹೋರಾಟಗಾರರನ್ನು ಗುರಿ ಮಾಡಿವೆ.

ಏನಿದು ಆಪರೇಷನ್ ಕ್ಲಾ-ಲಾಕ್?

ಸಿರಿಯಾದ ಆಂತರಿಕ ಯುದ್ಧದಲ್ಲಿ, ಟರ್ಕಿಯು ಸಿರಿಯಾದ ಉತ್ತರದ ಭಾಗಗಳನ್ನು ಆಕ್ರಮಿಸತೊಡಗಿತು. ತಮ್ಮ ಸಾಮಾನ್ಯ ಹಿತಾಸಕ್ತಿಗಳ ಕಾರಣಕ್ಕಾಗಿ ಹಾಗೂ ಯುದ್ಧದ ಅವ್ಯವಸ್ಥೆ, ಗೊಂದಲಗಳ ಕಾರಣದಿಂದಾಗಿ ದ ಕರ್ಡಿಶ್ ರೆಸಿಸ್ಟೆನ್ಸ್ ಮತ್ತು ಟರ್ಕಿಯ ಸರಕಾರವು ಶಾಂತಿಯ ಮಾತುಕತೆಗಳನ್ನು ನಡೆಸಿದವು. ಪಿಕೆಕೆಯು (ಕರ್ಡಿಸ್ತಾನ್ ವರ್ಕರ್ಸ್ ಪಾರ್ಟಿ) ತನ್ನ ಚಟುವಟಿಕೆಗಳನ್ನು ಪರ್ವತಗಳಿಗೆ ಸೀಮಿತಗೊಳಿಸುವುದಾಗಿ ಒಪ್ಪಿಕೊಂಡಿತು ಹಾಗೂ ಟರ್ಕಿಯು ಪಿಕೆಕೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಾಗಿ ಒಪ್ಪಿಕೊಂಡಿತು.

ಟರ್ಕಿಯು ಇರಾಕ್‌ನಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ವಿಸ್ತರಿಸುವ ಕೆಲಸ ಶುರು ಮಾಡಿತು. ಇರಾಕ್‌ನಲ್ಲಿ ಕರ್ಡಿಶ್ ಚಳವಳಿ ಗಟ್ಟಿಗೊಳ್ಳದಂತೆ ತಡೆಯಲು ಹಾಗೂ ಆಂದೋಲನವನ್ನು ಟರ್ಕಿಯಲ್ಲಿಯೇ ಸೀಮಿತಗೊಳಿಸಲು ಇದನ್ನು ಮಾಡಿತು. ಟರ್ಕಿ ಇರಾಕ್‌ನಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವ ಕ್ರಮವನ್ನು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರಮಣಕಾರಿ ನಡೆ ಎಂದು ಕರೆಯಲಾಗಿದೆ. 2015ರಲ್ಲಿ ಪಿಕೆಕೆ ಮತ್ತು ಟರ್ಕಿಯ ನಡುವಿನ ಸಂಘರ್ಷವು ಮತ್ತೆ ಪ್ರಾರಂಭವಾಯಿತು.

ಟರ್ಕಿ ಪ್ರಭುತ್ವ ಟರ್ಕಿಯಲ್ಲಿರುವ ಕರ್ಡಿಶ್ ಪಕ್ಷಗಳ ಮೇಲೆಯೂ ತನ್ನ ದಾಳಿಗಳನ್ನು ನಡೆಸಿತು. ಭಯೋತ್ಪಾದನೆಯನ್ನು ಬೆಂಬಲಿಸುವ ಆರೋಪ ಅವರ ಮೇಲೆ ಹೊರಿಸಲಾಯಿತು ಹಾಗೂ ಕರ್ಡಿಶ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕರನ್ನು ಒಳಗೊಂಡು, ಸಾವಿರಾರು ಸಾರ್ವಜನಿಕ ಉದ್ಯೋಗಿಗಳನ್ನು ಬಂಧಿಸಲಾಯಿತು.

2015ರಿಂದ ಘರ್ಷಣೆಗಳು ಶುರುವಾದವು. ಪಿಕೆಕೆಯು ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಟರ್ಕಿಯು ಆರೋಪಿಸಿತು ಹಾಗೂ ಟರ್ಕಿಯು ತನ್ನ ಸದಸ್ಯರ ಮೇಲೆ ದಾಳಿ ಮಾಡುತ್ತಿದೆ ಎಂದು ಪಿಕೆಕೆ ಆರೋಪ ಮಾಡಿತು.

2015ರಲ್ಲಿ ಟರ್ಕಿಯು ’ಕ್ಲಾ’ ಆಪರೇಷನ್‌ಗಳ ಸರಣಿಯನ್ನು ಪ್ರಾರಂಭಿಸಿತು, ಅದರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿನ ಕರ್ಡಿಶ್ ಪ್ರದೇಶಗಳ ಮೇಲೆ ಡ್ರೋನ್ ಮತ್ತು ವಾಯುದಾಳಿಗಳನ್ನು ಮಾಡಲಾಯಿತು. ಈ ಕ್ಲಾ ಆಪರೇಷನ್‌ಗಳು ಟರ್ಕಿಯ ಭಯೋತ್ಪಾದನಾ ವಿರೋಧಿ ಕ್ಯಾಂಪೇನ್‌ನ ಭಾಗವಾಗಿದ್ದು, ಅವುಗಳನ್ನು ಟರ್ಕಿ ಮತ್ತು ಇತರ ನೆರೆ ರಾಷ್ಟ್ರಗಳಲ್ಲಿ ಕರ್ಡಿಶ್ ಮತ್ತು ಇತರ ಪ್ರತಿರೋಧ ಧ್ವನಿಗಳನ್ನು ಅಡಗಿಸಲು ಬಳಸುತ್ತಿದೆ.

ಕರ್ಡಿಶ್ ಆಂದೋಲನ ಶುರುವಾಗಿದ್ದು ಹೇಗೆ?

ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಸಾಮ್ರಾಜ್ಯಗಳು ಒಟ್ಟೊಮನ್ ಸಾಮ್ರಾಜ್ಯವನ್ನು ಸೋಲಿಸಲು ಆಗತಾನೇ ಹುಟ್ಟಿದ ಅರಬ್ ರಾಷ್ಟ್ರೀಯವಾದಿ ಆಂದೋಲನಗಳ ಜೊತೆಗೆ ಕೈಜೋಡಿಸಿದವು. ಒಟ್ಟೊಮನ್ ಸಾಮ್ರಾಜ್ಯ ಕುಸಿದ ನಂತರ ಮಧ್ಯಪೂರ್ವದ ಹೆಚ್ಚಿನ ಪ್ರದೇಶಗಳನ್ನು ಫ್ರೆಂಚ್‌ರು ಮತ್ತು ಬ್ರಿಟಿಷರು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರು. ಅರಬ್ ರಾಷ್ಟ್ರೀಯವಾದ ಆಂದೋಲನದ ಮೈತ್ರಿಕೂಟಕ್ಕೆ ದ್ರೋಹ ಬಗೆದು, ಆ ಪ್ರದೇಶಗಳನ್ನು ತಮ್ಮಲ್ಲೇ ಹಂಚಿಕೊಂಡರು. ಹಾಗೂ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ನೀಡಬೇಕಾಗಿ ಬಂದಾಗ, ಅವರುಗಳು ಬೇಕಾಬಿಟ್ಟಿಯಾಗಿ ಗಡಿಗಳನ್ನು ರಚಿಸಿ ಹೊರಟರು, ಈಗಿನ ಮಧ್ಯಪೂರ್ವದ ದೇಶಗಳು ಆ ರೀತಿಯಲ್ಲಿ ರಚನೆಯಾದವು. ಪಾಶ್ಚಾತ್ಯ ವ್ಯಾಪಾರಿ ಹಿತಾಸಕ್ತಿಗಳನ್ನು ಬೆಂಬಲಿಸಲು ಕೆಲವು ದೇಶಗಳನ್ನು ವಿಭಜಿಸಲಾಯಿತು.

ಆಧುನಿಕ ಟರ್ಕಿ, ಸಿರಿಯಾ, ಇರಾಕ್ ಮತ್ತು ಇರಾನ್‌ಅನ್ನು ಕನೆಕ್ಟ್ ಮಾಡುವ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟುಗಳೇ ಕರ್ಡಿಶ್ ಜನರು. ಇವರು ಹಲವು ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದರು ಹಾಗೂ ತಮ್ಮದೆಂದು ಹೇಳಿಕೊಳ್ಳಬಹುದಾದ ಯಾವುದೇ ದೇಶ ಇವರಿಗೆ ಇರಲಿಲ್ಲ.

1980ರಲ್ಲಿ ಟರ್ಕಿಯ ವಿರುದ್ಧ ಪಾರ್ಟಿಯಾ ಕರ್ಕರೆನ್ ಕರ್ಡಿಸ್ತಾನ್ (ಕರ್ಡಿಸ್ತಾನ್ ಕಾರ್ಮಿಕರ ಪಕ್ಷ)ವು ಸ್ವತಂತ್ರ ಕರ್ಡಿಸ್ತಾನ್‌ಗಾಗಿ ಗೆರಿಲ್ಲಾ ಕ್ಯಾಂಪೇನ್ ಶುರುಮಾಡಿತು. ಪಕ್ಷವು ಮೊದಲಿಗೆ ಅಬ್ದುಲ್ಲಾ ಒಜಲಾನ್ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿತು. ಪಿಕೆಕೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲಾಯಿತು ಹಾಗೂ 1999ರಲ್ಲಿ ಟರ್ಕಿಶ್ ಸರಕಾರವು ಒಜಲಾನ್‌ನನ್ನು ಬಂಧಿಸಿತು.

ಶಾಂತಿ ಮತ್ತು ಅರಾಜಕತೆಯೆಡೆಗೆ

ಜೈಲಿನಲ್ಲಿ ಒಜಲಾನ್ ಅವರು ವಿಶ್ವದ ಇತರೆಡೆ ಆದ ಆಂದೋಲನಗಳ ಬಗ್ಗೆ ಅಧ್ಯಯನ ಮಾಡಿದರು. ಅವರು ವಿಶೇಷವಾಗಿ ಆಕರ್ಷಿಸಲ್ಪಟ್ಟಿದ್ದು ಅರಾಜಕತೆಯ (ಅನಾರ್ಕಿಸ್ಟ್), ಮಹಿಳಾವಾದದ, ಪರಿಸರವಾದದ ಹಾಗೂ ಯುದ್ಧ ವಿರೋಧಿ ಆಂದೋಲನಗಳಿಂದ. ಅವರು ತಮ್ಮ ನಿಲುವುಗಳನ್ನು ಬದಲಿಸಿಕೊಂಡರು. ಒಂದು ಸ್ವತಂತ್ರ ಕರ್ಡಿಶ್ ರಾಷ್ಟ್ರಕ್ಕಾಗಿ ಹೋರಾಟದ ಬದಲಿಗೆ ಅವರು ಸ್ವಾಯತ್ತತೆಗಾಗಿ ಹಾಗೂ ರಾಷ್ಟ್ರೀಯ ಗಡಿಗಳ ವಿರುದ್ಧ ಸೆಣೆಸಬೇಕು ಎಂದು ವಾದಿಸಿದರು.

ನಿಜ ಅರ್ಥದಲ್ಲಿ ಸ್ವತಂತ್ರವಾಗಲು, ಪ್ರತಿಯೊಂದು ಹಂತದಲ್ಲಿ ಕರ್ಡಿಶ್ ಜನರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಬೇಕಾಯಿತು. ಅವರು ತಮ್ಮ ಸಮುದಾಯದೊಳಗೇ ಸ್ವತಂತ್ರವಾಗುವ ಅಗತ್ಯವಿತ್ತು, ಅದರರ್ಥ ಅವರು ಪುರುಷಪ್ರಧಾನ ವ್ಯವಸ್ಥೆಯೊಂದಿಗೆ ಹೋರಾಟ ಮಾಡಬೇಕಿತ್ತು. ಅವರು ಬಂಡವಾಳಶಾಹಿ ಶಕ್ತಿಗಳೊಂದಿಗೆ ಹೋರಾಟ ಮಾಡಬೇಕಿತ್ತು. ಇತರೆ ಸ್ಥಳೀಯ ಸಮುದಾಯಗಳೊಂದಿಗೆ ಸಹಕಾರದಿಂದ ಕೆಲಸ ಮಾಡಬೇಕಾಗಿತ್ತು. ಸರಕಾರ ಮಾಡುತ್ತಿರುವ ಹಿಂಸೆಗೆ ಪ್ರತಿರೋಧ ತೋರಬೇಕಿತ್ತು. ಸ್ಥಳೀಯ ಸಮುದಾಯಗಳು ಆಂದೋಲನದ ನಿಯಂತ್ರಣದಲ್ಲಿದ್ದರೆ ಪ್ರತಿರೋಧವು ಪರಿಣಾಮಕಾರಿಯಾಗುವುದು ಎಂದು ಒಜಲಾನ್‌ಗೆ ಅನಿಸಿತು ಹಾಗೂ ಪ್ರದೇಶದಲ್ಲಿ ಸ್ವಾಯತ್ತತೆ ಸೃಷ್ಟಿಸಲು ಇತರರೊಂದಿಗೆ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರು. ಒಂದು ಹೊಸ ಕರ್ಡಿಶ್ ದೇಶವನ್ನು ಸೃಷ್ಟಿಸಲು ಹೋರಾಡುವುದು, ಇತರ ಸಮಸ್ಯೆಗಳನ್ನು ಮರುಸೃಷ್ಟಿ ಮಾಡುತ್ತವೆ ಎಂದು ಅವರಿಗೆ ಅನಿಸಿತು. ಅದು ಕ್ರಾಂತಿಕಾರಿಗಳ ಒಂದು ಆಯ್ದ ಗುಂಪಿನ ಮೇಲೆ ಅವಲಂಬಿತವಾಗಿರುವಂತೆ ಮಾಡುತ್ತದೆ ಎಂದು ಅವರಿಗನ್ನಿಸಿತು. ಅದು ಕರ್ಡಿಶ್‌ಯೇತರ ಸಮುದಾಯಗಳೊಂದಿಗೆ ವೈಷಮ್ಯ ಹುಟ್ಟುಹಾಕುತ್ತದೆ ಹಾಗೂ ವಿಮೋಚನೆಗೊಂಡ ಮಹಿಳೆಯರ ಸಕ್ರಿಯ ಬೆಂಬಲವಿಲ್ಲದೇ ಅದು ದುರ್ಬಲವಾಗಿರುತ್ತದೆ ಎಂದು ತಿಳಿದರು.

ಅವರು ನಂತರ ಅರಾಜಕತೆಯನ್ನು (ಅನಾರ್ಕಿಸಂ) ಪ್ರತಿಪಾದಿಸುವ ಚಿಂತಕರ ಕಡೆಗೆ ತಿರುಗಿ, ಸಂಘಟಿಸುವ ಹೊಸ ಥಿಯರಿಯನ್ನು ಹುಟ್ಟುಹಾಕಿದರು. ಅರಾಜಕತೆ ಎಂದರೆ ಅವ್ಯವಸ್ಥೆಯಲ್ಲ, ಅದರ ಬದಲಿಗೆ ಅದು ಎಲ್ಲಾ ರೀತಿಯ ಪ್ರಾಬಲ್ಯದ-ದಬ್ಬಾಳಿಕೆಯ ವಿರುದ್ಧದ ಹೋರಾಟ. ಅರಾಜಕತೆ ಅಥವಾ ಅನಾರ್ಕಿಸಂ, ಅಥವಾ ಅನ್ ಅಂದರೆ ರಹಿತ ಹಾಗೂ ಆರ್ಕಿ ಅಥವಾ ರಾಜಕತೆ ಎಂದರೆ ಆಳ್ವಿಕೆ ಮಾಡುವಾತ, ಅದರರ್ಥ ಪುರುಷಪ್ರಧಾನ ವ್ಯವಸ್ಥೆ, ಶ್ರೇಣೀಕರಣ ವ್ಯವಸ್ಥೆ, ರಾಜಪ್ರಭುತ್ವ ಮತ್ತು ಒಲಿಗಾರ್ಕಿ ಅಂದರೆ ಕೆಲವರ ಆಳ್ವಿಕೆ, ಇವೆಲ್ಲವುದರ ಹಲವಾರು ರೀತಿಯ ಪ್ರಾಬಲ್ಯ-ದಬ್ಬಾಳಿಕೆಯ ವಿರುದ್ಧದ ನಿಲುವು. ಒಜಲಾನ್ ಈ ಪರಿಕಲ್ಪನೆಗಳನ್ನು ಕರ್ಡಿಶ್‌ನ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿ, ಡೆಮಾಕ್ರಟಿಕ್ ಕನ್ಫೆಡರಲಿಸಂ ಎಂದು ಕರೆಯಲಾದ ಮಾದರಿಯನ್ನು ಸೃಷ್ಟಿಸಿದರು.

ಈ ಡೆಮಾಕ್ರಟಿಕ್ ಕನ್ಫೆಡರಲಿಸಂನ ಒಳಗೆ ಜಿನಿಯಾಲಜಿ ಅಥವಾ ಮಹಿಳಾ ವಿಜ್ಞಾನದ ಥಿಯರಿ ಇದೆ. ಒಂದು ಸಮಾಜ ಸ್ವತಂತ್ರವಾಗಬೇಕೆಂದರೆ, ಮಹಿಳೆಯರನ್ನು ಶೋಷಿಸುವ ಸಾಂಪ್ರದಾಯಿಕ ಬಂಧನಗಳನ್ನು ಮುರಿಯಬೇಕು. ಡೆಮಾಕ್ರಟಿಕ್ ಕನ್ಫೆಡರಲಿಸಂನ ಥಿಯರಿಯು ಮಹಿಳೆಯರ ನೇತೃತ್ವದ ರಚನೆಗಳನ್ನು, ಸ್ಥಳೀಯ ಆಡಳಿತ ವ್ಯವಸ್ಥೆಗಳನ್ನು ರಚಿಸಬೇಕೆಂದು ವಾದಿಸುತ್ತದೆ ಹಾಗೂ ಕಾರ್ಮಿಕರ ನೇತೃತ್ವದ ಸಹಕಾರ ಸಂಘಗಳನ್ನು ಬೆಂಬಲಿಸುತ್ತದೆ. ಪ್ರಭುತ್ವದ ನಿಯಂತ್ರಣದಲ್ಲಿರುವ ಸಂಸ್ಥೆಗಳ ಅಧಿಕಾರವನ್ನು ಕಡಿತಗೊಳಿಸಲಾಗುತ್ತದೆ ಹಾಗೂ ಸಮಾಜದಲ್ಲಿ ಎಲ್ಲರಿಗೂ ಪೊಲೀಸ್ ತರಬೇತಿ ನೀಡಲಾಗುತ್ತದೆ. ಪೊಲೀಸ್ ತರಬೇತಿಯು ಸ್ತ್ರೀವಾದಿ ಅಂಶಗಳನ್ನು ಒಳಗೊಂಡಿರುತ್ತದೆ ಹಾಗೂ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶ ಹೊಂದಿರುತ್ತದೆ. ಸ್ಥಳೀಯ ಘರ್ಷಣೆಗಳನ್ನು ಸ್ಥಳೀಯ ಮಂಡಳಿಗಳು ನಿರ್ವಹಿಸುತ್ತವೆ. ಅಲ್ಲಿ ಕೇವಲ ಮಹಿಳೆಯರನ್ನು ಒಳಗೊಂಡ ಮಂಡಳಿಗಳೂ ಇರುತ್ತವೆ, ಅದರೊಂದಿಗೆ ಮಿಶ್ರ-ಲಿಂಗ ಮಂಡಳಿಗಳೂ ಇರುತ್ತವೆ ಹಾಗೂ ಕೌಟುಂಬಿಕ ಹಿಂಸಾಚಾರದಂತಹ ಮಹಿಳೆಯರ ಶೋಷಣೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಿಶ್ರ ಲಿಂಗ ಮಂಡಳಿಗಳನ್ನು ಮೀರಿ ನಿರ್ಣಯ ತೆಗೆದುಕೊಳ್ಳುವಂತೆ ಕೇವಲ ಮಹಿಳೆಯರು ಇರುವ ಮಂಡಳಿಗಳಿಗೆ ಅಧಿಕಾರ ಇರಬೇಕು. ಮಹಿಳೆಯರ ವಿಂಗ್‌ಗಳನ್ನು ಮಾತ್ರ ಹೊಂದಿರುವುದಕ್ಕಿಂತಲೂ, ಸಮಾಜದಲ್ಲಿ ಪುರುಷರ ವಿರೋಧ
ಎದುರಿಸುತ್ತಿರುವಾಗಲೂ ಕೆಲವು ನಿರ್ದಿಷ್ಟ ವಿಷಯಗಳನ್ನು ನಿರ್ವಹಿಸಲು ಮಹಿಳಾ ಸಂಘಟನೆಗಳನ್ನು ಸಬಲೀಕರಣ ಮಾಡಬೇಕೆಂದು ಡೆಮಾಕ್ರಟಿಕ್ ಕನ್ಫೆಡರಲಿಸಂ ವಾದಿಸುತ್ತದೆ. ರೊಜವಾದಲ್ಲಿ ಇರುವ ಆತ್ಮ ರಕ್ಷಣೆಯ ಪಡೆಗಳಲ್ಲಿ 40% ಮಹಿಳೆಯರೇ ಇದ್ದಾರೆ. ಸಿರಿಯಾದ ಆಂತರಿಕ ಯುದ್ಧದ ಸಮಯದಲ್ಲಿ ಈ ಪಡೆಗಳು ಐಎಸ್‌ಐಎಲ್ ವಿಸ್ತರಣೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಇರಾಕ್ ಮತ್ತು ಸಿರಿಯಾದ ಕರ್ಡಿಶ್ ಪ್ರದೇಶಗಳ ಮೇಲೆ ಆಗುತ್ತಿರುವ ಟರ್ಕಿಯ ದಾಳಿಯು ವಿದೇಶಿ ನೆಲದ ಮೇಲೆ ಆಗುತ್ತಿರುವ ಕಾನೂನುಬಾಹಿರ ದಾಳಿಯಾಗಿದೆ ಹಾಗೂ ಇದನ್ನು ಗಟ್ಟಿಯಾಗಿ ಖಂಡಿಸಬೇಕಿದೆ. ವಿಶ್ವಾದ್ಯಂತ ಜನರು ಈ ದಾಳಿಗಳನ್ನು ಖಂಡಿಸುತ್ತಿದ್ದಾರೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಬ್ರಾಹ್ಮಣ್ಯ ಯಾಜಮಾನ್ಯ ಉಳಿಸಿಕೊಳ್ಳುವ ಹುನ್ನಾರ; ಸುಳ್ಳು ಸಮರ್ಥನೆಗಿಳಿದ ಸಚಿವ ಬಿ.ಸಿ ನಾಗೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...