ಭಾರತದ 75ನೇ ಗಣರಾಜ್ಯ ದಿನದ ಸಂದರ್ಭದಲ್ಲಿ ಭಾರತ ಸರ್ಕಾರದ ಅಧಿಕೃತ ಸಾಮಾಜಿಕ ವೇದಿಕೆ MyGovIndia ದಲ್ಲಿ ಹಂಚಿಕೊಳ್ಳಲಾದ ಸಂವಿಧಾನದ ಮೂಲ ಪೀಠಿಕೆಯು ‘ಸೆಕ್ಯುಲರ್’ ಮತ್ತು ‘ಸಮಾಜವಾದಿ’ ಪದಗಳನ್ನು ಒಳಗೊಂಡಿರಲಿಲ್ಲ. ಇದು ಮೋದಿ ಆಡಳಿತದ ಭಾರತದಲ್ಲಿ ಸಾರ್ವಭೌಮತ್ವ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಕುರಿತ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಂವಿಧಾನದ ಪೀಠಿಕೆಯನ್ನು ಭಾರತೀಯ ಸಂವಿಧಾನದ ಜೊತೆಗೆ ನವೆಂಬರ್ 26, 1949ರಂದು ಅಂಗೀಕರಿಸಲಾಯಿತು ಮತ್ತು ಜನವರಿ 26, 1950ರಿಂದ ಜಾರಿಗೆ ಬಂದಿದೆ. ಜ.26ರಂದು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ. ಸಂವಿಧಾನದ ಪೀಠಿಕೆಯನ್ನು 1976ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದು ಭಾರತದ ಸಂವಿಧಾನದ ಪೀಠಿಕೆಗೆ ಮಾಡಿದ ಏಕೈಕ ತಿದ್ದುಪಡಿಯಾಗಿದೆ.
42ನೇ ತಿದ್ದುಪಡಿ ಅಥವಾ ಸಂವಿಧಾನ (42ನೇ ತಿದ್ದುಪಡಿ) ಕಾಯಿದೆ-1976 ತುರ್ತು ಪರಿಸ್ಥಿತಿಯ ಅವಧಿಯಲ್ಲಿ 1976ರಲ್ಲಿ ಜಾರಿಗೆ ತರಲಾಯಿತು. ಈ ತಿದ್ದುಪಡಿಯ ವೇಳೆ ಸಂವಿಧಾನದ ಪೀಠಿಕೆ, ಹಲವಾರು ಆರ್ಟಿಕಲ್ಗಳು ಮತ್ತು ಏಳನೇ ಶೆಡ್ಯೂಲ್ (ಇದು ಒಕ್ಕೂಟ ಮತ್ತು ರಾಜ್ಯ ಶಾಸಕಾಂಗಗಳ ನಡುವಿನ ಅಧಿಕಾರ ಮತ್ತು ಕಾರ್ಯಗಳ ಬಗ್ಗೆ ಸೂಚಿಸುತ್ತದೆ). ಕಾಯಿದೆಯ ಪರಿಚ್ಛೇದ 2 (ಪೀಠಿಕೆಯ ತಿದ್ದುಪಡಿ), ಎರಡು ಬದಲಾವಣೆಗಳನ್ನು ಮುಂದಿಟ್ಟಿದೆ “ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ” ಪದಗಳನ್ನು “ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಬದಲಿಸಲಾಗಿದೆ ಮತ್ತು “ರಾಷ್ಟ್ರದ ಏಕತೆ” ಎಂಬ ಪದಗುಚ್ಛವನ್ನು “ರಾಷ್ಟ್ರದ ಏಕತೆ ಮತ್ತು ಸಮಗ್ರತೆ” ಯೊಂದಿಗೆ ಬದಲಿಸಲಾಗಿದೆ.
ಜನವರಿ 25ರಂದು ಭಾರತೀಯ ಸರ್ಕಾರದ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ MyGovIndia ಸಂವಿಧಾನದ ಮೂಲ ಪೀಠಿಕೆಯ ಚಿತ್ರವನ್ನು ಪೋಸ್ಟ್ ಮಾಡಿದೆ. ಪೋಸ್ಟ್ನಲ್ಲಿ ನಾವು ಭಾರತ ಗಣರಾಜ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ನಮ್ಮ ಸಂವಿಧಾನದ ಮೂಲ ಪೀಠಿಕೆಯನ್ನು ಮರುಪರಿಶೀಲಿಸೋಣ. ಈ ಮೂಲಭೂತ ತತ್ವಗಳೊಂದಿಗೆ ನವ ಭಾರತ ಎಷ್ಟು ಚೆನ್ನಾಗಿ ಪ್ರತಿಧ್ವನಿಸುತ್ತದೆ? ಎಂಬುವುದನ್ನು ಪೋಸ್ಟ್ನಲ್ಲಿ ಬರೆಯಲಾಗಿದೆ.
ಮುನ್ನುಡಿ ವಿವಾದ;
ಸಂವಿಧಾನದ ಮೂಲ ಮುನ್ನುಡಿಯನ್ನು ಆಡಳಿತ ಪಕ್ಷವು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2023ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ, ಸಂಸದ ಅಧೀರ್ ರಂಜನ್ ಚೌಧರಿ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಸದಸ್ಯರಿಗೆ ವಿತರಿಸಿದ ಸಂವಿಧಾನದ ಪ್ರತಿಗಳು ಅದರ ಮುನ್ನುಡಿಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಹೊಂದಿಲ್ಲ ಎಂದು ಹೇಳಿದ್ದರು. ಈ ಬೆಳವಣಿಗೆಯು ಉದ್ದೇಶಪೂರ್ವಕ ಎಂದು ಅಧೀರ್ ರಂಜನ್ ಚೌದರಿ ಹೇಳಿದ ಬಳಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಆದರೆ ಈ ಆರೋಪವನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ತಳ್ಳಿಹಾಕಿದ್ದರು. ಮೂಲ ಸಂವಿಧಾನವನ್ನು ಮುದ್ರಿಸಿದ್ದು, ಹಾಗಾಗಿ ಪದಗಳು ಕಾಣೆಯಾಗಿವೆ ಎಂದು ಹೇಳಿದ್ದಾರೆ. ಸಂವಿಧಾನವನ್ನು ರಚಿಸಿದಾಗ ಅದು ಹೀಗಿತ್ತು. ನಂತರ ತಿದ್ದುಪಡಿ ಮಾಡಲಾಯಿತು. ಇದು ಮೂಲ ಪ್ರತಿ ಎಂದು ಅವರು ಸಮಜಾಯಿಸಿ ಹೇಳಿದ್ದರು.
ಜೂನ್ 2023ರಲ್ಲಿ ತೆಲಂಗಾಣ ಸ್ಟೇಟ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (SCERT) 10ನೇ ತರಗತಿಯ ಸಾಮಾಜ ಅಧ್ಯಯನಗಳ ಪಠ್ಯಪುಸ್ತಕಗಳ ಮುಖಪುಟದಲ್ಲಿ ಸಂವಿಧಾನದ ಮೂಲ ಪೀಠಿಕೆಯನ್ನು ಮುದ್ರಿಸಿ ಚರ್ಚೆಯನ್ನು ಹುಟ್ಟು ಹಾಕಿತ್ತು.
2015ರಲ್ಲಿ ಗಣರಾಜ್ಯೋತ್ಸವದಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟೈಮ್ಸ್ ಆಫ್ ಇಂಡಿಯಾದಲ್ಲಿ ಅರ್ಧ ಪುಟದ ಜಾಹೀರಾತನ್ನು ಗಣರಾಜ್ಯೋತ್ಸವದಂದು ಪ್ರಧಾನ ಮಂತ್ರಿಯ ಸಂದೇಶದೊಂದಿಗೆ ಮೂಲ ಪೀಠಿಕೆಯ ಚಿತ್ರದೊಂದಿಗೆ ಬಿಡುಗಡೆ ಮಾಡಿತ್ತು. ಇದು ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ಅಂದಿನ ಸಚಿವ ರಾಜ್ಯವರ್ಧನ್ ರಾಥೋಡ್ ಈ ಬಗ್ಗೆ ಪ್ರತಿಕ್ರಿಯಿಸಿ, ಜಾಹೀರಾತಿನ ಸುತ್ತಲಿನ ವಿವಾದವನ್ನು ತಳ್ಳಿಹಾಕಿದ್ದು, ಮೂಲ ಪೀಠಿಕೆಯ ಫೋಟೋ ಸಂವಿಧಾನದ ಪಿತಾಮಹರನ್ನು ಗೌರವಿಸುವ ಸಲುವಾಗಿ ಹಂಚಿಕೊಳ್ಳಲಾಗಿದೆ ಎಂದು ಬರೆಯಲಾಗಿದೆ.
As we celebrate 75 years of the Republic of India, let's revisit the original Preamble of our Constitution. How well does New India resonate with these foundational principles? Take a look to embark on a journey through time, exploring how India has evolved while staying true to… pic.twitter.com/skbGmMCzGn
— MyGovIndia (@mygovindia) January 25, 2024
ಇದನ್ನು ಓದಿ: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಮೇಲೆ ದಾಳಿ ಖಂಡಿಸಿ ಪತ್ರ ಬರೆದ 100 ಮಂದಿ ಚಿಂತಕರು
india belongs to different religions and region having different celebration it does mean secular, unity and integrity pls don’t try to change ambedkar constitution it will show ur defeat final path