Homeಮುಖಪುಟಬೇಡಿಕೆ ಕುಸಿತ - ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ - ಐ.ವಿ.ಗೌಲ್

ಬೇಡಿಕೆ ಕುಸಿತ – ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ – ಐ.ವಿ.ಗೌಲ್

- Advertisement -
- Advertisement -

ಮೊನ್ನೆ ಬಂದ ಮೂರು ಸಿನಿಮಾಗಳು ತಲಾ 120 ಕೋಟಿ ರೂಪಾಯಿ ಗಳಿಸಿವೆ. ಹೀಗಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ತೊಂದರೆ ಆಗಿಲ್ಲ.

ಯುವ ಜನರಿಗೆ ಹೊಸ ವಿನ್ಯಾಸದ ಬಟ್ಟೆಗಳು ಬೇಕಾಗಿವೆ ಆದ್ದರಿಂದ ಅವರು ಹೊಸ ಬಟ್ಟೆ ಖರೀದಿಸುತ್ತಿಲ್ಲ.
ಮಧ್ಯ ವಯಸ್ಕರು ಓಲಾ, ಊಬರ್‌ಗಳಲ್ಲಿ ಓಡಾಡುತ್ತಿರುವುದರಿಂದ ಕಾರು, ಬೈಕು, ಟ್ರಕ್ಕು, ಟ್ರ್ಯಾಕ್ಟರು ಮಾರಾಟವಾಗುತ್ತಿಲ್ಲ

ಜಿಎಸ್‍ಟಿ ಸರಿಯಿಲ್ಲ. ಅದರಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ತೆರಿಗೆ ಸಂಗ್ರಹ ಸರಿಯಾಗಬಹುದೆಂದು ಅಂದುಕೊಂಡಿದ್ದೆವು. ಆಗಲಿಲ್ಲ, ಸಾರಿ. ಆದರೆ ಏನು ಮಾಡುವುದು, ಅದು ದೇಶದ ಕಾನೂನು. ಪಾಲಿಸಲೇ ಬೇಕು.

ಇಂತಹ ಮುತ್ತಿನ ಹಾರದಂತಹ ಮಾತುಗಳು ನಮ್ಮ ಕಿವಿ ತುಂಬಿ ನಮಗೆ ಕರ್ಣಾನಂದವಾಗುತ್ತಿದೆ.
ಇವನ್ನು ಯಾರು ಯಾರಿಗೆ ಹೇಳಿದರು ಎನ್ನುವ ಪ್ರಶ್ನೆಗಳಿಗೆ ಪಾಸಿಂಗ್ ಮಾರ್ಕೂ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಒಟ್ಟಿನಲ್ಲಿ ಈಗ ಇಡೀ ದೇಶದ ತುಂಬ ಆರ್ಥಿಕ ಪರಿಸ್ಥಿತಿಯ ಸುದ್ದಿ. ಅರ್ಥದ ಸುದ್ದಿ ಹಾಗೂ ಅದರ ಅರ್ಥದ ಸುದ್ದಿ.
ಬರೀ ಅರ್ಥಾರ್ಥದ ಮಾತು.
ಯಾಕೆ?
ಹಿಗ್ಸ – ಬಾಸಾನ್ ಎಂಬ ಪರಮಾಣು ಭಾಗವನ್ನು, ದೇವ ಕಣ ಎಂದು ಕನ್ನಡ ಪತ್ರಿಕೆಗಳ ಭಾಷಾಂತರಕಾರರಿಂದ ಕರೆಯಲ್ಪಟ್ಟ ಅಣುವಿನ ತುಂಡಿನ ಬಗ್ಗೆ ಸಂಶೋಧಿಸಿದ ವಿಜ್ಞಾನಿ ಹಿಗ್ಸ ಅವರನ್ನು ಬ್ರಿಟಿಷ್ ಟಿವಿ ಚಾನಲ್ ಒಂದು ಮಾತಾಡಿಸಿತು.

ಈ ದೇವಕಣದ ಬಗ್ಗೆ ನೀವು ಸರಳ ಭಾಷೆಯಲ್ಲಿ 30 ಸೆಕೆಂಡುಗಳಲ್ಲಿ ಎಲ್ಲರೂ ತಿಳಿಯುವಂತೆ ಹೇಳಬಲ್ಲಿರಾ ಎಂದು ಸಂದರ್ಶಕ ಕೇಳಿದ.

`ಇಲ್ಲ. ಸಾಧ್ಯವಿಲ್ಲ` ಎಂದು ಅವರು ಹೇಳಿದರು. ಇಬ್ಬರೂ ನಕ್ಕರು.
ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಳವಾಗಿ, ಎಲ್ಲರಿಗೂ ತಿಳಿಯುಂತೆ, ಕೆಲವೇ ಶಬ್ದಗಳಲ್ಲಿ ತಿಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಇಲ್ಲ, ಸಾಧ್ಯವೇ ಇಲ್ಲ ಅಂತ ಹೇಳಬಹುದೇನೋ. ಪ್ರಶ್ನೆ ಕೇಳಿದವರು, ಉತ್ತರ ಕೊಟ್ಟವರು, ಇಬ್ಬರೂ ನಗಲಾರದೇ ಮಾತು ಮುಗಿಸಬಹುದೇನೋ.

ನಮ್ಮ ವಾರ್ಷಿಕ ಬೆಳವಣಿಗೆಯ ದರ ಕಡಿಮೆ ಆಗಿರುವುದಕ್ಕೂ, ನಿರುದ್ಯೋಗ ಬೆಳೆಯುತ್ತಿರುವುದಕ್ಕೂ, ಸಾಲ ಹೆಚ್ಚಾಗಿ, ಉತ್ಪನ್ನ ಕಡಿಮೆಯಾಗಿ ಷೇರು ಮಾರುಕಟ್ಟೆ ನಷ್ಟ ಅನುಭವಿಸುತ್ತಿರುವುದಕ್ಕೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ನಮ್ಮ ರಫ್ತು ಭಾಗೀದಾರಿಕೆ ಕಡಿಮೆ ಆಗುತ್ತಿರುವುದಕ್ಕೂ ಅನೇಕ ಕಾರಣಗಳಿರಬಹುದು.
ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರಬಹುದು. ತಮ್ಮ ವಾದವನ್ನು ಬೆಂಬಲಿಸಲು ಅವರು ತಮ್ಮದೇ ಆದ ಸಿದ್ಧಾಂತಗಳನ್ನು ನೆಚ್ಚಿಕೊಂಡಿರಬಹುದು.

ಅಂತಹ ಅನೇಕ ವಾದಗಳಲ್ಲಿ ಒಂದು `ಡಿಮಾಂಡ್ ಸ್ಲಂಪ್` ಅಥವಾ `ಬೇಡಿಕೆ ಕುಸಿತದ` ಸಿದ್ಧಾಂತ.
ಅದು ಸರಿಯೋ ತಪ್ಪೋ ಎನ್ನುವ ಮಾತಿಗೆ ಹೋಗದೇ ಇಲ್ಲಿ ನೋಡೋಣ.

ಇದರ ಸರಳಾರ್ಥವೆಂದರೆ ಜನರ ದುಡ್ಡು ಮಾರುಕಟ್ಟೆಯಲ್ಲಿ ಖರ್ಚಾಗುತ್ತಿಲ್ಲ. ಜನ ಖರೀದಿ ಮಾಡುತ್ತಿಲ್ಲ. ಇರಲಾರದವರಿಗೆ ದುಡ್ಡು ಹುಟ್ಟುತ್ತಿಲ್ಲ, ಇದ್ದವರಿಗೆ ಮುಂದೇನಾಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದಾರೆ. ಒಂದರಿಂದ ಶುರುವಾದ ಸೋಂಕು ಇನ್ನೊಂದಕ್ಕೆ ಹರಡುವಂತೆ, ಒಂದು ಕ್ಷೇತ್ರದ ಹಿಂಜರಿತ ಇನ್ನೊಂದು ಕ್ಷೇತ್ರಕ್ಕೆ ಹರಡಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎನ್ನುವರಿದ್ದಾರೆ.
ಅವರ ಪ್ರಕಾರ ಇದರ ಮೂಲ ಕಾರಣಗಳು ಇವು.

ಮೊದಲನೇಯದಾಗಿ ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ಸಂಪತ್ತು ಸೃಷ್ಟಿಸುವುದನ್ನು ಬಿಟ್ಟು ಬಂಡವಾಳ ಮೂಲಗಳು ನೌಕರರ ಸಂಖ್ಯೆಯನ್ನು ಕಮ್ಮಿ ಮಾಡಿ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದ್ದು.

ವಿಶ್ವವನ್ನೇ ಒಂದು ಮಾರುಕಟ್ಟೆ ಮಾಡುವ ಉದ್ದೇಶದಿಂದ ಸೃಜಿಸಲಾದ ವಿಶ್ವ ಬ್ಯಾಂಕು, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರದೇಶವಾರು ಮಾರುಕಟ್ಟೆ ಒಪ್ಪಂದಗಳು, ಇವೆಲ್ಲ ಸೇರಿ ಯಾವುದೇ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದದ್ದು. ಈ ಗುಂಪುಗಳ ಕೆಲವು ಸದಸ್ಯರಾಷ್ಟ್ರಗಳ ಬಲಹೀನತೆಗಳು ಎಲ್ಲ ಸದಸ್ಯರನ್ನೂ, ಸದಸ್ಯರಲ್ಲದವರನ್ನೂ ಕಾಡಲು ಆರಂಭಿಸಿದ್ದು.

ಬ್ಯಾಂಕಿಂಗ್, ವಿಮೆ, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಇತ್ಯಾದಿ ಕೆಲ ಕ್ಷೇತ್ರಗಳ ಸಂಸ್ಥೆಗಳ ಅತಿ ಮೌಲ್ಯೀಕರಣ ಓವರ್ ವ್ಯಾಲುಏಷನ್. ಇವುಗಳಿಗೆ ತಾವು ಅರಗಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಬಂಡವಾಳ ಹರಿದು ಬಂದು, ನಿರೀಕ್ಷಿತ ಲಾಭ ಅಥವಾ ಉತ್ಪನ್ನ ಬರದೇ ಹೋದದ್ದು
ಕೊಳ್ಳುಬಾಕುತನ ಅತಿಯಾಗಿ ಜನ ಖರೀದಿಸಲು ಸಾಧ್ಯವಿದ್ದಕ್ಕಿಂತ ಹೆಚ್ಚು ಉತ್ಪಾದನೆ ಆಗಿ ಸಾಮಾನುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗದೇ ಉಳಿದಿರುವುದು
ಇತ್ಯಾದಿ

ಇದರ ಉಪಾಯಗಳೇನು?
ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್, ಶ್ರೀನಿವಾಸ್ ರಾಘವನ್ ಮತ್ತು ಇತರರು ಮೊನ್ನೆ ಒಂದು ವಿಚಾರ ಸಂಕಿರಣದಲ್ಲಿ ಹೇಳಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿ ಖರ್ಚನ್ನು ಹೆಚ್ಚಿಸಿ, ಸರಕಾರಿ ಉದ್ದಿಮೆಗಳನ್ನು ಚುರುಕಾಗಿಸಿ, ಉದ್ಯೋಗ ಖಾತ್ರಿ ಯಂತಹ ಯೋಜನೆಗಳಿಂದ ಹಳ್ಳಿಗಳ ಜನರ ಕೈಯಲ್ಲಿ ಹೆಚ್ಚಿನ ಹಣ ಹರಿಯುವಂತೆ ಮಾಡುವುದು, ಒಂದು ಉಪಾಯ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ಸರಕಾರಿ ಖರ್ಚನ್ನು ಹೆಚ್ಚಿಸುವುದು ಇನ್ನೊಂದು ಉಪಾಯ
ಭಾರತೀಯ ಅರ್ಥವ್ಯವಸ್ಥೆ ತೇಜಿ ಇರುವ ಚುರುಕಾದ, ಲಾಭ ಗಳಿಸಿಕೊಳ್ಳಬಲ್ಲಂತಹ ವ್ಯವಸ್ಥೆ ಎಂದು ಹೂಡಿಕೆದಾರರಿರಗೆ ಮನವರಿಕೆ ಮಾಡಿಕೊಡುವಂತಹ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಇತ್ಯಾದಿ.

ಈ ನೆಲದ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ ನಂಜುಂಡಪ್ಪ ನವರ ಮಾತಿನಂತೆ ಭಾರತದ ಎಲ್ಲಾ ಸಮಸ್ಯೆಗಳಿಗೆ ಇರುವ ಉಪಾಯಗಳು ಸರಳ. ಜನರ ದುಡಿಮೆಗೆ ತಕ್ಕ ಪ್ರತಿಫಲ ದೊರಕಬೇಕು, ಅವರು ಹೆಚ್ಚಿನ ಹಣ ಉಳಿಸಬೇಕು, ಹಾಗೂ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಕುಗ್ಗದಂತೆ ನೋಡುವುದು ಎಂಬ ಅವರ ಮಾತು ನಮ್ಮನ್ನು ಉಳಿಸೀತು.

ವಿಶ್ವ ಕಂಡ ಅತ್ಯಂತ ದೊಡ್ಡ ಆರ್ಥಿಕ ಹಿಂಜರಿತ ವೆನ್ನಲಾಗುವ ಗ್ರೇಟ್ ಡಿಪ್ರೆಷನ್ ಅಮೇರಿಕೆ ಯನ್ನು 1930ರ ದಶಕದಲ್ಲಿ ಕಾಡಿತು. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ದೇಶ ಇತರರ ಕಣ್ಣಲ್ಲಿ ಸಣ್ಣವರಾಗಬೇಕಾಗಿ ಬಂತು.
ಅದನ್ನು ನಿಭಾಯಿಸಿ ಅಮೇರಿಕೆಯ ಆರ್ಥಿಕತೆಯನ್ನೂ ಹಾಗೂ ಅದರೊಟ್ಟಿಗೆ ವಿಶ್ವದ ಆರ್ಥಿಕತೆಯನ್ನು ಸಂಭಾಳಿಸಿದ ನಾಯಕ ಎಂದು ಅಮೇರಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ನನ್ನು ಗುರುತಿಸಲಾಗುತ್ತದೆ.
ಅವನ ಒಂದು ಮಾತು ಇಲ್ಲಿ ನೆನಪಾಗುತ್ತದೆ.

ರೂಸವೆಲ್ಟ್ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ ಅಮೇರಿಕನ್ನರು ಖರೀದಿ ಮಾಡಬೇಕು. ಅವರ ಖರೀದಿ ಯೊಂದೇ ನಮ್ಮನ್ನು ಉಳಿಸಲು ಸಾಧ್ಯ ಎಂದರು. ಆಗ ಲಿಂಡಾ ಜೇಮ್ಸ್ ಎಂಬ ಪತ್ರಕರ್ತರೊಬ್ಬರು ಏನನ್ನು ಖರೀದಿಸಬೇಕು ಎಂದು ಕೇಳಿದರಂತೆ. `ಏನಾದರೂ ಆಗಬಹುದು` ಅಂತ ಅಧ್ಯಕ್ಷರು ಉತ್ತರಿಸಿದರಂತೆ. ಮರುದಿನ ಪತ್ರಿಕೆಗಳಲ್ಲಿ `ಬೈ ಎನಿಥಿಂಗ್. ದ್ಯಾಟ್ ಈಸ್ ದ ನ್ಯೂ ಡೀಲ್’ (`ಏನನ್ನಾದರೂ ಖರೀದಿಸಿ. ಅದೊಂದೇ ಉಪಾಯ`) ಎಂಬ ಶೀರ್ಷಿಕೆ ರಾರಾಜಿಸಿತ್ತಂತೆ.

ಅವರ ಈ ಮಾತಿನಿಂದಲೇ ಕೊಳ್ಳುಬಾಕತನದ ಪರಿ ಆರಂಭವಾಯಿತು ಎನ್ನುವವರೂ ಇದ್ದಾರೆ.

ಇಂದಿನ ಭಾರತದ ವಿಷಯಕ್ಕೆ ಬಂದರೆ ಏನಾದರೂ ಆಗಿ ಮಾರುಕಟ್ಟೆ ಚೇತರಿಸಿಕೊಂಡರೆ ಸಾಕು. ಏನಾದರೂ ಆಗಲಿ ಅನ್ನುವವರಿದ್ದಾರೆ. ಅಷ್ಟೊಂದು ಪರಾಕಾಷ್ಟೆ ಬೇಡ.

ಚೇತರಿಕೆ ಆಗಲಿ, ಅದರೊಂದಿಗೆ ಸ್ವಲ್ಪ ಕೂಳುಬಾಕತನ ಕಮ್ಮಿಯಾಗಲಿ ಅಂತಲೂ ಅನ್ನಿಸುತ್ತದೆ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...