Homeಮುಖಪುಟಬೇಡಿಕೆ ಕುಸಿತ - ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ - ಐ.ವಿ.ಗೌಲ್

ಬೇಡಿಕೆ ಕುಸಿತ – ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ – ಐ.ವಿ.ಗೌಲ್

- Advertisement -
- Advertisement -

ಮೊನ್ನೆ ಬಂದ ಮೂರು ಸಿನಿಮಾಗಳು ತಲಾ 120 ಕೋಟಿ ರೂಪಾಯಿ ಗಳಿಸಿವೆ. ಹೀಗಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ತೊಂದರೆ ಆಗಿಲ್ಲ.

ಯುವ ಜನರಿಗೆ ಹೊಸ ವಿನ್ಯಾಸದ ಬಟ್ಟೆಗಳು ಬೇಕಾಗಿವೆ ಆದ್ದರಿಂದ ಅವರು ಹೊಸ ಬಟ್ಟೆ ಖರೀದಿಸುತ್ತಿಲ್ಲ.
ಮಧ್ಯ ವಯಸ್ಕರು ಓಲಾ, ಊಬರ್‌ಗಳಲ್ಲಿ ಓಡಾಡುತ್ತಿರುವುದರಿಂದ ಕಾರು, ಬೈಕು, ಟ್ರಕ್ಕು, ಟ್ರ್ಯಾಕ್ಟರು ಮಾರಾಟವಾಗುತ್ತಿಲ್ಲ

ಜಿಎಸ್‍ಟಿ ಸರಿಯಿಲ್ಲ. ಅದರಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ತೆರಿಗೆ ಸಂಗ್ರಹ ಸರಿಯಾಗಬಹುದೆಂದು ಅಂದುಕೊಂಡಿದ್ದೆವು. ಆಗಲಿಲ್ಲ, ಸಾರಿ. ಆದರೆ ಏನು ಮಾಡುವುದು, ಅದು ದೇಶದ ಕಾನೂನು. ಪಾಲಿಸಲೇ ಬೇಕು.

ಇಂತಹ ಮುತ್ತಿನ ಹಾರದಂತಹ ಮಾತುಗಳು ನಮ್ಮ ಕಿವಿ ತುಂಬಿ ನಮಗೆ ಕರ್ಣಾನಂದವಾಗುತ್ತಿದೆ.
ಇವನ್ನು ಯಾರು ಯಾರಿಗೆ ಹೇಳಿದರು ಎನ್ನುವ ಪ್ರಶ್ನೆಗಳಿಗೆ ಪಾಸಿಂಗ್ ಮಾರ್ಕೂ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಒಟ್ಟಿನಲ್ಲಿ ಈಗ ಇಡೀ ದೇಶದ ತುಂಬ ಆರ್ಥಿಕ ಪರಿಸ್ಥಿತಿಯ ಸುದ್ದಿ. ಅರ್ಥದ ಸುದ್ದಿ ಹಾಗೂ ಅದರ ಅರ್ಥದ ಸುದ್ದಿ.
ಬರೀ ಅರ್ಥಾರ್ಥದ ಮಾತು.
ಯಾಕೆ?
ಹಿಗ್ಸ – ಬಾಸಾನ್ ಎಂಬ ಪರಮಾಣು ಭಾಗವನ್ನು, ದೇವ ಕಣ ಎಂದು ಕನ್ನಡ ಪತ್ರಿಕೆಗಳ ಭಾಷಾಂತರಕಾರರಿಂದ ಕರೆಯಲ್ಪಟ್ಟ ಅಣುವಿನ ತುಂಡಿನ ಬಗ್ಗೆ ಸಂಶೋಧಿಸಿದ ವಿಜ್ಞಾನಿ ಹಿಗ್ಸ ಅವರನ್ನು ಬ್ರಿಟಿಷ್ ಟಿವಿ ಚಾನಲ್ ಒಂದು ಮಾತಾಡಿಸಿತು.

ಈ ದೇವಕಣದ ಬಗ್ಗೆ ನೀವು ಸರಳ ಭಾಷೆಯಲ್ಲಿ 30 ಸೆಕೆಂಡುಗಳಲ್ಲಿ ಎಲ್ಲರೂ ತಿಳಿಯುವಂತೆ ಹೇಳಬಲ್ಲಿರಾ ಎಂದು ಸಂದರ್ಶಕ ಕೇಳಿದ.

`ಇಲ್ಲ. ಸಾಧ್ಯವಿಲ್ಲ` ಎಂದು ಅವರು ಹೇಳಿದರು. ಇಬ್ಬರೂ ನಕ್ಕರು.
ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಳವಾಗಿ, ಎಲ್ಲರಿಗೂ ತಿಳಿಯುಂತೆ, ಕೆಲವೇ ಶಬ್ದಗಳಲ್ಲಿ ತಿಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಇಲ್ಲ, ಸಾಧ್ಯವೇ ಇಲ್ಲ ಅಂತ ಹೇಳಬಹುದೇನೋ. ಪ್ರಶ್ನೆ ಕೇಳಿದವರು, ಉತ್ತರ ಕೊಟ್ಟವರು, ಇಬ್ಬರೂ ನಗಲಾರದೇ ಮಾತು ಮುಗಿಸಬಹುದೇನೋ.

ನಮ್ಮ ವಾರ್ಷಿಕ ಬೆಳವಣಿಗೆಯ ದರ ಕಡಿಮೆ ಆಗಿರುವುದಕ್ಕೂ, ನಿರುದ್ಯೋಗ ಬೆಳೆಯುತ್ತಿರುವುದಕ್ಕೂ, ಸಾಲ ಹೆಚ್ಚಾಗಿ, ಉತ್ಪನ್ನ ಕಡಿಮೆಯಾಗಿ ಷೇರು ಮಾರುಕಟ್ಟೆ ನಷ್ಟ ಅನುಭವಿಸುತ್ತಿರುವುದಕ್ಕೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ನಮ್ಮ ರಫ್ತು ಭಾಗೀದಾರಿಕೆ ಕಡಿಮೆ ಆಗುತ್ತಿರುವುದಕ್ಕೂ ಅನೇಕ ಕಾರಣಗಳಿರಬಹುದು.
ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರಬಹುದು. ತಮ್ಮ ವಾದವನ್ನು ಬೆಂಬಲಿಸಲು ಅವರು ತಮ್ಮದೇ ಆದ ಸಿದ್ಧಾಂತಗಳನ್ನು ನೆಚ್ಚಿಕೊಂಡಿರಬಹುದು.

ಅಂತಹ ಅನೇಕ ವಾದಗಳಲ್ಲಿ ಒಂದು `ಡಿಮಾಂಡ್ ಸ್ಲಂಪ್` ಅಥವಾ `ಬೇಡಿಕೆ ಕುಸಿತದ` ಸಿದ್ಧಾಂತ.
ಅದು ಸರಿಯೋ ತಪ್ಪೋ ಎನ್ನುವ ಮಾತಿಗೆ ಹೋಗದೇ ಇಲ್ಲಿ ನೋಡೋಣ.

ಇದರ ಸರಳಾರ್ಥವೆಂದರೆ ಜನರ ದುಡ್ಡು ಮಾರುಕಟ್ಟೆಯಲ್ಲಿ ಖರ್ಚಾಗುತ್ತಿಲ್ಲ. ಜನ ಖರೀದಿ ಮಾಡುತ್ತಿಲ್ಲ. ಇರಲಾರದವರಿಗೆ ದುಡ್ಡು ಹುಟ್ಟುತ್ತಿಲ್ಲ, ಇದ್ದವರಿಗೆ ಮುಂದೇನಾಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದಾರೆ. ಒಂದರಿಂದ ಶುರುವಾದ ಸೋಂಕು ಇನ್ನೊಂದಕ್ಕೆ ಹರಡುವಂತೆ, ಒಂದು ಕ್ಷೇತ್ರದ ಹಿಂಜರಿತ ಇನ್ನೊಂದು ಕ್ಷೇತ್ರಕ್ಕೆ ಹರಡಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎನ್ನುವರಿದ್ದಾರೆ.
ಅವರ ಪ್ರಕಾರ ಇದರ ಮೂಲ ಕಾರಣಗಳು ಇವು.

ಮೊದಲನೇಯದಾಗಿ ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ಸಂಪತ್ತು ಸೃಷ್ಟಿಸುವುದನ್ನು ಬಿಟ್ಟು ಬಂಡವಾಳ ಮೂಲಗಳು ನೌಕರರ ಸಂಖ್ಯೆಯನ್ನು ಕಮ್ಮಿ ಮಾಡಿ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದ್ದು.

ವಿಶ್ವವನ್ನೇ ಒಂದು ಮಾರುಕಟ್ಟೆ ಮಾಡುವ ಉದ್ದೇಶದಿಂದ ಸೃಜಿಸಲಾದ ವಿಶ್ವ ಬ್ಯಾಂಕು, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರದೇಶವಾರು ಮಾರುಕಟ್ಟೆ ಒಪ್ಪಂದಗಳು, ಇವೆಲ್ಲ ಸೇರಿ ಯಾವುದೇ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದದ್ದು. ಈ ಗುಂಪುಗಳ ಕೆಲವು ಸದಸ್ಯರಾಷ್ಟ್ರಗಳ ಬಲಹೀನತೆಗಳು ಎಲ್ಲ ಸದಸ್ಯರನ್ನೂ, ಸದಸ್ಯರಲ್ಲದವರನ್ನೂ ಕಾಡಲು ಆರಂಭಿಸಿದ್ದು.

ಬ್ಯಾಂಕಿಂಗ್, ವಿಮೆ, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಇತ್ಯಾದಿ ಕೆಲ ಕ್ಷೇತ್ರಗಳ ಸಂಸ್ಥೆಗಳ ಅತಿ ಮೌಲ್ಯೀಕರಣ ಓವರ್ ವ್ಯಾಲುಏಷನ್. ಇವುಗಳಿಗೆ ತಾವು ಅರಗಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಬಂಡವಾಳ ಹರಿದು ಬಂದು, ನಿರೀಕ್ಷಿತ ಲಾಭ ಅಥವಾ ಉತ್ಪನ್ನ ಬರದೇ ಹೋದದ್ದು
ಕೊಳ್ಳುಬಾಕುತನ ಅತಿಯಾಗಿ ಜನ ಖರೀದಿಸಲು ಸಾಧ್ಯವಿದ್ದಕ್ಕಿಂತ ಹೆಚ್ಚು ಉತ್ಪಾದನೆ ಆಗಿ ಸಾಮಾನುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗದೇ ಉಳಿದಿರುವುದು
ಇತ್ಯಾದಿ

ಇದರ ಉಪಾಯಗಳೇನು?
ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್, ಶ್ರೀನಿವಾಸ್ ರಾಘವನ್ ಮತ್ತು ಇತರರು ಮೊನ್ನೆ ಒಂದು ವಿಚಾರ ಸಂಕಿರಣದಲ್ಲಿ ಹೇಳಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿ ಖರ್ಚನ್ನು ಹೆಚ್ಚಿಸಿ, ಸರಕಾರಿ ಉದ್ದಿಮೆಗಳನ್ನು ಚುರುಕಾಗಿಸಿ, ಉದ್ಯೋಗ ಖಾತ್ರಿ ಯಂತಹ ಯೋಜನೆಗಳಿಂದ ಹಳ್ಳಿಗಳ ಜನರ ಕೈಯಲ್ಲಿ ಹೆಚ್ಚಿನ ಹಣ ಹರಿಯುವಂತೆ ಮಾಡುವುದು, ಒಂದು ಉಪಾಯ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ಸರಕಾರಿ ಖರ್ಚನ್ನು ಹೆಚ್ಚಿಸುವುದು ಇನ್ನೊಂದು ಉಪಾಯ
ಭಾರತೀಯ ಅರ್ಥವ್ಯವಸ್ಥೆ ತೇಜಿ ಇರುವ ಚುರುಕಾದ, ಲಾಭ ಗಳಿಸಿಕೊಳ್ಳಬಲ್ಲಂತಹ ವ್ಯವಸ್ಥೆ ಎಂದು ಹೂಡಿಕೆದಾರರಿರಗೆ ಮನವರಿಕೆ ಮಾಡಿಕೊಡುವಂತಹ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಇತ್ಯಾದಿ.

ಈ ನೆಲದ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ ನಂಜುಂಡಪ್ಪ ನವರ ಮಾತಿನಂತೆ ಭಾರತದ ಎಲ್ಲಾ ಸಮಸ್ಯೆಗಳಿಗೆ ಇರುವ ಉಪಾಯಗಳು ಸರಳ. ಜನರ ದುಡಿಮೆಗೆ ತಕ್ಕ ಪ್ರತಿಫಲ ದೊರಕಬೇಕು, ಅವರು ಹೆಚ್ಚಿನ ಹಣ ಉಳಿಸಬೇಕು, ಹಾಗೂ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಕುಗ್ಗದಂತೆ ನೋಡುವುದು ಎಂಬ ಅವರ ಮಾತು ನಮ್ಮನ್ನು ಉಳಿಸೀತು.

ವಿಶ್ವ ಕಂಡ ಅತ್ಯಂತ ದೊಡ್ಡ ಆರ್ಥಿಕ ಹಿಂಜರಿತ ವೆನ್ನಲಾಗುವ ಗ್ರೇಟ್ ಡಿಪ್ರೆಷನ್ ಅಮೇರಿಕೆ ಯನ್ನು 1930ರ ದಶಕದಲ್ಲಿ ಕಾಡಿತು. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ದೇಶ ಇತರರ ಕಣ್ಣಲ್ಲಿ ಸಣ್ಣವರಾಗಬೇಕಾಗಿ ಬಂತು.
ಅದನ್ನು ನಿಭಾಯಿಸಿ ಅಮೇರಿಕೆಯ ಆರ್ಥಿಕತೆಯನ್ನೂ ಹಾಗೂ ಅದರೊಟ್ಟಿಗೆ ವಿಶ್ವದ ಆರ್ಥಿಕತೆಯನ್ನು ಸಂಭಾಳಿಸಿದ ನಾಯಕ ಎಂದು ಅಮೇರಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ನನ್ನು ಗುರುತಿಸಲಾಗುತ್ತದೆ.
ಅವನ ಒಂದು ಮಾತು ಇಲ್ಲಿ ನೆನಪಾಗುತ್ತದೆ.

ರೂಸವೆಲ್ಟ್ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ ಅಮೇರಿಕನ್ನರು ಖರೀದಿ ಮಾಡಬೇಕು. ಅವರ ಖರೀದಿ ಯೊಂದೇ ನಮ್ಮನ್ನು ಉಳಿಸಲು ಸಾಧ್ಯ ಎಂದರು. ಆಗ ಲಿಂಡಾ ಜೇಮ್ಸ್ ಎಂಬ ಪತ್ರಕರ್ತರೊಬ್ಬರು ಏನನ್ನು ಖರೀದಿಸಬೇಕು ಎಂದು ಕೇಳಿದರಂತೆ. `ಏನಾದರೂ ಆಗಬಹುದು` ಅಂತ ಅಧ್ಯಕ್ಷರು ಉತ್ತರಿಸಿದರಂತೆ. ಮರುದಿನ ಪತ್ರಿಕೆಗಳಲ್ಲಿ `ಬೈ ಎನಿಥಿಂಗ್. ದ್ಯಾಟ್ ಈಸ್ ದ ನ್ಯೂ ಡೀಲ್’ (`ಏನನ್ನಾದರೂ ಖರೀದಿಸಿ. ಅದೊಂದೇ ಉಪಾಯ`) ಎಂಬ ಶೀರ್ಷಿಕೆ ರಾರಾಜಿಸಿತ್ತಂತೆ.

ಅವರ ಈ ಮಾತಿನಿಂದಲೇ ಕೊಳ್ಳುಬಾಕತನದ ಪರಿ ಆರಂಭವಾಯಿತು ಎನ್ನುವವರೂ ಇದ್ದಾರೆ.

ಇಂದಿನ ಭಾರತದ ವಿಷಯಕ್ಕೆ ಬಂದರೆ ಏನಾದರೂ ಆಗಿ ಮಾರುಕಟ್ಟೆ ಚೇತರಿಸಿಕೊಂಡರೆ ಸಾಕು. ಏನಾದರೂ ಆಗಲಿ ಅನ್ನುವವರಿದ್ದಾರೆ. ಅಷ್ಟೊಂದು ಪರಾಕಾಷ್ಟೆ ಬೇಡ.

ಚೇತರಿಕೆ ಆಗಲಿ, ಅದರೊಂದಿಗೆ ಸ್ವಲ್ಪ ಕೂಳುಬಾಕತನ ಕಮ್ಮಿಯಾಗಲಿ ಅಂತಲೂ ಅನ್ನಿಸುತ್ತದೆ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...