ಉತ್ತರ ಪ್ರದೇಶದ ಪ್ರಯಾಗ್ರಾಜ್ನ ರಾಜರ್ಶಿ ಟಂಡನ್ ಓಪನ್ ಯೂನಿವರ್ಸಿಟಿಯು ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಮೂರು ತಿಂಗಳ ಪ್ರಮಾಣಪತ್ರ ಕೋರ್ಸ್ ಅನ್ನು ಪರಿಚಯಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಕೋರ್ಸ್ ಆರಂಭಿಸಲಾಗಿದ್ದು, ಅದಕ್ಕೆ ’ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಕಾರ್ಯಕ್ರಮ (ಎಪಿಸಿಎಎ)’ Awareness Programme in Citizenship Amendment Act (APCAA)’ ಎಂದು ಹೆಸರಿಸಲಾಗಿದೆ.
ವಿಶ್ವವಿದ್ಯಾನಿಲಯದ ಉಪಕುಲಪತಿ ಕಾಮೇಶ್ವರ ನಾಥ್ ಸಿಂಗ್ ಅವರು ಈ ಕುರಿತು ಮಾತನಾಡಿ “ಈ ಜನವರಿಯಲ್ಲಿ ಕೋರ್ಸ್ ಪ್ರಾರಂಭವಾಯಿತು. ಈಗಾಗಲೇ ಹಲವಾರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಸಿಎಎ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ” ಎಂದು ಹೇಳಿದ್ದಾರೆ.
“ಸಿಎಎ ಸಾರ್ವಜನಿಕ ವಿಷಯ ಮತ್ತು ದೇಶದ ಕಾನೂನು. ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲು ಕೋರ್ಸ್ ಉದ್ದೇಶಿಸಿದೆ. ಕಾಯಿದೆಯ ಅವಶ್ಯಕತೆ, ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮೇಲೆ ಸಿಎಎ ಪ್ರಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು… ಸಿಎಎ ಕುರಿತ ಕೋರ್ಸ್ನಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಪ್ರಾರಂಭಿಸಿದ್ದಾರೆ ”ಎಂದು ಸಿಂಗ್ ಹೇಳಿದರು