Homeಕರ್ನಾಟಕಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

ಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

- Advertisement -
- Advertisement -

ಉತ್ತರ ಕನ್ನಡದ ಕಾಂಗ್ರೆಸ್ ಪೊರೆ ಕಳಚಿಕೊಳ್ಳುತ್ತಿದೆ! ಮದವೇರಿದ ಮದ್ದಾನೆಗಳಂತಾಗಿ ದಶಕಗಟ್ಟಲೆ ಕಾಲ ಗುದ್ದಾಡಿ ಜಿಲ್ಲಾ ಕಾಂಗ್ರೆಸನ್ನು ನಜ್ಜುಗುಜ್ಜುಮಾಡಿದ್ದ ಮ್ಯಾಗಿಯಜ್ಜಿ ಮತ್ತು ದೇಶಜ್ಜ ರಾಜಿ ಸಂಕೇತ ಬಿತ್ತರಿಸುತ್ತಿದ್ದಾರೆ. ಪರಸ್ಪರ ಅಸ್ತಿತ್ವ ಉಳಿಸಿಕೊಳ್ಳಲು ಈ ಮುದಿಮಣಿಗಳು ಹೊಂದಾಣಿಕೆಯ ಅನಿವಾರ್ಯಕ್ಕೆ ಬಿದ್ದಿವೆ. ಬದ್ಧವೈರಿಗಳ ಈ ಮನಃಪರಿವರ್ತನೆ ಯಲ್ಲಾಪುರ ಬೈ-ಇಲೆಕ್ಷನ್ ಸೋಲಿನ ನೇರ ಪರಿಣಾಮ ಎಂತಲೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆಗಳು ನಡೆದಿದೆ.

ದೇಶಪಾಂಡೆ ತನ್ನ ಮೂರು ದಶಕದ ರಾಜಕೀಯದಲ್ಲಿ ಜನತಾ ಪರಿವಾರದಲ್ಲಿರಲಿ ಅಥವಾ ಕಾಂಗ್ರೆಸಿನಲ್ಲಿರಲಿ ಯಾರನ್ನೂ ಗೆಲ್ಲಿಸಲು ತ್ರಿಕರ್ಣಪೂರ್ವಕ ಪ್ರಯತ್ನ ಮಾಡಿದ ಕುರುಹುಗಳಿಲ್ಲ. ಹಾಗಂತ ಸೋಲಿಸಲು ಹಲವು ಸಲ ಹಠಹಿಡಿದು ಹಿಕಮತ್ತು ನಡೆಸಿದ ದಾಖಲೆಗಳಿವೆ. ಇಂಥ ಇತಿಹಾಸದ ದೇಶ್ ಕಳೆದ ಯಲ್ಲಾಪುರ ಬೈ-ಇಲೆಕ್ಷನ್‍ನಲ್ಲಿ ತನ್ನ ಚೇಲಾ ಭೀಮಣ್ಣ ನಾಯ್ಕನ ಗೆಲ್ಲಿಸಿ ವೈರಿ ಹೆಬ್ಬಾರ್ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದ್ದರು. ಆದರೆ ಸ್ವಯಂಕೃತಾಪರಾಧಗಳ ಸರಣಿಯಿಂದ ವರ್ಚಸ್ಸು ಕಳಕೊಂಡಿರುವ ದೇಶ್ ಮುಗ್ಗರಿಸಿ ಮಕಾಡೆ ಮಲಗಿಬಿಟ್ಟರು! ಕಂಗಾಲಾಗಿ ದೇಶಪಾಂಡೆ ಕೂತಿದ್ದ ಈ ಹೊತ್ತಿನಲ್ಲೇ ಬರೋಬ್ಬರಿ ಒಂದು ವರ್ಷದನಂತರ ಜಿಲ್ಲೆಗೆ ವಕ್ಕರಿಸಿದ ಇಲ್ಲಿಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಆಟ ಶುರುಹಚ್ಚಿಕೊಂಡಿದ್ದರು. ನೇರ ಮ್ಯಾಗಿಯ ಶಿರಸಿಯ ಮನೆಗೇ ಹೋದ ದೇಶ್ ಆಕೆಯ ಮುಂದೆ ನಿಂತು ಹೊಸ ನಂಟಿನ ಪ್ರಸ್ತಾಪ ಇಟ್ಟಿರುವುದು ಅನಿರೀಕ್ಷಿತ ಸಮೀಕರಣವನ್ನು ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಸೃಷ್ಟಿಸಿಬಿಟ್ಟಿದೆ.

ಮ್ಯಾಗಿ ಮತ್ತಾಕೆಯ ಮಗ ಆಳ್ವ ಫೌಂಡೇಶನ್ ಕಟ್ಟಿಕೊಂಡಿದ್ದರೆ, ದೇಶ್ ಮತ್ತವರ ಪುತ್ರ ಪ್ರಶಾಂತ ದೇಶಪಾಂಡೆ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಎರಡೂ ಕುಟುಂಬಗಳು ಸಾಮಾಜಿಕ ಸೇವೆಯ ಹೆಸರಲ್ಲಿ ರಾಜಕೀಯ ಫಾಯ್ದೆಗೆ ಹವಣಿಸುತ್ತಿವೆ. ಮ್ಯಾಗಿಗೆ ತನ್ನ ಪೆದ್ದು ಕುಲೋದ್ಧಾರಕನನ್ನು ಶಿರಸಿಯ ಶಾಸಕನ ಮಾಡುವ ಕನಸು; ದೇಶ್‍ಗೆ ಮುಂಬೈನಲ್ಲಿ ವಕೀಲಿಕೆ ಮಾಡುವ ಅನಿವಾಸಿ ಉತ್ತರ ಕನ್ನಡಿಗ ಮಗ ಮಹಾರಾಯನ ಸಂಸದನ ಮಾಡುವ ಆಸೆ. ಇದೇ ಒಳಉದ್ದೇಶದಿಂದ ಮ್ಯಾಗಿ ಫೌಂಡೇಷನ್ ಕಾರ್ಯಕ್ರಮ ಹಾಕಿಕೊಂಡು ಈಗ ಜಿಲ್ಲೆಯಲ್ಲಿ ಅಂಡಲೆಯುತ್ತಿದ್ದಾರೆ. ಆಕೆ ಫಂಕ್ಷನ್ ಮುಗಿಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ದೇಶಪಾಂಡೆ ಮೊನ್ನೆ ಶನಿವಾರ ಭೇಟಿಯಾಗಿ ಗ್ಯಾಂಗ್‍ವಾರ್ ನಿಲ್ಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಎಬ್ಬಿಸಿರುವ ಬಡಿವಾರಕ್ಕೆ ಬೆದರಿರುವ ಮ್ಯಾಗಿ-ದೇಶ್ ನೈಚ್ಛಾನುಸಂಧಾನ ನಡೆಸಬೇಕಾಗಿ ಬಂದಿವೆ, ಪಾಪ!!

ಮ್ಯಾಗಿ-ದೇಶ್ ಅಕ್ಕ-ಪಕ್ಕ ಕುಳಿತು ಕಳೆದ ಅಸೆಂಬ್ಲಿ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಬಣ ಬಡಿದಾಟದಿಂದಾದ ಹಾನಿಯ ಲೆಕ್ಕ ತೆಗೆದಿದ್ದಾರೆ. ತಮ್ಮೊಳಗಿನ ದ್ವೇಷಾಸೂಯೆ ಮೇಲಾಟದಿಂದ ಗತಿಗೇಡಿ ಬಿಜೆಪಿ ಸೈತಾನನಂತೆ ಬೆಳೆದಿದೆ ಎಂದು ಪಾಪಪ್ರಜ್ಞೆಯಿಂದ ಮಾತಾಡಿಕೊಂಡಿದ್ದಾರೆ; ಈಗಿಂದಲೇ ತಳಮಟ್ಟದಿಂದ ಪಾರ್ಟಿಯನ್ನು ಕಟ್ಟದಿದ್ದರೆ ತಮ್ಮ ವಂಶದ ಉತ್ತರಾಧಿಕಾರಿಗಳಿಗೆ ಭವಿಷ್ಯವಿಲ್ಲ ಎಂಬುದು ಮನಗಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉದ್ಧಾರವಾಗಬೇಕಿದ್ದರೆ ಮೊದಲು ಹಾಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕನ ಉಚ್ಚಾಟಿಸಿ ಹೊಸ ಆಯ್ಕೆ ಮಾಡಬೇಕು; ಆನಂತರ ತಾವಿಬ್ಬರೂ ಒಟ್ಟಾಗಿ ಜಿಲ್ಲಾ ಟೂರ್ ಹೊಡೆದು ಪಕ್ಷಕ್ಕೆ ಜೀವ ತುಂಬಬೇಕೆಂದು ಮ್ಯಾಗಿ ಮನದಿಂಗಿತವನ್ನು ದೇಶ್ ಮುಂದೆ ಮಂಡಿಸಿದ್ದಾರೆ. ಇದನ್ನು ದೇಶಪಾಂಡೆಯೂ ಒಪ್ಪಿದ್ದಾರೆ.

ಬದಲಾದ ವರಸೆಯಲ್ಲಿ ಮ್ಯಾಗಿಗೆ ದೇಶಪಾಂಡೆಗಿಂತಲೂ ಹೆಚ್ಚು ಸಿಟ್ಟಿರುವುದು ಭೀಮಣ್ಣನ ಮೇಲೆ. ತನ್ನನ್ನು ಕೊನೆತನಕವೂ ಕಾಡಿದ ಮಾಜಿ ಸಿಎಂ ‘ಬಂ’ನ ಭಾಮೈದ ಈ ಭೀಮಣ್ಣನೆಂಬುದು ಮ್ಯಾಗಿಯ ಹಲವು ಅಸಮಾಧಾನದ ಕಾರಣಗಳಲ್ಲಿ ಒಂದು. ಈ ಭೀಮಣ್ಣ ನಾಯ್ಕನೂ ಅಷ್ಟೇ ಕಿತಾಪತಿಗಾರ. ಮ್ಯಾಗಿಗೆ ಆತ ಕೇರ್ ಮಾಡುತ್ತಿರಲಿಲ್ಲ. ಆಕೆಯ ನಿಷ್ಠಾವಂತ ಹಿಂಬಾಲಕರಾದ ವಿ.ಎನ್.ನಾಯ್ಕ್, ವಸಂತನಾಯ್ಕ್ ವಗೈರೆ ದೀವರ ಹುಡುಗರನ್ನು ಭೀಮಣ್ಣ ಹಣಿಯುತ್ತಲೇ ಬಂದಿದ್ದ. 2013ರ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಎದುರು ಮೂರು ಸಾವಿರ ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದಿವಂಗತ ದೀಪಕ್ ಹೊನ್ನಾವರ್ ಮ್ಯಾಗಿಯ ಪುಂಡ ಪಟ್ಟ ಶಿಷ್ಯನಾಗಿದ್ದ. ಆತ ಗೆಲುವಿನ ಹತ್ತಿರ ಬಂದು ಮುಗ್ಗರಿಸಲು ಭೀಮಣ್ಣ-ರವೀಂದ್ರನಾಥ್ ನಾಯ್ಕ ಜೋಡಿಯ ದ್ರೋಹವೇ ಅಂದು ಕಾರಣವಾಗಿತ್ತು. ಈ ಉರಿ ಮ್ಯಾಗಿಗಿನ್ನೂ ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ರವಿ ಮ್ಯಾಗಿ ಶಿಷ್ಯನಾಗಿದ್ದವ. ಆಕೆಯಿಂದಲೇ ಶಿರಸಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದವ. ಆನಂತರ ಗುರುಮಾತೆಗೇ ತಿರುಗಿಬಿದ್ದಿದ್ದ ರವಿ ಜೆಡಿಎಸ್ ಪಾಲಾಗಿದ್ದ. ಮೊನ್ನೆಯ ಯಲ್ಲಾಪುರ ಉಪಚುನಾವಣೆ ಗಡಿಬಿಡಿಯಲ್ಲಿ ಈ ರವಿ, ದೇಶಪಾಂಡೆ ಜುಬ್ಬ ಹಿಡಿದುಕೊಂಡು ಕಾಂಗ್ರೆಸ್‍ಗೆ ನುಸುಳಿದ್ದಾನೆ.

ಇಂಥ ಭೀಮ-ರವಿಯಂಥವರ ದೂರವಿಟ್ಟರೆ ಮ್ಯಾಗಿ-ದೇಶ್‍ನಂಟು ಕುದುರುತ್ತದೆ. 2018ರ ಶಿರಸಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಮೊನ್ನೆಯ ಯಲ್ಲಾಪುರ ಉಪಚುನಾವಣೆಯಲ್ಲಿ ಹೇತ್ಲಾಂಡಿ ಭೀಮಣ್ಣನ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದೇ ತಪ್ಪು ಆಯ್ಕೆ ಎನ್ನುವ ಮ್ಯಾಗಿ ತನ್ನ ಮಗ ಶಿರಸಿಯಲ್ಲಿ “ರೈಟ್ ಕ್ಯಾಂಡಿಡೇಟ್” ಎನ್ನುವುದೇ ವಿಚಿತ್ರ. ಬಿಜೆಪಿ ಬೆಂಬಲಿಗರಾದ ಹವ್ಯಕ ಬ್ರಾಹ್ಮಣ ಬಾಹುಳ್ಯದ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ಆಳ್ವ ಗೆಲ್ಲುವುದು ಅಷ್ಟು ಸುಲಭವೇನಲ್ಲ. ಅಲ್ಪಸಂಖ್ಯಾತರ ದ್ವೇಷದ ಮೇಲೆಯೇ ಬಿಜೆಪಿಯನ್ನು ಕಟ್ಟಿರುವ ಕಾಗೇರಿ, ಅನಂತ್ಮಾಣಿಗಳ ತವರು ಶಿರಸಿಯಲ್ಲಿ ಕಾಂಗ್ರೆಸ್ ಹವ್ಯಕ ಮಾಣಿ/ಕೂಸು ನಿಲ್ಲಿಸಿದರಷ್ಟೇ ಅನುಕೂಲ. ಸದ್ಯ ಜೆಡಿಎಸ್‍ನಲ್ಲಿರುವ ದಿವಂಗತ ಮಾಜಿ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ. ಕಾಂಗ್ರೆಸ್ ಸೇರುವ ಆಸೆ ಶಶಿಗಿದ್ದರೂ ಹೆಗಡೆಜೀಯ ದೊಡ್ಮನೆ ಫ್ಯಾಮಿಲಿ ಬಗ್ಗೆ ದೇಶಪಾಂಡೆಗಿರುವ ಪುರಾತನ ದ್ವೇಷಕ್ಕೆ ಹೆದರಿ ಆತ ಸುಮ್ಮನಿದ್ದಾರೆ.

ಗೆಲ್ಲಲು ಇರುವ ಇಂಥ ಸರಳ ಲೆಕ್ಕಾಚಾರಗಳು ಪುತ್ರ ವ್ಯಾಮೋಹದಲ್ಲಿ ಮಂಕಾಗಿರುವ ಮ್ಯಾಗಜ್ಜೀ-ದೇಶಜ್ಜನಿಗೆ ಅರ್ಥವಾಗೋದಿಲ್ಲ. ಔಟ್‍ಡೇಟೆಡ್ ದಿಗ್ಗಜರು ಹಳೆಯದನ್ನು ಮರೆತು ಒಂದಾಗಿ ಪಾರ್ಟಿ ಕಟ್ಟಬಹುದೆಂಬ ನಂಬಿಕೆ ನಿಷ್ಠಾವಂತ ಕಾಂಗ್ರೆಸಿಗರಿಗಂತೂ ಇಲ್ಲಾ. ಆದರೆ ಮಕ್ಕಳ ಭವಿಷ್ಯ ಬೆಳಗಲು ಅನಿವಾರ್ಯವಾಗಿ ಮ್ಯಾಗಿ-ದೇಶ್ ಹೊಸ ಹೊಂದಾಣಿಕೆಯ ಸ್ಕೆಚ್ ಹಾಕಿದ್ದಾರೆಂಬುದು ಕಾಂಗ್ರೆಸ್‍ನಲ್ಲಷ್ಟೇ ಅಲ್ಲ ವಿರೋಧಿ ಕೇಸರಿ ಪಾಳೆಯದಲ್ಲೂ ಸಣ್ಣದೊಂದು ತಲ್ಲಣ ಎಬ್ಬಿಸಿರುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...