ಬರೇಲಿಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗ್ರಾಮಸ್ಥನನ್ನು ಅವಮಾನಕರವಾಗಿ ಮಂಡಿಯೂರಿ ಕೂರಿಸಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮಿರ್ಗಂಜ್ನ ಎಸ್ಡಿಎಂ ಉದಿತ್ ಪವಾರ್ ದೂರು ನೀಡಲು ಬಂದ ಯುವಕನಿಗೆ ಮಂಡಿಯೂರಿ ಕೂರಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸ್ಮಶಾನ ಭೂಮಿಯಾಗಿ ಬಳಸಲಾಗುತ್ತಿದ್ದ ತಮ್ಮ ಗ್ರಾಮದ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಮಂದನ್ಪುರ ಗ್ರಾಮದ ಗ್ರಾಮಸ್ಥರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಗೆ ಬಂದಿದ್ದರು.
SDM ಉದಿತ್ ಪವಾರ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ವಿಷಯವು ಕಟ್ಟುಕಥೆಯಾಗಿದೆ ಮತ್ತು ಅವಮಾನಕರವಾದ ರೀತಿಯಲ್ಲಿ ತನ್ನ ಮುಂದೆ ಮಂಡಿಯೂರಿ ಎಂದು ಯಾರನ್ನೂ ಕೇಳಿಲ್ಲ ಎಂದು ಹೇಳಿದ್ದಾರೆ. ತಮ್ಮ ಗ್ರಾಮದಲ್ಲಿನ ಶವಸಂಸ್ಕಾರ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರೇ ಅವರ ಮುಂದೆ ಆ ರೀತಿ ಕುಳಿತುಕೊಂಡಿದ್ದಾರೆ. ಈ ವೇಳೆ ನಾನು ಅತಿಕ್ರಮಣ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದೆ. ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತು ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದೇನೆ ಎಂದು ಉದಿತ್ ಪವಾರ್ ಹೇಳಿದ್ದಾರೆ.
ಗ್ರಾಮಸ್ಥರು ಸ್ವಯಂ ಮಂಡಿಯೂರಿದರು ಮತ್ತು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದರು. ವಿಚಾರಣೆ ನಂತರವೇ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಮಿರ್ಗಂಜ್ನಲ್ಲಿರುವ ಕಚೇರಿಯಲ್ಲಿ ಗ್ರಾಮಸ್ಥರನ್ನು ಅವಮಾನಿಸಿದ ಘಟನೆಯ ಕುರಿತು ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು ಅವರಲ್ಲಿ ವಿವರವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
In UP's Bareilly, a complainant could be seen kneeling down in front of SDM Udit Pawar. pic.twitter.com/RAIQD3Hfss
— Piyush Rai (@Benarasiyaa) September 15, 2023
PCS उदित पवार 2021 बैच SDM मीरगंज बरेली वायरल वीडियो वाले SDM मीरगंज बरेली का बयान- व्यक्ति ख़ुद मुर्ग़ा बना,आरोप निराधार।#Bareilly #UPPolice #viral #viralvideo https://t.co/0U0whRbsYs pic.twitter.com/UGE3xrpdoR
— Roshan Kumar Journalist (@cameraman_r) September 15, 2023
ಇದನ್ನು ಓದಿ: ಅಂಬೇಡ್ಕರ್, ತಿರುವಳ್ಳುವರ್ ಬಗ್ಗೆ ಅವಹೇಳನ: ವಿಹೆಚ್ಪಿಯ ಮಾಜಿ ನಾಯಕನ ಬಂಧನ