Homeಮುಖಪುಟ‘ಮತಗಳ್ಳತನ ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ': 'ಬಿಜೆಪಿ-ಇಸಿ ಒಪ್ಪಂದ'ವನ್ನು ನೇರವಾಗಿ ಟೀಕಿಸಿದ ರಾಹುಲ್ ಗಾಂಧಿ

‘ಮತಗಳ್ಳತನ ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ’: ‘ಬಿಜೆಪಿ-ಇಸಿ ಒಪ್ಪಂದ’ವನ್ನು ನೇರವಾಗಿ ಟೀಕಿಸಿದ ರಾಹುಲ್ ಗಾಂಧಿ

- Advertisement -
- Advertisement -

ನವದೆಹಲಿ: “ಮತಗಳ್ಳತನ”(ವೋಟ್ ಚೋರಿ) ಒಂದು “ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ”,  ಬಿಜೆಪಿ ಮತ್ತು ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು “ಜನರ ಧ್ವನಿಯನ್ನು ಕಸಿದುಕೊಳ್ಳಲು” ಪಿತೂರಿ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಲೋಕಸಭೆಯಲ್ಲಿ ‘ಚುನಾವಣಾ ಸುಧಾರಣೆಗಳ ಕುರಿತ ಚರ್ಚೆ’ಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಬಿಜೆಪಿ ಚುನಾವಣಾ ಆಯೋಗವನ್ನು (ಇಸಿ) ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದು, “ನೀವು ಮತವನ್ನು ನಾಶಮಾಡಿದಾಗ, ನೀವು ಈ ದೇಶದ ರಚನೆಯನ್ನು ನಾಶಪಡಿಸುತ್ತೀರಿ, ನೀವು ಆಧುನಿಕ ಭಾರತವನ್ನು ನಾಶಪಡಿಸುತ್ತೀರಿ, ನೀವು ಭಾರತದ ಕಲ್ಪನೆಯನ್ನು ನಾಶಪಡಿಸುತ್ತೀರಿ” ಎಂದು ಗಾಂಧಿಯವರು ಹೇಳಿದ್ದಾರೆ.

ಚರ್ಚೆಯ ನಂತರ, ತಮ್ಮ ಸಾಮಾಜಿಕ ಮಾಧ್ಯಮ X ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಮತಗಳ್ಳತನ ಅತ್ಯಂತ ಗಂಭೀರವಾದ ದೇಶ ವಿರೋಧಿ ಕೃತ್ಯ. ವೋಟ್ ಚೋರಿ ಸಬ್ಸೆ ಬಡಾ ದೇಶದ್ರೋಹ (ದೇಶದ್ರೋಹ) ಹೈ” ಎಂದು ಹೇಳಿದ್ದಾರೆ. 

ಇದೇ ವೇಳೆ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲದೆ ಶ್ರೇಷ್ಠ ಪ್ರಜಾಪ್ರಭುತ್ವವೂ ಆಗಿದೆ ಎಂದು ಹೇಳಿರುವ ಅವರು “ಬಿಜೆಪಿ ಮತ್ತು ಚುನಾವಣಾ ಆಯೋಗ ನಮ್ಮ ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು ಜನರ ಧ್ವನಿಯನ್ನು ದೋಚಲು ಒಪ್ಪಂದ ಮಾಡಿಕೊಂಡಿವೆ” ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 

ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಾಗಿ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಾಧೀಶರನ್ನು ಏಕೆ ತೆಗೆದುಹಾಕಲಾಯಿತು ಎಂದು ಪ್ರಶ್ನೆ ಮಾಡಿದ್ದು, “ಚುನಾವಣಾ ಆಯುಕ್ತರನ್ನು ನೇಮಿಸುವ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಏಕೆ ತೆಗೆದುಹಾಕಲಾಯಿತು? ಸಿಜೆಐ ಅವರನ್ನು ತೆಗೆದುಹಾಕಲು ಯಾವ ಪ್ರೇರಣೆ ಇರಬಹುದು? ನಮಗೆ ಸಿಜೆಐ ಮೇಲೆ ನಂಬಿಕೆ ಇಲ್ಲವೇ? ಖಂಡಿತ, ನಮಗೆ ಸಿಜೆಐ ಮೇಲೆ ನಂಬಿಕೆ ಇದೆ. ಅವರು ಅಲ್ಲಿ ಏಕೆ ಇಲ್ಲ?” ಎಂದು ಪ್ರಶ್ನಿಸಿದ್ದಾರೆ.

“ನಾನು ಆ ಸಭೆಯಲ್ಲಿ ಕುಳಿತಿದ್ದೇನೆ. ಇದು ಪ್ರಜಾಸತ್ತಾತ್ಮಕ ನಿರ್ಧಾರ ಎಂದು ಕರೆಯಲ್ಪಡುತ್ತದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದ್ದಾರೆ. ಇನ್ನೊಂದು ಕಡೆ ವಿರೋಧ ಪಕ್ಷದ ನಾಯಕನಾದ ನಾನು. ಆ ಸಭೆಯಲ್ಲಿ ನನಗೆ ಯಾವುದೇ ಧ್ವನಿ ಇಲ್ಲ. ಹಾಗಾದರೆ, ಚುನಾವಣಾ ಆಯುಕ್ತರು ಯಾರಾಗಲಿದ್ದಾರೆ ಎಂಬುದನ್ನು ನಿಖರವಾಗಿ ಆಯ್ಕೆ ಮಾಡಲು ಪ್ರಧಾನಿ ಮತ್ತು ಗೃಹ ಸಚಿವರು ಏಕೆ ಇಷ್ಟೊಂದು ಉತ್ಸುಕರಾಗಿದ್ದಾರೆ ಎಂದು ಗಾಂಧಿ ಕೇಳಿದರು. 

“ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಹೀಗೆ ಮಾಡಿಲ್ಲ. ಡಿಸೆಂಬರ್ 2023 ರಲ್ಲಿ, ಈ ಸರ್ಕಾರ ಯಾವುದೇ ಚುನಾವಣಾ ಆಯುಕ್ತರು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಶಿಕ್ಷೆಗೆ ಒಳಗಾಗದಂತೆ ಕಾನೂನನ್ನು ಬದಲಾಯಿಸಿತು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.  

“ಪ್ರಧಾನಿ ಮತ್ತು ಗೃಹ ಸಚಿವರು ಚುನಾವಣಾ ಆಯುಕ್ತರಿಗೆ ಈ ವಿನಾಯಿತಿಯ ಉಡುಗೊರೆಯನ್ನು ಏಕೆ ನೀಡುತ್ತಾರೆ?” ಎಂದು ಪ್ರಶ್ನಿಸಿರುವ ಅವರು ಸಿಸಿಟಿವಿ ದೃಶ್ಯಾವಳಿಗಳಿಗೆ ಸಂಬಂಧಿಸಿದ ಕಾನೂನನ್ನು ಏಕೆ ಬದಲಾಯಿಸಲಾಯಿತು ಎಂದು ಸಹ ಪ್ರಶ್ನಿಸಿದ್ದಾರೆ. “ಚುನಾವಣೆ ನಡೆದ 45 ದಿನಗಳ ನಂತರ ಚುನಾವಣಾ ಆಯೋಗವು ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಮಾಡಲು ಅನುಮತಿಸುವ ಕಾನೂನನ್ನು ಏಕೆ ಜಾರಿಗೆ ತರಲಾಯಿತು? ಅದರ ಅಗತ್ಯವೇನು? ನೀಡಲಾದ ಉತ್ತರವೆಂದರೆ ಅದು ಡೇಟಾದ ಪ್ರಶ್ನೆ. ಆದರೆ ಇದು ಡೇಟಾದ ಪ್ರಶ್ನೆಯಲ್ಲ. ಇದು ಚುನಾವಣೆಯನ್ನು ಕದಿಯುವ ಪ್ರಶ್ನೆ” ಎಂದು ಹೇಳಿದ್ದಾರೆ.  

ಚುನಾವಣಾ ಸುಧಾರಣೆ ತುಂಬಾ ಸರಳವಾಗಿದೆ, ಆದರೆ ಸರ್ಕಾರ ಅದನ್ನು ಮಾಡಲು ಬಯಸುವುದಿಲ್ಲ ಎಂದು ಹೇಳಿರುವ ರಾಹುಲ್ “ಚುನಾವಣಾ ಸುಧಾರಣೆಗೆ ಏನು ಬೇಕು? ನಾವು ಹೇಳುತ್ತಿರುವುದಕ್ಕಿಂತ ಹೆಚ್ಚೇನೂ ಇಲ್ಲ. ಚುನಾವಣೆಗೆ ಒಂದು ತಿಂಗಳ ಮೊದಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಯಂತ್ರ-ಓದಬಹುದಾದ ಮತದಾರರ ಪಟ್ಟಿಗಳನ್ನು ನೀಡಿ. ಸಿಸಿಟಿವಿ ದೃಶ್ಯಾವಳಿಗಳ ನಾಶಕ್ಕೆ ಅವಕಾಶ ನೀಡುವ ಕಾನೂನನ್ನು ಹಿಂಪಡೆಯಿರಿ. “ನೀವು ಹಾಗೆ ಮಾಡುತ್ತಿರುವಾಗ, ಇವಿಎಂನ ವಾಸ್ತುಶಿಲ್ಪ ಏನೆಂದು ಸಹ ನಮಗೆ ತಿಳಿಸಿ. ನಮಗೆ ಇವಿಎಂ ಪ್ರವೇಶವನ್ನು ನೀಡಿ. ನಮ್ಮ ತಜ್ಞರು ಹೋಗಿ ಇವಿಎಂ ಒಳಗೆ ಏನಿದೆ ಎಂದು ನೋಡಲಿ. ಇಂದಿನವರೆಗೂ ನಮಗೆ ಇವಿಎಂ ಪ್ರವೇಶವಿರಲಿಲ್ಲ” ಎಂದು ಅವರು ಹೇಳಿದ್ದಾರೆ.  

“ಚುನಾವಣಾ ಆಯುಕ್ತರು ಏನು ಬೇಕಾದರೂ ಮಾಡಿ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಕಾನೂನನ್ನು ಬದಲಾಯಿಸಿ. ನಿಮಗೆ ಬೇಕಾಗಿರುವುದು ಚುನಾವಣಾ ಸುಧಾರಣೆಗಳು ಅಷ್ಟೆ” ಎಂದು ಅವರು ಹೇಳಿದರು. ಈ ಕಾನೂನು ಯಾವುದೇ ತಪ್ಪಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂಬ ಭಾವನೆ ಚುನಾವಣಾ ಆಯುಕ್ತರಿಗೆ ಇರಬಹುದು, ಆದರೆ ಅದು ಹಾಗಲ್ಲ ಎಂದು ಎಚ್ಚರಿಸಿರುವ ರಾಹುಲ್ “ನಾವು ಕಾನೂನನ್ನು ಸರಿಯಾದ ರೀತಿಗೆ ಬದಲಾಯಿಸಲಿದ್ದೇವೆ, ಮತ್ತು ಎಲ್ಲಾ ತಪ್ಪಿತಸ್ತರನ್ನು ಹುಡುಕುತ್ತೇವೆ ಎಂದು ಹೇಳಿದ್ದಾರೆ. 

ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗವನ್ನು ನಿಯಂತ್ರಿಸುವುದರಿಂದಾಗುವ “ಪರಿಣಾಮ”ದ ಕುರಿತು ವಿವರಿಸುತ್ತಾ, ಗಾಂಧಿಯವರು “ಪ್ರಧಾನಿಗಾಗಿಯೇ ರೂಪಿಸಲಾದ ಚುನಾವಣಾ ಪ್ರಚಾರಗಳ ಗುಂಪೇ ನಮ್ಮಲ್ಲಿದೆ” ಎಂದು ಹೇಳಿದ್ದಾರೆ. “ಎರಡನೆಯದಾಗಿ, ಹರಿಯಾಣದ ಮತದಾರರ ಪಟ್ಟಿಯಲ್ಲಿ 22 ಬಾರಿ ಕಾಣಿಸಿಕೊಂಡಿರುವ ಬ್ರೆಜಿಲಿಯನ್ ಮಹಿಳೆಯೊಬ್ಬರು ನಮ್ಮೊಂದಿಗಿದ್ದಾರೆ. ಅಷ್ಟೇ ಅಲ್ಲ, ಹರಿಯಾಣದ ಒಂದು ಕ್ಷೇತ್ರದಲ್ಲಿ 200 ಕ್ಕೂ ಹೆಚ್ಚು ಬಾರಿ ಹೆಸರು ಕಾಣಿಸಿಕೊಂಡಿರುವ ಒಬ್ಬ ಸಹ ಮಹಿಳೆ ಇದ್ದಾರೆ. ಮತ್ತು ಇದು ತುಂಬಾ ಸ್ಪಷ್ಟವಾಗಿದೆ, ಹರಿಯಾಣದ ಚುನಾವಣೆಯನ್ನು ಕದ್ದಿದ್ದಾರೆ ಮತ್ತು ಭಾರತದ ಚುನಾವಣಾ ಆಯೋಗವು ಮತಗಳ್ಳತನವನ್ನು ಖಚಿತಪಡಿಸಿಕೊಂಡಿದೆ ಎಂದು ನಾನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದೇನೆ” ಎಂದು ಅವರು ಹೇಳಿದ್ದಾರೆ. 

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ, “ಬಿಹಾರ ಮತದಾರರ ಪಟ್ಟಿಯಲ್ಲಿ 1.2 ಲಕ್ಷ ನಕಲಿ ಫೋಟೋಗಳು ಏಕೆ ಅಸ್ತಿತ್ವದಲ್ಲಿವೆ” ಎಂದು ರಾಹುಲ್ ಪ್ರಶ್ನಿಸಿದ್ದಾರೆ. “ನೀವು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಿದ್ದರೆ, ಬಿಹಾರದಲ್ಲಿ 1.2 ಲಕ್ಷ ನಕಲುಗಳು ಏಕೆ ಇವೆ? ಇವು ನೇರ ಪ್ರಶ್ನೆಗಳು. ಆದರೆ ಚುನಾವಣಾ ಆಯೋಗದ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ” ಎಂದು ಅವರು ಹೇಳಿರುವ ಅವರು, ಅಮೆರಿಕ ತನ್ನನ್ನು ತಾನು ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎಂದು ಕರೆದುಕೊಳ್ಳುತ್ತದೆ. ಆದರೆ ಅತಿ ಹೆಚ್ಚು ಜನರನ್ನು, ಅತಿ ಹೆಚ್ಚು ವೈವಿಧ್ಯತೆಯನ್ನು ಹೊಂದಿರುವ ಜನರನ್ನು, ಅತಿ ಹೆಚ್ಚು ಭಾಷೆಗಳನ್ನು ಮತ್ತು ಅತಿ ಹೆಚ್ಚು ರಾಜ್ಯಗಳನ್ನು ಹೊಂದಿರುವ ಪ್ರಜಾಪ್ರಭುತ್ವ ಭಾರತ, “ಆದ್ದರಿಂದ ನಮ್ಮ ಅತ್ಯಂತ ಶಕ್ತಿಶಾಲಿ ಆಸ್ತಿ, ಆಧುನಿಕ ಭಾರತದ ಸಂಪೂರ್ಣ ಪರಿಕಲ್ಪನೆಯನ್ನು ಒಟ್ಟಿಗೆ ಸೇರಿಸುವ, ಜನರನ್ನು ಒಟ್ಟುಗೂಡಿಸುವ ಮತ್ತು ಈ ಮಹಾನ್ ರಾಷ್ಟ್ರವನ್ನು ನಿರ್ಮಿಸಲು ಅವರಿಗೆ ಅನುವು ಮಾಡಿಕೊಡುವ ವಸ್ತುವನ್ನು ಈ ಜನರು ಆಕ್ರಮಣ ಮಾಡುತ್ತಿದ್ದಾರೆ” ಎಂದು ಬಿಜೆಪಿಯ ಮೇಲೆ ದಾಳಿ ನಡೆಸಿದ್ದಾರೆ.

ಚುನಾವಣಾ ವ್ಯವಸ್ಥೆಯನ್ನೇ ಬಿಜೆಪಿ ನಾಶಪಡಿಸುತ್ತಿದೆ. ಅದೂ ನಮಗೂ ಗೊತ್ತಿದೆ, ಅವರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದ ರಾಹುಲ್ ಗಾಂಧಿ ಇದೇ ವೇಳೆ ಗಾಂಧಿ ಹತ್ಯೆಯನ್ನು ನೆನೆದಿದ್ದಾರೆ. ಜನವರಿ 30, 1948 ರಂದು ಮೂರು ಗುಂಡುಗಳು ಮಹಾತ್ಮ ಗಾಂಧಿಯವರ ಎದೆಯನ್ನು ಸೀಳಿದವು, ಆ ಮೂಲಕ ನಾಥುರಾಮ್ ಗೋಡ್ಸೆ “ನಮ್ಮ ರಾಷ್ಟ್ರಪಿತ” ರನ್ನು ಹತ್ಯೆ ಮಾಡಿದ ಘಟನೆ ನಡೆಯಿತು. ಆದರೆ ಬಿಜೆಪಿ ಗಾಂಧಿಯನ್ನು ಇಂದಿಗೂ ಅಪ್ಪಿಕೊಳ್ಳುವುದಿಲ್ಲ, ದೂರ ತಳ್ಳುವುದೂ ಇಲ್ಲ, ಏಕೆಂದರೆ ಅದು ಕಹಿ ಸತ್ಯ. ಗಾಂಧಿ ಹತ್ಯೆಗಷ್ಟೇ ಬಿಜೆಪಿ ಈ ಯೋಜನೆ ಕೊನೆಗೊಂಡಿಲ್ಲ, ಗಾಂಧೀಜಿಯವರ ಹತ್ಯೆಯ ನಂತರ, ಅವರ ಯೋಜನೆಯ ಮುಂದಿನ ಹಂತ ಭಾರತದ ಸಾಂಸ್ಥಿಕ ಚೌಕಟ್ಟನ್ನು ಆಕ್ರಮಿಸಿಕೊಳ್ಳುವುದು ಎಂದು ನೇರವಾಗಿ ಆರೋಪಿಸಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...