Homeಕರ್ನಾಟಕನೀವೂ ಕೇಳಿರಿ: ಸಂವಿಧಾನ ಪ್ರಸ್ತಾವನೆಯನ್ನು ಹಾಡಾಗಿಸಿದ ವಿಭಿನ್ನ ಪ್ರಯೋಗಗಳಿವು

ನೀವೂ ಕೇಳಿರಿ: ಸಂವಿಧಾನ ಪ್ರಸ್ತಾವನೆಯನ್ನು ಹಾಡಾಗಿಸಿದ ವಿಭಿನ್ನ ಪ್ರಯೋಗಗಳಿವು

- Advertisement -
- Advertisement -

ಭಾರತ ಸಂವಿಧಾನದ ಪ್ರಸ್ತಾವನೆಯು ದೇಶದ ನಿಜ ಸ್ವರೂಪವನ್ನು ಸಂಕ್ಷಿಪ್ತವಾಗಿ ಹೇಳುತ್ತದೆ. ‘ನಮಗೆ ನಾವೇ ಅರ್ಪಿಸಿಕೊಂಡಿರುವ ಈ ಸಂವಿಧಾನ’ಕ್ಕೆ ಅಪಚಾರ ಎಸಗುವ ಕೃತ್ಯಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಸಂವಿಧಾನದ ಮಹತ್ವವನ್ನು ವಿವಿಧ ಕಲಾ ಮಾಧ್ಯಮಗಳ ಮೂಲಕ ತಿಳಿಸುವ ಪ್ರಯತ್ನಗಾಗುತ್ತಿವೆ. ಸಂವಿಧಾನ ಪೀಠಿಕೆಯನ್ನು ಹಾಡಾಗಿ ಪ್ರಸ್ತುಪಡಿಸುವ ಪ್ರಯೋಗಗಳು ಇತ್ತೀಚಿನ ವರ್ಷಗಳಲ್ಲಿ ಚಾಲನೆ ಪಡೆದಿವೆ.

“ಸಂವಿಧಾನವನ್ನು ನಾವು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ” ಎಂಬ ಮಾತು ಜನಜನಿತವಾಗಿದೆ. ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಅನೇಕರು ಹಲವು ವಿಧದಲ್ಲಿ ಕರ್ನಾಟಕದಲ್ಲೂ ಮಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರ ‘ಸಂವಿಧಾನ ಓದು’ ಕೃತಿ ಒಂದು ಆಂದೋಲನದ ಸ್ವರೂಪವನ್ನೇ ಪಡೆದಿದೆ. ಪೀಠಿಕಾ ಭಾಗವನ್ನು ಶಾಲಾ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಬಹುತೇಕ ಕಾರ್ಯಕ್ರಮಗಳ ಆರಂಭದಲ್ಲಿ ಪ್ರಸ್ತಾವನೆಯನ್ನು ಓದಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಪೀಠಿಕಾ ಭಾಗವನ್ನು ಹಾಡಾಗಿ ಪ್ರಸ್ತುತಪಡಿಸುವ ಕೆಲಸವನ್ನು ಹಲವು ಸಂಗೀತಗಾರರು ಮಾಡುತ್ತಿದ್ದಾರೆ.

ಚಿಂತನ್‌ ವಿಕಾಸ್‌ ಪ್ರಯೋಗಕ್ಕೆ ಮೆಚ್ಚುಗೆ

ಕನ್ನಡದ ಯುವ ಗಾಯಕ ಚಿಂತನ್‌ ವಿಕಾಸ್ ಅವರು ಇತ್ತೀಚೆಗೆ ಪೀಠಿಕಾ ಭಾಗವನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿದ್ದಾರೆ. ಚಿಂತನ್‌ ರಾಗ ಸಂಯೋಜನೆ ಮಾಡಿ, ಅವರೇ ಹಾಡಿರುವ ಪೀಠಿಕಾ ಭಾಗವನ್ನು ‘ಈದಿನ.ಕಾಂ’ ಪ್ರಸಾರ ಮಾಡಿದೆ. ‘ಈ’ ವಿಡಿಯೊವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪೀಠಿಕೆಯನ್ನು ಚಿಂತನ್‌ ಹಾಡಿದ್ದಾರೆ.

ಚಿಂತನ್ ವಿಕಾಸ್‌

ಪಿಚ್ಚಳ್ಳಿ ಶ್ರೀನಿವಾಸ್ ಗಾಯನ

ದಲಿತ ಚಳವಳಿಯ ಹೋರಾಟದ ಗೀತೆಗೆಳಿಗೆ ಧ್ವನಿ ನೀಡಿದವರಲ್ಲಿ ಒಬ್ಬರಾದ ಪಿಚ್ಚಳ್ಳಿ ಶ್ರೀನಿವಾಸ್ ಅವರು ಇತ್ತೀಚೆಗೆ ಸಂವಿಧಾನದ ಪೀಠಿಕಾ ಭಾಗವನ್ನು ಹಾಡಿದ್ದಾರೆ. ರಾಗ ಸಂಯೋಜನೆ ಹಾಗೂ ಗಾಯನವನ್ನು ಪಿಚ್ಚಳ್ಳಿಯವರೇ ಮಾಡಿದ್ದು, ಸಾರಂಗ ಆಡಿಯೊ ಮಾಲೂರು (ಎಸ್‌.ಪಿ.ಚಕ್ರವರ್ತಿ) ವತಿಯಿಂದ ಧ್ವನಿಮುದ್ರಣ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ದಿನಗಳ ಹಿಂದೆ ಪಿಚ್ಚಳ್ಳಿಯವರ ಗಾಯನ ವೈರಲ್ ಆಗಿತ್ತು.

ಪಿಚ್ಚಳ್ಳಿ ಶ್ರೀನಿವಾಸ್‌

ಇಂಗ್ಲಿಷ್ ಪ್ರಯೋಗಕ್ಕೆ ಭಾರೀ ಮೆಚ್ಚುಗೆ

ಇಂಗ್ಲಿಷ್‌ನಲ್ಲಿ ಪೀಠಿಕಾ ಭಾಗವನ್ನು ಗಾಯನ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಭಾರತದ ವೈವಿಧ್ಯತೆಯನ್ನು ಕಟ್ಟಿಕೊಡುವ ದೃಶ್ಯಗಳನ್ನು ವಿಡಿಯೊದಲ್ಲಿ ಬಳಸಲಾಗಿದೆ. ಮಂಜಿಲ್ ಮಿಸ್ಟಿಕ್ಸ್ ಮಾಡಿರುವ ರಾಗ ಸಂಯೋಜನೆಗೆ, ಮನೀಶ್ ಸಂಗೀತ ನಿರ್ಮಾಣ ಮಾಡಿದ್ದಾರೆ.

ಹಿಂದಿ ಭಾಷೆಯಲ್ಲಿ ಸಂವಿಧಾನದ ಪೀಠಿಕಾ ಭಾಗವನ್ನು ಹಾಡುವ ಪ್ರಯೋಗಗಳಾಗಿರುವುದನ್ನು ಗಮನಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...