Homeಮುಖಪುಟಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

- Advertisement -
- Advertisement -

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ) ಯಾರೂ ಕೈ ಹಾಕುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಒಮ್ಮೆ ಅಧಿಕಾರದ ಗದ್ದುಗೆ ಭದ್ರವಾಗುತ್ತಿದ್ದಂತೆ, ಚುನಾವಣಾ ಪ್ರದರ್ಶನಗಳು ಬದಿಗೆ ಸರಿದು ನೀತಿಗಳು (ಅಜೆಂಡಾ) ಮುಂಚೂಣಿಗೆ ಬಂದವು. ಪರಿಣಾಮವಾಗಿ, ಹೊಸ ಸರ್ಕಾರವು ಶಾಲಾ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ನು ಮುಂದೆ ಮೊಟ್ಟೆಗಳನ್ನು ನೀಡದಿರಲು ನಿರ್ಧರಿಸಿದೆ.

ಪಶ್ಚಿಮ ಬಂಗಾಳದ ಹೊಸ ಸರ್ಕಾರವು ಕೋಲ್ಕತ್ತಾದ ಸುಮಾರು 1,800 ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಇಸ್ಕಾನ್ (ISKCON) ಮತ್ತು ಅದರ ‘ಅನ್ನಾಮೃತ ಫೌಂಡೇಶನ್’ಗೆ ವಹಿಸಿದೆ. ಇಸ್ಕಾನ್ ಸಂಪೂರ್ಣ ಸಸ್ಯಾಹಾರಿ ಅಡುಗೆಮನೆಯನ್ನು ನಡೆಸುವುದರಿಂದ, ಮಕ್ಕಳ ಪ್ರೊಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆಗಳ ಬದಲಿಗೆ ಪನ್ನೀರ್, ಸೋಯಾ, ರಾಜ್ಮಾ ಮತ್ತು ಬೇಳೆಕಾಳುಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

ನಿಜ ಹೇಳಬೇಕೆಂದರೆ, ಇಸ್ಕಾನ್ ಸಂಸ್ಥೆಯಿಂದ ಏನನ್ನು ನಿರೀಕ್ಷಿಸಬಹುದೋ ಅದನ್ನೇ ಅದು ಮಾಡಿದೆ. ಸಸ್ಯಾಹಾರಿ ಆಹಾರಕ್ಕೆ ತನ್ನ ಸದ್ಧಾಂತಿಕ ಬದ್ಧತೆಯನ್ನು ಅದು ಎಂದಿಗೂ ಮುಚ್ಚಿಟ್ಟಿಲ್ಲ. ಧಾರ್ಮಿಕ ಸಂಸ್ಥೆಯೊಂದು ತನ್ನ ನಂಬಿಕೆಗಳನ್ನು ಪ್ರತಿಬಿಂಬಿಸುವ ಆಹಾರವನ್ನೇ ಬಡಿಸಬೇಕು ಎಂದು ಹಠ ಹಿಡಿದಿರುವುದು ಇದೇ ಮೊದಲೇನಲ್ಲ. ‘ಅಕ್ಷಯ ಪಾತ್ರೆ ಫೌಂಡೇಶನ್’ ಕೂಡ ವರ್ಷಗಳಿಂದ ಇಂತಹುದೇ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಆದರೆ, ಸರ್ಕಾರದ ಕಲ್ಯಾಣ ಯೋಜನೆಯಡಿ ಮಕ್ಕಳು ಏನನ್ನು ತಿನ್ನಬೇಕು ಎಂಬುದನ್ನು ಸಿದ್ಧಾಂತಗಳು ನಿರ್ಧರಿಸಬೇಕೇ ಎಂದು ಪೌಷ್ಟಿಕಾಂಶ ತಜ್ಞರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ.

ತಾವು ನೇಮಿಸಿಕೊಳ್ಳುವ ಸಂಸ್ಥೆಯ ಆಹಾರದ ನಂಬಿಕೆಗಳನ್ನು ಸರ್ಕಾರ ಪಾಲಿಸಬೇಕಾದ ಯಾವುದೇ ಅಗತ್ಯವಿಲ್ಲ. ಮಧ್ಯಾಹ್ನದ ಬಿಸಿಯೂಟ ಎನ್ನುವುದು ಯಾವುದೋ ಧಾರ್ಮಿಕ ದಾನ-ಧರ್ಮವಲ್ಲ. ಅದು ಸ್ವತಂತ್ರ ಭಾರತದ ಅತ್ಯಂತ ಯಶಸ್ವಿ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಲು, ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಮತ್ತು ಬಡತನವು ಮಗುವಿನ ತಟ್ಟೆಯನ್ನು ಹಾಗೂ ಭವಿಷ್ಯವನ್ನು ನಿರ್ಧರಿಸಬಾರದು ಎಂಬ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಆದ್ದರಿಂದ, ಈ ಬಿಸಿಯೂಟದ ಮೆನು ಸಾರ್ವಜನಿಕ ಆರೋಗ್ಯ ಮತ್ತು ಮಕ್ಕಳ ಅಗತ್ಯಗಳಿಗೆ ಪೂರಕವಾಗಿರಬೇಕೇ ಹೊರತು ಧರ್ಮಕ್ಕಲ್ಲ. ಇದಕ್ಕೆ ಮೊಟ್ಟೆಗಳೇ ಅತ್ಯಂತ ಸೂಕ್ತ ಪರಿಹಾರವಾಗಿದೆ.

ಆದರೆ ಭಾರತದಲ್ಲಿ ಆಗಾಗ ಯಾವುದೋ ಒಂದು ಮೂಲೆಯಲ್ಲಿ ಮೊಟ್ಟೆಯೊಂದಿಗೆ ರಾಜಕೀಯ ವಿವಾದವನ್ನು ಎಳೆದು ತರಲಾಗುತ್ತದೆ. ಮೊಟ್ಟೆ ಎನ್ನುವುದು ಯಾವುದೇ ದೊಡ್ಡ ಭಾವನೆಯನ್ನು ಪ್ರಚೋದಿಸದಷ್ಟು ಸಾಮಾನ್ಯವಾದದ್ದು ಮತ್ತು ನಿರ್ಲಕ್ಷಿಸಲಾಗದಷ್ಟು ಪೌಷ್ಟಿಕಾಂಶದ್ದು. ಅದು ಭಾರತದ ಬಹುತೇಕ ಭಾಗಗಳಲ್ಲಿ ಅಗ್ಗವಾಗಿ, ಎಲ್ಲರಿಗೂ ಒಪ್ಪಿತವಾಗಿ, ಬೇಯಿಸಲು ಸುಲಭವಾಗಿ ಮತ್ತು ಅತ್ಯಂತ ಪೌಷ್ಟಿಕವಾಗಿರುವ ಕಾರಣಕ್ಕಾಗಿಯೇ ಇಷ್ಟು ವರ್ಷಗಳ ಕಾಲ ಬಿಸಿಯೂಟದ ವ್ಯವಸ್ಥೆಯಲ್ಲಿ ಉಳಿದುಕೊಂಡಿದೆ. ಅದಕ್ಕಾಗಿಯೇ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದವು.

ಈಗ, ಇಸ್ಕಾನ್ ಸಂಸ್ಥೆಯು ಮೊಟ್ಟೆಗೆ ಪರ್ಯಾಯವಾಗಿ ಸೋಯಾ ಮತ್ತು ಪನ್ನೀರ್ ಅನ್ನು ನೀಡುತ್ತಿದೆ. ಆದರೆ ಇವೆರಡೂ ಮೊಟ್ಟೆಗೆ ಸಮಾನ ಪರ್ಯಾಯಗಳಲ್ಲ ಎಂದು ವೈದ್ಯರು ದಶಕಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. ಮೊಟ್ಟೆಗಳಲ್ಲಿ ಅತ್ಯಂತ ಅಮೂಲ್ಯವಾದ ಪೌಷ್ಟಿಕಾಂಶಗಳಿವೆ ಎಂಬುದು ವಿಜ್ಞಾನ. ಆದರೆ ‘ನವ ಭಾರತ’ದಲ್ಲಿ ರಾಜಕೀಯಕ್ಕೆ ವಿಜ್ಞಾನವೇ ಅತ್ಯಂತ ದೊಡ್ಡ ಎದುರಾಳಿಯಾಗಿದೆ.

ಆಹಾರ, ವಿಜ್ಞಾನ ಮತ್ತು ನಂಬಿಕೆ

ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳ ಆಹಾರದೊಂದಿಗಿನ ಸಂಬಂಧ ತೀರಾ ಭಿನ್ನವಾದುದು ಎಂಬುದನ್ನು ಬಿಜೆಪಿ ಚುನಾವಣಾ ಪ್ರಚಾರದ ಸಮಯದಲ್ಲಿ ಚೆನ್ನಾಗಿಯೇ ಅರಿತಿತ್ತು. ಬಂಗಾಳದಲ್ಲಿ ಆಹಾರಕ್ಕೆ ವಿಭಿನ್ನವಾದ ಗೌರವವಿದೆ. ಅಲ್ಲಿ ಮೀನನ್ನು ವಧುವಿಗೆ ಉಡುಗೊರೆಯಾಗಿ ನೀಡಬಹುದು, ದೇವತೆಗಳಿಗೆ ನೈವೇದ್ಯವಾಗಿ ಅರ್ಪಿಸಬಹುದು ಮತ್ತು ಯಾವುದೇ ವಿವಾದವಿಲ್ಲದೆ ಮಧ್ಯಾಹ್ನದ ಊಟಕ್ಕೆ ಬೇಯಿಸಬಹುದು. ಆದರೆ ಬಂಗಾಳದ ಹೊರಗೆ, ಹಿಂದೂ ಧರ್ಮವನ್ನು ಒಂದೇ ಒಂದು ಸಸ್ಯಾಹಾರಿ ಚೌಕಟ್ಟಿಗೆ ತರಲು ಹಠ ಹಿಡಿದಿರುವವರಿಗೆ ಇದು ಆಘಾತವನ್ನುಂಟು ಮಾಡುತ್ತದೆ.

ಆದರೆ ಬಂಗಾಳಿ ಅಡುಗೆಮನೆಗೆ ಎಂದಿಗೂ ಇಂತಹ ಆತಂಕವಿರಲಿಲ್ಲ. ಬಂಗಾಳದ ಸಂಸ್ಕೃತಿಯ ವೈಶಿಷ್ಟ್ಯ ಅಡಗಿರುವುದು ಯಾವುದನ್ನೂ ಹೊರಗಿಡುವುದರಲ್ಲಲ್ಲ, ಬದಲಿಗೆ ಎಲ್ಲವನ್ನೂ ಒಳಗೊಳ್ಳುವುದರಲ್ಲಿ; ಮಡಿವಂತಿಕೆಯಲ್ಲಲ್ಲ, ಬದಲಿಗೆ ಆಹಾರದ ಮೇಲಿನ ಪ್ರೀತಿಯಲ್ಲಿ. ಅಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳು ನೈತಿಕತೆಯ ಚೌಕಟ್ಟಿಗೆ ಸಿಲುಕದೆ ಒಟ್ಟಿಗೆ ಸಹಬಾಳ್ವೆ ನಡೆಸುತ್ತಿವೆ.

ಹಾಗಾಗಿಯೇ, ಬಂಗಾಳಿಗಳ ‘ಮೀನು-ಊಟದ’ ಈ ಸಹಜ ಗುಣವನ್ನು ಅರಿತಿದ್ದ ರಾಜಕಾರಣಿಗಳು, ಚುನಾವಣಾ ಪ್ರಚಾರದ ಸಮಯದಲ್ಲಿ ಸಾಸಿವೆ ಎಣ್ಣೆಯ ರುಚಿಯನ್ನು ತಕ್ಷಣವೇ ಒಪ್ಪಿಕೊಂಡರು. ಬಿಜೆಪಿ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನಿನ ರುಚಿ ನೋಡಿದರು, ಏಕೆಂದರೆ ಬಂಗಾಳದ ಆಹಾರ ಪದ್ಧತಿಯನ್ನು ಬಲವಂತವಾಗಿ ಶರಣಾಗಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಈ ರೀತಿ ನಟಿಸದೇ ಇದ್ದರೆ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು.

ಆದರೆ, ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಅವರ ಆಡಳಿತದ ಶೈಲಿಯೇ ಸಂಪೂರ್ಣ ಬದಲಾಗಿದೆ. ಶಾಲಾ ಬಿಸಿಯೂಟದಿಂದ ಮೊಟ್ಟೆಯನ್ನು ಹೊರದೂಡಿರುವುದು, ಅಧಿಕಾರ ಸಿಕ್ಕ ತಕ್ಷಣ ಸಾಂಕೇತಿಕ ಭರವಸೆಗಳು ಹೇಗೆ ಸೈದ್ಧಾಂತಿಕ ಹಿತಾಸಕ್ತಿಗಳಿಗೆ ಬಲಿಯಾಗುತ್ತವೆ ಎಂಬುದನ್ನು ತೋರಿಸುತ್ತದೆ. ದುರಂತವೆಂದರೆ, ಮಕ್ಕಳಿಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಈ ರಾಜಕೀಯ ಜಗಳದ ಮಧ್ಯೆ ದಾಳವಾಗುತ್ತಿದ್ದಾರೆ.

ಕಲ್ಯಾಣ ಯೋಜನೆಗಳು ಅಸ್ತಿತ್ವದಲ್ಲಿ ಇರುವುದು ಸರ್ಕಾರಗಳು ನಂಬಿಕೆಗಳಿಗಿಂತ ಫಲಿತಾಂಶಗಳಿಗೆ ಆದ್ಯತೆ ನೀಡಬೇಕು ಎಂಬ ಕಾರಣಕ್ಕಾಗಿ. ಬಾಲ್ಯದ ದೈನಂದಿನ ಆಹಾರದಲ್ಲಿ ಮೊಟ್ಟೆಗಳು ಅತ್ಯಗತ್ಯ ಎಂದು ವಿಜ್ಞಾನ ಮತ್ತು ವೈದ್ಯರು ಹೇಳಿದ ಮೇಲೆ ಆ ವಿಷಯ ಅಲ್ಲಿಗೇ ಮುಗಿಯಬೇಕಿತ್ತು. ಅದನ್ನು ನಂಬಿಕೊಂಡಿರುವ ಬಡ ಮಕ್ಕಳಿಗೆ ಅದನ್ನು ತಲುಪಿಸುವುದು ಮಾತ್ರ ಸರ್ಕಾರದ ಕೆಲಸವಾಗಿರಬೇಕು.

“ಊಟದ ವಿಷಯದಲ್ಲಿ ಧರ್ಮ ಅಥವಾ ನಂಬಿಕೆಯನ್ನು ಎಲ್ಲಿಯವರೆಗೆ ಇಟ್ಟುಕೊಳ್ಳಬೇಕು ಮತ್ತು ಮಕ್ಕಳ ಆರೋಗ್ಯದ ವಿಷಯ ಬಂದಾಗ ವಿಜ್ಞಾನಕ್ಕೆ ಹೇಗೆ ಬೆಲೆ ಕೊಡಬೇಕು ಎಂಬ ವಿವೇಕ ಬಂಗಾಳದ ಜನರಿಗೆ ಚೆನ್ನಾಗಿ ಗೊತ್ತಿದೆ.” ಎಂಬ ಮಾತು ನಿಜವಾಗಲಿ. ಮಕ್ಕಳ ತಟ್ಟೆಗೆ ಕೈ ಹಾಕಿರುವ ಬಿಜೆಪಿಗೆ ಪಾಠವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...