HomeಎಕಾನಮಿExplainer: ಈ ಜಿಡಿಪಿ (GDP) ಅಂದರೆ ಏನಪಾ? - ಬೈ ಡೇಟಾಮ್ಯಾಟಿಕ್ಸ್

Explainer: ಈ ಜಿಡಿಪಿ (GDP) ಅಂದರೆ ಏನಪಾ? – ಬೈ ಡೇಟಾಮ್ಯಾಟಿಕ್ಸ್

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

- Advertisement -
- Advertisement -

ಜಿಡಿಪಿ ಅಥವಾ ನಿವ್ವಳ ಆಂತರಿಕ ಉತ್ನನ್ನ ಹಿಂಗಂದರ ಒಂದು ದೇಶದ ಜನಾ ತಮ್ಮ ಎಲ್ಲಾ ಚಟುವಟಿಕೆಗಳಿಂದ ಒಂದು ವರ್ಷದಾಗ ಸೃಷ್ಟಿಸಬಹುದಾದ ಒಟ್ಟು ಸಂಪತ್ತು. ಇದು ಸರಕು ಅಥವಾ ಸೇವೆಯ ರೂಪದಾಗ ಇರಬಹುದು.

ನೀವು ಏನರ ನೌಕರಿ ಮಾಡ್ತೀರಿ, ಅಥವಾ ವ್ಯಾಪಾರ ಮಾಡತೀರಿ ಅದರಿಂದ ನಿಮಗ ಎಷ್ಟು ದುಡ್ಡು ಅಥವಾ ಅದರ ಮೌಲ್ಯದ ಪರ್ಯಾಯ ವಸ್ತು ಅಥವಾ ಸೇವೆ ಸಿಗತದೋ ಅದು ನಿಮ್ಮ ಪಾಲಿನ ಜಿಡಿಪಿ. ಇಂಥದನ್ನೇ ಎಲ್ಲಾರೂ ಕೂಡಿ ಮಾಡಿದಾಗ ಸಿಗೋ ಲೆಕ್ಕಾ ಅಂದರ ಈ ದೇಶದ ಜಿಡಿಪಿ.


ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ


ಇನ್ನ ಕೆಲವು ವಿಷಯ ಜಿಡಿಪಿಯೊಳಗ ಬರಂಗಿಲ್ಲಾ. ನಿಮ್ಮ ದಾಡಿ ನೀವ ಮಾಡಿಕೊಳ್ಳೋದು ಅನ್ರೀ, ನಿಮ್ಮ ತಾಯಿ, ಹೆಂಡತಿ, ಮಗಳು, ಅಕ್ಕಾ, ತಂಗಿ, ವೈನಿ, ಅಥವಾ ಮತ್ಯಾರರೆ ನಿಮ್ಮ ಅಡಿಗಿ ಮನಿಯೊಳಗ ನಿಮ್ಮ ಮತ್ತು ತಮ್ಮ ಊಟಕ್ಕ ಅಡಿಗೀ ಮಾಡತಾರಲ್ಲಾ, ಅದುನೂ ಬರೋದಿಲ್ಲ. ನಮ್ಮ ದೇಶದೊಳಗ ಕೋಟ್ಯಾಂತರ ಹೆಣ್ಣು ಮಕ್ಕಳು ಸಾಯೋ ತನಕಾ ತಮ್ಮ ತಮ್ಮ ಮನಿಯೊಳಗ, ಕೈ ಸುಟಗೋತ ದುಡದು ಹಾಕತಾರಲ್ಲಾ ಅದರ ಮೌಲ್ಯ ಸರಕಾರದ ಜಿಡಿಪಿ ಲೆಕ್ಕದೊಳಗ ಬರಂಗಿಲ್ಲಾ. ಗಂಡು ಮಕ್ಕಳ ಮನಸಿನ್ಯಾಗಂತೂ ಅದು ಬರೋದೇ ಇಲ್ಲಾ ಬಿಡ್ರಿ. ಅದು ಬ್ಯಾರೆ ಮಾತು.

ನಂ ಭಾರತದ ಈ ವರ್ಷದ ಜಿಡಿಪಿ ಸುಮಾರು 2.6 ಲಕ್ಷ ಕೋಟಿ ಡಾಲರ್ ಅಂದರ ಸುಮಾರು 182 ಲಕ್ಷ ಕೋಟಿ. ಇದು 2011-12 ವರ್ಷವನ್ನು ಅಳತೆಗೋಲಾಗಿ ತೆಗೆದುಕೊಂಡಾಗ ಸಿಗುವ ಲೆಕ್ಕ. ಮುಂಚೆ ಇದು 1981 ಇತ್ತು, 91 ಆತು, 2004 ನಾಲ್ಕು ಆತು. ಮೋಷಾ ಸರಕಾರ ಬಂದ ಮ್ಯಾಲೆ ಇದು 2011 ಆತು. ಲೆಕ್ಕದ ವರ್ಷ ಬದಲಾದಂಗೆಲ್ಲಾ ಜಿಡಿಪಿಯ ಮೌಲ್ಯ ಬದಲಾಗತದ, ಅದು ಮತ್ತ ಯೂನಿವರ್ಸಿಟಿ ಬೃಹಸ್ಪತಿಗಳ ತಲಿ ಕೆಡಿಸೋ ಲೆಕ್ಕ. ನಮ್ಮಂತಹ ಹುಲುಮಾನವರಿಗಲ್ಲ. ಅದನ್ನ ಬಿಡ್ರಿ.

ಹಂಗಾರ ಬ್ಯಾರೆ ದೇಶಗಳ ಜಿಡಿಪಿ ಎಷ್ಟದಪಾ? ಇದು ಯಾಕ ಬೇಕಂದ್ರ, ನಿಮ್ಮ ಹುಡುಗಾ ರನ್ನಿಂಗ್ ರೇಸ್ ನ್ಯಾಗ ಎಷ್ಟನೇ ಬಂದಾನ್ರೀ ಅಂದ್ರ ಸೆಕೆಂಡ್ ಬಂದಾನ ಅಂತ ನೀವು ಹೆಮ್ಮೆಯಿಂದ ಹೇಳಿದ್ರಿ ಅಂತ ತಿಳಕೋಳ್ರಿ. ಆ ರೇಸಿನ್ಯಾಗ ಎಷ್ಟು ಜನಾ ಇದ್ದರು ಅಂದರು ಅಂತ ತಿರಗಿ ಕೇಳಿದರ ಇಬ್ಬರ ರನ್ನರ್ಸ ಇದ್ದರು ಅಂತ ನಾಚಿಕೊಂಡು ಹೇಳೋ ಪರಿಸ್ಥಿತಿ ನಿಮಗ ಬರಬಾರದಲ್ಲಾ, ಅದಕ್ಕ.

ನೋಡ್ರಿ, ಈ ಸಮಸ್ತ ಭೂಮಂಡಲದಾಗ ಸುಮಾರು 220 ದೇಶ ಅಥವಾ ಸ್ವಯಂ ಆಡಳಿತ ಪ್ರದೇಶಾ ಅದಾವು. ಅದರಾಗ ಸುಮಾರು 200 ದೇಶದ ಜಿಡಿಪಿ ಲೆಕ್ಕಾ ಸಿಕ್ಕದ.
ಅದರ ಪ್ರಕಾರ ಅತಿ ಹೆಚ್ಚಿನವು ಹಿಂಗವ.

ಅಮೇರಿಕಾ 1357 ಲಕ್ಷ ಕೋಟಿ
ಚೈನಾ 857 ಲಕ್ಷ ಕೋಟಿ
ಜಪಾನ್ 350 ಲಕ್ಷ ಕೋಟಿ
ಜರ್ಮನಿ 257 ಲಕ್ಷ ಕೋಟಿ
ಭಾರತ 182 ಲಕ್ಷ ಕೋಟಿ
ಇನ್ನು ನಮ್ಮ ನೆರೆ ಹೊರೆಯವರ ಲೆಕ್ಕ ಎಷ್ಟು? ಬೆಳಿಗ್ಗೆ ಎದ್ದಾಗಿಂದಲೂ ಮಲಗೋ ತನಕಾ ನಾವು ಎಲ್ಲದಕ್ಕೂ ಹೋಲಿಸಿಕೊಳ್ಳುವ ನಮ್ಮ ನೆರೆಯವರು ಈ ರೇಸಿನ್ಯಾಗ ಎಲ್ಲಿದ್ದಾರ ಅಂದರ-
ಬಾಂಗ್ಲಾ – 17 ಲಕ್ಷ ಕೋಟಿ
ಪಾಕಿಸ್ತಾನ 21 ಲಕ್ಷ ಕೋಟಿ
ಇನ್ನು ಲಭ್ಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಕಡಿಮೆ ಜಿಡಿಪಿ ಇರುವ ದೇಶಗಳು ಅಂದರ-
ಬುರುಂಡಿ 25,000 ಕೋಟಿ
ರುವಾಂಡಾ 63,000 ಕೋಟಿ

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

ಅವರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಏನಪಾ ಅಂದರ ನಾವು ಜಿಡಿಪಿ ಪಟ್ಟಿಯ ಮೇಲಿನ ದೇಶಗಳಿಗೆ ಹತ್ತಿರ ಇಲ್ಲ. ಕೆಳಗಿನವರಿಗೆ ಹತ್ತಿರ ಇದ್ದೇವೆ. ಅದಕ್ಕೇ ಭೂಗೋಳದ ದಕ್ಷಿಣದ ದೇಶಗಳ ಭ್ರಾತ್ವತ್ವದ ಮಾತು, ಬ್ರಿಕ್ಸ ದೇಶಗಳ ಹೊಂದಾಣಿಕೆಯ ಮಾತುಗಳು ಆಗಾಗ ಕೇಳಿ ಬರತಿರತಾವು.
ಇದನ್ನ ನಾವು ಮರೆಯಬಾರದು.

ನಾವು ಏಣಿಯ ಎಷ್ಟನೇ ಮೆಟ್ಟಿಲ ಮೇಲೆ ಇದ್ದೇವಿ ಅನ್ನುವುದು ಗೊತ್ತಾಗದಿದ್ದರ ಎಷ್ಟು ಬೇಗ, ಎಷ್ಟು ಎತ್ತರಕ್ಕೆ ಏರಬೇಕು ಎನ್ನುವುದು ನಮಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಾವು ನಿಂತಲ್ಲೇ ನಿಂತು ಮೇಲಿನವರನ್ನು ನೋಡಿ ಹೊಟ್ಟಿ ಕಿಚ್ಚು ಪಡಬಹುದು, ಅಥವಾ ಕೆಳಗಿನವರನ್ನು ನೋಡಿ ಅಪಹಾಸ್ಯ ಮಾಡಬಹುದು. ನಮ್ಮ ಮನಿಯೊಳಗ ಕನ್ನಡಿ ಇರದಿದ್ದರ, ಬೇರೆಯವರ ಮುಖದ ಮೇಲಿನ ಕಲೆಯ ಬಗ್ಗೆ ಮಾತಾಡಬಾರದು.

ಈ ಸಲಾ ಈ ವಿಷಯದ ಕಡೆ ನಮ್ಮ ಸಂಕೀರ್ತನೆ ಯಾಕ ಹೊರಳಿತಪಾ ಅಂದರ ಅದಕ್ಕೊಂದು ಛಂದನೆ ಕಾರಣ ಅದ.

ನಮ್ಮ ಮೋಹನ ಭಾಗವತ ಅವರು `ಜಿಡಿಪಿ’ ಭಾರತೀಯ ಮೂಲದ ಕಲ್ಪನೆ ಅಲ್ಲಾ ಅಂತ ಹೇಳ್ಯಾರ. ಅಷ್ಟ ಅಲ್ಲದ `ಲಿಂಚಿಂಗ್’ ಅನ್ನೋದು ಸಹ ನಮ್ಮ ಸಂಸ್ಕೃತಿಯ ಮೂಲದ್ದಲ್ಲಾ ಅಂತಂದಾರ.
ಅಮಿತ ಷಾ ಅವರು `ಮಾನವ ಹಕ್ಕುಗಳು` ಅನ್ನೋದು ನಮ್ಮ ಭಾರತೀಯ ಸಂಸ್ಕೃತಿಯ ಕಲ್ಪನೆ ಅಲ್ಲಾ ಅಂತ ಅಪ್ಪಣೆ ಕೊಟ್ಟಾರ.

ಅಂದರ ಈ ಮೂರು ವಿಷಯಗಳ ಬಗ್ಗೆ ತಿಳಕೊಳ್ಳೋದು, ಮಾತಾಡೋದು ನಿಷಿದ್ಧ ಅಂತ ಆತಲ್ಲಾ.
ಅದಕ್ಕಂತನ, ಈ ವಾರದ ಡೇಟಾ ಖೋಲಿಯೊಳಗ ನಮ್ಮ ಪ್ರವೇಶ. ಈ ನಿಷೇಧಿತ ವಸ್ತುವಿನ ಹುಡುಕಾಟಕ್ಕ.


ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...