Homeಕರ್ನಾಟಕಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

ಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

- Advertisement -
- Advertisement -

– ಕೆ.ಪಿ ಸುರೇಶ್

RCEP ಬಗ್ಗೆ ಚುಟುಕು ಪ್ರಶ್ನೋತ್ತರ… 

RCEP ಎಂದರೇನು..?
ಭಾರತ, ಚೀನಾ, ಮಲೇಷಿಯಾ, ಜಪಾನ್, ಕಾಂಬೋಡಿಯಾ, ವಿಯೆಟ್ನಾಂ ಸಹಿತ ಹದಿನೈದು ದೇಶಗಳು ಸೇರಿದ ಪ್ರಾದೇಶಿಕ ಸಹಭಾಗಿತ್ವ.

ಪ್ರಸ್ತಾಪದ ಮಾತುಕತೆ ಶುರುವಾಗಿ ಎಷ್ಟು ವರ್ಷಗಳಾದವು..?
2012ರಲ್ಲಿ ಈ ಒಪ್ಪಂದದ ಸ್ಥೂಲ ಚರ್ಚೆ ಆರಂಭವಾಯಿತು. ವಿವಿಧ ಹಂತಗಳ ಮಾತುಕತೆಗಳು ಕಳೆದ ಏಳು ವರ್ಷಗಳಲ್ಲಿ ನಡೆದು ಬೆಳೆಯುತ್ತಾ ಇದೇ ನವೆಂಬರ್‌ 4ಕ್ಕೆ ಅಂತಿಮ ಸುತ್ತಿನ ಒಪ್ಪಂದದ ಸಭೆ ನಡೆಯಲಿದೆ.

ಇಷ್ಟು ವರ್ಷ ಏನಾಯಿತು..?
ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಒಪ್ಪಂದದ ಯಾವ ವಿವರಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಉಳಿದ ದೇಶಗಳು ತಮ್ಮ ತಮ್ಮ ಸಂಸತ್ತುಗಳಲ್ಲಿ ಇದರ ವಿವರಗಳನ್ನು ಪ್ರಸ್ತುತಪಡಿಸಿವೆ. ಆದರೆ ನಮ್ಮ ಸರ್ಕಾರ ಸಂಪೂರ್ಣ ರಹಸ್ಯವಾಗಿಟ್ಟಿದೆ. ಈ ಮಾತುಕತೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಷಯ ತಜ್ಞರು ಯಾರು ಎಂಬುದೂ ಸಹ ಸಾರ್ವಜನಿಕವಾಗಿಲ್ಲ.

RCEP ಒಪ್ಪಂದದ ಮುಖ್ಯ ಅಂಶಗಳೇನು..?
ಈ ಎಲ್ಲಾ ರಾಷ್ಟ್ರಗಳೂ ಒಂದೇ ದೇಶವೆಂಬಂತೆ ತಮ್ಮ ಸರಕುಗಳನ್ನು ಯಾವುದೇ ತೆರಿಗೆಗೆ ತಡೆ ಇಲ್ಲದೇ ಪರಸ್ಪರ ಮಾರಾಟ ಮಾಡುವ ಸೌಲಭ್ಯ ಹೊಂದುತ್ತಾರೆ. ಈ ರೀತಿಯ ಆರ್ಥಿಕ ವಲಯಗಳನ್ನು ಆಧುನಿಕ ವ್ಯಾಪಾರ ಸಂದರ್ಭದಲ್ಲಿ ಸೃಷ್ಟಿಸಿಕೊಳ್ಳಲಾಗುತ್ತಿದೆ.

ಉಳಿದ ಅಂಶಗಳೇನು..?
ಉಳಿದ ಯಾವ ವಿವರಗಳೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಸೋರಿಕೆಯಾದ ದಾಖಲೆಗಳನ್ನು ಗಮನಿಸಿದರೆ ಬೌದ್ಧಿಕ ಆಸ್ತಿ ಹಕ್ಕಿನಿಂದ ಹಿಡಿದು, ಹಲವು ಉತ್ಪನ್ನಗಳಲ್ಲಿ ಇದಕ್ಕೆ ತಡೆಯೊಡ್ಡುವ ದೇಶದಿಂದ ಪರಿಹಾರ ವಸೂಲಿ ಮಾಡುವ ಅಧಿಕಾರ ರಫ್ತು ಮಾಡುವ ಸರ್ಕಾರ ಅಥವಾ ಸಂಸ್ಥೆಗೆ ಇರುತ್ತದೆ.

ಇದರಿಂದ ನಮ್ಮ ದೇಶದ ಮೇಲಾಗುವ ಪರಿಣಾಮಗಳು ಏನು..? 
ಈಗಾಗಲೇ ಭಾರತ ವ್ಯಾಪಾರದಲ್ಲಿ ಡೆಫಿಸಿಟ್ ಹೊಂದಿದೆ. ಅದರಲ್ಲೂ ಚೀನಾ ರಾಷ್ಟ್ರವೊಂದೇ ಶೇ. 50 ರಷ್ಟು ಸರಕು ಸುರಿಯಬಹುದು. ಉಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲಾಂಡ್‍ಗಳು ಡೈರಿ ಉತ್ಪನ್ನಗಳನ್ನು ಭಾರತಕ್ಕೆ ಸುರಿಯುವ ಸಾಧ್ಯತೆಯಿದೆ. ಸುಮಾರು ಹತ್ತು ಸಾವಿರ ವಿವಿಧ ವಸ್ತುಗಳು ಈ ಒಪ್ಪಂದದ ಅನ್ವಯ ಆಮದು- ರಫ್ತು ಆಗಲಿವೆ. ಈ ವಸ್ತುಗಳಲ್ಲಿ ಕೃಷಿ, ಹಾಲು ಉತ್ಪಾದನೆ, ಸಾಗರೋತ್ಪನ್ನಗಳು ಅಷ್ಟೇ ಅಲ್ಲ, ಔಷಧಿ ಕ್ಷೇತ್ರದ ಪಾಲೂ ಅಧಿಕವಾಗಿರಲಿದೆ. ಬೌದ್ಧಿಕ ಉತ್ಪನ್ನದ ಬೌದ್ಧಿಕ ಹಕ್ಕಿನ ವಾಯಿದೆಯನ್ನೂ ವಿಸ್ತರಿಸುವ ಹಕ್ಕು ಇದೆ.

ಯಾವ ಉತ್ಪನ್ನಗಳಿಂದ ದೇಶಕ್ಕೆ ತೊಂದರೆಯಾಗಲಿದೆ..? 
ನಿರ್ದಿಷ್ಟವಾಗಿ ಇಂಥದ್ದೇ ಉತ್ಪನ್ನಗಳಿಂದ ನಾವು ರಕ್ಷಣೆ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತಜ್ಞರ ಪ್ರಕಾರ 10 ಸಾವಿರ ಉತ್ಪನ್ನಗಳಲ್ಲಿ ಹೆಚ್ಚೆಂದರೆ ನೂರು ಉತ್ಪನ್ನಗಳಿಗೆ ರಕ್ಷಣೆ ನೀಡಬಹುದು. ಅಡಿಕೆ, ಮೆಣಸು ಇತ್ಯಾದಿಗೆ ತೊಂದರೆ ಇಲ್ಲ ಎನ್ನುತ್ತಾರಲ್ಲ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸದ್ಯಕ್ಕೆ ತೊಂದರೆ ಕಾಣಿಸದಿದ್ದರೂ, ಸದಸ್ಯ ರಾಷ್ಟ್ರಗಳು ನಿಯಮಗಳನ್ನು ತಿದ್ದುಪಡಿ ಮಾಡಿದಾಗ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಊಹಿಸುವುದು ಕಷ್ಟ. ಮುಖ್ಯವಾಗಿ ಯಾವ ಸರಕಿಗೂ ಆಧುನಿಕ ವ್ಯಾಪಾರ ಒಪ್ಪಂದದಲ್ಲಿ ಖಾಯಂ ರಕ್ಷಣೆ ಎಂಬುದು ಇಲ್ಲ.

ನಮಗೆ ಆಪತ್ತು ಇದೆ ಎಂದು ಏಕೆ ಭಾವಿಸಲಾಗುತ್ತಿದೆ..?
ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕವಾಗಿಲ್ಲ. ಗುಣಮಟ್ಟದಲ್ಲೂ, ಉತ್ಪಾದಕ ವೆಚ್ಚದಲ್ಲೂ ಎಂಬ ಆತಂಕ ಇದೆ. ಉಳಿದ ದೇಶಗಳ, ಅದರಲ್ಲೂ ಚೀನಾದ ಉತ್ಪನ್ನಗಳು, ನಮ್ಮ ಉತ್ಪನ್ನಗಳಿಗಿಂತ ಅಗ್ಗವಾಗಿ ಉತ್ಪಾದನೆಯಾಗುತ್ತವೆ. ಆದ್ದರಿಂದ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕವೂ ಇದೆ.

ಸರ್ಕಾರ ಏನು ಮಾಡಬೇಕು..?
ಮುಖ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆ ಮತ್ತು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಬಂಡವಾಳ ಹೂಡಬೇಕು. ಇದು ಮೂಲತಃ ತರಬೇತಿ , ಕೌಶಲ್ಯಗಳಿಗೆ ಸಂಬಂಧಿಸಿದ್ದಾಗಿದೆ. ಈ ರೀತಿ ದೇಶೀಯ ಉತ್ಪಾದನೆಯನ್ನು ಸನ್ನದ್ಧಗೊಳಿಸಲು ಮೊದಲು ಸಹಿ ಹಾಕಿದರೆ, ನಮ್ಮ ಉತ್ಪಾದಕರು ತೊಂದರೆಗೆ ಒಳಗಾಗುತ್ತಾರೆ.

ಸರ್ಕಾರ ಏನು ಮಾಡುತ್ತಿದೆ..?
ಕೃಷಿ ಮತ್ತಿತರ ಕ್ಷೇತ್ರಗಳು, ರಾಜ್ಯಗಳಿಗೆ ಸಂಬಂಧಿಸಿದ ಕಾರಣ ಆಯಾ ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಅಷ್ಟೇ ಅಲ್ಲ, ರೈತಾಪಿ ವರ್ಗಕ್ಕೆ ಮಾರ್ಗದರ್ಶನ ಮಾಡುವ ಬಲು ದೊಡ್ಡ ತರಬೇತುದಾರರ ಪಡೆಯನ್ನು ನಿಯೋಜಿಸಬೇಕಾಗಿದೆ. ಹಾಗೇ ಉತ್ಪಾದನಾ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ತಳಮಟ್ಟದವರೆಗೂ ಮನನ ಮಾಡಿಸಿ, ಉತ್ಪನ್ನವನ್ನು ಶ್ರೇಷ್ಠಗೊಳಿಸಬೇಕು. ಇದರೊಂದಿಗೆ ಒಳಸುರಿ, ಕೊಯ್ಲು ಸಾಗಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮೌಲ್ಯವರ್ಧನೆ- ಹೀಗೆ ಎಲ್ಲಾ ಆಯಾಮಗಳಲ್ಲೂ ಏಕಕಾಲಕ್ಕೆ ಸಂರಚನೆ ಸೃಷ್ಟಿಸಬೇಕು.

ಈಗಾಗಲೇ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಯಾವವು..?
ಕೃಷಿ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಘೋಷಿಸಿದ ಉಪಕ್ರಮಗಳ ಶೇ. 10ರಷ್ಟೂ ಕೆಲಸವಾಗಿಲ್ಲ. ಉದಾ: ಕೌಶಲ್ಯ ಕ್ಷೇತ್ರದಲ್ಲಿ 41 ಸ್ಕಿಲ್ ಕೌನ್ಸಿಲ್‍ಗಳನ್ನು ಘೋಷಿಸಿ, ಸುಮಾರು 5000 ಉದ್ಯೋಗ ಸಾಧ್ಯತೆಗಳನ್ನು ಗುರುತಿಸಬೇಕಿದೆ.  ಅಲ್ಪಕಾಲೀನ ತರಬೇತಿ ಮೂಲಕ ಕೌಶಲ್ಯ ತರಬೇತಿ ಪಡೆದ ಲಕ್ಷಾಂತರ ಯುವಕರನ್ನು ಸೃಷ್ಟಿಸುವ ಘೋಷಣೆ ಇದೆ. ಆದರೆ ಬಹುತೇಕ ಕೌನ್ಸಿಲ್‌ಗಳಲ್ಲಿ ಗುಣಮಟ್ಟದ ತರಬೇತಿಯೇ ಇಲ್ಲ.
ಆಹಾರ ಸಂಸ್ಕರಣೆಯಲ್ಲೂ ಅಷ್ಟೇ. ಶೇ. 10-30ರಷ್ಟು ಉತ್ಪನ್ನ ಹಾಳಾಗುತ್ತಿದೆ ಎಂದು ಸರ್ಕಾರದ ಅಧಿಕೃತ ವಿವರಗಳೇ ಹೇಳುತ್ತಿವೆ.

ಮುಖ್ಯವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರ ಈ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬೇಕಾದಷ್ಟು ಅನುದಾನ ಒದಗಿಸಿಲ್ಲ. ಈಗ ಈ ಒಪ್ಪಂದ ಎಂಬ ಪೆಡಂಭೂತ ನಮ್ಮ ದಿಡ್ಡಿ ಬಾಗಿಲಿಗೆ ಬಂದಿದೆ. ನಮ್ಮನ್ನು ಆಳುವವರ ಕೈ ತಿರುಚಿಯಾದರೂ ಇದಕ್ಕೆ ಸಹಿ ಹಾಕಿಸುವ ಶಕ್ತಿ ಚೀನಾದಿಂದ ಹಿಡಿದು ಇತರೆ ದೇಶಗಳಿಗೆ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...