Homeಮುಖಪುಟಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಹಿಂಡೆನ್‌ಬರ್ಗ್ ಸಂಸ್ಥೆಯು 2020 ರಿಂದ ಟೆಸ್ಲಾ, ಟ್ವಿಟರ್ ಸೇರಿದಂತೆ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ.

- Advertisement -
- Advertisement -

ಕಳೆದ ನಾಲ್ಕು ದಿನಗಳಲ್ಲಿ ದಿಢೀರ್ ಪ್ರಚಲಿತಕ್ಕೆ ಬಂದ ಅಮೆರಿಕದ ಕಂಪನಿಯ ಹೆಸರು ಹಿಂಡೆನ್‌ಬರ್ಗ್ ರಿಸರ್ಚ್. ಭಾರತದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿಯವರ ಹಣಕಾಸು ಅಕ್ರಮಗಳನ್ನು ಬಯಲಿಗೆಳೆಯುವ ವರದಿ ಪ್ರಕಟಿಸುವ ಮೂಲಕ ಅದು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇತ್ತ ಆ ಒಂದು ವರದಿಯಿಂದ ಅದಾನಿ ಕಂಪನಿಯ ಷೇರುಗಳೆಲ್ಲ ಪ್ರಪಾತಕ್ಕೆ ಕುಸಿಯುತ್ತಿದ್ದು, ಈ ನಾಲ್ಕು ದಿನದಲ್ಲಿ ಕನಿಷ್ಟ 4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಎಸ್‌ಬಿಐ, ಎಲ್‌ಐಸಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮೌಲ್ಯಗಳು ಕುಸಿಯುತ್ತಿದ್ದು, ಇಡೀ ಭಾರತದ ಆರ್ಥಿಕತೆ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ ಹಿಂಡೆನ್‌ಬರ್ಗ್ ಕಂಪನಿಯನ್ನು ‘ಶಾರ್ಟ್ ಸೆಲ್ಲಿಂಗ್’ ಕಂಪನಿ ಎಂದು ಸಂಭೋದಿಸಲಾಗುತ್ತಿದೆ. ಅದು ಅದಾನಿಗೆ ಶಾರ್ಟ್ ಸೆಲ್ಲಿಂಗ್ ಮಾಡುವ ಮೂಲಕ ಮಿಲಿಯನ್‌ ಡಾಲರ್‌ಗಟ್ಟಲೇ ಹಣ ಸಂಪಾದಿಸಿದೆ ಎಂದು ವರದಿಯಾಗಿದೆ. ಆಗಿದ್ದರೆ ಶಾರ್ಟ್‌ ಸೆಲ್ಲಿಂಗ್ ಎಂದರೇನು? ಆ ಕಂಪನಿಯ ಹಿನ್ನೆಲೆಯೇನು ಎಂಬುದನ್ನು ನೋಡೋಣ.

ಹಿಂಡೆನ್‌ಬರ್ಗ್ ಹಿನ್ನೆಲೆ

2017ರಲ್ಲಿ ನಾಥನ್ ಆಂಡರ್ಸನ್ ಎಂಬುವವರು ಸ್ಥಾಪಿಸಿದ ಹಿಂಡೆನ್‌ಬರ್ಗ್ ರಿಸರ್ಚ್ ತನ್ನನ್ನು ಸಂಶೋಧನಾ ಮತ್ತು ತನಿಖಾ ಸಂಸ್ಥೆ ಎಂದು ಕರೆದುಕೊಂಡಿದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ತಪ್ಪಿಸಬಹುದಾದ ಆರ್ಥಿಕ ಅವಘಡಗಳನ್ನು ಗುರುತಿಸುವುದು, ಸಂತ್ರಸ್ತರನ್ನು ರಕ್ಷಿಸುವುದು ತನ್ನ ಕೆಲಸ ಎಂದು ಹೇಳಿಕೊಂಡಿದೆ. ಕೇವಲ ಬೆರಳೆಣಿಕೆಯ ಸಿಬ್ಬಂದಿಗಳನ್ನು ಹೊಂದಿರುವ ಈ ಸಂಸ್ಥೆಯು ದೈತ್ಯ ಕಂಪನಿಗಳ ಕುರಿತಾದ ಆಳವಾದ ಸಂಶೋಧನೆ ಮಾಡುವುದರಲ್ಲಿ ಪಳಗಿದ ಕೈ ಎನಿಸಿಕೊಂಡಿದೆ. ಆರ್ಥಿಕ ಅವ್ಯವಹಾರಗಳನ್ನು ಬಯಲಿಗೆಳೆಯುವುದು, ವರದಿಗಳನ್ನು ಬಿಡುಗಡೆ ಮಾಡುವ ವಿಶಲ್ ಬ್ಲೋಯರ್ ಕೆಲಸ ಮಾಡುತ್ತಲೇ ಅದು ‘ಶಾರ್ಟ್ ಸೆಲ್ಲರ್ ಆಕ್ಟಿವಿಸಂ’ ಅನ್ನು ಮಾಡುತ್ತಾ ಬಂದಿದೆ. ಅದಾನಿ ಕಂಪನಿಯ ವಿರುದ್ಧ ಸಹ ಅದು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಏನಿದು ಶಾರ್ಟ್ ಸೆಲ್ಲಿಂಗ್?

ಶಾರ್ಟ್ ಸೆಲ್ಲಿಂಗ್ ಎನ್ನುವುದು ಒಂದು ಮಾರುಕಟ್ಟೆ ತಂತ್ರವಾಗಿದ್ದು ಭಾರತ ಮತ್ತು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಯಾರು ಬೇಕಾದರೂ ಮಾಡಬಹುದಾಗಿದೆ. ಅಂದರೆ ಕೆಲವು ಕಂಪನಿಗಳ ಷೇರುಗಳ ಬೆಲೆ ಕುಸಿಯುತ್ತವೆ ಎಂದು ಅಧ್ಯಯನ, ಸಂಶೋಧನೆ ನಡೆಸುವುದು. ತನ್ನದಲ್ಲದ ಆ ಷೇರುಗಳನ್ನು ದಲ್ಲಾಳಿಗಳ ಮೂಲಕ ಎರವಲು ಪಡೆದು ಸದ್ಯದ ಬೆಲೆಗೆ ಮಾರುವುದು. ನಂತರ ಅವುಗಳ ಬೆಲೆ ಕುಸಿದಾಗ ಕಡಿಮೆ ಬೆಲೆಗೆ ಕೊಂಡು ದಲ್ಲಾಳಿಗಳಿಗೆ ಹಿಂದಿರುಗಿಸುವ ಮೂಲಕ ಲಾಭ ಗಳಿಸುವುದನ್ನು ಶಾರ್ಟ್ ಸೆಲ್ಲಿಂಗ್ ಎನ್ನಲಾಗುತ್ತದೆ.

ಉದಾಹರಣೆಯ ಮೂಲಕ ನೋಡುವುದಾದರೆ ಅಆ ಎಂಬ ಕಂಪನಿಯ ಷೇರುಗಳು 1000 ರೂಗೆ ಮಾರಾಟವಾಗುತ್ತಿರುತ್ತವೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಆ ಕಂಪನಿಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಅದರ ಷೇರುಗಳ ಬೆಲೆ ಕುಸಿಯುತ್ತದೆ ಎಂದು ಅಂದಾಜಿಸುತ್ತಾರೆ. ಆಗ ಆ ಕಂಪನಿಯ 1000 ರೂ ಬೆಲೆಯ 100 ಷೇರುಗಳನ್ನು ಬ್ರೋಕರ್‌ಗಳ ಮೂಲಕ ಎರವಲು ಪಡೆದು ಮಾರಿ 1 ಲಕ್ಷ ರೂ ಗಳಿಸುತ್ತಾರೆ. ಆನಂತರ ಆ ಕಂಪನಿಯ ಷೇರುಗಳ ಬೆಲೆ 600 ರೂಗಳಿಗೆ ಕುಸಿದ ಸಂದರ್ಭದಲ್ಲಿ ತಾವೇ 60,000 ರೂಗಳಿಗೆ 100 ಷೇರುಗಳನ್ನು ಖರೀದಿಸಿ ದಲ್ಲಾಳಿಗೆ ಹಿಂದಿರುಗಿಸುತ್ತಾರೆ. ಆಗ ಅವರಿಗೆ 40,000 ರೂ ಲಾಭವಾಗುತ್ತದೆ. ಇದನ್ನು ಶಾರ್ಟಿಂಗ್ ಎನ್ನುತ್ತಾರೆ.

ಇದೊಂದು ಜೂಜಿನಂತಿರುತ್ತದೆ ಮತ್ತು ಇಂತಿಷ್ಟು ಸಮಯದಲ್ಲಿ ದಲ್ಲಾಳಿಗೆ ಷೇರುಗಳನ್ನು ಮರಳಿ ನೀಡುವ ಒಪ್ಪಂದವಾಗಿತ್ತದೆ. ಒಂದು ವೇಳೆ ಅವರ ಅಂದಾಜು ತಪ್ಪಿ ಆ ಕಂಪನಿಯ ಷೇರಿನ ಬೆಲೆ ಕುಸಿಯುವ ಬದಲು 1,400 ರೂ ಏರಿಕೆಯಾದಲ್ಲಿ ಶಾರ್ಟ್ ಮಾಡಿದ ವ್ಯಕ್ತಿ ಅಥವಾ ಸಂಸ್ಥೆ ತನ್ನ ಕೈಯಿಂದಲೇ 40,000 ದುಡ್ಡು ಹಾಕಿ ಷೇರುಗಳನ್ನು ಕೊಳ್ಳುವ ಮೂಲಕ ನಷ್ಟಕ್ಕೆ ಸಿಲುಕುವ ಸಂದರ್ಭವೂ ಎದುರಾಗಬಹುದಾಗಿದೆ.

ಪ್ರಸ್ತುತ ಹಿಂಡೆನ್‌ಬರ್ಗ್ ಅದಾನಿ ಕಂಪನಿಗೆ ಮಾಡಿರುವುದು ಇದೇ ಶಾರ್ಟಿಂಗ್ ಆಗಿದೆ. ಎರಡು ವರ್ಷಗಳ ಕಾಲ ಸತತ ಅಧ್ಯಯನ ಮಾಡಿದ ಅದು ಅದಾನಿ ಕಂಪನಿಯ ಅಕ್ರಮಗಳ ಕುರಿತು ದಾಖಲೆಗಳನ್ನು ಶೇಖರಿಸಿಟ್ಟುಕೊಂಡಿತ್ತು. ಆನಂತರ ಷೇರು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ಲಕ್ಷಾಂತರ ಷೇರುಗಳನ್ನು ಎರವಲು ಪಡೆದು ಮಾರಾಟ ಮಾಡಿ ಹಣ ಸಂಗ್ರಹಿಸಿಟ್ಟುಕೊಂಡಿದೆ. ಜನವರಿ 24 ರಂದು ವರದಿ ಬಿಡುಗಡೆ ಮಾಡಿದ ನಂತರ ಪ್ರಪಂಚದಾದ್ಯಂತ ಅದು ಸುದ್ದಿಯಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅದಾನಿ ಬಹುತೇಕ ಸಾಲದ ಮೇಲೆಯೇ ಸಾಮ್ರಾಜ್ಯ ಕಟ್ಟಿದ್ದು ಅದರ ಅಡಿಪಾಯವೇ ಅಲ್ಲಾಡುತ್ತಿದೆ ಎಂಬ ಕಥನ ಬಿತ್ತರಿಸಲಾಯಿತು. ಇದರಿಂದ ಭಯಗೊಂಡ ಲಕ್ಷಾಂತರ ಜನ ಏಕಕಾಲದಲ್ಲಿ ಅದಾನಿ ಕಂಪನಿಯ ತಮ್ಮ ಷೇರುಗಳನ್ನು ಮಾರಲು ಮುಂದಾದರು. ಆಗ ಸಹಜವಾಗಿ ಅವುಗಳ ಬೆಲೆ ಕುಸಿಯುತ್ತಾ ಹೋಯಿತು. ಸುಮಾರು ಶೇ. 20%ಗೂ ಹೆಚ್ಚಿನ ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಅದೆಲ್ಲವೂ ಹಿಂಡೆನ್‌ಬರ್ಗ್‌ ಕಂಪನಿಗೆ ಲಾಭವಾಗುತ್ತಿದೆ. ಏಕೆಂದರೆ ಹೆಚ್ಚು ಬೆಲೆಗೆ ಮಾರಿರುವ ಅದು ಕಡಿಮೆ ಬೆಲೆ ಕೊಂಡು ದಲ್ಲಾಳಿಗೆ ಹಿಂದಿರುಗಿಸುತ್ತದೆ. ಅಂದರೆ ಅದಾನಿ ಷೇರುಗಳ ಬೆಲೆ ಕುಸಿದಷ್ಟು ಅದರ ಲಾಭ ಹಿಂಡೆನ್‌ಬರ್ಗ್‌ಗೆ ದಕ್ಕುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ ಮತ್ತು ಕಡಿಮೆ ಬೆಲೆ ಕೊಳ್ಳುವುದು ನಡೆಯುತ್ತಿದೆ.

ಇದೇ ಮೊದಲಲ್ಲ

ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹಿಂಡೆನ್‌ಬರ್ಗ್ 2020 ರಿಂದ ಈ ರೀತಿಯಲ್ಲಿ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿದೆ. ಅದು ತನಿಖೆಗಳನ್ನು ಸಾರ್ವಜನಿಕಗೊಳಿಸಿದ ಮರುದಿನವೇ ಆಯಾ ಕಂಪನಿಗಳು ಸರಾಸರಿಯಾಗಿ ತಮ್ಮ ಮೌಲ್ಯದ ಸುಮಾರು 15 ಪ್ರತಿಶತವನ್ನು ಕಳೆದುಕೊಂಡಿವೆ. ಅಂದರೆ ಅವುಗಳಲ್ಲೆಲ್ಲ ಅದು ಲಾಭ ಗಳಿಸಿದೆ. ಟೆಸ್ಲಾ, ಟ್ವಿಟರ್‌ನಂತಹ ಕಂಪನಿಗಳ ಮೇಲೆ ಸಹ ಅದು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ ಎನ್ನಲಾಗಿದೆ. ನಿಕೋಲಾ ಎಂಬ ಕಂಪನಿಯ ಮೇಲೆ ಹಿಂಡೆನ್‌ಬರ್ಗ್ ಶಾರ್ಟಿಂಗ್ ಮಾಡಿತ್ತು. ಹಾಗಾಗಿ ಸುಮಾರು 34 ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ನಿಕೋಲಾ ಕಂಪನಿಯು ಸದ್ಯ 1.3 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಕುಸಿದಿದೆ ಎಂದರೆ ಹಿಂಡೆನ್‌ಬರ್ಗ್ ಕಂಪನಿಯ ಸಂಶೋಧನೆಗಳು, ತಂತ್ರಗಳು ಎಷ್ಟು ಕರಾರುವಕ್ಕಾರಿಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This company has been banned in usa as per recent news, how india had allowed it to investigate by short selling method, no shares of india/USA are not allowed to allot or sell or buy to us entity or indian entity or investors at present. It seems that unknown rival entity is hand in glove. M

LEAVE A REPLY

Please enter your comment!
Please enter your name here

- Advertisment -

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...