ಭಾರಿ ಅಡೆತಡೆಗಳ ನಡುವೆಯೂ ಹತ್ರಾಸ್ ಅತ್ಯಾಚಾರ ಸಂತ್ರಸ್ತ ಕುಟುಂಬವನ್ನು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಸಂತೈಸಿದ್ದಾರೆ. ಈ ನಡುವೆ ಆ ಕುಟುಂಬ ಕೇಳುತ್ತಿರುವುದೇನು ಎಂದು ಪ್ರಿಯಾಂಕಾ ಗಾಂಧಿ 5 ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ.
ಭೇಟಿ ನಂತರ ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ “ನಮ್ಮ ಮಗಳನ್ನು ಪೆಟ್ರೋಲ್ ಹಾಕಿ ಏಕೆ ಸುಡಲಾಯಿತು? ನಮಗೆ ಜಿಲ್ಲಾ ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕೆಂದು” ಕುಟುಂಬ ಒತ್ತಾಯಿಸಿದೆ ಎಂದು ಬರೆದಿದ್ದಾರೆ.
ಪ್ರಿಯಾಂಕಾ ಗಾಂಧಿ ಪಟ್ಟಿ ಮಾಡಿದ ಹತ್ರಾಸ್ ಸಂತ್ರಸ್ತೆಯ ಕುಟುಂಬದ 5 ಪ್ರಶ್ನೆಗಳು ಈ ಕೆಳಗಿನಂತಿವೆ.
- ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು.
- ಹತ್ರಾಸ್ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ಅವರಿಗೆ ದೊಡ್ಡ ಹುದ್ದೆ ನೀಡಬಾರದು.
- ನಮ್ಮ ಅನುಮತಿಯಿಲ್ಲದೆ ನಮ್ಮ ಮಗಳ ದೇಹವನ್ನು ಪೆಟ್ರೋಲ್ ಬಳಸಿ ಏಕೆ ಸುಡಲಾಯಿತು?
- ಇಷ್ಟು ದಿನ ನಮ್ಮನ್ನು ಏಕೆ ಪದೇ ಪದೇ ದಾರಿತಪ್ಪಿಸಿ, ಬೆದರಿಕೆ ಹಾಕಲಾಯಿತು?
- ನಾವು ನಮ್ಮ ಮಗಳ ಅಂತ್ಯಕ್ರಿಯೆ ನೇರವೇರಿಸಲು ‘ಹೂವುಗಳನ್ನು’ ತಂದಿದ್ದೇವೆ. ಆದರೆ ಅಂದು ಸುಟ್ಟ ಮೃತ ದೇಹವು ನಮ್ಮ ಮಗಳದು ಎಂದು ನಾವು ಹೇಗೆ ನಂಬಬೇಕು?
हाथरस के पीड़ित परिवार के प्रश्न:
1. सुप्रीम कोर्ट के जरिए पूरे मामले की न्यायिक जाँच हो
2. हाथरस DM को सस्पेंड किया जाए और किसी बड़े पद पर नहीं लगाया जाए
3. हमारी बेटी के शव को बगैर हमसे पूछे पेट्रोल से क्यों जलाया गया?
4. हमें बार-बार गुमराह किया, धमकाया क्यों जा रहा है? 1/2— Priyanka Gandhi Vadra (@priyankagandhi) October 3, 2020
ಈ ಪ್ರಶ್ನೆಗಳನ್ನು ಕೇಳಲು ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ಅಧಿಕಾರವಿದೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಉತ್ತರಿಸಬೇಕು ಎಂಬು ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.
“ಈ ಕಷ್ಟದ ಸಮಯದಲ್ಲಿ ಆ ಕುಟುಂಬಕ್ಕೆ ಬೆಂಬಲ ನೀಡುವುದಾಗಿ ಮತ್ತು ನ್ಯಾಯ ಪಡೆಯುವ ಹೋರಾಟದಲ್ಲಿ ಜೊತೆಯಿರುವುದಾಗಿ ಭರವಸೆ ನೀಡಿದ್ದೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಇನ್ನು ಮುಂದೆ ಯುಪಿ ಸರ್ಕಾರವು ತನಗೆ ಮನಬಂದಂತೆ ಅನಿಯಂತ್ರಿತವಾಗಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈಗ ಇಡೀ ದೇಶವು ಈ ದೇಶದ ಮಗಳಿಗೆ ನ್ಯಾಯ ಒದಗಿಸಲು ನಿಂತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆ ತನ್ನ ಅಂತಿಮ ವಿಡಿಯೋದಲ್ಲಿ ಹೇಳಿದ್ದೇನು? ಪೋಸ್ಟ್ಮಾರ್ಟಂ ವರದಿ ಸುಳ್ಳೇ?